Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಜೆಪಿಗರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವ್ಯಂಗ್ಯ

09/12/2025 1:34 PM

ಬಿಜೆಪಿ ನಾಯಕರಿಗೆ ಏನೂ ಸಮಸ್ಯೆ ಸಿಗಲಿಲ್ಲ ಎಂಬುದೇ ಸಮಸ್ಯೆಯೇ.?: ಸಚಿವ ಕೃಷ್ಣ ಬೈರೇಗೌಡರ ಟೀಕೆ

09/12/2025 1:30 PM

ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ : CM ಸಿದ್ದರಾಮಯ್ಯ

09/12/2025 1:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಜೆಪಿ ನಾಯಕರಿಗೆ ಏನೂ ಸಮಸ್ಯೆ ಸಿಗಲಿಲ್ಲ ಎಂಬುದೇ ಸಮಸ್ಯೆಯೇ.?: ಸಚಿವ ಕೃಷ್ಣ ಬೈರೇಗೌಡರ ಟೀಕೆ
KARNATAKA

ಬಿಜೆಪಿ ನಾಯಕರಿಗೆ ಏನೂ ಸಮಸ್ಯೆ ಸಿಗಲಿಲ್ಲ ಎಂಬುದೇ ಸಮಸ್ಯೆಯೇ.?: ಸಚಿವ ಕೃಷ್ಣ ಬೈರೇಗೌಡರ ಟೀಕೆ

By kannadanewsnow0909/12/2025 1:30 PM

ಬೆಳಗಾವಿ: ಆಡಳಿತ ಪಕ್ಷವನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಏನೂ ಸಮಸ್ಯೆ ಸಿಗಲಿಲ್ಲ ಎಂಬುದೇ ಬಿಜೆಪಿಗರ ಪಾಲಿಗೆ ಸಮಸ್ಯೆಯಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಟೀಕಿಸಿದರು.

ಮಂಗಳವಾರ ಸುವರ್ಣಸೌಧದ ವಿಧಾನಸಭೆ ಕಲಾಪದಲ್ಲಿ ಮೊದಲು ನಿಗದಿಯಂತೆ ಪ್ರಶ್ನೋತ್ತರ ಅವಧಿ ಆರಂಭವಾಗಬೇಕಿತ್ತು. ಆದರೆ, ವಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ಶಾಸಕರಾದ ಅಶ್ವತ್ಥ ನಾರಾಯಣ ಅವರು ಪ್ರಶ್ನೋತ್ತರ ಅವಧಿಗೆ ಮುನ್ನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ನಿಲುವಳಿ ಮಂಡಿಸಿದರು.

ಈ ವೇಳೆ ವಿರೋಧ ಪಕ್ಷದ ನಾಯಕರ ವರ್ತನೆಯನ್ನು ಬಹಿರಂಗವಾಗಿ ಖಂಡಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಬಿಜೆಪಿ ನಾಯಕರಿಗೆ ಏನೂ ಸಮಸ್ಯೆ ಸಿಗಲಿಲ್ಲ ಎಂಬುದೇ ಸಮಸ್ಯೆಯಾಗಿದೆ. ಅದೇ ಕಾರಣಕ್ಕೆ ಪ್ರಶ್ನೋತ್ತರ ಅವಧಿಗೆ ಮುನ್ನವೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎನ್ನುತ್ತಿದ್ದಾರೆ. ಆದರೆ, ನಿಯಮದ ಪ್ರಕಾರ ಪ್ರಶ್ನೋತ್ತರ ಅವಧಿಗೆ ಮುನ್ನ ಯಾವುದೇ ಚರ್ಚೆ ಮಾಡಲು ಅವಕಾಶ ಇಲ್ಲ. ಪ್ರಶ್ನೋತ್ತರ ಅವಧಿಯ ನಂತರ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರವೇ ಸಲಹೆ ನೀಡಿದೆ. ಆದರೂ, ಇದರಲ್ಲಿ ವಿರೋಧ ಪಕ್ಷದ ತಕರಾರು ಏಕೆ?” ಎಂದು ಟೀಕಾಪ್ರಹಾರ ನಡೆಸಿದರು.

ಈ ವೇಳೆ ಸದನದ ಈ ಹಿಂದಿನ ಇತಿಹಾಸವನ್ನೂ ಮೆಲುಕು ಹಾಕಿದ ಅವರು,” ಬಿಜೆಪಿ ನಾಯಕರಲ್ಲಿ ಸೆಲೆಕ್ಟೀವ್ ಜ್ಞಾಪಕ ಶಕ್ತಿ ಅಧಿಕವಾಗಿದೆ. ಈ ಹಿಂದೆ ಬಿಜೆಪಿಯೇ ಅಧಿಕಾರದಲ್ಲಿದ್ದಾಗ ವಿಶ್ವೇಶ್ವರ ಹೆಗಡೆ ಅವರು ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ʼಪ್ರಶ್ನೋತ್ತರದ ಅವಧಿ ವೇಳೆ ಯಾವುದೇ ವಿಚಾರಗಳ ಬಗ್ಗೆ ಚರ್ಚೆ ಬೇಡʼ ಎಂದು ಅವರೇ ಹೇಳಿದ್ದರು. ಆದರೆ, ಇಂದು ಬಿಜೆಪಿ ನಾಯಕರೇ ಈ ನಿಯಮವನ್ನು ಗಾಳಿಗೆ ತೂರುತ್ತಿರುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಉಚ್ಛಾಟಿತ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, “ಕೆಲವರು ಪ್ರತಿಷ್ಠೆಗಾಗಿ ಪ್ರಶ್ನೋತ್ತರ ಅವಧಿ ಮುಂದೆ ಹಾಕುವುದು ಸರಿ ಇಲ್ಲ. ಪ್ರತಿಯೊಬ್ಬ ಶಾಸಕರಿಗೂ ಅವರವರ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೇ ಮಹತ್ವದ ಪ್ರಶ್ನೆ ಇರುತ್ತೆದೆ. ನಾನೂ ಸಹ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸ್ಟಾರ್ ಗುರುತಿನ ಪ್ರಶ್ನೆ ಕೇಳಿದ್ದೇನೆ. ಇಂತಹ ಸಂದರ್ಭದಲ್ಲಿ ಪ್ರಶ್ನೋತ್ತರ ಅವಧಿಯನ್ನು ಮುಂದೂಡುವುದು ಸರಿಯಲ್ಲ. ಪ್ರಶ್ನೋತ್ತರ ಅವಧಿಯ ನಂತರ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ” ಎಂದು ಸಲಹೆ ನೀಡಿದರು.

ಹಿರಿಯ ಸಚಿವರಾದ ಎಚ್.ಕೆ. ಪಾಟೀಲ್ ಮಾತನಾಡಿ, “ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ನಮ್ಮ ಸಹಮತ ಇದೆ. ಈ ಚರ್ಚೆಯನ್ನು ಈಗಾಗಲೇ ಇಂದಿನ ಅಜೆಂಡಾಗೂ ಸೇರಿಸಿಯಾಗಿದೆ. ಪ್ರಶ್ನೋತ್ತರ ಅವಧಿಗೆ ಮುನ್ನ ಈ ಚರ್ಚೆ ಆರಂಭಿಸಲು ನಮ್ಮದೇನು ತಕರಾರು ಇಲ್ಲ. ಆ ನಿರ್ಧಾರ ಸ್ಪೀಕರ್ ಅವರ ವಿವೇಚನೆಗೆ ಬಿಟ್ಟದ್ದು” ಎಂದು ವಿಪಕ್ಷ ನಾಯಕರ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದರು.

ಅಂತಿಮವಾಗಿ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಪ್ರಶ್ನೋತ್ತರ ಅವಧಿಗೆ ಮನ್ನಣೆ ನೀಡಿದರು.

Share. Facebook Twitter LinkedIn WhatsApp Email

Related Posts

ಬಿಜೆಪಿಗರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವ್ಯಂಗ್ಯ

09/12/2025 1:34 PM1 Min Read

ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ : CM ಸಿದ್ದರಾಮಯ್ಯ

09/12/2025 1:28 PM2 Mins Read

ALERT : ಪುಟ್ಟ ಮಕ್ಕಳಿಗೆ `ಡೈಪರ್’ ಹಾಕುವ ಎಲ್ಲಾ ಪೋಷಕರು ತಪ್ಪದೇ ಇದನ್ನೊಮ್ಮೆ ಓದಿ..!

09/12/2025 1:18 PM1 Min Read
Recent News

ಬಿಜೆಪಿಗರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವ್ಯಂಗ್ಯ

09/12/2025 1:34 PM

ಬಿಜೆಪಿ ನಾಯಕರಿಗೆ ಏನೂ ಸಮಸ್ಯೆ ಸಿಗಲಿಲ್ಲ ಎಂಬುದೇ ಸಮಸ್ಯೆಯೇ.?: ಸಚಿವ ಕೃಷ್ಣ ಬೈರೇಗೌಡರ ಟೀಕೆ

09/12/2025 1:30 PM

ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ : CM ಸಿದ್ದರಾಮಯ್ಯ

09/12/2025 1:28 PM

ಈ 100 ರೂಪಾಯಿ ನೋಟು 600000 ರೂಪಾಯಿಗಳವರೆಗೆ ಲಕ್ಷಕ್ಕೆ ಮಾರಾಟವಾಗುತ್ತಿದೆ – ನಿಮ್ಮ ಬಳಿ ಇದೆಯೇ? ವಿವರಗಳು ಇಲ್ಲಿವೆ

09/12/2025 1:24 PM
State News
KARNATAKA

ಬಿಜೆಪಿಗರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವ್ಯಂಗ್ಯ

By kannadanewsnow0909/12/2025 1:34 PM KARNATAKA 1 Min Read

ಬೆಳಗಾವಿ: ಬಿಜೆಪಿ ನಾಯಕರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ‌.‌ ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ, ಯಾರು ಬೇಡ…

ಬಿಜೆಪಿ ನಾಯಕರಿಗೆ ಏನೂ ಸಮಸ್ಯೆ ಸಿಗಲಿಲ್ಲ ಎಂಬುದೇ ಸಮಸ್ಯೆಯೇ.?: ಸಚಿವ ಕೃಷ್ಣ ಬೈರೇಗೌಡರ ಟೀಕೆ

09/12/2025 1:30 PM

ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಲ್ಲ, ಇದು ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ : CM ಸಿದ್ದರಾಮಯ್ಯ

09/12/2025 1:28 PM

ALERT : ಪುಟ್ಟ ಮಕ್ಕಳಿಗೆ `ಡೈಪರ್’ ಹಾಕುವ ಎಲ್ಲಾ ಪೋಷಕರು ತಪ್ಪದೇ ಇದನ್ನೊಮ್ಮೆ ಓದಿ..!

09/12/2025 1:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.