ಲಕ್ನೋ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಲಕ್ನೋದಲ್ಲಿ ಸಂಕ್ರಾಂತಿ ಪ್ರಯುಕ್ತ ಅದ್ಧೂರಿಯಾಗಿ ಸುಗ್ಗಿ ಸಂಕ್ರಾಂತಿ ಸಾಂಸ್ಖೃತಿಕ ಕಾರ್ಯಕ್ರಮ ನೆರವೇರಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಹಾಗೂ ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕನ್ನಡ ಅಸೋಸಿಯೇಷನ್ ಲಕ್ನೋ ಕುರ್ಸಿ ರೋಡ್ ಯುನಿಟಿ ಸಿಟಿ ಬಹುದ್ದೂರ್ ಪುರ್, ಲಕ್ನೋ, ಉತ್ತರಪ್ರದೇಶ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಬೌದ್ಧ ಸಂಶೋಧನಾ ಸಂಸ್ಥೆ, ಗೋಮ್ತಿನಗರ, ಲಕ್ನೋ ಉತ್ತರ ಪ್ರದೇಶ, ಇಲ್ಲಿ “ಸುಗ್ಗಿ ಸಂಕ್ರಾಂತಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಲಕ್ನೋ ಕನ್ನಡ ಅಸೋಸಿಯೇಷನ್ ಅಧ್ಯಕ್ಷೆ ಕನ್ನಡತಿ ಡಾ.ಗಾಯತ್ರಿ, ರಾಷ್ಟ್ರೀಯ ಬಟಾನಿಕಲ್ ರಿಸರ್ಚ ಸಂಸ್ಥೆಯ ಹಿರಿಯ ವಿಜ್ಞಾನಿ,ಹಾಗೂ ಸಂಸ್ಥೆಯ ಕಾರ್ಯದರ್ಶಿ ಡಾ.ಸಂಜೀವ ನಾಯಕ, ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತಿಹಳ್ಳಿ, ಶಿಕ್ಷಣ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ, ಗಡಿ ಪ್ರಾಧಿಕಾರದ ಸದಸ್ಯರಾದ ಶಿವರೆಡ್ಡಿ, ಡಾ. ಸಂಜೀವಕುಮಾರ್ ಅತಿವಾಳೆ, ಸಮಾಜ ಸೇವಕಿ ಜಾನಕಿ ಮುಂತಾದವರು ಭಾಗವಹಿಸಿದ್ದರು. ಲಕ್ನೋದಲ್ಲಿ ವಾಸಿಸುತ್ತಿರುವ ಹೊರನಾಡು ಕನ್ನಡಿಗರು ಅತ್ಯಂತ ಶ್ರದ್ದೆಯಿಂದ ಭಾಗವಹಿಸಿ ಕರ್ನಾಟಕ ಸರ್ಕಾರದ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಮನವಿ ಸಲ್ಲಿಸಿದರು.

ಸದರಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಲಾವಿದರಿಂದ ಹಾಗೂ ಗಡಿ ಭಾಗದ ಜಾನಪದ ತಂಡಗಳಿಂದ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಕಥಕ್ ನೃತ್ಯ,ಗುಂಪು ನೃತ್ಯ, ಮುಂತಾದ ಕಲಾ ಪ್ರಕಾರಗಳ ಪ್ರದರ್ಶನ ನಡೆಯಿತು. ಮಿಮಿಕ್ರಿ ಗೋಪಿಯವರಿಂದ ಮಿಮಿಕ್ರಿ, ಕೋಲಾರದ ಮತ್ತಿಕುಂಟೆ ಕೃಷ್ಣ ಮತ್ತು ಗೊ ನಾ ಸ್ವಾಮಿಯವರಿಂದ ಹಾಗೂ ಅಬಕಾರಿ ಇಲಾಖೆಯ ರಾಜಶೇಖರ್ರವರಿಂದ ಜಾನಪದ ಗಾಯನ ನಡೆಯಿತು ವಿಜಯ ಮತ್ತು ತಂಡದಿಂದ ಜಾನಪದ ನೃತ್ಯ ವರ್ಷಿತಾ ಮತ್ತು ತಂಡದಿಂದ ಜಾನಪದ ಗಾಯನ ಗುಣವತಿ ಮತ್ತು ತಂಡದಿಂದ ಭರತನಾಟ್ಯ ,ಸ್ಪಂದನ್ ದೆಹಲಿ ರವರಿಂದ ಕಥಕ್ ನೃತ್ಯ ನಡೆಯಿತು.
ಲಕ್ನೋದಲ್ಲಿರುವ ಕನ್ನಡಿಗರ ಕುಟುಂಬದ ಮಕ್ಕಳಿಗೆ ಕನ್ನಡ ಅಭ್ಯಾಸ ಮಾಡಲು ಒಬ್ಬ ಸೂಕ್ತ ತರಬೇತುದಾರರನ್ನು ಗುರುತಿಸಿ ಕನ್ನಡ ಪಾಠ ಕೇಂದ್ರ ಪ್ರಾರಂಭಿಸಲು ಲಕ್ನೋ ಕನ್ನಡ ಸಂಘದವರು ನಿರ್ಣಯಿಸಿರುವ ವಿಷಯವನ್ನು ಕರ್ನಾಟಕ ಸರ್ಕಾರದ ಗಮನಕ್ಕೆ ತಂದರು.
ಇತಿಹಾಸ ಪ್ರಸಿದ್ದ ಸಾಗರದ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ಧತೆ: ಶಾಸಕ ಗೋಪಾಲಕೃಷ್ಣ ಬೇಳೂರು








