ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಇದರ ಸಲುವಾಗಿ ಕೆಪಿಸಿಸಿ ಸಂವಹನ ಸಮಿತಿ ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಬೂತ್ ಲೆವೆಲ್ ಏಜೆಂಟರ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಲು ಹಾಗೂ ನಿಗದಿತ ಸಮಯದೊಳಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಲು, ಕೆಪಿಸಿಸಿ, ಡಿಸಿಸಿ, ಬಿಸಿಸಿ ಮುಖಂಡರುಗಳೊಂದಿಗೆ ಸಮನ್ವಯತೆ ಸಾಧಿಸಲು ಕೆಪಿಸಿಸಿಯಿಂದ ಈ ಕೆಳಕಂಡ ಬಿಎಲ್ಎ ಸಮನ್ವಯ ಸಮಿತಿ ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಅಂತ ತಿಳಿಸಿದ್ದಾರೆ.
ಹೀಗಿದೆ ಕೆಪಿಸಿಸಿ ಸಂವಹನ ಸಮಿತಿ ಬಿಎಲ್ಎ ಪಟ್ಟಿ
- ಪಿಸಿ ಮೋಹನ್, ಉಪಾಧ್ಯಕ್ಷರು, ಕೆಪಿಸಿಸಿ – ಅಧ್ಯಕ್ಷರು, ಬೆಂಗಳೂರು ವಿಭಾಗದ ಉಸ್ತುವಾರಿಗಳು
- ಪಿ.ಆರ್ ರಮೇಶ್, ಉಪಾಧ್ಯಕ್ಷರು, ಕೆಪಿಸಿಸಿ – ಅಧ್ಯಕ್ಷರು, ಗುಲ್ಪರ್ಗ ವಿಭಾಗ ಉಸ್ತುವಾರಿಗಳು
- ವೀರಕುಮಾರ್ ಪಾಟೀಲ್, ಉಪಾಧ್ಯಕ್ಷರು, ಕೆಪಿಸಿಸಿ – ಅಧ್ಯಕ್ಷರು ಬೆಳಗಾವಿ ವಿಭಾಗ ಉಸ್ತುವಾರಿಗಳು
- ಐವಾನ್ ಡಿಸೋಜ, ಉಪಾಧ್ಯಕ್ಷರು, ಕೆಪಿಸಿಸಿ – ಮೈಸೂರು ವಿಭಾಗ ಉಸ್ತುವಾರಿಗಳು
- ಬಲದೇವಕೃಷ್ಣ ಬಿಎಲ್ಎ – ಸಂಚಾಲಕರು
- ಜಿ ಶ್ರೀನಿವಾಸಲು – ಸದಸ್ಯರು, ಕೆಪಿಸಿಸಿ – ಸದಸ್ಯರು
- ಮೆಹಬೂಬ್ ಪಾಷ, ಸಂಯೋಜಕರು, ಚುನಾವಣಾ ಕಚೇರಿ – ಸದಸ್ಯರು
- ಅಬ್ದುಲ್ ಮುನೀರ್, ಮಾಧ್ಯಮ ವಿಭಾಗ – ಸದಸ್ಯರು
- ಚಂದ್ರಶೇಖರ ರೆಡ್ಡಿ, ಆನೇಕಲ್, ಸಾಮಾಜಿಕ ಜಾಲತಾಣ ವಿಭಾಗ – ಸದಸ್ಯರು
- ದೀಪ ಮುನಿರಾಜು, ಸಾಮಾಜಿಕ ಜಾಲತಾಣ ವಿಭಾಗ – ಸದಸ್ಯರು
- ಸುರೇಖ ಪೂಜಾರ್, ಸಾಮಾಜಿಕ ಜಾಲತಾಣ ವಿಭಾಗ – ಸದಸ್ಯರು.
ಹೀಗಿದೆ ಜಿಲ್ಲಾ ಉಸ್ತುವಾರಿಗಳು, ಬಿಎಲ್ಎ ಕಾರ್ಯಕ್ರಮದ ಪಟ್ಟಿ
ಲೋಕಸಭೆ ಚುನಾವಣೆಗೆ ‘ಕಾಂಗ್ರೆಸ್’ನಿಂದ ಕಲೆಕ್ಷನ್: ‘ಹೆಚ್.ಡಿ.ಕುಮಾರಸ್ವಾಮಿ’ ಗಂಭೀರ ಆರೋಪ
ಬಿಹಾರದಲ್ಲಿ ಹೊಸ ಗಾಳಿ ; ಜ.28ರಂದು ಸಿಎಂ ಸ್ಥಾನಕ್ಕೆ ‘ನಿತೀಶ್’ ರಾಜೀನಾಮೆ.? ಅದೇ ದಿನ ಹೊಸ ಸರ್ಕಾರ ರಚನೆ