ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ( Karnataka BJP ) ಮಹತ್ವದ ಬೆಳವಣಿಗೆ ಎನ್ನುವಂತೆ 23 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಆ ಮೂಲಕ ಮುಂಬರುವಂತ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ.
ಇಂದು ಕರ್ನಾಟಕ ರಾಜ್ಯ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಮಿಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 23 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಿ, ಇಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಥಳೀಯವಾಗಿ ಘೋಷಣೆ ಮಾಡಿರುತ್ತಾರೆ ಎಂದಿದ್ದಾರೆ.
ರಾಜ್ಯ ಚುನಾವಣಾಧಿಕಾರಿಯಾದ ನಾನು ಈ ಕೆಳಕಂಡ ಜಿಲ್ಲಾ ಅಧ್ಯಕ್ಷರನ್ನು ಅಭಿನಂದಿಸುತ್ತಾ, ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ, ಮುಂಬರುವ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸುವಿರೆಂದು ಆಶಿಸುತ್ತೇನೆ ಎಂದಿದ್ದಾರೆ.
- ಮೈಸೂರು ನಗರ – ಎಲ್. ನಾಗೇಂದ್ರ
 - ಚಾಮರಾಜನಗರ – ಸಿ.ಎಸ್. ನಿರಂಜನಕುಮಾರ್
 - ದಕ್ಷಿಣಕನ್ನಡ – ಸತೀಶ್ ಕುಂಪಲ
 - ಚಿಕ್ಕಮಗಳೂರು – ದೇವರಾಜ ಶೆಟ್ಟಿ
 - ಶಿವಮೊಗ್ಗ – ಎನ್.ಕೆ. ಜಗದೀಶ್
 - ಉತ್ತರಕನ್ನಡ – ನಾರಾಯಣ್ ಶ್ರೀನಿವಾಸ್ ಹೆಗಡೆ
 - ಹುಬ್ಬಳ್ಳಿ-ಧಾರವಾಡ – ತಿಪ್ಪಣ್ಣ ಮಜ್ಜಗಿ
 - ಧಾರವಾಡ ಗ್ರಾಮಾಂತರ – ನಿಂಗಪ್ಪ ಡಿ. ಸುತಗಟ್ಟಿ
 - ಬೆಳಗಾವಿ ನಗರ – ಗೀತಾ ಸುತಾ
 - ಬೆಳಗಾವಿ ಗ್ರಾಮಾಂತರ -ಸುಭಾಷ್ ದುಂಡಪ್ಪ ಪಾಟೀಲ್
 - ಚಿಕ್ಕೋಡಿ – ಸತೀಶ್ ಅಪ್ಪಾಜಿಗೋಳ್
 - ಬೀದರ್ – ಸೋಮನಾಥ್ ಪಾಟೀಲ್
 - ಕಲಬುರಗಿ ನಗರ – ಚಂದ್ರಕಾಂತ್ ಬಿ. ಪಾಟೀಲ್
 - ಕಲಬುರಗಿ ಗ್ರಾಮಾಂತರ – ಅಶೋಕ್ ಬಗಲಿ
 - ಯಾದಗಿರಿ – ಬಸವರಾಜಪ್ಪಗೌಡ ವಿ.
 - ಕೊಪ್ಪಳ – ದಡೇಸಗೂರು ಬಸವರಾಜ್
 - ಬಳ್ಳಾರಿ – ಅನಿಲ್ ಕುಮಾರ್ ಮೋಕಾ
 - ವಿಜಯನಗರ – ಸಂಜೀವ್ ರೆಡ್ಡಿ
 - ಚಿಕ್ಕಬಳ್ಳಾಪುರ – ಬಿ.ಸಂದೀಪ್
 - ಕೋಲಾರ – ಓಂ ಶಕ್ತಿ ಛಲಪತಿ
 - ಬೆಂಗಳೂರು ಉತ್ತರ – ಎಸ್ ಹರೀಶ್
 - ಬೆಂಗಳೂರು ಕೇಂದ್ರ – ಎ ಆರ್ ಸಪ್ತಗಿರಿ ಗೌಡ
 - 
ಬೆಂಗಳೂರು ದಕ್ಷಿಣ – ಸಿ.ಕೆ ರಾಮಮೂರ್ತಿ
 
 
ದೆಹಲಿಯಲ್ಲಿ ಎಎಪಿ-ಕಾಂಗ್ರೆಸ್ ಚುನಾವಣೋತ್ತರ ಮೈತ್ರಿ ಸಾಧ್ಯತೆ : ಮೋದಿ ಎಚ್ಚರಿಕೆ
“ನಾನು ಅದೇ ನೀರನ್ನ ಕುಡಿಯುತ್ತೇನೆ” : ಎಎಪಿಯ ‘ವಿಷಕಾರಿ ಯಮುನಾ’ ಆರೋಪಕ್ಕೆ ‘ಪ್ರಧಾನಿ ಮೋದಿ’ ತಿರುಗೇಟು
		







