Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ನಾಗರಹಾವಿನೊಂದಿಗೆ ಮೋಜು ಮಾಡುತ್ತಿದ್ದ ವ್ಯದ್ಧ ಅದೇ ಹಾವು ಕಚ್ಚಿ ಸಾವು : ಆಘಾತಕಾರಿ ವಿಡಿಯೋ ವೈರಲ್| WATCH VIDEO

16/01/2026 1:13 PM

SHOCKING: ಬೆಚ್ಚಿ ಬೀಳಿಸುವ ಕೃತ್ಯ : ಪತ್ನಿಯನ್ನು ಹೊಡೆದು ಕೊಂದ ಪತಿ, ಎದೆಹಾಲು ಹಾಲು ಕುಡಿಯುತ್ತಿದ್ದ 6 ತಿಂಗಳ ಮಗುವೂ ಸಾವು.!

16/01/2026 12:58 PM

BIG NEWS : ಬೀದರ್ ATM ದರೋಡೆ, ಶೂಟೌಟ್ ಕೇಸ್ ಗೆ 1 ವರ್ಷ : ಇನ್ನುವರೆಗೂ ಸಿಗದ ಆರೋಪಿಗಳು!

16/01/2026 12:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗವಾರ್ತೆ : ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ 800 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್.!
KARNATAKA

ಉದ್ಯೋಗವಾರ್ತೆ : ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವ 800 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್.!

By kannadanewsnow5724/05/2025 5:39 AM

ಬೆಂಗಳೂರು: ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಖಾಲಿ ಇರುವಂತ 400 ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು, 400 ಫಾರ್ಮಸಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 150 ಹಿರಿಯ ಪ್ರಯೋಗಶಾಲಾ ತಂತ್ರಜ್ಞರನ್ನು ಹಾಗೂ 400 ಫಾರ್ಮಾಸಿಸ್ ಹುದ್ದೆಗಳನ್ನು 2021-22ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ಮುಂದುವರಿಸಲು ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರಿಗೆ ಪತ್ರ ಹೊರಡಿಸಲಾಗಿರುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 150 ಹಿರಿಯ ಪ್ರಯೋಗಶಾಲಾ ತಂತ್ರಜ್ಞರನ್ನು ಹಾಗೂ 400 ಫಾರ್ಮಾಸಿಸ್ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಮುಂದುವರೆಸಲು ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರಿಗೆ ಪತ್ರ ಹೊರಡಿಸಲಾಗಿರುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 150 ಹಿರಿಯ ಪ್ರಯೋಗಶಾಲಾ ತಂತ್ರಜ್ಞರನ್ನು ಹಾಗೂ 400 ಫಾರ್ಮಾಸಿಸ್ಟ್ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಮುಂದುವರೆಸಲು ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಣ ಸೇವೆಗಳು ಇವರಿಗೆ ಪತ್ರ
ನೀಡುವಂತೆ ಕೋರಲಾಗಿದೆ.

ನಿರ್ದೇಶನಾಲಯದ ಏಕ ಕಡತದಲ್ಲಿ ಸದರಿ ಹೊರಗುತ್ತಿಗೆ ನೌಕರರ ಸೇವೆಯ ಅವಧಿಯು ದಿನಾಂಕ: 03-02-2025ಕ್ಕೆ ಅಂತ್ಯವಾಗಿರುವುದರಿಂದ, ಪ್ರಸ್ತುತ ನೇರ ನೇಮಕಾತಿ ಪ್ರಕ್ರಿಯೆಯು ಚಾಲನೆಯಲ್ಲಿದ್ದು, ಇನ್ನೂ ಸದರಿ ಹುದ್ದೆಗಳಿಗೆ ನೇರ ನೇಮಕಾತಿ ಮುಖೇನ ಭರ್ತಿಯಾಗದೇ ಇರುವುದರಿಂದ ಪ್ರಸ್ತುತ ಹೊರಗುತ್ತಿಗೆ ಆಧಾರದ ಮೇಲೆ 200 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹಾಗೂ 400 ಫಾರ್ಮಸಿ ಅಧಿಕಾರಿಗಳ ಸೇವೆಯನ್ನು ನೇರ ನೇಮಕಾತಿ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವವರೆಗೂ ಅಥವಾ ಮುಂದಿನ ಒಂದು ವರ್ಷದ ಅವಧಿಗೆ ಮುಂದುವರೆಸಲು ಅನುಮತಿಯನ್ನು ನೀಡುವಂತೆ ಕೋರಲಾಗಿರುತ್ತದೆ.

ಆದ್ದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಪ್ರಯೋಗಶಾಲಾ ತಂತ್ರಜ್ಞರು ಮತ್ತು ಫಾರ್ಮಾಸಿಸ್‌ನ ಕೆಲವೊಂದು ಹುದ್ದೆಗಳನ್ನು ನೇರ ನೇಮಕಾತಿ ಮುಖೇನ ತುಂಬುವವರೆಗೆ ಗುತ್ತಿಗೆ ಮುಖೇನ ತುಂಬಲು ನಿರ್ಧರಿಸಿದ್ದು, ಅದರಂತೆ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಕಂಡ ಷರತ್ತುಗಳಿಗೊಳಪಡಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಎದುರಾಗಿ 400 ಕಿರಿಯ ಪ್ರಯೋಗಶಾಲಾ ತಂತ್ರಜ್ಞರು ಮತ್ತು 400 ಫಾರ್ಮಾಸಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಭರ್ತಿ ಮಾಡಿಕೊಳ್ಳಲು ಆದೇಶಿಸಿದೆ.

ಷರತ್ತುಗಳು:-

1. ಪ್ರಸ್ತುತ ಚಾಲನೆಯಲ್ಲಿರುವ ನೇರ ನೇಮಕಾತಿ ಪ್ರಕ್ರಿಯೆಯ ಮೂಲಕ ಹುದ್ದೆಗಳು ಭರ್ತಿಯಾದ ನಂತರ 400 ಕಿರಿಯ ಪ್ರಯೋಗಶಾಲಾ ತಂತ್ರಜ್ಞರು ಮತ್ತು 400 ಫಾರ್ಮಾಸಿಸ್ಟ್ ಹುದ್ದೆಗಳು ಗುತ್ತಿಗೆ ಸೇವೆಯನ್ನು ರದ್ದುಗೊಳಿಸತಕ್ಕದ್ದು.

2. ಆರೋಗ್ಯ ಇಲಾಖೆಯ ನಾರ್ಮಸ್ (Norms) ಪ್ರಕಾರ ಮಂಜೂರಾದ / ಭರ್ತಿ ಇರುವ / ಖಾಲಿ ಇರುವ ಹುದ್ದೆಗಳೊಂದಿಗೆ ತರ್ಕಬದ್ಧಗೊಳಿಸಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕೇಂದ್ರಗಳಿಂದ ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡಲು ಕ್ರಮವಹಿಸುವುದು.

3. ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಭವಿಷ್ಯದ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನಿನ ತೊಡಕುಗಳು ಉದ್ಭವಿಸದಂತೆ ಕ್ರಮವಹಿಸುವುದು,

4. ಗುತ್ತಿಗೆ ಆಧಾರದ ಮೇಲಿನ ಸಿಬ್ಬಂದಿಗಳ ಆಯ್ಕೆಯನ್ನು ಈ ಹಿಂದಿನ ಗುತ್ತಿಗೆ ಅವಧಿಯ ಸೇವೆಯನ್ನು ಪರಿಗಣಿಸದೆ, ಮತ್ತೆ ಹೊಸದಾಗಿ ಸೇವೆಗೆ ಸೇರಿಸಿಕೊಂಡಂತೆ ಪರಿಗಣಿಸಿ ಆಯ್ಕೆ ಮಾಡುವುದು (Thé Recruitment Should be done De-novo, without considering the pre- service of contract employees, as per extant C/R rules.)

5. ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ಫಾರ್ಮಾಸಿಸ್ ಮತ್ತು ಕಿರಿಯ ಪ್ರಯೋಗಶಾಲಾ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಪೂರ್ವದಲ್ಲಿ ಜಿಲ್ಲಾವಾರು ಮತ್ತು ಸಿಬ್ಬಂದಿಗಳ ಕೊರತೆ ಇರುವ ಕೇಂದ್ರಗಳ ಮತ್ತು ಜಿಲ್ಲಾವಾರು ಮಾಹಿತಿಯನ್ನು ಮತ್ತು ಯಾವ ಜಿಲ್ಲೆ ಮತ್ತು ಕೇಂದ್ರಗಳಿಗೆ ಪ್ರಸ್ತಾಪಿತ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತುಂಬುವ ಅವಶ್ಯಕತೆ ಇದೆ ಎಂಬುದರ ಪಟ್ಟಿಯನ್ನು ಸರ್ಕಾರಕ್ಕೆ ಒದಗಿಸುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 493 ವೆಚ್ಚ-5/2022, ದಿನಾಂಕ: 17-05- 2025 ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

Job News: State government gives green signal to fill 800 vacant posts in various hospitals in the state!
Share. Facebook Twitter LinkedIn WhatsApp Email

Related Posts

BIG NEWS : ಬೀದರ್ ATM ದರೋಡೆ, ಶೂಟೌಟ್ ಕೇಸ್ ಗೆ 1 ವರ್ಷ : ಇನ್ನುವರೆಗೂ ಸಿಗದ ಆರೋಪಿಗಳು!

16/01/2026 12:51 PM1 Min Read

50 ವರ್ಷ ಮೇಲ್ಪಟ್ಟ ಪುರುಷರೇ ಗಮನಿಸಿ : ಈ 5 ಜೀವಸತ್ವಗಳು ಅಮೃತವಿದ್ದಂತೆ, ಪ್ರತಿದಿನ ತಪ್ಪದೇ ಸೇವಿಸಿ.!

16/01/2026 12:23 PM2 Mins Read

SHOCKING : ಬೆಂಗಳೂರಲ್ಲಿ ಹುಡುಗರ ಡ್ರೆಸ್ ಧರಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಹುಡುಗಿಯರು ಅರೆಸ್ಟ್.!

16/01/2026 12:12 PM1 Min Read
Recent News

SHOCKING : ನಾಗರಹಾವಿನೊಂದಿಗೆ ಮೋಜು ಮಾಡುತ್ತಿದ್ದ ವ್ಯದ್ಧ ಅದೇ ಹಾವು ಕಚ್ಚಿ ಸಾವು : ಆಘಾತಕಾರಿ ವಿಡಿಯೋ ವೈರಲ್| WATCH VIDEO

16/01/2026 1:13 PM

SHOCKING: ಬೆಚ್ಚಿ ಬೀಳಿಸುವ ಕೃತ್ಯ : ಪತ್ನಿಯನ್ನು ಹೊಡೆದು ಕೊಂದ ಪತಿ, ಎದೆಹಾಲು ಹಾಲು ಕುಡಿಯುತ್ತಿದ್ದ 6 ತಿಂಗಳ ಮಗುವೂ ಸಾವು.!

16/01/2026 12:58 PM

BIG NEWS : ಬೀದರ್ ATM ದರೋಡೆ, ಶೂಟೌಟ್ ಕೇಸ್ ಗೆ 1 ವರ್ಷ : ಇನ್ನುವರೆಗೂ ಸಿಗದ ಆರೋಪಿಗಳು!

16/01/2026 12:51 PM

BREAKING : `BJP’ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಮುಹೂರ್ತ ಫಿಕ್ಸ್ : ಜ.19ಕ್ಕೆ ನಾಮಪತ್ರ ಸಲ್ಲಿಕೆ, 20 ರಂದು ಮತದಾನ.!

16/01/2026 12:41 PM
State News
KARNATAKA

BIG NEWS : ಬೀದರ್ ATM ದರೋಡೆ, ಶೂಟೌಟ್ ಕೇಸ್ ಗೆ 1 ವರ್ಷ : ಇನ್ನುವರೆಗೂ ಸಿಗದ ಆರೋಪಿಗಳು!

By kannadanewsnow0516/01/2026 12:51 PM KARNATAKA 1 Min Read

ಬೀದರ್ : ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೀದರ್ ಎಟಿಎಂ ದರೋಡೆ ಮತ್ತು ಶೂಟೌಟ್ ಪ್ರಕರಣಕ್ಕೆ ಇಂದಿಗೆ 1 ವರ್ಷ…

50 ವರ್ಷ ಮೇಲ್ಪಟ್ಟ ಪುರುಷರೇ ಗಮನಿಸಿ : ಈ 5 ಜೀವಸತ್ವಗಳು ಅಮೃತವಿದ್ದಂತೆ, ಪ್ರತಿದಿನ ತಪ್ಪದೇ ಸೇವಿಸಿ.!

16/01/2026 12:23 PM

SHOCKING : ಬೆಂಗಳೂರಲ್ಲಿ ಹುಡುಗರ ಡ್ರೆಸ್ ಧರಿಸಿ ಕಳ್ಳತನ ಮಾಡುತ್ತಿದ್ದ ಇಬ್ಬರು ಹುಡುಗಿಯರು ಅರೆಸ್ಟ್.!

16/01/2026 12:12 PM

BREAKING : ದಕ್ಷಿಣ ಕನ್ನಡದಲ್ಲಿ ವ್ಯಕ್ತಿಯ ಮೇಲೆ ಏಕಾಏಕಿ ಚಿರತೆ ದಾಳಿ : ಅಡಕೆ ಮರ ಏರಿದ ಪ್ರಾಣ ಉಳಿಸಿಕೊಂಡ ಚಾಲಾಕಿ!

16/01/2026 11:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.