Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೆನ್ನಾರ್ ನದಿ ವಿವಾದ ಕೇಸ್ ನಲ್ಲಿ ಕರ್ನಾಟಕಕ್ಕೆ ಹಿನ್ನಡೆ : ನ್ಯಾಯಾಧಿಕರಣ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ

02/02/2026 1:13 PM

ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನಕಾರಿ ಹೇಳಿಕೆ : ‘YSRPC’ ನಾಯಕ ಅಂಬಟಿ ರಾಮಬಾಬುಗೆ 14 ದಿನ ನ್ಯಾಯಾಂಗ ಬಂಧನ

02/02/2026 1:11 PM

ಪುಣೆ ಪೋರ್ಷೆ ಅಪಘಾತ: ರಕ್ತದ ಮಾದರಿ ವಿನಿಮಯ ಮಾಡಿಕೊಂಡ ಮೂವರು ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು

02/02/2026 1:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸ್ವರ್ಣ ಪ್ರಾಶನ’ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ? ಇಲ್ಲಿದೆ ಸಂಪೂರ್ಣ ಮಾಹಿತಿ | Swarna Bindu Prashana
KARNATAKA

‘ಸ್ವರ್ಣ ಪ್ರಾಶನ’ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ? ಇಲ್ಲಿದೆ ಸಂಪೂರ್ಣ ಮಾಹಿತಿ | Swarna Bindu Prashana

By kannadanewsnow0914/01/2025 11:24 AM

ಪೋಷಕರು ತಮ್ಮ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡುತ್ತಿರುತ್ತಾರೆ, ಭವಿಷ್ಯದಲ್ಲಿ ಉನ್ನತಿ ಹೊಂದಲಿ ಎಂದು ಬಯಸುತ್ತಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು ಪದೇಪದೇ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದರಿಂದ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಇದಕ್ಕಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ತಿಳಿಸಿರುವ ಸ್ವರ್ಣ ಪ್ರಾಶನ ಸಂಸ್ಕಾರ ಉತ್ತಮ ಆಯ್ಕೆಯಾಗಿದೆ.

ಸ್ವರ್ಣಪ್ರಾಶನ ಎಂದರೇನು?

ಸ್ವರ್ಣಪ್ರಾಶನವು ಆಯುರ್ವೇದದಲ್ಲಿ ವಿವರಿಸಲಾದ 16 ಸಂಸ್ಕಾರಗಳಲ್ಲಿ ಒಂದಾಗಿದೆ. ಅದು ಮಕ್ಕಳ ಸರ್ವತೋಮುಖವಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಶುದ್ಧೀಕರಿಸಿದ ಸ್ವರ್ಣವನ್ನು(ಚಿನ್ನ) ಇತರೆ ಔಷದ ದ್ರವ್ಯಗಳೊಂದಿಗೆ ಸೇವನೆಯೋಗ್ಯವಾದ ರೂಪದಲ್ಲಿ ತಯಾರಿಸಿ, ನಿರ್ದಿಷ್ಟ ದಿನದಂದು (ಪುಷ್ಯ ನಕ್ಷತ್ರ) ಅಥವಾ ನಿತ್ಯವೂ ಸೇವಿಸುವುದರಿಂದ ಮಕ್ಕಳ ದೈಹಿಕ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯವನ್ನು ಉತ್ತಮಗೊಳಿಸಬಹುದಾಗಿದೆ.

ಸ್ವರ್ಣ ಪ್ರಾಶನದಿಂದ ಆಗುವ ಪ್ರಯೋಜನಗಳು

‌ಮಕ್ಕಳ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
‌ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
‌ಸೋಂಕುಗಳನ್ನು ತಡೆಗಟ್ಟುತ್ತದೆ – ಪದೇ ಪದೇ ಕಾಡುವ ಶೀತ, ಕೆಮ್ಮು, ಅಲರ್ಜಿ, ಅಸ್ತಮಾ ಇವುಗಳನ್ನು ಹತೋಟಿಯಲ್ಲಿಡಬಹುದು.
‌ಮಕ್ಕಳ ಗ್ರಹಣ ಶಕ್ತಿ ಮತ್ತು ಆಲೋಚನೆ ಶಕ್ತಿಯನ್ನು ಹೆಚ್ಚಿಸುತ್ತದೆ.
‌ನರಗಳಿಗೆ ಶಕ್ತಿ ನೀಡುತ್ತದೆ – ವಾಕ್ ದೋಷ ಶ್ರವಣದೋಷ, ಶಯ್ಯಾ ಮೂತ್ರ ಹಾಗೂ ಮುಂತಾದ ತೊಂದರೆಗಳನ್ನು ಶಮನಗೊಳಿಸುತ್ತದೆ.
ಒಟ್ಟಾರೆಯಾಗಿ ಸ್ವರ್ಣ ಪ್ರಾಶನವು ಮಕ್ಕಳ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ.

ಸ್ವರ್ಣ ಪ್ರಾಶನವನ್ನು ಯಾರಿಗೆ ಕೊಡಬೇಕು?

ನವಜಾತ ಶಿಶುವಿನಿಂದ 16 ವರ್ಷದವರೆಗೆ ಸ್ವರ್ಣ ಪ್ರಾಶನವನ್ನು ನೀಡಬಹುದು. ಪುಷ್ಯ ನಕ್ಷತ್ರದಂದು ಕೊಡಿಸುವುದಾದರೆ ಸತತವಾಗಿ 21 ತಿಂಗಳವರೆಗೆ ಕೊಡಿಸುವುದು ಪ್ರಯೋಜನಕಾರಿ ಅಥವಾ ಸತತವಾಗಿ ಪ್ರತಿದಿನ ಆರು ತಿಂಗಳವರೆಗೆ ಕೊಡಿಸುವುದು ಕೂಡ ಉಪಯುಕ್ತ.

ಸಾಮಾನ್ಯ ಮಾಹಿತಿ

‌ಸಣ್ಣ ಜ್ವರ, ಶೀತ, ನೆಗಡಿ, ಕೆಮ್ಮು ಇತ್ಯಾದಿ ಸ್ವರ್ಣ ಪ್ರಾಶನಕ್ಕೆ ಅಡ್ಡಿಯಾಗುವುದಿಲ್ಲ. ‌ಆಯುರ್ವೇದದಲ್ಲಿ ತಿಳಿಸಿರುವ ರೀತಿಯಲ್ಲಿ ಶೋಧಿತ ಸ್ವರ್ಣವನ್ನು ಉಪಯೋಗಿಸಿ ತಯಾರಿಸಿದ ಸ್ವರ್ಣ ಪ್ರಾಶನದಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಆಯುರ್ವೇದ ವೈದ್ದರಿಂದ ತೆಗೆದುಕೊಳ್ಳುವುದು ಉತ್ತಮ ಆಯ್ಕೆ. ‌ಹೆಚ್ಚು ದಿನಗಳ ವರೆಗೆ ಹಾಕಿದಲ್ಲಿ ಹೆಚ್ಚು ಪರಿಣಾಮಕಾರಿ.

‌ಸ್ವರ್ಣ ಪ್ರಾಶನವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಕುವುದು ಉತ್ತಮ. ಹಾಕಿದ 15 ನಿಮಿಷಗಳ ನಂತರ ಆಹಾರವನ್ನು ಕೊಡಬಹುದು. ‌ಸಾಮಾನ್ಯವಾಗಿ ಎಣ್ಣೆ ಪದಾರ್ಥ ಬೇಕರಿ ಪದಾರ್ಥ, ಚಾಟ್ಸ್, ಚಾಕಲೇಟ್ ಮುಂತಾದ ಪಚನಕ್ರಿಯೆಯನ್ನು ದುರ್ಬಲಗೊಳಿಸುವ ಆಹಾರವನ್ನು ಕೊಡಬಾರದು. ಸ್ವರ್ಣ ಪ್ರಾಶನ ವಿಧಾನವು ಸಂಪೂರ್ಣವಾಗಿ ಸುರಕ್ಷಿತವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ.

ಸ್ವರ್ಣ ಪ್ರಾಶನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಬೇಕಿದ್ದಲ್ಲಿ ಸಂಪರ್ಕಿಸಿ – 8660885793. ದೈನಂದಿನ ಆರೋಗ್ಯದ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು 8660885793 ಮೇಸೆಜ್ ಮಾಡಿ.

ಲೇಖಕರು: ಡಾ. ಪ್ರವೀಣ್ ಕುಮಾರ್ BAMS, MD, ಆಯುರ್ವೇದ ವೈದ್ಯರು.

BIG UPDATE : ಕಾರು ಅಪಘಾತ ಪ್ರಕರಣ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿನ `L1, L4′ ಮೂಳೆ ಮುರಿತ.!

BREAKING : `ಎಳ್ಳು- ಬೆಲ್ಲದ ಜೊತೆ ಪ್ರೀತಿ, ಬಾಂಧವ್ಯ ಮಿಳಿತಗೊಳ್ಳಲಿ’ : ನಾಡಿನ ಜನತೆಗೆ `ಸಂಕ್ರಾಂತಿ ಹಬ್ಬದ’ ಶುಭ ಕೋರಿದ CM ಸಿದ್ದರಾಮಯ್ಯ

Share. Facebook Twitter LinkedIn WhatsApp Email

Related Posts

ಪೆನ್ನಾರ್ ನದಿ ವಿವಾದ ಕೇಸ್ ನಲ್ಲಿ ಕರ್ನಾಟಕಕ್ಕೆ ಹಿನ್ನಡೆ : ನ್ಯಾಯಾಧಿಕರಣ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ

02/02/2026 1:13 PM1 Min Read

ಬೆಳಗಾವಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದ ಮಹಿಳಾ ಅಧಿಕಾರಿ : ಜೆಸಿಬಿ ಗ್ಲಾಸ್ ಗೆ ಕಲ್ಲು ಹೊಡೆದು ಆಕ್ರೋಶ

02/02/2026 12:30 PM1 Min Read

BIG NEWS : ಲಕ್ಕುಂಡಿಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಚಿನ್ನ, ನಿಧಿ ನಿಕ್ಷೇಪಗಳ ಶೋಧ ಕಾರ್ಯಕ್ಕೆ ಮುಂದಾದ ರಾಜ್ಯ ಸರ್ಕಾರ

02/02/2026 12:23 PM1 Min Read
Recent News

ಪೆನ್ನಾರ್ ನದಿ ವಿವಾದ ಕೇಸ್ ನಲ್ಲಿ ಕರ್ನಾಟಕಕ್ಕೆ ಹಿನ್ನಡೆ : ನ್ಯಾಯಾಧಿಕರಣ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ

02/02/2026 1:13 PM

ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅವಹೇಳನಕಾರಿ ಹೇಳಿಕೆ : ‘YSRPC’ ನಾಯಕ ಅಂಬಟಿ ರಾಮಬಾಬುಗೆ 14 ದಿನ ನ್ಯಾಯಾಂಗ ಬಂಧನ

02/02/2026 1:11 PM

ಪುಣೆ ಪೋರ್ಷೆ ಅಪಘಾತ: ರಕ್ತದ ಮಾದರಿ ವಿನಿಮಯ ಮಾಡಿಕೊಂಡ ಮೂವರು ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು

02/02/2026 1:10 PM

ಆಯುಷ್ಮಾನ್ ಭಾರತ್: ನಿಮ್ಮ ಆರೋಗ್ಯ ವಿಮೆ ರದ್ದಾಗದಂತೆ ತಡೆಯಲು ಈ ಸರಳ ಕ್ರಮಗಳನ್ನು ಪಾಲಿಸಿ | Ayushman card

02/02/2026 12:42 PM
State News
KARNATAKA

ಪೆನ್ನಾರ್ ನದಿ ವಿವಾದ ಕೇಸ್ ನಲ್ಲಿ ಕರ್ನಾಟಕಕ್ಕೆ ಹಿನ್ನಡೆ : ನ್ಯಾಯಾಧಿಕರಣ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ

By kannadanewsnow0502/02/2026 1:13 PM KARNATAKA 1 Min Read

ಬೆಂಗಳೂರು : ಕರ್ನಾಟಕ ತಮಿಳುನಾಡು ನಡುವಿನ ಪೆನ್ನಾರ್ ನದಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ವಿವಾದ ಬಗೆಹರಿಸಲು ನ್ಯಾಯಾಧೀಕರಣ ರಚನೆಗೆ ಸುಪ್ರೀಂ…

ಬೆಳಗಾವಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದ ಮಹಿಳಾ ಅಧಿಕಾರಿ : ಜೆಸಿಬಿ ಗ್ಲಾಸ್ ಗೆ ಕಲ್ಲು ಹೊಡೆದು ಆಕ್ರೋಶ

02/02/2026 12:30 PM

BIG NEWS : ಲಕ್ಕುಂಡಿಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಚಿನ್ನ, ನಿಧಿ ನಿಕ್ಷೇಪಗಳ ಶೋಧ ಕಾರ್ಯಕ್ಕೆ ಮುಂದಾದ ರಾಜ್ಯ ಸರ್ಕಾರ

02/02/2026 12:23 PM

ALERT : ಈ ತಪ್ಪು ಮಾಡಿದ್ರೆ `ಇನ್ವರ್ಟರ್ ಬ್ಯಾಟರಿ’ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

02/02/2026 12:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.