Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಜೈಶ್ ಭಯೋತ್ಪಾದಕರ ಹತ್ಯೆ

04/02/2026 1:23 PM

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

04/02/2026 1:13 PM

BREAKING: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ನಲ್ಲಿ 4.1 ತೀವ್ರತೆಯ ಭೂಕಂಪ | Earthquake

04/02/2026 1:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರು ಸರ್ಕಾರದ ವಿರುದ್ಧ ಮಾತನಾಡುವ ಶಕ್ತಿ ನೀಡಿದ್ದು ದಿ.ಪ್ರೋ.ನಂಜುಂಡಸ್ವಾಮಿ- ನ.ಲಿ.ಕೃಷ್ಣ
KARNATAKA

ರೈತರು ಸರ್ಕಾರದ ವಿರುದ್ಧ ಮಾತನಾಡುವ ಶಕ್ತಿ ನೀಡಿದ್ದು ದಿ.ಪ್ರೋ.ನಂಜುಂಡಸ್ವಾಮಿ- ನ.ಲಿ.ಕೃಷ್ಣ

By kannadanewsnow0913/02/2025 8:38 PM

ಮಂಡ್ಯ : ರೈತರು ತಮ್ಮ ಪಾಲಿನ ಹಕ್ಕಗಳನ್ನು ಪಡೆದು ಕೊಳ್ಳಲು ಅವರಿಗೆ ಶಕ್ತಿ ತುಂಬುತ್ತಾ, ಜೀವಿತಾವಧಿವರೆಗೂ ರೈತರ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಧೀಮಂತ ರೈತನಾಯಕ ದಿ.ಪ್ರೊ.ನಂಜುಂಡಸ್ವಾಮಿ ಅವರು ಎಂದು ರೈತ ಚೈತನ್ಯ ಕೇಂದ್ರದ ಅಧ್ಯಕ್ಷ ನ.ಲಿ.ಕೃಷ್ಣ ಹೇಳಿದರು.

ಮದ್ದೂರು ಪಟ್ಟಣದ ತಾಲೂಕು ರೈತ ಸಂಘ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಕನ್ನಡ ಸಾಹಿತ್ಯ ಪರಿಷತ್, ಸಂವಿಧಾನ ಸಂರಕ್ಷಣಾ ಸಮಿತಿ, ದಲಿತ ಸಂಘರ್ಷ ಸಮಿತಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊ.ನಂಜುಂಡಸ್ವಾಮಿ ಅವರ ಜನ್ಮ ದಿನಾಚರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತೋತ್ಸವ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರನ್ನು ಹೇಗೆ ನೆನಪಿಸಿಕೊಳ್ಳುತ್ತೇವೆೆಯೋ ಆದೇ ರೀತಿ ಅವಿದ್ಯಾವಂತ ರೈತ ಸಮುದಾಯದಲ್ಲಿ ಕಾನೂನು ಅರಿವುಮೂಡಿಸಿ ತಮ್ಮ ಶಾಸನ ಬದ್ಧ ಹಕ್ಕುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ರೈತ ಸಂಘದ ಮೂಲಕ ಹೋರಾಟದ ಕಿಚ್ಚುಹೊತ್ತಿಸಿದ ಮಹಾನ್ ನಾಯಕ ಪ್ರೊ.ನಂಜುಂಡಸ್ವಾಮಿ ಅವರನ್ನು ಪ್ರತಿಯೊಬ್ಬ ರೈತರು ನೆನಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ರೈತರು ಸಾಲಗಾರರಲ್ಲ ಸರ್ಕಾರವೇ ಬಾಕೀದಾರ ಎಂಬ ಉದ್ಘೋಷದೊಂದಿಗೆ ರೈತರಿಗೆ ಸರ್ಕಾರದ ವಿರುದ್ಧ ಎದೆಯುಬ್ಬಿಸಿ ಮಾತನಾಡಲು ಕಲಿಸಿದ ವಿಶ್ವ ನಾಯಕ ನಂಜುಂಡಸ್ವಾಮಿ ಅವರು, ಸರಕಾರಗಳಿಂದ ರೈತರಿಗೆ ಅನ್ಯಾಯವಾದಾಗ ನ್ಯಾಯ ಸಿಗುವವರೆಗೂ ಒಂದಲ್ಲ ಒಂದು ರೀತಿಯ ಹೋರಾಟ ರೂಪಿಸುತ್ತಿದ್ದರು. ಜೀವನದುದ್ದಕ್ಕೂ ಚಳವಳಿಗಳನ್ನು ನಡೆಸಿ ಕೊಂಡು ಬಂದ ಅವರ ತತ್ತ್ವ, ಆದರ್ಶಗಳನ್ನು ಪ್ರತಿಯೊಬ್ಬ ರೈತರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರೊ.ನಂಜುಂಡಸ್ವಾಮಿ ಅವರು ಸ್ವಾರ್ಥಕ್ಕಾಗಿ ಎಂದು ಹೋರಾಟ ಮಾಡಿದವರಲ್ಲ. ಸರ್ಕಾರ ರೈತರ ವಿರುದ್ಧ ಕಾಯಿದೆಗಳನ್ನು ತಂದಾಗ ಚಳವಳಿಗಳನ್ನು ರೂಪಿಸಿ ಸೌಲಭ್ಯಗಳನ್ನು ದೊರಕಿಸಿ ಕೊಡುತ್ತಿದ್ದರು. ಆದರೆ, ಅಂಥ ಮಹಾನ್ ಚೇತನ ನಮ್ಮ ಕಣ್ಣಮುಂದೆ ಇಲ್ಲದಿದ್ದರು, ಅವರ ಆದರ್ಶಗಳನ್ನು ಅಳವಡಿಸಿಕೊಂಡು ರೈತರಿಗೆ ಅನ್ಯಾಯವಾದಾಗ ರೈತ ಸಮುದಾಯ ಹೋರಾಟ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಹೇಳಿದರು.

ಇದೇ ವೇಳೆ ತಾಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶಾಲಾ ಮಕ್ಕಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

BBMP ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬೊಮ್ಮನಹಳ್ಳಿ ವಲಯದಲ್ಲಿ 21.68 ಗುಂಟೆ ಒತ್ತುವರಿ ತೆರವು

BIG NEWS: ಸೊರಬದ ಕಂತನಹಳ್ಳಿಯಲ್ಲಿ ಮರಗಳ ಮಾರಣಹೋಮ: ತನಿಖಾ ವರದಿ ಸಿದ್ಧ, ತಪ್ಪಿತಸ್ಥರ ವಿರುದ್ಧ ಕ್ರಮ ಫಿಕ್ಸ್

Share. Facebook Twitter LinkedIn WhatsApp Email

Related Posts

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

04/02/2026 1:13 PM2 Mins Read

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM4 Mins Read

ಗಮನಿಸಿ : ಈ ಹಿಟ್ಟಿನಿಂದ ಮಾಡಿದ ರೊಟ್ಟಿ 1 ತಿಂಗಳು ತಿಂದರೆ `ಕೊಬ್ಬು’ ಬೆಣ್ಣೆಯಂತೆ ಕರಗುತ್ತದೆ.!

04/02/2026 12:23 PM2 Mins Read
Recent News

BREAKING: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಇಬ್ಬರು ಜೈಶ್ ಭಯೋತ್ಪಾದಕರ ಹತ್ಯೆ

04/02/2026 1:23 PM

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

04/02/2026 1:13 PM

BREAKING: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ನಲ್ಲಿ 4.1 ತೀವ್ರತೆಯ ಭೂಕಂಪ | Earthquake

04/02/2026 1:12 PM

ಸಾವಿಗೆ ಮುನ್ನ ಕೊನೆಯ ಕರೆ: ವಿಮಾನದಿಂದ ಅಜಿತ್ ಪವಾರ್ ಅವರ ಅಂತಿಮ ಮಾತು ಬಹಿರಂಗ

04/02/2026 12:59 PM
State News
KARNATAKA

ರೈತರೇ ಗಮನಿಸಿ : ಈ ಬೆಳೆ ಬೆಳೆದ್ರೆ ನೀವು ಲಕ್ಷಾಧಿಪತಿಯಾಗಬಹುದು.!

By kannadanewsnow5704/02/2026 1:13 PM KARNATAKA 2 Mins Read

ಇಂದಿನ ದಿನಗಳಲ್ಲಿ ವಿದ್ಯಾವಂತ ಯುವಕರು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇಂದು ಲಕ್ಷಗಟ್ಟಲೆ ದುಡಿಮೆ ತೊರೆದು ವ್ಯವಸಾಯ ಮಾಡಿ ಕೈತುಂಬಾ ಹಣ…

ರಾಜ್ಯದ ಜನತೆಯ ಗಮನಕ್ಕೆ : `ಕರ್ನಾಟಕ ಆರೋಗ್ಯ ಇಲಾಖೆ’ಯಿಂದ ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

04/02/2026 12:54 PM

ಗಮನಿಸಿ : ಈ ಹಿಟ್ಟಿನಿಂದ ಮಾಡಿದ ರೊಟ್ಟಿ 1 ತಿಂಗಳು ತಿಂದರೆ `ಕೊಬ್ಬು’ ಬೆಣ್ಣೆಯಂತೆ ಕರಗುತ್ತದೆ.!

04/02/2026 12:23 PM

ಗಮನಿಸಿ : `M’ ಅಕ್ಷರದಿಂದ ಆರಂಭವಾಗುವ ಹೆಸರುಳ್ಳವರ ವ್ಯಕ್ತಿತ್ವ ಹೇಗಿರುತ್ತದೆ ಗೊತ್ತಾ?

04/02/2026 12:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.