ಶಿವಮೊಗ್ಗ: ಜಿಲ್ಲೆಯಲ್ಲಿ ಗುತ್ತಿಗೆದಾರರೊಬ್ಬರಿಂದ 30,000 ಲಂಚ ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿ ಜೆಇ ಒಬ್ಬರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದ ಗ್ರಾಮೀಣಾಭಿವೃದ್ಧಿ ಇಲಾಖೆಯ ಜೆಇ ಪುರುಷೋತ್ತಮ್ ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.
ರಸ್ತೆ ಕಾಮಗಾರಿ ಬಿಲ್ ಮಂಜೂರಾತಿಗಾಗಿ ಶೇ.3ರಷ್ಟು ಲಂಚಕ್ಕೆ ಗುತ್ತಿಗಾರ ಲಿಂಗರಾಜುಗೆ ಬೇಡಿಕೆ ಇಟ್ಟಿದ್ದರು. 77.59 ಲಕ್ಷ ವೆಚ್ಚದ ಕಾಮಗಾರಿ ನಡೆಸಿದ್ದಂತ ಗುತ್ತಿಗೆದಾರ ಲಿಂಗರಾಜು ಈಗಾಗಲೇ ಬಿಲ್ ಮಂಜೂರಾತಿಗಾಗಿ 1.63 ಲಕ್ಷ ಲಂಚವನ್ನು ಜೆಇ ಪುರುಷೋತ್ತಮ್ ಗೆ ನೀಡಿದ್ದರು.
ಉಳಿದ 70,000 ರೂ ಲಂಚದ ಹಣ ನೀಡುವಂತೆ ಗುತ್ತಿಗೆದಾರ ಲಿಂಗರಾಜುಗೆ ಜೆಇ ಪುರುಷೋತ್ತಮ್ ಒತ್ತಾಯಿಸಿದ್ದರು. ಈ ಸಂಬಂಧ ಗುತ್ತಿಗೆದಾರ ಲಿಂಗರಾಜು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇಂದು 70,000 ಉಳಿದ ಲಂಚದ ಹಣದಲ್ಲಿ 30,000 ಹಣವನ್ನು ಶಿಕಾರಿಪುರ ರಸ್ತೆಯ ಲಕ್ಷ್ಮೀ ಮೆಡಿಕಲ್ಸ್ ಬಳಿಯಲ್ಲಿ ಗುತ್ತಿಗೆದಾರರಿಂದ ಪಡೆಯುತ್ತಿದ್ದ ವೇಳೆಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ.
Rain in Karnataka: ಮುಂದಿನ 7 ದಿನ ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆ
BIG NEWS: ಸಾಗರದಲ್ಲಿ ‘ಸದಾನಂದ ಹತ್ಯೆ’ ಪ್ರಕರಣದಲ್ಲಿ ಮೂವರ ವಿರುದ್ಧ ಕೇಸ್ ದಾಖಲು: ‘FIR’ನಲ್ಲಿ ಏನಿದೆ?