Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

1 ಎಕರೆ ಅಂದ್ರೆ ಎಷ್ಟು? ಜಮೀನು ಅಳೆತೆಯ  ಲೆಕ್ಕಾಚಾರದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

24/01/2026 8:01 AM

BREAKING: ಪಾಕಿಸ್ತಾನದ ಮದುವೆ ಮನೆಯಲ್ಲಿ ಆತ್ಮಾಹುತಿ ಸ್ಫೋಟ: ಐವರು ಸಾವು, 10 ಮಂದಿಗೆ ಗಾಯ | Bomb blast

24/01/2026 7:41 AM

SHOCKING : ಲವರ್ ಜೊತೆ ಸೇರಿ ಪತಿಯನ್ನ ಕೊಂದು ಶವ `ಡ್ರಮ್’ನಲ್ಲಿ ಮುಚ್ಚಿಟ್ಟ ಪಾಪಿ ಪತ್ನಿ.!

24/01/2026 7:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮತದಾನ ಹೆಚ್ಚಳಕ್ಕೆ ವಿನೂತನ ಅಭಿಯಾನ: ಅರಿಶಿಣ, ಕುಂಕುಮ ವಿತರಿಸಿ ಮತದಾನ ಜಾಗೃತಿ!
KARNATAKA

ಮತದಾನ ಹೆಚ್ಚಳಕ್ಕೆ ವಿನೂತನ ಅಭಿಯಾನ: ಅರಿಶಿಣ, ಕುಂಕುಮ ವಿತರಿಸಿ ಮತದಾನ ಜಾಗೃತಿ!

By kannadanewsnow0718/04/2024 6:22 PM

ಲೋಕಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಈಗಾಗಲೇ ಭರದ ಸಿದ್ಧತೆ ನಡೆಸಿದ್ದು, ಕಳೆದ ಸಲಕ್ಕಿಂತ ಈ ಬಾರಿ ಮತದಾನ ಪ್ರಮಾಣ ಹೆಚ್ಚಳ ಮಾಡಲು ಹಲವು ವಿನೂತನ ಕಾರ್ಯ ಚಟುವಟಿಕೆಗಳನ್ನು ರೂಪಿಸಿದೆ.

ಕಳೆದ ಲೋಕಸಭೆ ಚುನಾವಣೆಯ ಮತದಾನ ಪ್ರಮಾಣಕ್ಕಿಂತ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಹೆಚ್ಚಳ ಮಾಡುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ ಬಳ್ಳಾರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಚಟುವಟಿಕೆ ಹಮ್ಮಿಕೊಂಡಿದೆ.

ಜಿಲ್ಲಾ ಸ್ವೀಪ್ ಸಮಿತಿಯು ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಅನೇಕ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರಮುಖವಾಗಿ ವಾಕ್‍ಥಾನ್, ಸಹಿ ಸಂಗ್ರಹ ಅಭಿಯಾನ, ಸೈಕಲ್ ಜಾಥಾ, ಪಂಜಿನ ಮೆರವಣಿಗೆ, ‘ನಮ್ಮ ನಡೆ ಮತಗಟ್ಟೆ ಕಡೆ’, ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಶಾಲೆ, ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪೆÇೀಷಕರಿಗೆ ‘ಪತ್ರ ಚಳವಳಿ’, ಎತ್ತಿನ ಬಂಡಿಗಳ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.

ಅರಿಸಿನ– ಕುಂಕುಮದ ಕರೆಯೋಲೆ: ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆಗೆ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ‘ಅರಿಸಿನ– ಕುಂಕುಮ ಹಾಗೂ ಕರೆಯೋಲೆ’ ನೀಡಿ ಮತದಾನಕ್ಕೆ ಆಹ್ವಾನಿಸಲಾಗುತ್ತಿದೆ. ಮೇ 07 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕೋರಲಾಗುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗುರುವಾರ ಕುಡತಿನಿ ವಲಯದ ಬೆಳಗಲ್ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಕುಂಕುಮ ಹಚ್ಚಿ ಮತದಾನಕ್ಕೆ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿ ಕಂಡುಬಂತು. ಕುಡತಿನಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಸುಮಂಗಳಮ್ಮ ಅವರು ಮನೆ-ಮನೆಗೆ ತೆರಳಿ ಮಹಿಳೆಯರಿಗೆ ಅರಿಶಿಣ-ಕುಂಕುಮ ವಿತರಣೆ ಮಾಡುವ ಮೂಲಕ ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು ಹಾಗೂ ಇತರರು ಹಾಜರಿದ್ದರು.

Innovative campaign to increase voting: Turmeric and kumkum distributed to create voter awareness!
Share. Facebook Twitter LinkedIn WhatsApp Email

Related Posts

1 ಎಕರೆ ಅಂದ್ರೆ ಎಷ್ಟು? ಜಮೀನು ಅಳೆತೆಯ  ಲೆಕ್ಕಾಚಾರದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

24/01/2026 8:01 AM2 Mins Read

ಮಾಂಸ ಪ್ರಿಯರಿಗೆ ಬಿಗ್ ಶಾಕ್ : ಚಿಕನ್, ಮಟನ್ ಬೆಲೆಯಲ್ಲಿ ಭಾರೀ ಏರಿಕೆ | Mutton price hike

24/01/2026 7:13 AM1 Min Read

IRCTC Business: ಕೇವಲ ರೂ. 3999 ಹೂಡಿಕೆಯೊಂದಿಗೆ ರೈಲ್ವೆ ವ್ಯವಹಾರ : ತಿಂಗಳಿಗೆ 50 ಸಾವಿರ ರೂ.ವರೆಗೆ ಸಂಪಾದಿಸಿ, ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ

24/01/2026 7:06 AM1 Min Read
Recent News

1 ಎಕರೆ ಅಂದ್ರೆ ಎಷ್ಟು? ಜಮೀನು ಅಳೆತೆಯ  ಲೆಕ್ಕಾಚಾರದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

24/01/2026 8:01 AM

BREAKING: ಪಾಕಿಸ್ತಾನದ ಮದುವೆ ಮನೆಯಲ್ಲಿ ಆತ್ಮಾಹುತಿ ಸ್ಫೋಟ: ಐವರು ಸಾವು, 10 ಮಂದಿಗೆ ಗಾಯ | Bomb blast

24/01/2026 7:41 AM

SHOCKING : ಲವರ್ ಜೊತೆ ಸೇರಿ ಪತಿಯನ್ನ ಕೊಂದು ಶವ `ಡ್ರಮ್’ನಲ್ಲಿ ಮುಚ್ಚಿಟ್ಟ ಪಾಪಿ ಪತ್ನಿ.!

24/01/2026 7:37 AM

ಬಾಂಗ್ಲಾದಲ್ಲಿ ‘ಭಯೋತ್ಪಾದನೆಯ ಯುಗ’: ಮುಹಮ್ಮದ್ ಯೂನಸ್ ವಿರುದ್ಧ ದಂಗೆಗೆ ಕರೆ ನೀಡಿದ ಹಸೀನಾ!

24/01/2026 7:26 AM
State News
KARNATAKA

1 ಎಕರೆ ಅಂದ್ರೆ ಎಷ್ಟು? ಜಮೀನು ಅಳೆತೆಯ  ಲೆಕ್ಕಾಚಾರದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5724/01/2026 8:01 AM KARNATAKA 2 Mins Read

ಕೃಷಿ, ಆಸ್ತಿ ಮೌಲ್ಯ ಮತ್ತು ಇತರ ರಿಯಲ್ ಎಸ್ಟೇಟ್ ವಹಿವಾಟುಗಳಿಗಾಗಿ ಭೂಮಿಯನ್ನು ಅಳೆಯಲು ಎಕರೆಗಳನ್ನು ಇನ್ನೂ ಬಳಸಲಾಗುತ್ತದೆ. ಆಸ್ತಿ ಅಥವಾ…

ಮಾಂಸ ಪ್ರಿಯರಿಗೆ ಬಿಗ್ ಶಾಕ್ : ಚಿಕನ್, ಮಟನ್ ಬೆಲೆಯಲ್ಲಿ ಭಾರೀ ಏರಿಕೆ | Mutton price hike

24/01/2026 7:13 AM

IRCTC Business: ಕೇವಲ ರೂ. 3999 ಹೂಡಿಕೆಯೊಂದಿಗೆ ರೈಲ್ವೆ ವ್ಯವಹಾರ : ತಿಂಗಳಿಗೆ 50 ಸಾವಿರ ರೂ.ವರೆಗೆ ಸಂಪಾದಿಸಿ, ಜಸ್ಟ್ ಹೀಗೆ ಅರ್ಜಿ ಸಲ್ಲಿಸಿ

24/01/2026 7:06 AM

ಗಾಜು, ತಾಮ್ರ, ಉಕ್ಕು, ಪ್ಲಾಸ್ಟಿಕ್… ಯಾವ `ಬಾಟಲ್’ ನಲ್ಲಿ ನೀರು ಕುಡಿಯುವುದು ಸುರಕ್ಷಿತ ಗೊತ್ತಾ?

24/01/2026 6:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.