ದೆಹಲಿ: ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಭಕ್ತರಿಗಾಗಿ ಮತ್ತೊಂದು ರೈಲು ಪ್ಯಾಕೇಜ್ ಅನ್ನು ಘೋಷಿಸಿದೆ.

IRCTC ಜ್ಯೋತಿರ್ಲಿಂಗ ಯಾತ್ರಾ ಭಕ್ತರಿಗೆ ಪ್ರವಾಸದ ಪ್ಯಾಕೇಜ್‌ನ್ನು ತಂದಿದೆ. ಈ ಪ್ಯಾಕೇಜ್ 7 ರಾತ್ರಿಗಳು ಸೇರಿ ಒಟ್ಟು 8 ದಿನಗಳ ಸುದೀರ್ಘ ಪ್ರವಾಸವನ್ನು ಒಳಗೊಂಡಿದೆ. ಇದರಲ್ಲಿ ಯಾತ್ರಿಕರು ಅತ್ಯಂತ ಪವಿತ್ರವಾದ ದೇವಾಲಯಗಳಿಗೆ ಭೇಟಿ ನೀಡಿ ಬರಬಹುದು.

ಆಸಕ್ತ ಪ್ರಯಾಣಿಕರು ಅಕ್ಟೋಬರ್ 15 ರಂದು ಪ್ರಾರಂಭವಾಗುವ ವಿಶೇಷ ಸ್ವದೇಶ್ ದರ್ಶನ್ ಟೂರಿಸ್ಟ್ ಟ್ರೈನ್ ಅನ್ನು ಹತ್ತಬೇಕಾಗುತ್ತದೆ. IRCTC ಈ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಈ ಪ್ಯಾಕೇಜ್ ಓಂಕಾರೇಶ್ವರ್, ಮಹಾಕಾಳೇಶ್ವರ್, ಸೋಮನಾಥ, ನಾಗೇಶ್ವರ್, ಭೇಟ್ ದ್ವಾರಕಾ ಮತ್ತು ಶಿವರಾಜಪುರ ಬೀಚ್ ಸೇರಿದಂತೆ ಜ್ಯೋತಿರ್ಲಿಂಗಗಳನ್ನು ಒಳಗೊಂಡಿದೆ.

ಜ್ಯೋತಿರ್ಲಿಂಗ ಯಾತ್ರಾ ಪ್ಯಾಕೇಜ್‌ನ ಅವಧಿ

ಪ್ರವಾಸವು ಅಕ್ಟೋಬರ್ 15 ರಂದು ಪ್ರಾರಂಭವಾಗಿ ಅಕ್ಟೋಬರ್ 22 ರಂದು ಕೊನೆಗೊಳ್ಳುತ್ತದೆ. ಯಾತ್ರಿಕರು ಓಂಕಾರೇಶ್ವರ್, ಮಹಾಕಾಳೇಶ್ವರ್, ಸೋಮನಾಥ, ನಾಗೇಶ್ವರ್, ಭೇಟ್ ದ್ವಾರಕಾ ಮತ್ತು ಶಿವರಾಜಪುರ ಬೀಚ್ ಸೇರಿದಂತೆ ಸ್ಥಳಗಳನ್ನು ಸುತ್ತಿ ಬರಬಹುದು. ಪ್ಯಾಕೇಜ್ ಗೋರಖ್‌ಪುರ, ವಾರಣಾಸಿ, ಪ್ರಯಾಗ್‌ರಾಜ್ ಸಂಗಮ್, ಲಕ್ನೋ ಮತ್ತು ವಿರಂಗನಾ ಲಕ್ಷ್ಮಿ ಬಾಯಿ ಸೇರಿದಂತೆ ವಿವಿಧ ಆನ್‌ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ಪಾಯಿಂಟ್‌ಗಳನ್ನು ಹೊಂದಿರುತ್ತದೆ.

ವೆಚ್ಚ ಮತ್ತು ಸೌಲಭ್ಯ

ಪ್ಯಾಕೇಜ್‌ನ ಒಟ್ಟು ವೆಚ್ಚ ₹ 15,150. ಪ್ರಯಾಣಿಕರು ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸಬೇಕಾಗುತ್ತದೆ ಮತ್ತು ಇದು ವಸತಿ, ಸೈಟ್‌ಗಳ ನಡುವೆ ವರ್ಗಾವಣೆ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಸೇರಿದಂತೆ ತರಕಾರಿ ಊಟ, ಪ್ರವಾಸದ ಬೆಂಗಾವಲು, ರೈಲಿನಲ್ಲಿ ಭದ್ರತೆ ಮತ್ತು ಪ್ರಯಾಣ ವಿಮೆಯನ್ನು ಒಳಗೊಂಡಿರುತ್ತದೆ.
IRCTC ವೆಬ್‌ಸೈಟ್‌ಗೆ ಭೇಟಿ ನೀಡಿ ಆಸಕ್ತ ಪ್ರಯಾಣಿಕರು ವಿವರವಾದ ಮಾಹಿತಿಯನ್ನು ಪಡೆಯಬಹುದು.

BREAKING NEWS : ಇಂಡೋನೇಷ್ಯಾದಲ್ಲಿ 4.7 ತೀವ್ರತೆಯ ಭೂಕಂಪ | Earthquake in Indonesia

BIGG NEWS : ರಾಜ್ಯದಲ್ಲಿ ‘SSLC’, ‘PUC’ ಪರೀಕ್ಷಾ ಮಂಡಳಿಗಳ ವಿಲೀನಕ್ಕೆ ಅಸ್ತು : ವಿಧೇಯಕ ಮಂಡನೆ

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ದಾವಣಗೆರೆ ವಿವಿಯಲ್ಲಿ ‘FDA’ ಸೇರಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ |Davanagere University Recruitment

Share.
Exit mobile version