Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘SIT’ ತನಿಖೆಗೆ ವೀರೇಂದ್ರ ಹೆಗಡೆ ಸ್ವಾಗತ : ನಾವು ಯಾವಾಗಲೂ ಒಳ್ಳೆಯದನ್ನೇ ಮಾಡೋದು ಎಂದ ಸಿಎಂ ಸಿದ್ದರಾಮಯ್ಯ

26/09/2025 5:25 PM

ಸಿದ್ದರಾಮಯ್ಯ ಕುರುಬರನ್ನು STಗೆ ಸೇರಿಸುತ್ತಾರೆ ಎಂಬುದು ಸುಳ್ಳು: HM ರೇವಣ್ಣ

26/09/2025 5:25 PM

BREAKING ; ‘ಭಾರತ-ಪಾಕ್ ವಿಷ್ಯದಲ್ಲಿ 3ನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶವಿಲ್ಲ’: ಟ್ರಂಪ್-ಷರೀಫ್ ಭೇಟಿಗೆ ಭಾರತ ಖಡಕ್ ಪ್ರತಿಕ್ರಿಯೆ

26/09/2025 5:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿದ್ದರಾಮಯ್ಯ ಕುರುಬರನ್ನು STಗೆ ಸೇರಿಸುತ್ತಾರೆ ಎಂಬುದು ಸುಳ್ಳು: HM ರೇವಣ್ಣ
KARNATAKA

ಸಿದ್ದರಾಮಯ್ಯ ಕುರುಬರನ್ನು STಗೆ ಸೇರಿಸುತ್ತಾರೆ ಎಂಬುದು ಸುಳ್ಳು: HM ರೇವಣ್ಣ

By kannadanewsnow0926/09/2025 5:25 PM

ಬೆಂಗಳೂರು: ಇಂದು ಕರ್ನಾಟಕ ರಾಜ್ಯ ಕುರುಬರ ಜಾಗೃತಿ ಸಮಿತಿ ಪತ್ರಿಕಾಗೋಷ್ಠಿ ನಡೆಸಿತು. ಆ ಸುದ್ದಿಗೋಷ್ಠಿಯ ಮುಖ್ಯಾಂಶಗಳು ಮುಂದಿದೆ..

ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರು,
ಮಾಜಿ ಸಚಿವ ಎಚ್.ಎಂ ರೇವಣ್ಣ ಅವರು ಮಾತನಾಡಿ ಕಳೆದ 1931 ರಿಂದ ದೇಶದಲ್ಲಿ ಜನಗಣತಿ ಆಗಿಲ್ಲ. ಹೀಗಾಗಿ ಸಮುದಾಯಗಳ ಸ್ಥಿತಿಗತಿ ತಿಳಿಯಬೇಕಿದೆ ಎಂದರು.

ಹಾವನೂರು ವರದಿ ಬಳಿಕ ಯಾವ ವರದಿಗಳು ಆಗಲಿಲ್ಲ. ಕಾಂತರಾಜ್ ವರದಿಗೆ 10 ವರ್ಷ,ಅದು ಸರಿ ಇಲ್ಲ ಎಂದವರು ಮತ್ತೆ ಮಾಡಿ ಎಂದಿದ್ದರು. ಇದು ಹಿಂದುಳಿದ ಜಾತಿಗಳ ಪ್ರಶ್ನೆ ಮಾತ್ರ ಅಲ್ಲ. ಎಲ್ಲಾ ಸಮುದಾಯಗಳ ಪರಿಸ್ಥಿತಿ ತಿಳಿಯಲಿದೆ ಎಂದರು.

ನಾವು ಕುರುಬ ಸಮುದಾಯಗಳು ಈ ಸಮೀಕ್ಷೆಯಲ್ಲಿ ಭಾಗಿಯಾಗಬೇಕು. ಇದು ಸಿದ್ದರಾಮಯ್ಯ ಉಳಿವಿಗಾಗಿ ಅಂತ ಬಹಳ ಜನ ಮಾತಾಡ್ತಾರೆ. ದೇವರಾಜು ಅರಸು ನಂತರ ಎಲ್ಲಾ ಸಮುದಾಯಗಳ ಏಳಿಗೆ ಬಗ್ಗೆ ಕಾಳಜಿ ಇರುವುದು ಸಿದ್ದರಾಮಯ್ಯ ಅವರಿಗೆ. ಕಾನೂನು ಅಡಿ, ಸಾಂವಿಧಾನಿಕ ಅಡಿ ನಡೆಯುತ್ತಿರುವ ಸಮೀಕ್ಷೆಯಾಗಿದೆ. ಯಾರನ್ನೂ ಒತ್ತಾಯ ಮಾಡಬಾರದು ಅಂತ ಕೋರ್ಟ್ ಹೇಳಿದೆ ಎಂದರು.

ನಮ್ಮ ಸಮಾಜ ಏನು ಬರೆಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಧರ್ಮ ಹಿಂದು, ಜಾತಿ ಕುರುಬ ಅಂತ ಬರೆಸಬೇಕು. ಯಾರಾದ್ರೂ ಜಾತಿ ಸರ್ಟಿಫಿಕೇಟ್ ನಲ್ಲಿ ಗೊಂಡ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ ಅಂತ ಇದ್ದರೆ ಅವರು ಅದನ್ನೇ ಬರೆಸಬಹುದು. ಉಪಜಾತಿ ಬರೆಸುವುದು ಅವರ ವಿವೇಚನೆಗೆ ಬಿಟ್ಟಿದ್ದು. ಅಥವಾ ಅನ್ವಯಿಸುವುದಿಲ್ಲ ಎಂದು ಬರೆಸುವಂತೆ ಸೂಚನೆ ನೀಡಿದರು.

ಕುರುಬರನ್ನ ಎಸ್ಟಿ ಗೆ ಸೇರಿಸುವ ಕೆಲಸ ಸಿದ್ದರಾಮಯ್ಯ ಮಾಡಲ್ಲ. ಸಿಎಂ ಆದವರಿಗೆ ಆ ಅಧಿಕಾರ ಇಲ್ಲ. ಅದು ರಾಜಕೀಯವಾಗಿ ಕೆಲವು ಆರೋಪ ಮಾಡ್ತಿದ್ದಾರೆ. ಎಸ್ಟಿ ಗೆ ಕುರುಬರನ್ನ ಸೇರಿಸುವ ಶಿಫಾರಸು ಮಾಡಿದ್ದು ಬೊಮ್ಮಾಯಿ ಅವರು. ಸಿದ್ದರಾಮಯ್ಯ ಕುರುಬರನ್ನು ಎಸ್.ಟಿ ಗೆ ಸೇರಿಸುತ್ತಾರೆ ಎಂಬುದು ಸುಳ್ಳು ಎಂದರು.

ಕೆಲವರು ಕುರುಬರನ್ನು ಎಸ್ಟಿಗೆ ಕಳಿಸಬೇಕು ಅಂತ ಪ್ರಯತ್ನ ಮಾಡಿದ್ರು. ಅದು ಬಸವರಾಜ ಬೊಮ್ಮಾಯಿ ಮಾಡಿದ ಕೆಲಸ, ಸಿದ್ದರಾಮಯ್ಯ ಮಾಡಿದ್ದಲ್ಲ. ಕುಲಶಾಸ್ತ್ರ ಅಧ್ಯಯನ ಇಲ್ಲದೆಯೇ ಯಾರನ್ನು ಎಸ್.ಟಿಗೆ ಸೇರಿಸಲು ಸಾಧ್ಯವೇ ಇಲ್ಲ. ಒಬ್ಬ ಸಿಎಂ ಕೈಲಿ ಇದು ಇರುವುದಲ್ಲ, ಅದಕ್ಕೆ ಕೇಂದ್ರ ಸರ್ಕಾರವಿದೆ ಎಂದರು.

ಕೆಲವರು ಸಿದ್ದರಾಮಯ್ಯ ನೇ ಕುರುಬರನ್ನು ಎಸ್.ಟಿ ಗೆ ಸೇರಿಸುತ್ತಾರೆ ಅಂತ ಅಪ ಪ್ರಚಾರ ಮಾಡ್ತಿದ್ದಾರೆ. ಅದು ಕೇಂದ್ರ ಸರ್ಕಾರವೇ ಮಾಡುವುದು ಹೊರತು ರಾಜ್ಯ ಸರಕಾರವಲ್ಲ ಎಂಬುದು ಸಾಮಾನ್ಯ ಜನರಿಗೆ ಗೊತ್ತಾಬೇಕು. ಎಂದು ಹೆಚ್ ಎಂ ರೇವಣ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಟಿ ಬಿ ಬಳಗಾವಿ ಅಧ್ಯಕ್ಷರು ಕನಕಶ್ರೀ ಚಾರಿಟೇಬಲ್ ಟ್ರಸ್ಟ್  ಹಿರಿಯ ಮುಖಂಡರುಗಳಾದ ಶಾಂತಕುಮಾರ್, ಸಿದ್ದಣ್ಣ ಮೇಟಿ, ಕೇಶವಮೂರ್ತಿ ಕುರುಬರ ಸಂಘದ ಉಪಾಧ್ಯಕ್ಷರು, ಮಲ್ಲೇಶ್, ಚೌಡಣ್ಣವರ ಮುಂತಾದವರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

‘SIT’ ತನಿಖೆಗೆ ವೀರೇಂದ್ರ ಹೆಗಡೆ ಸ್ವಾಗತ : ನಾವು ಯಾವಾಗಲೂ ಒಳ್ಳೆಯದನ್ನೇ ಮಾಡೋದು ಎಂದ ಸಿಎಂ ಸಿದ್ದರಾಮಯ್ಯ

26/09/2025 5:25 PM1 Min Read

ಹಾಸನ : ಹೆಜ್ಜೇನು ದಾಳಿಯಿಂದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ : ಆಸ್ಪತ್ರೆಗೆ ದಾಖಲು

26/09/2025 5:03 PM1 Min Read

ಸಾಗರದ ನಿವೇಶನ ರಹಿತರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಗುಡ್ ನ್ಯೂಸ್

26/09/2025 5:03 PM1 Min Read
Recent News

‘SIT’ ತನಿಖೆಗೆ ವೀರೇಂದ್ರ ಹೆಗಡೆ ಸ್ವಾಗತ : ನಾವು ಯಾವಾಗಲೂ ಒಳ್ಳೆಯದನ್ನೇ ಮಾಡೋದು ಎಂದ ಸಿಎಂ ಸಿದ್ದರಾಮಯ್ಯ

26/09/2025 5:25 PM

ಸಿದ್ದರಾಮಯ್ಯ ಕುರುಬರನ್ನು STಗೆ ಸೇರಿಸುತ್ತಾರೆ ಎಂಬುದು ಸುಳ್ಳು: HM ರೇವಣ್ಣ

26/09/2025 5:25 PM

BREAKING ; ‘ಭಾರತ-ಪಾಕ್ ವಿಷ್ಯದಲ್ಲಿ 3ನೇ ವ್ಯಕ್ತಿಯ ಮಧ್ಯಸ್ಥಿಕೆಗೆ ಅವಕಾಶವಿಲ್ಲ’: ಟ್ರಂಪ್-ಷರೀಫ್ ಭೇಟಿಗೆ ಭಾರತ ಖಡಕ್ ಪ್ರತಿಕ್ರಿಯೆ

26/09/2025 5:23 PM

“ತಪ್ಪು, ಆಧಾರರಹಿತ” ; ಮೋದಿ-ಪುಟಿನ್ ಫೋನ್ ಸಂಭಾಷಣೆ ಕುರಿತ ‘ನ್ಯಾಟೋ ಮುಖ್ಯಸ್ಥ’ರ ಹೇಳಿಕೆಗೆ ‘ಭಾರತ’ ಆಕ್ರೋಶ

26/09/2025 5:08 PM
State News
KARNATAKA

‘SIT’ ತನಿಖೆಗೆ ವೀರೇಂದ್ರ ಹೆಗಡೆ ಸ್ವಾಗತ : ನಾವು ಯಾವಾಗಲೂ ಒಳ್ಳೆಯದನ್ನೇ ಮಾಡೋದು ಎಂದ ಸಿಎಂ ಸಿದ್ದರಾಮಯ್ಯ

By kannadanewsnow0526/09/2025 5:25 PM KARNATAKA 1 Min Read

ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ತನಿಖೆ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರು ಸ್ವಾಗತ…

ಸಿದ್ದರಾಮಯ್ಯ ಕುರುಬರನ್ನು STಗೆ ಸೇರಿಸುತ್ತಾರೆ ಎಂಬುದು ಸುಳ್ಳು: HM ರೇವಣ್ಣ

26/09/2025 5:25 PM

ಹಾಸನ : ಹೆಜ್ಜೇನು ದಾಳಿಯಿಂದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಂಭೀರ ಗಾಯ : ಆಸ್ಪತ್ರೆಗೆ ದಾಖಲು

26/09/2025 5:03 PM

ಸಾಗರದ ನಿವೇಶನ ರಹಿತರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಗುಡ್ ನ್ಯೂಸ್

26/09/2025 5:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.