Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇಂದಿನಿಂದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಜಾರಿಯಾಗಿದೆ : CM ಸಿದ್ದರಾಮಯ್ಯ ಹೇಳಿಕೆ

15/05/2025 2:37 PM

BREAKING: ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಆರೋಪಿ ಅರೆಸ್ಟ್

15/05/2025 2:35 PM

ಮೇ.20ರಂದು ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಲಾದ ಮಧ್ಯಂತರ ಪರಿಹಾರ ಅರ್ಜಿ ಸುಪ್ರೀಂ ಕೋರ್ಟ್ ವಿಚಾರಣೆ | Waqf Amendment Act

15/05/2025 2:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರು, ರಾಜ್ಯದ ಹಿತದೃಷ್ಟಿಯಿಂದ ‘BJP ಸರ್ಕಾರ’ದ ಅವಧಿಯ ಅಕ್ರಮ ಬಯಲು: ರಮೇಶ್ ಬಾಬು 
KARNATAKA

ಸಾರ್ವಜನಿಕರು, ರಾಜ್ಯದ ಹಿತದೃಷ್ಟಿಯಿಂದ ‘BJP ಸರ್ಕಾರ’ದ ಅವಧಿಯ ಅಕ್ರಮ ಬಯಲು: ರಮೇಶ್ ಬಾಬು 

By kannadanewsnow0913/07/2024 5:06 PM

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿಯವರು ವಿನಾ ಕಾರಣ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ನಾಯಕರು ತಾವು ಮಾಡಿದಂತ ಭ್ರಷ್ಟಾಚಾರವನ್ನು ಮುಚ್ಚಿಹಾಕಿಕೊಳ್ಳಲು ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ರಾಜ್ಯದ ಹಿತದೃಷ್ಟಿಯಿಂದ ಬಯಲು ಮಾಡುವುದು ಅನಿವಾರ್ಯವಾಗಿದೆ  ಅಂತ ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗ ಅಧ್ಯಕ್ಷರಾದಂತ ರಮೇಶ್ ಬಾಬು ಕಿಡಿಕಾರಿದ್ದಾರೆ. 

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಸಾರ್ವಜನಿಕ ಸೇವೆಯ ಒಂದು ಪ್ರಮುಖ ಸಂಸ್ಥೆಯಾಗಿದ್ದು, ಸೇವಾ ಮನೋಭಾವದಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಸಾರಿಗೆ ಸಂಸ್ಥೆಯು ದೇಶದಲ್ಲಿ ಒಂದು ಉತ್ತಮ ಮತ್ತು ಅಗ್ರಮಾನ್ಯ ಸಾರಿಗೆ ಸಂಸ್ಥೆಯಾಗಿದ್ದು, ಗುಣಮಟ್ಟದ ಸಾರಿಗೆ ವ್ಯವಸ್ಥೆಯನ್ನು ನೀಡುತ್ತಿದೆ. ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಕರ್ನಾಟಕದ ಈಗಿನ ಕಾಂಗ್ರೆಸ್ ಸರ್ಕಾರ ಸಾರಿಗೆ ಇಲಾಖೆ ಮೂಲಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಉಚಿತ ಪ್ರಯಾಣದ ಶಕ್ತಿ ಯೋಜನೆಯು ಒಂದು ಐತಿಹಾಸಿಕ ಯೋಜನೆಯಾಗಿರುತ್ತದೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಅಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ , ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ ಕಾರ್ಯ ನಿರ್ವಹಿಸುತ್ತಿವೆ. 1980 ರಲ್ಲಿ ಕಂಪನಿ ಕಾಯಿದೆ ಅಡಿಯಲ್ಲಿ ರಾಜ್ಯ ಸರ್ಕಾರದ ಉದ್ಯಮವಾಗಿ ಸ್ಥಾಪನೆಯಾದ ಕರ್ನಾಟಕ ಟ್ರಕ್ಸ್ ಅಂಡ್ ಟರ್ಮಿನಲ್ಸ್ ಸಂಸ್ಥೆಯು 1991 ರಲ್ಲಿ ಡಿ.ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ಸ್ ಹೆಸರಿನಲ್ಲಿ ಪರಿವರ್ತನೆಗೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಇಂತಹ ಸಂಸ್ಥೆಯಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 47 ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದ್ದು, ಈ ಪ್ರಕರಣವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ಒಳಪಡಿಸಿರುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟದ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಾಜಿ ಸಚಿವ ಶ್ರೀರಾಮುಲುರವರು ಸಮಾಜ ಕಲ್ಯಾಣ ಸಚಿವರಾಗಿ ಮತ್ತು ಸಾರಿಗೆ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಇವರು ಸಾರಿಗೆ ಸಚಿವರಾಗಿದ್ದ ಅವಧಿಯಲ್ಲೇ ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ ನಲ್ಲಿ 47 ಕೋಟಿ ಹಗರಣ ನಡೆದಿದ್ದು, ಹಗರಣದ ತನಿಖೆ ಕೋರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು 29-03-2023 ರಲ್ಲಿ ಸರ್ಕಾರಕ್ಕೆ ಸುಧೀರ್ಘವಾದ ಪತ್ರವನ್ನು ಬರೆದಿರುತ್ತಾರೆ. 13-01-2023 ರಲ್ಲಿ ಮತ್ತು 20-02-2023 ರಲ್ಲಿ ಸಾರಿಗೆ ಸಚಿವರನ್ನು ಭೇಟಿ ಮಾಡಿ ಭ್ರಷ್ಟಾಚಾರ ತಡೆ ಕಾಯಿದೆ ಅಡಿ ಪ್ರಕರಣದ ವಿಚಾರಣೆ ಮಾಡಲು ಸಾರಿಗೆ ಸಚಿವರನ್ನು ಕೋರಿರುತ್ತಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಶಾಸಕರಾದ ಶ್ರೀ ಡಿ.ಎಸ್ ವೀರಯ್ಯನವರು ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ ಸಂಸ್ಥೆಯ ಅಧ್ಯಕ್ಷರಾಗಿ ಬಿಜೆಪಿಯಿಂದ ನೇಮಕಗೊಂಡು ಕೆಲಸ ಮಾಡುತ್ತಿದ್ದರು. ಸಂಸ್ಥೆಯ ಪರಮ ಭ್ರಷ್ಟಾಚಾರ ಲಿಖಿತವಾಗಿ ತಮ್ಮ ಗಮನಕ್ಕೆ ಬಂದರೂ ಅಂದಿನ ಸಾರಿಗೆ ಸಚಿವರಾದ ಶ್ರೀರಾಮುಲುರವರು ಮೌನಕ್ಕೆ ಶರಣಾದ ಹಿನ್ನೆಲೆ ಏನು? ಸಾರಿಗೆ ಇಲಾಖೆಯ ಕಾರ್ಯದರ್ಶಿಗಳ ಮುಖಾಂತರ 47 ಕೋಟಿ ರೂಪಾಯಿಗಳ ಅವ್ಯವಹಾರದ ತನಿಖೆಗೆ ಆದೇಶ ಕೋರಿ ಮಂಡನೆಯಾದ ಕಡತಕ್ಕೆ ಯಾವ ಕಾರಣಕ್ಕೆ ಶ್ರೀರಾಮುಲು ರವರು ಒಪ್ಪಿಗೆ ನೀಡಲಿಲ್ಲ? ರಾಜ್ಯ ಸರ್ಕಾರದ ಒಂದು ಸಾರ್ವಜನಿಕ ಉದ್ಯಮದಲ್ಲಿ ಇಂತಹ ಬ್ರಹ್ಮಾಂಡ ಭ್ರಷ್ಟಾಚಾರದ ಕಡತವು ದಾಖಲೆ ಸಮೇತ ಮತ್ತು ಲೆಕ್ಕ ಪರಿಶೋಧನಾ ಇಲಾಖೆಯ ವರದಿಯ ಸಹಿತವಾಗಿ ಸಾರಿಗೆ ಸಚಿವರ ಗಮನಕ್ಕೆ ಬಂದರೂ, ಸರ್ಕಾರದ /ಸಾರ್ವಜನಿಕ ಆಸ್ತಿಯನ್ನು ಸಂರಕ್ಷಣೆ ಮಾಡಲು ಮತ್ತು ಭ್ರಷ್ಟಾಚಾರವನ್ನು ಬಯಲು ಮಾಡಲು ಅಂದಿನ ಸಾರಿಗೆ ಸಚಿವರಾದ ಶ್ರೀರಾಮುಲುರವರು ಏತಕ್ಕೆ ಮುಂದಾಗಲಿಲ್ಲ? ಈ ಹಗರಣದಲ್ಲಿ ಇವರೂ ಷಾಮೀಲಾಗಿದ್ದರೆ ಅಥವಾ ಸ್ವಜನ ಪಕ್ಷಪಾತದಲ್ಲಿ ಸಿಲುಕಿದ್ದರೆ ? ಎಂದು ಪ್ರಶ್ನಿಸಿದ್ದಾರೆ.

ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ ನಲ್ಲಿ ಮೇಲ್ನೋಟಕ್ಕೆ 47 ಕೋಟಿ ರೂಪಾಯಿಗಳ ಅವ್ಯವಹಾರ ಮತ್ತು ದುರುಪಯೋಗ ಕಾಣುತ್ತಿದ್ದು, ಇಲ್ಲಿಯೂ ಸುಮಾರು 200 ಕೋಟಿ ರೂಪಾಯಿಗಳಿಗೂ ಹೆಚ್ಚು ಅವ್ಯವಹಾರ ನಡೆದಿರುವ ಸಾದ್ಯತೆಗಳಿರುತ್ತದೆ. ಟ್ರಕ್ ಅಂಡ್ ಟರ್ಮಿನಲ್ ಸಂಸ್ಥೆಯ 47 ಕೋಟಿ ಹಗರಣದಲ್ಲಿ ಹಣವು ನೇರವಾಗಿ ಕೇವಲ ಮೂರು ಸಂಸ್ಥೆಗಳಿಗೆ ಪಾವತಿ ಆಗಿರುತ್ತದೆ. ಈಗ ನಡೆಯುತ್ತಿರುವ ಸಿಐಡಿ ತನಿಖೆ ಮತ್ತು ಲೋಕಾಯುಕ್ತ ವಿಚಾರಣೆಯಲ್ಲಿ ಈ ಅವ್ಯವಹಾರದ ಆಳ ಮತ್ತು ಅಗಲ ಬಹಿರಂಗವಾಗಬೇಕಾಗಿದೆ. ಒಬ್ಬ ಮಾಜಿ ಸಚಿವರಾಗಿ ಮತ್ತು ಬಿಜೆಪಿ ನಾಯಕರಾಗಿ ಕಾಂಗ್ರೆಸ್ ಪಕ್ಷದ ಮೇಲೆ ಟೀಕೆ ಮಾಡುವ ಪ್ರತಿಭಟನೆ ಮಾಡುವ ಮಾಜಿ ಸಚಿವ ಶ್ರೀರಾಮುಲುರವರು ಟ್ರಕ್ ಅಂಡ್ ಟರ್ಮಿನಲ್ ಹಗರಣದಲ್ಲಿ ತಮ್ಮ ಪಾತ್ರದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಂಸ್ಥೆಯಲ್ಲಿ ನಡೆದಿರುವ ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ಬಿಜೆಪಿ ನಾಯಕರ ಪಾತ್ರವಿಲ್ಲವೇ? ಸಾರ್ವಜನಿಕರ ನಂಬಿಕೆಗೆ ಮೋಸವಾಗಿಲ್ಲವೇ? ಈ ಹಗರಣದ ನೈತಿಕತೆಯನ್ನು ಹೊತ್ತು ಮಾಜಿ ಸಚಿವ ರಾಜಕೀಯ ನಿವೃತ್ತಿಗೆ ಮುಂದಾಗುತ್ತಾರೆಯೇ? ಎಂದು ಕೇಳಿದ್ದಾರೆ.

23-09-2023 ರಲ್ಲಿ ಕ್ರೈಂ ಸಂಖ್ಯೆ.243/2023 ಮತ್ತು 14-02-2023 ರಲ್ಲಿ ಕ್ರೈಂ ಸಂಖ್ಯೆ 42/2023 ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡ್ ಪೊಲೀಸ್ ಠಾಣೆಯಲ್ಲಿ ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ ನಲ್ಲಿ ನಡೆದಿರುವ 47 ಕೋಟಿ ರೂಪಾಯಿಗಳ ಹಗರಣದಲ್ಲಿ ಕೇಸು ದಾಖಲಾಗಿರುತ್ತದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಿರುತ್ತದೆ. 21-06-2024 ರಲ್ಲಿ ಲೆಕ್ಕ ಪರಿಶೋಧನಾ ಇಲಾಖೆಯು ಆಡಿಟ್ ವರದಿಯನ್ನು ನೀಡಿದ್ದು, ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರವನ್ನು ಬಹಿರಂಗಗೊಳಿಸಿರುತ್ತದೆ. ಈ ಹಗರಣದಲ್ಲಿ ಆರೋಪಿಯಾದ ಹಿಂದಿನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನ್ಯಾಯಾಂಗ ಬಂಧನದಲ್ಲಿದ್ದು, 24-06-2024 ರಲ್ಲಿ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬಂಧಿತ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುತ್ತದೆ ಅಂತ ತಿಳಿಸಿದ್ದಾರೆ.

ಈ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬಿಜೆಪಿಯ ಡಿ.ಎಸ್. ವೀರಯ್ಯನವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಕದ ತಟ್ಟಿರುತ್ತಾರೆ. ನ್ಯಾಯಾಲಯವು ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಪೊಲೀಸರು ತನಿಖೆಗಾಗಿ ಇವರನ್ನು ಬಂಧಿಸಿರುತ್ತಾರೆ. ಭಾರತೀಯ ಜನತಾ ಪಕ್ಷದ ಅಂದಿನ ಸರ್ಕಾರ ವೀರಯ್ಯನವರು ಅಧ್ಯಕ್ಷರಾಗಿ ನಡೆಸಿರಬಹುದಾದ ಅವ್ಯವಹಾರಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುತ್ತದೆ. ಈ ಪ್ರಕರಣದಲ್ಲಿ ತಲೆಮಾರೆಸಿಕೊಂಸಿದ್ದ ಡಿ. ಎಸ್. ವೀರಯ್ಯನವರಿಗೆ ತಮಿಳುನಾಡಿನ ಬಿಜೆಪಿ ನಾಯಕರು ಆಶ್ರಯ ನೀಡಿದ್ದರು. ಅಲ್ಲದೆ ಈ ಪ್ರಕಾರಣವನ್ನು ಮುಚ್ಚಿ ಹಾಕಲು ತನಿಖಾ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ವ್ಯವಸ್ಥಿತ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿರುತ್ತಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ.

ಅಂದಿನ ಬಿಜೆಪಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀರಾಮುಲು ರವರ ಮೂಗಿನ ಅಡಿಯಲ್ಲಿ ಈ ಹಗರಣ ನಡೆದಿದ್ದು ಬಿಜೆಪಿ ನಾಯಕರು ಶಾ ಮೀಲಾಗಿರುವುದು ನಿಚ್ಚುಲವಾಗಿರುತ್ತದೆ. “ಮಾಡುವುದೆಲ್ಲ ಅನಾಚಾರ ಮನೆಯ ಮುಂದೆ ಬೃಂದಾವನ” ಎನ್ನುವ ಗಾದೆಯ ಮಾತಿನಂತೆ ಭಾರತೀಯ ಜನತಾ ಪಕ್ಷದ ನಾಯಕರು ತಾವು ಮಾಡಿರುವ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ನಿರಂತರವಾಗಿ ಸುಳ್ಳು ಹೇಳುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನುಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ರಾಜ್ಯದ ಹಿತದೃಷ್ಟಿಯಿಂದ ಬಯಲು ಮಾಡುವುದು ಅನಿವಾರ್ಯವಾಗಿದೆ ಎಂಬುದಾಗಿ ತಿಳಿಸಿದ್ದಾರೆ.

BREAKING: ಗಾಝಾದಲ್ಲಿ ನಿರಾಶ್ರಿತರ ಡೇರೆಗಳ ಮೇಲೆ ಇಸ್ರೇಲ್ ದಾಳಿ: 71 ಮಂದಿ ಸಾವು, 200ಕ್ಕೂ ಹೆಚ್ಚು ಜನರಿಗೆ ಗಾಯ | Israeli attack

BIG NEWS: ‘ರಾಜ್ಯ ಸರ್ಕಾರ’ದಿಂದ ಮಹಾ ಎಡವಟ್ಟು: ‘ಸತ್ತ ಅಧಿಕಾರಿ’ಯನ್ನೇ ವರ್ಗಾವಣೆ

ಜೈಲಲ್ಲಿ ‘ನಟ ದರ್ಶನ್’ಗೆ ಕಾಡುತ್ತಿದೆಯಂತೆ ‘ಮಾನಸಿಕ ಖಿನ್ನತೆ’: ನಿವಾರಣೆಗೆ ‘ಯೋಗ’ದ ಮೊರೆ ಹೋದ ‘ಡಿ ಬಾಸ್’ | Actor Darshan

Share. Facebook Twitter LinkedIn WhatsApp Email

Related Posts

BREAKING : ಇಂದಿನಿಂದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಜಾರಿಯಾಗಿದೆ : CM ಸಿದ್ದರಾಮಯ್ಯ ಹೇಳಿಕೆ

15/05/2025 2:37 PM1 Min Read

BREAKING: ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಆರೋಪಿ ಅರೆಸ್ಟ್

15/05/2025 2:35 PM1 Min Read

BIG NEWS : ರಾಜ್ಯದ ʻಆಸ್ತಿʼ ಮಾಲೀಕರಿಗೆ ಗುಡ್‌ ನ್ಯೂಸ್‌ : ʻಬಿ-ಖಾತಾʼ ನೀಡುವ ಅವಧಿ 3 ತಿಂಗಳು ವಿಸ್ತರಣೆ.!

15/05/2025 2:07 PM2 Mins Read
Recent News

BREAKING : ಇಂದಿನಿಂದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಜಾರಿಯಾಗಿದೆ : CM ಸಿದ್ದರಾಮಯ್ಯ ಹೇಳಿಕೆ

15/05/2025 2:37 PM

BREAKING: ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಆರೋಪಿ ಅರೆಸ್ಟ್

15/05/2025 2:35 PM

ಮೇ.20ರಂದು ವಕ್ಫ್ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಲಾದ ಮಧ್ಯಂತರ ಪರಿಹಾರ ಅರ್ಜಿ ಸುಪ್ರೀಂ ಕೋರ್ಟ್ ವಿಚಾರಣೆ | Waqf Amendment Act

15/05/2025 2:24 PM

BREAKING : ಪಾಕ್ ನ ಕಿರಾನಾ ಬೆಟ್ಟದಲ್ಲಿ ‘ಪರಮಾಣು’ ವಿಕಿರಣ ಸೋರಿಕೆ ಆಗಿಲ್ಲ : ‘IAEA’ ಇಂದ ಸಾಕ್ಷಿ ಸಮೇತ ಫೋಟೋ ರಿಲೀಸ್

15/05/2025 2:23 PM
State News
KARNATAKA

BREAKING : ಇಂದಿನಿಂದ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ಜಾರಿಯಾಗಿದೆ : CM ಸಿದ್ದರಾಮಯ್ಯ ಹೇಳಿಕೆ

By kannadanewsnow0515/05/2025 2:37 PM KARNATAKA 1 Min Read

ಬೆಂಗಳೂರು : ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿ ಹಬ್ ಹೀಗೆ ಹಲವು ವಿಚಾರಗಳಲ್ಲಿ ಬೆಂಗಳೂರು ಈಗಾಗಲೇ ವಿಶ್ವಮಟ್ಟದಲ್ಲಿ ಮಹತ್ವ…

BREAKING: ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಆರೋಪಿ ಅರೆಸ್ಟ್

15/05/2025 2:35 PM

BIG NEWS : ರಾಜ್ಯದ ʻಆಸ್ತಿʼ ಮಾಲೀಕರಿಗೆ ಗುಡ್‌ ನ್ಯೂಸ್‌ : ʻಬಿ-ಖಾತಾʼ ನೀಡುವ ಅವಧಿ 3 ತಿಂಗಳು ವಿಸ್ತರಣೆ.!

15/05/2025 2:07 PM

BIG NEWS : ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ವಾಟ್ಸಪ್’ನಲ್ಲೇ ಸಿಗಲಿವೆ ಗ್ರಾಮಪಂಚಾಯಿತಿಯ ಈ ಎಲ್ಲಾ ಸೇವೆಗಳು | WATCH VIDEO

15/05/2025 2:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.