Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ಪೊಲೀಸ್, ಅರಣ್ಯ ಇಲಾಖೆಯ ಅಧಿಕಾರಿ, MLA PS ವಿರುದ್ಧ ಕ್ರಮಕ್ಕೆ ಮಲ್ಲಿಕಾರ್ಜು ಹಕ್ರೆ ಒತ್ತಾಯ

18/06/2025 2:48 PM

BREAKING : ಮೈಸೂರಲ್ಲಿ ಭೀಕರ ಅಪಘಾತ : ಖಾಸಗಿ ಶಾಲಾ ವಾಹನ ಪಲ್ಟಿಯಾಗಿ 16 ಮಕ್ಕಳಿಗೆ ಗಂಭೀರ ಗಾಯ!

18/06/2025 2:45 PM

BIG NEWS: ನಾವು ‘OPS ಜಾರಿ’ ಮಾಡೋದು ಖಚಿತ, ಈ ಬಗ್ಗೆ ಪ್ರಣಾಳಿಕೆಯಲ್ಲೇ ಘೋಷಣೆ: ಸಿಎಂ ಸಿದ್ಧರಾಮಯ್ಯ

18/06/2025 2:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಅತವಾಡಿಯಲ್ಲಿ ಮುಸ್ಲೀಂ ಕುಟುಂಬದ ಮೇಲಿನ ಮಾರಣಾಂತಿಕ ಹಲ್ಲೆಗೆ ಕಲಸೆ ಚಂದ್ರಪ್ಪ ಖಂಡನೆ, ಕ್ರಮಕ್ಕೆ ಒತ್ತಾಯ
KARNATAKA

ಸಾಗರದ ಅತವಾಡಿಯಲ್ಲಿ ಮುಸ್ಲೀಂ ಕುಟುಂಬದ ಮೇಲಿನ ಮಾರಣಾಂತಿಕ ಹಲ್ಲೆಗೆ ಕಲಸೆ ಚಂದ್ರಪ್ಪ ಖಂಡನೆ, ಕ್ರಮಕ್ಕೆ ಒತ್ತಾಯ

By kannadanewsnow0915/05/2025 3:30 PM

ಸಾಗರ : ಅತವಾಡಿ ಗ್ರಾಮದ ಮುಸ್ಲೀಂ ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣವನ್ನು ಸಾಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಖಂಡಿಸಿದ್ದಾರೆ.

ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಆತವಾಡಿ ಗ್ರಾಮದ ಅಬ್ದುಲ್ ಮುಹೀಬ್, ಆತನ ಪತ್ನಿ ಜುಬೇದಾ ಅವರ ಮೇಲೆ ಸಾಗರ ಪಟ್ಟಣದ ಪರಶುರಾಮ್ ಮತ್ತು ಅವರ ಪತ್ನಿ ಸವಿತಾ ಸೇರಿಕೊಂಡು ಇಪ್ಪತ್ತು ಜನರ ತಂಡ ಕಟ್ಟಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.

ಅಬ್ದುಲ್ ಮುಹೀಬ್ ಕುಟುಂಬ ಆತವಾಡಿ ಗ್ರಾಮದಲ್ಲಿ 1.12 ಎಕರೆ ಜಾಗವನ್ನು ಹೊಂದಿದ್ದು, ಬಡತನದ ನಡುವೆಯೂ ಜೀವನ ಸಾಗಿಸುತ್ತಿದ್ದಾರೆ. 2015ರಿಂದಲೂ ಸಾಗರ ಪಟ್ಟಣದ ಪರಶುರಾಮ್ ಎಂಬಾತ ಈ ಜಮೀನು ಕಬಳಿಸಲು ಪ್ರಯತ್ನ ನಡೆಸುತ್ತಿದ್ದರು. ಇದಕ್ಕೆ ಮುಹೀಬ್ ಕುಟುಂಬ ಒಪ್ಪಿರಲಿಲ್ಲ. ಪದೇಪದೇ ಪರಶುರಾಮ್ ಅವರು ತಮ್ಮ ಸಂಗಡಿಗರೊಂದಿಗೆ ಸ್ಥಳಕ್ಕೆ ತೆರಳಿ ಬೆದರಿಕೆ ಹಾಕಿದ್ದಾರೆ ಎಂದರು.

ಈಚೆಗೆ ಪರಶುರಾಮ್, ಸವಿತಾ ಅವರು ತಮ್ಮ ಜೊತೆ 20 ಜನರ ತಂಡವನ್ನು ತೆಗೆದುಕೊಂಡು ಹೋಗಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಬ್ದುಲ್ ಮುಹೀಬ್ ಮತ್ತು ಜುಬೇದಾ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ಕುಟುಂಬ ಶಾಸಕರ ಬಳಿ ಬಂದು ತಮ್ಮ ನೋವು ತೋಡಿಕೊಂಡಿತ್ತು. ಶಾಸಕರು ತಕ್ಷಣ ಸ್ಪಂದಿಸಿ ತಪ್ಪಿತಸ್ತರ ವಿರುದ್ದ ಸೂಕ್ತ ಕಾನೂನುಕ್ರಮ ತೆಗೆದುಕೊಳ್ಳಬೇಕು. ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಆತವಾಡಿ ಗ್ರಾಮದಲ್ಲಿ ನಡೆದ ಘಟನೆ, ಈಚೆಗೆ ಸಾಗರದ ಎಲ್.ಐ.ಸಿ.ಪಕ್ಕದ ರಸ್ತೆಯಲ್ಲಿ ಬೆಂಕಿನ ವಿಷಯಕ್ಕೆ ನಡೆದ ಹಲ್ಲೆಯಂತಹ ಘಟನೆಯನ್ನು ಕಾಂಗ್ರೇಸ್ ಪಕ್ಷ ತೀವೃವಾಗಿ ಖಂಡಿಸುತ್ತದೆ. ಯಾವುದೇ ಧರ್ಮದವರ ಮೇಲೆ ಹಲ್ಲೆ ನಡೆಸುವುದನ್ನು ಕಾಂಗ್ರೇಸ್ ಪಕ್ಷ ಸಹಿಸುವುದಿಲ್ಲ. ತಪ್ಪು ಮಾಡಿದವರು ಯಾರೇ ಆದರೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿ, ಗೋಪಾಲಕೃಷ್ಣ ಬೇಳೂರು ಶಾಸಕರಾಗಿ ಎರಡು ವರ್ಷವಾಗಿದೆ. ಅಂದಿನಿಂದ ಇಂದಿನವರೆಗೆ ತಾಲ್ಲೂಕಿನಲ್ಲಿ ನೈತಿಕ ಪೊಲೀಸ್‌ಗಿರಿ, ಗೂಂಡಾಗಿರಿ ಸಂಪೂರ್ಣ ನಿಂತು ಹೋಗಿದೆ. ಅಲ್ಲಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಇದನ್ನು ಶಾಸಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಪರಸ್ಪರ ಸೌಹಾರ್ದದಿಂದ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಹಲ್ಲೆಯಂತಹ ಕೃತ್ಯದಲ್ಲಿ ತೊಡಗಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ಈ ಸುದ್ದಿಗೋಷ್ಟಿಯಲ್ಲಿ ಕಾಂಗ್ರೇಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಎಲ್.ಚಂದ್ರಪ್ಪ, ಯುವ ಕಾಂಗ್ರೇಸ್ ಅಧ್ಯಕ್ಷ ಸದ್ದಾಂ ದೊಡ್ಮನೆ, ಕನ್ನಪ್ಪ ಉಪಸ್ಥಿತರಿದ್ದರು.

BREAKING: ನಾಳೆ ಬೆಳಗ್ಗೆ 10 ಗಂಟೆಯವರೆಗೆ PGCET-25ಕ್ಕೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ | PGCET-2025 Exam

BIG NEWS : ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ವಾಟ್ಸಪ್’ನಲ್ಲೇ ಸಿಗಲಿವೆ ಗ್ರಾಮಪಂಚಾಯಿತಿಯ ಈ ಎಲ್ಲಾ ಸೇವೆಗಳು | WATCH VIDEO

Share. Facebook Twitter LinkedIn WhatsApp Email

Related Posts

ಸಾಗರದ ಪೊಲೀಸ್, ಅರಣ್ಯ ಇಲಾಖೆಯ ಅಧಿಕಾರಿ, MLA PS ವಿರುದ್ಧ ಕ್ರಮಕ್ಕೆ ಮಲ್ಲಿಕಾರ್ಜು ಹಕ್ರೆ ಒತ್ತಾಯ

18/06/2025 2:48 PM3 Mins Read

BREAKING : ಮೈಸೂರಲ್ಲಿ ಭೀಕರ ಅಪಘಾತ : ಖಾಸಗಿ ಶಾಲಾ ವಾಹನ ಪಲ್ಟಿಯಾಗಿ 16 ಮಕ್ಕಳಿಗೆ ಗಂಭೀರ ಗಾಯ!

18/06/2025 2:45 PM1 Min Read

BIG NEWS: ನಾವು ‘OPS ಜಾರಿ’ ಮಾಡೋದು ಖಚಿತ, ಈ ಬಗ್ಗೆ ಪ್ರಣಾಳಿಕೆಯಲ್ಲೇ ಘೋಷಣೆ: ಸಿಎಂ ಸಿದ್ಧರಾಮಯ್ಯ

18/06/2025 2:45 PM2 Mins Read
Recent News

ಸಾಗರದ ಪೊಲೀಸ್, ಅರಣ್ಯ ಇಲಾಖೆಯ ಅಧಿಕಾರಿ, MLA PS ವಿರುದ್ಧ ಕ್ರಮಕ್ಕೆ ಮಲ್ಲಿಕಾರ್ಜು ಹಕ್ರೆ ಒತ್ತಾಯ

18/06/2025 2:48 PM

BREAKING : ಮೈಸೂರಲ್ಲಿ ಭೀಕರ ಅಪಘಾತ : ಖಾಸಗಿ ಶಾಲಾ ವಾಹನ ಪಲ್ಟಿಯಾಗಿ 16 ಮಕ್ಕಳಿಗೆ ಗಂಭೀರ ಗಾಯ!

18/06/2025 2:45 PM

BIG NEWS: ನಾವು ‘OPS ಜಾರಿ’ ಮಾಡೋದು ಖಚಿತ, ಈ ಬಗ್ಗೆ ಪ್ರಣಾಳಿಕೆಯಲ್ಲೇ ಘೋಷಣೆ: ಸಿಎಂ ಸಿದ್ಧರಾಮಯ್ಯ

18/06/2025 2:45 PM

“ನೀವು ಬೆಸ್ಟ್, ನಾನು ನಿಮ್ಮಂತಾಗಲು ಪ್ರಯತ್ನಿಸ್ತಿದ್ದೇನೆ” : ‘ಪ್ರಧಾನಿ ಮೋದಿ’ಗೆ ಇಟಲಿ ಪ್ರಧಾನಿ ‘ಮೆಲೋನಿ’ ಫುಲ್ ಮಾರ್ಕ್ಸ್, ವಿಡಿಯೋ ವೈರಲ್

18/06/2025 2:39 PM
State News
KARNATAKA

ಸಾಗರದ ಪೊಲೀಸ್, ಅರಣ್ಯ ಇಲಾಖೆಯ ಅಧಿಕಾರಿ, MLA PS ವಿರುದ್ಧ ಕ್ರಮಕ್ಕೆ ಮಲ್ಲಿಕಾರ್ಜು ಹಕ್ರೆ ಒತ್ತಾಯ

By kannadanewsnow0918/06/2025 2:48 PM KARNATAKA 3 Mins Read

ಶಿವಮೊಗ್ಗ: ಕೊಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿ, ಪೊಲೀಸ್ ಠಾಣೆಗೆ ಕರೆತಂದು, ಬಂಧಿಸಿ ಜೈಲಿಗಟ್ಟದೇ, ಅವರನ್ನು ಸಾಗರ ಪೇಟೆ…

BREAKING : ಮೈಸೂರಲ್ಲಿ ಭೀಕರ ಅಪಘಾತ : ಖಾಸಗಿ ಶಾಲಾ ವಾಹನ ಪಲ್ಟಿಯಾಗಿ 16 ಮಕ್ಕಳಿಗೆ ಗಂಭೀರ ಗಾಯ!

18/06/2025 2:45 PM

BIG NEWS: ನಾವು ‘OPS ಜಾರಿ’ ಮಾಡೋದು ಖಚಿತ, ಈ ಬಗ್ಗೆ ಪ್ರಣಾಳಿಕೆಯಲ್ಲೇ ಘೋಷಣೆ: ಸಿಎಂ ಸಿದ್ಧರಾಮಯ್ಯ

18/06/2025 2:45 PM

BREAKING : ಬೆಳಗಾವಿಯಲ್ಲಿ ಘೋರ ಘಟನೆ : ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಹೋಗಿದ್ದ ಮಹಿಳೆ ನೀರು ಪಾಲು

18/06/2025 2:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.