Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ನಾಳೆ ದೇಶಾದ್ಯಂತ `NEET-UG’ ಮರು ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ | NEET UG re-exam

BREAKING : ಖಾನ್ ಸರ್‌ಗೆ ಬಿಗ್ ರಿಲೀಫ್: ಬಂಧನದಿಂದ ರಕ್ಷಣೆ ವಿಸ್ತರಿಸಿದ ಬಿಹಾರ ನ್ಯಾಯಾಲಯ!

ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು; ವಾಹನ ಸಂಚಾರಕ್ಕಿಂತ ಇದಕ್ಕೇ ಮೊದಲ ಆದ್ಯತೆ ಎಂದ ಸುಪ್ರೀಂ ಕೋರ್ಟ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಆಯುರ್ವೇದ ಚಿಕಿತ್ಸೆ’ ನಿಧಾನವೋ? ವರದಾನವೋ? ಇಲ್ಲಿದೆ ಮಾಹಿತಿ | Ayurvedic Treatment
LIFE STYLE

‘ಆಯುರ್ವೇದ ಚಿಕಿತ್ಸೆ’ ನಿಧಾನವೋ? ವರದಾನವೋ? ಇಲ್ಲಿದೆ ಮಾಹಿತಿ | Ayurvedic Treatment

By ವಸಂತ ಬಿ ಈಶ್ವರಗೆರೆ

ಕೆಎನ್ಎನ್ ಡಿಜಿಟಲ್ ಡೆಸ್ಕ್: ಆಯುರ್ವೇದ ವೈದ್ಯಕೀಯ ಪದ್ಧತಿಯು ಅತ್ಯಂತ ಪ್ರಾಚೀನವಾದ ವೈದ್ಯಕೀಯ ಶಾಸ್ತ್ರವಾದರೂ, ವೈಜ್ಞಾನಿಕ ನೆಲೆಯಿಂದ ಕೂಡಿದೆ. ಹಾಗಾದ್ರೆ ಆಯುರ್ವೇದ ಚಿಕಿತ್ಸೆ ನಿಧಾನವೋ ಅಥವಾ ವರದಾನವೋ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿದೆ ಓದಿ.

ರೋಗಸ್ತು ದೋಷ ವೈಷಮ್ಯಂ ದೋಷ ಸಾಮ್ಯಂ ಅರೋಗತಃ ||

ಅಂದರೆ ದೇಹದಲ್ಲಿ  functional elements ಗಳಾದ ತ್ರಿದೋಷಗಳು ವಾತ, ಪಿತ್ತ, ಕಫ ಮತ್ತು ಸಪ್ತ ಧಾತುಗಳ (tissues) ಅಸಮತೋಲನೆಯಿಂದ ರೋಗದ ಉದ್ಭವವು ಹಾಗೂ ಅವುಗಳ ಸಮತೋಲನ ಕಾರ್ಯದಿಂದ ಆರೋಗ್ಯವು. ಈ ನಿಟ್ಟಿನಲ್ಲಿ ದೋಷಗಳ ಮತ್ತು ಸಪ್ತ ಧಾತುಗಳ ಸಮಸ್ಥಿತಿಯೇ ಆಯುರ್ವೇದ ಚಿಕಿತ್ಸೆಯ ಮೂಲ ಮಂತ್ರ.

ಅನ್ಯ ವೈದ್ಯಕೀಯ ಪದ್ಧತಿಗಳ ಆಕರ್ಷಣೆಯಿಂದಾಗಿ,  ಪ್ರಾಚೀನ ಆಯುರ್ವೇದ ವೈದ್ಯಕೀಯ ಶಾಸ್ತ್ರದ ಕಡೆಗೆ ಜನರ ಒಲವು ಕಡಿಮೆಯಾಗಿದೆ ಮತ್ತು ಹಲವು ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಆ ಸಂದೇಹಗಳ ಪರಿಹಾರಕ್ಕಾಗಿ ಈ ಲೇಖನ.

1.ಆಯುರ್ವೇದ ಚಿಕಿತ್ಸೆಯು ನಿಧಾನ.

ಈ ತಪ್ಪು ಕಲ್ಪನೆಯು ಎಲ್ಲಾ ಸಮಯದಲ್ಲೂ ಅಥವಾ ಎಲ್ಲಾ ರೋಗಿಗಳಿಗೆ ಅನ್ವಯಿಸುವುದಿಲ್ಲ ಏಕೆಂದರೆ ಆಯುರ್ವೇದವು ರೋಗದ ಬಲ ಮತ್ತು ರೋಗಿಯ ಬಲಕ್ಕೆ ಅನುಗುಣವಾಗಿ ಚಿಕಿತ್ಸಾ ಕ್ರಮಗಳನ್ನು ತಿಳಿಸುತ್ತದೆ. ಇದಲ್ಲದೆ ರೋಗಗಳ ಬಗ್ಗೆ ತಿಳಿಸುವಾಗ ಆ ರೋಗವನ್ನು ಯಾವ ಹಂತದಲ್ಲಿ ಸುಲಭವಾಗಿ ಗುಣಪಡಿಸಬಹುದು, ಕಷ್ಟದಿಂದ ಗುಣಪಡಿಸುವಂಥದ್ದು ಹಾಗೂ ಗುಣಪಡಿಸಲು ಅಸಾಧ್ಯವೆಂದು ತಿಳಿಸಿದೆ.

ರೋಗಿಗಳು ಆಯುರ್ವೇದವನ್ನು ಕೊನೆಯ ಆಯ್ಕೆಯನ್ನಾಗಿರಿಸಿಕೊಂಡಿದ್ದಾರೆ.ಈ ಹಂತದಲ್ಲಿರುವಾಗ ರೋಗದ ಬಲವು  ಬಲಿಷ್ಠವಾಗಿಯೂ ಮತ್ತು ರೋಗಿಯ ಬಲವು ಕನಿಷ್ಠವಾಗಿರುವುದರಿಂದ ಚಿಕಿತ್ಸೆಯ ಫಲಿತಾಂಶವು ನಿಧಾನವಾಗಬಹುದು. ಆದ್ದರಿಂದ ಆಯುರ್ವೇದವು ರೋಗಿಯ ಮೊದಲ ಆಯ್ಕೆಯಾಗಿದಲ್ಲಿ ತ್ವರಿತವಾದ ಫಲಿತಾಂಶವನ್ನು ಕಾಣಬಹುದು.

2.ಆಯುರ್ವೇದ ಔಷಧಿಗಳನ್ನು ಅನ್ಯ ಪದ್ದತಿ ಔಷಧಿಗಳ ಜೊತೆಗೆ ತೆಗೆದುಕೊಳ್ಳಬಹುದೇ?

ಜನರು ಅವರ ರೋಗಗಳ ನಿವಾರಣೆಗೆ ಅನ್ಯ ವೈದ್ಯಕೀಯ ಪದ್ಧತಿಗಳ ಔಷಧಿಗಳ ಅಥವಾ ಚಿಕಿತ್ಸೆಯ ಮೊರೆ ಹೋಗುತ್ತಾರೆ.ಇದರಿಂದಾಗಿ ಆಯಾ ಚಿಕಿತ್ಸಾ ಪದ್ಧತಿಯ ಸಿದ್ಧಾಂತಗಳು ವಿಭಿನ್ನವಾಗಿರುತ್ತವೆ ಮತ್ತು ಕೆಲವು ಬಾರಿ ಔಷಧಿಗಳನ್ನು ತಡೆಯಿಲ್ಲದೆ (Suddenly) ನಿಲ್ಲಿಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ ನುರಿತ  ನೊಂದಾಯಿತ(registeted) ಆಯುರ್ವೇದ ವೈದ್ಯರ ಸಲಹೆ ಮೇರೆಗೆ ನೀವು ಉಪಯೋಗಿಸುತ್ತಿರುವ ಅನ್ಯ ಚಿಕಿತ್ಸಾ ಪದ್ಧತಿಯ ಔಷಧಿಗಳನ್ನು ವೈದ್ಯರೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳುವುದು ಉತ್ತಮ.

3.ಆಯುರ್ವೇದವೆಂದರೆ ಬರೀ ಪಥ್ಯ.

ಇತ್ತೀಚಿನ ದಿನಗಳಲ್ಲಿ ಜನರು ಆಹಾರ ಪದಾರ್ಥವು ಆರೋಗ್ಯಕರವೋ ಅಥವಾ ಅನಾರೋಗ್ಯಕರವೋ   ಎಂಬುದನ್ನು ನೋಡುವುದರ ಬದಲಾಗಿ, ಕೇವಲ ನಾಲಿಗೆ ರುಚಿಯುಳ್ಳದ್ದು ಎಂದು ಸೇವಿಸುವುದರಿಂದ ಎಷ್ಟೋ ರೋಗಗಳು ಉದ್ಭವಗೊಂಡಿವೆ.ಅದಕ್ಕೆ ಅಲ್ಲವೇ “ಊಟ ಬಲ್ಲವನಿಗೆ ರೋಗವಿಲ್ಲ”ವೆಂದು ಹೇಳಿರುವುದು.

ಆಯುರ್ವೇದದಲ್ಲಿ ಪ್ರತಿಯೊಂದು ರೋಗದ ಬಗ್ಗೆ ತಿಳಿಸುವಾಗ ಆಹಾರಜ( dietary causes) , ವಿಹಾರಜ(activity related causes) ಮತ್ತು ಮಾನಸಿಕ ನಿದಾನ(Psychological factors) ಅಂದರೆ ರೋಗದ ಕಾರಣಗಳನ್ನು ವಿಸ್ತಾರವಾಗಿ ವಿವರಿಸಿದೆ.  “ಚಿಕಿತ್ಸಾ ತತ್ರ ನಿಧಾನ ಪರಿವರ್ಜನಂ” “ರೋಗದ ಮೂಲ ಕಾರಣವನ್ನು ತ್ಯಜಿಸುವುದೇ ಮೊದಲ ಚಿಕಿತ್ಸೆ.”  ಈ ದೃಷ್ಟಿಯಿಂದಾಗಿ ಆಯುರ್ವೇದ ವೈದ್ಯರುಗಳು ಆಯಾ ರೋಗಗಳಿಗೆ ತಕ್ಕಂತೆ ರೋಗಕ್ಕೆ ಕಾರಣವಾದ ಆಹಾರಗಳನ್ನು ನಿರ್ದಿಷ್ಟ ಅವಧಿಗಳಿಗೆ ತ್ಯಜಿಸಬೇಕೆಂದು ತಿಳಿಸುತ್ತಾರೆ. ಇದರಿಂದಾಗಿ ರೋಗದ ನಿವಾರಣೆ ತ್ವರಿತಗತಿಯಲ್ಲಿ ಆಗುವುದಲ್ಲದೇ, ರೋಗವು ಮರುಕಳಿಸುವ ಸಾಧ್ಯತೆಗಳು ಕಡಿಮೆ.

4.ಆಯುರ್ವೇದ ಔಷಧಿಗಳು ಅಡ್ಡ ಪರಿಣಾಮ ರಹಿತ

ಯಾವುದೇ ವೈದ್ಯಕೀಯ ಪದ್ಧತಿಗಳ ಔಷಧಿಗಳು ಅದರದೇ ಆದ ಪರಿಣಾಮ ಮತ್ತು ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಆದ್ದರಿಂದ ರೋಗಿಗಳು ನುರಿತ ವೈದ್ಯರೊಂದಿಗೆ ಸಂದರ್ಶಿಸಿದ ನಂತರವೇ ಔಷಧಿಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯಕ.

ಇತ್ತೀಚಿನ ದಿನಗಳಲ್ಲಿ ಆಯುರ್ವೇದದ ಹೆಸರಿನ ನಕಲಿ ಔಷಧಿಗಳ ಹಾವಳಿ ಜೋರಾಗಿದೆ. ಹೀಗಿರುವಾಗ ಜನರು ಜಾಹೀರಾತುಗಳನ್ನು ನೋಡಿ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು.

 ಆಯುರ್ವೇದವು ನಿಧಾನವಲ್ಲ ಸರಿಯಾದ ಸಮಯದಲ್ಲಿ, ಸರಿಯಾದ ಹಂತದಲ್ಲಿ ಆಯುರ್ವೇದ ಚಿಕಿತ್ಸೆಯನ್ನು ಅನುಸರಿಸಿದರೆ ನಿಜಕ್ಕೂ ಇದು ರೋಗಿಗೆ ವರದಾನ.

ನಿಮ್ಮ ದೈನಂದಿನ ಆರೋಗ್ಯದ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಲು 8660885793 ಗೆ ಮೇಸೆಜ್ ಮಾಡಿ.

ಲೇಖನ: ಡಾ. ಪ್ರವೀಣ್ ಕುಮಾರ್ BAMS, MD(ayu), ಆಯುರ್ವೇದ ವೈದ್ಯ, ಹಗರಿಬೊಮ್ಮನಹಳ್ಳಿ.

ಇನ್ಮುಂದೆ ಬೆಂಗಳೂರಿನಲ್ಲಿ ಕಸಕ್ಕೂ ಸರ್ವಿಸ್‌ ಚಾರ್ಜ್‌ ಫಿಕ್ಸ್: ಏಪ್ರಿಲ್.1 ರಿಂದ ಜಾರಿ

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!

Share. Facebook Twitter LinkedIn WhatsApp Email

Related Posts

ಗ್ಯಾಸ್ ಸ್ಟವ್ ಮೇಲಿನ ಜಿಡ್ಡು ಕಲೆಗಳನ್ನು ನಿವಾರಿಸಲು ಬೇಕಿಂಗ್ ಸೋಡಾ ಮತ್ತು ವಿನೆಗರ್ ಮಿಶ್ರಣವನ್ನು ಬಳಸುತ್ತಿರುವುದು

ಗ್ಯಾಸ್ ಸ್ಟವ್ ಜಿಡ್ಡು ಕಲೆ ನಿವಾರಣೆಗೆ ಇಲ್ಲಿದೆ ಸರಳ ಗೃಹೋಪಯೋಗಿ ಮಾರ್ಗ

2 Mins Read

“ನಾನಂತೂ ನಿನ್ನ ಪ್ರತಿ ಹೆಜ್ಜೆಗೂ ಹೀಗೆ ಹೂಗಳೇ ಇರಲಿ ಅಂತಾನೇ ಬಯಸೋದು…”

2 Mins Read

Let’s Talk Sex: ದಂಪತಿಗಳು ದೈಹಿಕ ಸಂಬಂಧದಿಂದ ದೂರ ಸರಿಯಲು ಪ್ರಮುಖ ಕಾರಣಗಳಿವು

3 Mins Read
Recent News

BIG NEWS : ನಾಳೆ ದೇಶಾದ್ಯಂತ `NEET-UG’ ಮರು ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ | NEET UG re-exam

BREAKING : ಖಾನ್ ಸರ್‌ಗೆ ಬಿಗ್ ರಿಲೀಫ್: ಬಂಧನದಿಂದ ರಕ್ಷಣೆ ವಿಸ್ತರಿಸಿದ ಬಿಹಾರ ನ್ಯಾಯಾಲಯ!

ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು; ವಾಹನ ಸಂಚಾರಕ್ಕಿಂತ ಇದಕ್ಕೇ ಮೊದಲ ಆದ್ಯತೆ ಎಂದ ಸುಪ್ರೀಂ ಕೋರ್ಟ್

ಇಸ್ರೇಲ್ – ಹೆಜ್ಬುಲ್ಲಾ ಕದನ ವಿರಾಮಕ್ಕೆ ಮತ್ತೆ ಜೀವ; 24 ಗಂಟೆಗಳ ಭೀಕರ ದಾಳಿಯ ನಂತರ ಮರುಸ್ಥಾಪನೆಗೊಂಡ ಶಾಂತಿ ಒಪ್ಪಂದ

State News
KARNATAKA

BIG ALERT: ಮನೆ ಮಾಲೀಕರು ಡೆಪಾಸಿಟ್ ಹಣ ತಡೆಹಿಡಿದರೆ ತಕ್ಷಣ ಈ ಕ್ರಮ ಕೈಗೊಳ್ಳಿ!

By kannadanewsnow57 KARNATAKA 2 Mins Read

ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಮನೆ ಅಥವಾ ಮಳಿಗೆಯನ್ನು ಬಾಡಿಗೆಗೆ ಪಡೆಯುವುದು ಎಷ್ಟು ಕಷ್ಟವೋ, ಅದನ್ನು…

BIG NEWS : ಅನರ್ಹ ಫಲಾನುಭವಿಗಳಿಗೆ ಶಾಕ್ : ಪಕ್ಕಾ ದಾಖಲೆ ಕೊಟ್ಟರಷ್ಟೇ ಸಿಗುತ್ತೆ `ಗೃಹಲಕ್ಷ್ಮಿ,ಗೃಹಜ್ಯೋತಿ’.!

ಬೆಂಗಳೂರಿನ ಜನತೆಯ ಗಮನಕ್ಕೆ : ಇಂದು ಬೆಳಿಗ್ಗೆ 10 ಗಂಟೆಯಿಂದ ಈ ಏರಿಯಾಗಳಲ್ಲಿ `ವಿದ್ಯುತ್ ವ್ಯತ್ಯಯ | POWER CUT

ಕರುನಾಡಿಗೆ ಬರದ ಆತಂಕ: ಕೈಕೊಟ್ಟ ಮುಂಗಾರು, ಅನ್ನದಾತ ಕಂಗಾಲು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.