Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಸಲ ಕಪ್ ನಮ್ದೆ : ರಕ್ತದಲ್ಲಿ `ವಿರಾಟ್ ಕೊಹ್ಲಿ’ ಚಿತ್ರ ಬಿಡಿಸಿದ ಅಭಿಮಾನಿ, ಫೋಟೋ ವೈರಲ್.!

03/06/2025 9:23 AM

ವಿಶ್ವ ಪ್ರವಾಸದ ನಂತರ ಮುಂದಿನ ವಾರ ‘ಸರ್ವ ಪಕ್ಷ ನಿಯೋಗಗಳನ್ನು’ ಭೇಟಿ ಮಾಡಲಿರುವ ಪ್ರಧಾನಿ

03/06/2025 9:14 AM

BREAKING : ಆಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ : ಪಂಜಾಬ್ ನಲ್ಲಿ ಓರ್ವ ಅರೆಸ್ಟ್.!

03/06/2025 9:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪತ್ರಕರ್ತರು ‘ಸುದ್ದಿ ಧಾವಂತ’ದಲ್ಲಿ ವೈಯಕ್ತಿಕ ಬದುಕು ಮರೆಯಬಾರದು: ಶಾಸಕ ಬೇಳೂರು ಗೋಪಾಲಕೃಷ್ಣ ಕಿವಿಮಾತು
KARNATAKA

ಪತ್ರಕರ್ತರು ‘ಸುದ್ದಿ ಧಾವಂತ’ದಲ್ಲಿ ವೈಯಕ್ತಿಕ ಬದುಕು ಮರೆಯಬಾರದು: ಶಾಸಕ ಬೇಳೂರು ಗೋಪಾಲಕೃಷ್ಣ ಕಿವಿಮಾತು

By kannadanewsnow0931/07/2024 8:45 PM

ಶಿವಮೊಗ್ಗ: ಅನೇಕ ಪತ್ರಕರ್ತರು ಸುದ್ದಿಯ ಧಾವಂತದಲ್ಲಿ ತಮ್ಮ ವೈಯಕ್ತಿಕ ಬದುಕನ್ನೇ ಮರೆಯುತ್ತಾರೆ. ಆದರೇ ಅದು ಆಗಬಾರದು. ಸುದ್ದಿಯ ಧಾವಂತದಲ್ಲಿ ಯಾವತ್ತೂ ಪತ್ರಕರ್ತರು ವೈಯಕ್ತಿಕ ಬದುಕನ್ನು ಮರೆಯಬಾರದು ಎಂಬುದಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಕಿವಿಮಾತು ಹೇಳಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದಂತ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡುತ್ತಾ, ಬಹುತೇಕ ಪತ್ರಕರ್ತರು ಸವಾಲುಗಳ ಜೊತೆಗೆ ಬದುಕುತ್ತಿದ್ದಾರೆ. ಅವರ ಬದುಕು ಹೂವಿನ ಹಾಸಿಗೆಯಾಗಿಲ್ಲ ಅಂತ ಹೇಳಿದರು.

ನಾನು ಪತ್ರಕರ್ತರ ಪರವಾಗಿ ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡುತ್ತೇನೆ. ಅವರಿಗೆ ಉಚಿತ ಸಾರಿಗೆ ಬಸ್ ಪಾಸ್, ಆರೋಗ್ಯ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸವನ್ನು ಸರ್ಕಾರದ ಮಟ್ಟದಲ್ಲಿ ನಿಂತು ನಿಮ್ಮ ಪರವಾಗಿ ಮಾಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಸ್ತುತದ ವೇಳೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತಂತೆ ಹಿರಿಯ ನ್ಯಾಯವಾದಿ ಎಂ.ರಾಘವೇಂದ್ರ ಅವರು ಉಪನ್ಯಾಸ ನೀಡಿದರು. ಮಾಧ್ಯಮಗಳು ಆಳುವ ವರ್ಗಗಳ ಕೈಗೊಂಬೆಯಾಗಿರುವುದು ತಪ್ಪಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜೀವಂತವಾಗಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ಮಾಡಬೇಕು ಎಂದು ಹೇಳಿದರು.

ದೃಶ್ಯಮಾದ್ಯಮಗಳು ತಮ್ಮ ಅಭಿಪ್ರಾಯವನ್ನು ಜನರ ಮೇಲೆ ಏರುವ ಕೆಲಸ ಮಾಡಿದ್ದವು. ಈಗ ಸಾಮಾಜಿಕ ಮಾಧ್ಯಮಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆಗಳಾಗಿದ್ದಾವೆ. ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾಗುತ್ತಿದೆ ಎಂಬುದಾಗಿ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ ಶಿವಕುಮಾರ್ ಅವರು ಮಾತನಾಡಿ, ಪತ್ರಕರ್ತರಿಗೆ ನಿವೇಶನ ನೀಡುವುದು, ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವುದು. ಆರೋಗ್ಯ ವಿಮೆ ಸೌಲಭ್ಯವನ್ನು ಜಾರಿಗೊಳಿಸುವಂತ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಪತ್ರಕರ್ತರ ಪರವಾಗಿ ಸರ್ಕಾರದ ಮಟ್ಟದಲ್ಲಿ ಗಮನ ಹರಿಸಬೇಕು ಎಂಬುದಾಗಿ ತಿಳಿಸಿದರು.

ಈ ಕಾರ್ಯಕ್ರಮದ ವೇಳೆಯಲ್ಲೇ ಹಿರಿಯ ಪತ್ರಕರ್ತರಾದ ಲೋಕೇಶ ಕುಮಾರ್ ಆರ್. ಜಗನ್ನಾಥ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮಹೇಶ ಹೆಗಡೆ ಅವರನ್ನು ಅಭಿನಂದಿಸಲಾಯಿತು. ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕ ಪಡೆದ ಸವಿ ಪ್ರಸಾದ್ ಅವರಿಗೆ ಅವರನ್ನು ಪುರಸ್ಕರಿಸಲಾಯಿತು.

ಇಂದಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ಶಾಖೆಯಿಂದ ಆಚರಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷ ಜಿ.ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ಯತೀಶ್ ಆರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ನಗರಸಭೆ ಸದಸ್ಯ ಶ್ರೀನಿವಾಸ್ ಮೇಸ್ತ್ರಿ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಮಾ.ವೆಂ.ಸ.ಪ್ರಸಾದ್ ಸ್ವಾಗತಿಸಿದರೇ, ಮಹೇಶ ಹೆಗಡೆ ಪ್ರಾಸ್ತಾವಿಕ ನುಡಿಯಾಡಿದರು, ದೀಪಕ್ ಸಾಗರ್ ನಿರೂಪಿಸಿದರೇ, ಎಂ.ಜಿ.ರಾಘವನ್ ವಂದಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ರಾಜ್ಯಸಭಾ ಸದಸ್ಯತ್ವಕ್ಕೆ ಸಂಸದೆ ಮಮತಾ ಮಹಾಂತ ರಾಜೀನಾಮೆ | Mamata Mahanta resigns

ಅ.2ರಿಂದ ‘SSLC ಪರೀಕ್ಷೆ-3’ ಆರಂಭ: ‘97,933 ವಿದ್ಯಾರ್ಥಿ’ಗಳು ನೋಂದಣಿ | SSLC Exam-3

Share. Facebook Twitter LinkedIn WhatsApp Email

Related Posts

ಈ ಸಲ ಕಪ್ ನಮ್ದೆ : ರಕ್ತದಲ್ಲಿ `ವಿರಾಟ್ ಕೊಹ್ಲಿ’ ಚಿತ್ರ ಬಿಡಿಸಿದ ಅಭಿಮಾನಿ, ಫೋಟೋ ವೈರಲ್.!

03/06/2025 9:23 AM2 Mins Read

BIG NEWS : ಬುಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್, ದೀಪಾ ಬಾಸ್ತಿಗೆ 10 ಲಕ್ಷ ರೂ. ಬಹುಮಾನ : CM ಸಿದ್ದರಾಮಯ್ಯ ಘೋಷಣೆ.!

03/06/2025 8:56 AM1 Min Read

Rain Alert : ರಾಜ್ಯದಲ್ಲಿ ಇನ್ನೂ 1 ವಾರ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.

03/06/2025 8:44 AM1 Min Read
Recent News

ಈ ಸಲ ಕಪ್ ನಮ್ದೆ : ರಕ್ತದಲ್ಲಿ `ವಿರಾಟ್ ಕೊಹ್ಲಿ’ ಚಿತ್ರ ಬಿಡಿಸಿದ ಅಭಿಮಾನಿ, ಫೋಟೋ ವೈರಲ್.!

03/06/2025 9:23 AM

ವಿಶ್ವ ಪ್ರವಾಸದ ನಂತರ ಮುಂದಿನ ವಾರ ‘ಸರ್ವ ಪಕ್ಷ ನಿಯೋಗಗಳನ್ನು’ ಭೇಟಿ ಮಾಡಲಿರುವ ಪ್ರಧಾನಿ

03/06/2025 9:14 AM

BREAKING : ಆಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ : ಪಂಜಾಬ್ ನಲ್ಲಿ ಓರ್ವ ಅರೆಸ್ಟ್.!

03/06/2025 9:14 AM

ಮಣಿಪುರದಲ್ಲಿ ಭೀಕರ ಪ್ರವಾಹ: 20,000 ಕ್ಕೂ ಹೆಚ್ಚು ಜನರಿಗೆ ತೊಂದರೆ, 3,000 ಕ್ಕೂ ಹೆಚ್ಚು ಮನೆಗಳಿಗೆ ಹಾನಿ

03/06/2025 9:11 AM
State News
KARNATAKA

ಈ ಸಲ ಕಪ್ ನಮ್ದೆ : ರಕ್ತದಲ್ಲಿ `ವಿರಾಟ್ ಕೊಹ್ಲಿ’ ಚಿತ್ರ ಬಿಡಿಸಿದ ಅಭಿಮಾನಿ, ಫೋಟೋ ವೈರಲ್.!

By kannadanewsnow5703/06/2025 9:23 AM KARNATAKA 2 Mins Read

ಬಾಗಲಕೋಟೆ : ಇಂದು ಐಪಿಎಲ್ 18 ನೇ ಆವೃತ್ತಿಯ ಫೈನಲ್ ಪಂದ್ಯ ನಡೆಯಲಿದ್ದು, ಅಭಿಮಾನಿಯೊಬ್ಬ ರಕ್ತದಲ್ಲಿ ವಿರಾಟ್ ಕೊಹ್ಲಿಯ ಚಿತ್ರ…

BIG NEWS : ಬುಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್, ದೀಪಾ ಬಾಸ್ತಿಗೆ 10 ಲಕ್ಷ ರೂ. ಬಹುಮಾನ : CM ಸಿದ್ದರಾಮಯ್ಯ ಘೋಷಣೆ.!

03/06/2025 8:56 AM

Rain Alert : ರಾಜ್ಯದಲ್ಲಿ ಇನ್ನೂ 1 ವಾರ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.

03/06/2025 8:44 AM

BIG NEWS : ರಾಜ್ಯದ ಎಲ್ಲಾ `ಶಾಲಾ ಶಿಕ್ಷಕರೇ’ ಗಮನಿಸಿ : ಇಲ್ಲಿದೆ 2025-26 ನೇ ಶೈಕ್ಷಣಿಕ ಸಾಲಿನ `ಶಾಲಾ ಕರ್ತವ್ಯ ಹಾಗೂ ರಜಾ ದಿನಗಳ’ ಮಾಹಿತಿ

03/06/2025 8:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.