Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜುಲೈ.21, 22ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

19/07/2025 7:21 PM

ಜಿಯೋ ಫೈನಾನ್ಷಿಯಲ್- ಅಲಯಂಜ್ ಜಂಟಿಯಾಗಿ ಭಾರತದಲ್ಲಿ ಮರುವಿಮಾ ಕ್ಷೇತ್ರ ಪ್ರವೇಶ

19/07/2025 7:11 PM

ಅ.1ರಿಂದ ಭಾರತ-ಇಎಫ್‌ಟಿಎ ವ್ಯಾಪಾರ ಒಪ್ಪಂದ ಜಾರಿ; 1 ಮಿಲಿಯನ್ ಉದ್ಯೋಗ ಸೃಷ್ಟಿ- ಪಿಯೂಷ್ ಗೋಯಲ್

19/07/2025 7:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜಿಯೋ ಫೈನಾನ್ಷಿಯಲ್- ಅಲಯಂಜ್ ಜಂಟಿಯಾಗಿ ಭಾರತದಲ್ಲಿ ಮರುವಿಮಾ ಕ್ಷೇತ್ರ ಪ್ರವೇಶ
BUSINESS

ಜಿಯೋ ಫೈನಾನ್ಷಿಯಲ್- ಅಲಯಂಜ್ ಜಂಟಿಯಾಗಿ ಭಾರತದಲ್ಲಿ ಮರುವಿಮಾ ಕ್ಷೇತ್ರ ಪ್ರವೇಶ

By kannadanewsnow0919/07/2025 7:11 PM

ಮುಂಬೈ : ಅಲಯಂಜ್ ಸಮೂಹ (Allianz)ದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅಲಯಂಜ್ ಯುರೋಪ್ ಬಿ.ವಿ., ಹಾಗೂ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ಭಾರತೀಯ ವಿಮಾ ಮಾರುಕಟ್ಟೆಯನ್ನು ಪ್ರವೇಶಿಸಲು 50:50 ದೇಶೀಯ ಮರುವಿಮಾ ಜಂಟಿ ಉದ್ಯಮವನ್ನು ರಚನೆ ಮಾಡುವುದಾಗಿ ಘೋಷಿಸಿವೆ. ಇದಕ್ಕಾಗಿ ಎರಡೂ ಕಂಪನಿಗಳು ಬದ್ಧತೆಯ ಒಪ್ಪಂದವನ್ನು ಮಾಡಿಕೊಂಡಿವೆ. ಜೆಎಫ್‌ಎಸ್‌ಎಲ್ ತುಂಬ ಗಟ್ಟಿಯಾಗಿ ಸ್ಥಳೀಯ ತಿಳಿವಳಿಕೆ ಮತ್ತು ಬಲವಾದ ಡಿಜಿಟಲ್ ಉಪಸ್ಥಿತಿಯನ್ನು ಹೊಂದಿದ್ದರೆ, ಅಲಯಂಜ್ ಬಲವಾದ ಅಂಡರ್‌ರೈಟಿಂಗ್ ಹಾಗೂ ಜಾಗತಿಕ ಮರುವಿಮಾ ಸಾಮರ್ಥ್ಯಗಳನ್ನು ತರುತ್ತದೆ. ಈ ಜಂಟಿ ಉದ್ಯಮವು ಭಾರತದಲ್ಲಿ ಅಲಯಂಜ್ ನ ಅಸ್ತಿತ್ವದಲ್ಲಿರುವ ಅಲಯಂಜ್- ಮರು ವಿಮೆ ಮತ್ತು ಅಲಯಂಜ್ ವಾಣಿಜ್ಯ ಪೋರ್ಟ್‌ಫೋಲಿಯೊಗಳನ್ನು ಸಹ ಬಳಸಿಕೊಳ್ಳುತ್ತದೆ.

ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕಿ ಆದ ಇಶಾ ಅಂಬಾನಿ ಅವರು ಮಾತನಾಡಿ, “ಭಾರತವು ಹೆಚ್ಚುತ್ತಿರುವ ಸಮೃದ್ಧತೆ, ಬೆಳೆಯುತ್ತಿರುವ ಆರ್ಥಿಕ ಅರಿವು ಹಾಗೂ ವ್ಯಾಪಕ ಆಗುತ್ತಿರುವ ಡಿಜಿಟಲ್ ಪರಿಸರದಿಂದ ವಿಮಾ ಬೇಡಿಕೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ಈ ಪಾಲುದಾರಿಕೆಯು ಅಲಯಂಜ್ ನ ಜಾಗತಿಕ ಮರುವಿಮಾ ಪರಿಣತಿ ಜೊತೆಗೆ ಜೆಎಫ್‌ಎಸ್‌ಎಲ್‌ನ ಭಾರತೀಯ ಮಾರುಕಟ್ಟೆಯ ಆಳವಾದ ತಿಳಿವಳಿಕೆ ಸೇರುತ್ತದೆ. ಇದರಿಂದಾಗಿ ವಿಮಾದಾರರಿಗೆ ನವೀನ ಮತ್ತು ಕಸ್ಟಮೈಸ್ ಮಾಡಿದ ಮರುವಿಮಾ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ದೃಢವಾದ ಡಿಜಿಟಲ್ ಮೂಲಸೌಕರ್ಯ ಸಂಯೋಜಿಸುತ್ತದೆ. ‘2047ನೇ ಇಸವಿ ವೇಳೆಗೆ ಎಲ್ಲರಿಗೂ ವಿಮೆ’ ಎಂಬ ರಾಷ್ಟ್ರೀಯ ಗುರಿಗೆ ಅನುಗುಣವಾಗಿ, ಪ್ರತಿ ಭಾರತೀಯರಿಗೂ ರಕ್ಷಣೆಯನ್ನು ಖಚಿತಪಡಿಸುವ ಬಲವಾದ ಮತ್ತು ಹೆಚ್ಚು ಅಂತರ್ಗತ ವಿಮಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ,” ಎಂದರು.

ಅಲಯಂಜ್ ಎಸ್‌ಇಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲಿವರ್ ಬೆಟ್ ಮಾತನಾಡಿ, “ಭಾರತದಲ್ಲಿ ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಹೆಮ್ಮೆ ಪಡುತ್ತೇವೆ ಮತ್ತು ತಮ್ಮ ಕುಟುಂಬಗಳು ಮತ್ತು ಅವರ ವ್ಯವಹಾರಗಳಿಗೆ ಸರಿಯಾದ ರಕ್ಷಣೆಯನ್ನು ಬಯಸುವ ಗ್ರಾಹಕರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಹೊಂದಿದ್ದೇವೆ. ಅಲಯಂಜ್ ಮತ್ತು ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಗ್ರಾಹಕ ಶ್ರೇಷ್ಠತೆಗೆ ಖ್ಯಾತಿಯನ್ನು ಹೊಂದಿರುವ ಎರಡು ವಿಶ್ವಾಸಾರ್ಹ ಬ್ರ್ಯಾಂಡ್‌ಗಳಾಗಿವೆ ಮತ್ತು ಈ ರೋಮಾಂಚಕಾರಿ ಪ್ರಯಾಣದಲ್ಲಿ ಸಕ್ರಿಯವಾಗಿ ಕೊಡುಗೆ ನೀಡಲು ಮತ್ತು ಭಾಗವಹಿಸಲು ನಾವು ಎದುರು ನೋಡುತ್ತಿದ್ದೇವೆ,” ಎಂದಿದ್ದಾರೆ.

ಅಲಯಂಜ್ -ಮರು ವಿಮೆ ಭಾರತದಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಮರುವಿಮೆ ಮಾಡುತ್ತಾ ಬಂದಿದೆ. ನಿಯಮಬದ್ಧ ಮತ್ತು ನಿಯಂತ್ರಕ ಅನುಮೋದನೆಗಳನ್ನು ಪಡೆದ ನಂತರ ಜಂಟಿ ಉದ್ಯಮವು ಕಾರ್ಯಾಚರಣೆ ಪ್ರಾರಂಭಿಸುತ್ತದೆ.

ಅ.1ರಿಂದ ಭಾರತ-ಇಎಫ್‌ಟಿಎ ವ್ಯಾಪಾರ ಒಪ್ಪಂದ ಜಾರಿ; 1 ಮಿಲಿಯನ್ ಉದ್ಯೋಗ ಸೃಷ್ಟಿ- ಪಿಯೂಷ್ ಗೋಯಲ್

ಅವೈಜ್ಞಾನಿಕ ಭೂಸ್ವಾಧೀನ ಪ್ರಕ್ರಿಯೆಯಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ: ಸಚಿವ ಕೃಷ್ಣ ಬೈರೇಗೌಡ ಬೇಸರ

Share. Facebook Twitter LinkedIn WhatsApp Email

Related Posts

ಅ.1ರಿಂದ ಭಾರತ-ಇಎಫ್‌ಟಿಎ ವ್ಯಾಪಾರ ಒಪ್ಪಂದ ಜಾರಿ; 1 ಮಿಲಿಯನ್ ಉದ್ಯೋಗ ಸೃಷ್ಟಿ- ಪಿಯೂಷ್ ಗೋಯಲ್

19/07/2025 7:08 PM2 Mins Read

ಸ್ಮಾರ್ಟ್ ಫೋನ್ ಬಳಕೆದಾರರಿಗೆ ‘ಅಪ್ಲಿಕೇಶನ್ ಡೌನ್ಲೋಡ್’ಗಳ ಕುರಿತು ಸರ್ಕಾರ ಎಚ್ಚರಿಕೆ

19/07/2025 6:57 PM1 Min Read

ತಿರುಪತಿಗೆ ಹೋಗ್ತಿದ್ದೀರಾ? ಹಾಗಾದ್ರೆ, ನಿಮಗಿದೋ ಸಿಹಿ ಸುದ್ದಿ ; 300 ರೂ. ಟಿಕೆಟ್ ಸಿಗದಿದ್ರೆ ಹೀಗೆ ಮಾಡಿ.!

19/07/2025 6:21 PM2 Mins Read
Recent News

ಜುಲೈ.21, 22ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

19/07/2025 7:21 PM

ಜಿಯೋ ಫೈನಾನ್ಷಿಯಲ್- ಅಲಯಂಜ್ ಜಂಟಿಯಾಗಿ ಭಾರತದಲ್ಲಿ ಮರುವಿಮಾ ಕ್ಷೇತ್ರ ಪ್ರವೇಶ

19/07/2025 7:11 PM

ಅ.1ರಿಂದ ಭಾರತ-ಇಎಫ್‌ಟಿಎ ವ್ಯಾಪಾರ ಒಪ್ಪಂದ ಜಾರಿ; 1 ಮಿಲಿಯನ್ ಉದ್ಯೋಗ ಸೃಷ್ಟಿ- ಪಿಯೂಷ್ ಗೋಯಲ್

19/07/2025 7:08 PM

ಮಾಟ-ಮಂತ್ರ, ವಾಮಾ-ಚಾರ ಆದಾಗ ಈ ಲಕ್ಷಣ ಕಾಣಿಸಿಕೊಳ್ತಾವೆ: ನೀವು ತಪ್ಪದೇ ಈ ಕೆಲಸ ಮಾಡಿ

19/07/2025 7:03 PM
State News
KARNATAKA

ಜುಲೈ.21, 22ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

By kannadanewsnow0919/07/2025 7:21 PM KARNATAKA 1 Min Read

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆವಿ ಸಹಕಾರನಗರ” ಉಪಕೇಂದ್ರ ವ್ಯಾಪ್ತಿಯಲ್ಲಿ ದಿನಾಂಕ 21.07.2025 (ಸೋಮವಾರ) ರಿಂದ…

ಮಾಟ-ಮಂತ್ರ, ವಾಮಾ-ಚಾರ ಆದಾಗ ಈ ಲಕ್ಷಣ ಕಾಣಿಸಿಕೊಳ್ತಾವೆ: ನೀವು ತಪ್ಪದೇ ಈ ಕೆಲಸ ಮಾಡಿ

19/07/2025 7:03 PM

ಕರ್ತವ್ಯದ ವೇಳೆ ಮೃತಪಟ್ಟ ಸೆಸ್ಕ್ ಪವರ್ ಮ್ಯಾನ್ ಕುಟುಂಬಕ್ಕೆ 1.06 ಕೋಟಿ ಪರಿಹಾರ ವಿತರಣೆ

19/07/2025 6:55 PM

BREAKING: ಗ್ರೇಟರ್ ಬೆಂಗಳೂರು 5 ವಿಭಾಗಗಳಾಗಿ ವಿಂಗಡಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ

19/07/2025 6:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.