Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆರಕ್ಷತೆಗೆ ತೆರಳುವ ವೇಳೆ ವರನನ್ನು ಅಡ್ಡಗಟ್ಟಿ ಚಾಕು ಇರಿತ

30/01/2026 4:02 PM

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ; ಒಂದೇ ಬಾರಿಗೆ ‘ಬೆಳ್ಳಿ’ ಬೆಲೆ 60,000 ರೂಪಾಯಿ ಇಳಿಕೆ!

30/01/2026 3:58 PM

ಪ್ರತಿಯೊಂದು ಶಾಲೆಯೂ ‘ಉಚಿತ ಸ್ಯಾನಿಟರಿ ಪ್ಯಾಡ್’ ಒದಗಿಸ್ಬೇಕು, ಪ್ರತ್ಯೇಕ ಶೌಚಾಲಯ ಹೊಂದಿರಬೇಕು ; ಸುಪ್ರೀಂ ಕೋರ್ಟ್

30/01/2026 3:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮತದಾನ ಹೆಚ್ಚಳಕ್ಕೆ ವಿನೂತನ ಅಭಿಯಾನ: ಅರಿಶಿಣ, ಕುಂಕುಮ ವಿತರಿಸಿ ಮತದಾನ ಜಾಗೃತಿ!
KARNATAKA

ಮತದಾನ ಹೆಚ್ಚಳಕ್ಕೆ ವಿನೂತನ ಅಭಿಯಾನ: ಅರಿಶಿಣ, ಕುಂಕುಮ ವಿತರಿಸಿ ಮತದಾನ ಜಾಗೃತಿ!

By kannadanewsnow0718/04/2024 6:22 PM

ಲೋಕಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಈಗಾಗಲೇ ಭರದ ಸಿದ್ಧತೆ ನಡೆಸಿದ್ದು, ಕಳೆದ ಸಲಕ್ಕಿಂತ ಈ ಬಾರಿ ಮತದಾನ ಪ್ರಮಾಣ ಹೆಚ್ಚಳ ಮಾಡಲು ಹಲವು ವಿನೂತನ ಕಾರ್ಯ ಚಟುವಟಿಕೆಗಳನ್ನು ರೂಪಿಸಿದೆ.

ಕಳೆದ ಲೋಕಸಭೆ ಚುನಾವಣೆಯ ಮತದಾನ ಪ್ರಮಾಣಕ್ಕಿಂತ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಹೆಚ್ಚಳ ಮಾಡುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ ಬಳ್ಳಾರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಚಟುವಟಿಕೆ ಹಮ್ಮಿಕೊಂಡಿದೆ.

ಜಿಲ್ಲಾ ಸ್ವೀಪ್ ಸಮಿತಿಯು ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಅನೇಕ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರಮುಖವಾಗಿ ವಾಕ್‍ಥಾನ್, ಸಹಿ ಸಂಗ್ರಹ ಅಭಿಯಾನ, ಸೈಕಲ್ ಜಾಥಾ, ಪಂಜಿನ ಮೆರವಣಿಗೆ, ‘ನಮ್ಮ ನಡೆ ಮತಗಟ್ಟೆ ಕಡೆ’, ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಶಾಲೆ, ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪೆÇೀಷಕರಿಗೆ ‘ಪತ್ರ ಚಳವಳಿ’, ಎತ್ತಿನ ಬಂಡಿಗಳ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.

ಅರಿಸಿನ– ಕುಂಕುಮದ ಕರೆಯೋಲೆ: ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆಗೆ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ‘ಅರಿಸಿನ– ಕುಂಕುಮ ಹಾಗೂ ಕರೆಯೋಲೆ’ ನೀಡಿ ಮತದಾನಕ್ಕೆ ಆಹ್ವಾನಿಸಲಾಗುತ್ತಿದೆ. ಮೇ 07 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕೋರಲಾಗುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗುರುವಾರ ಕುಡತಿನಿ ವಲಯದ ಬೆಳಗಲ್ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಕುಂಕುಮ ಹಚ್ಚಿ ಮತದಾನಕ್ಕೆ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿ ಕಂಡುಬಂತು. ಕುಡತಿನಿ ವಲಯದ ಅಂಗನವಾಡಿ ಮೇಲ್ವಿಚಾರಕಿ ಸುಮಂಗಳಮ್ಮ ಅವರು ಮನೆ-ಮನೆಗೆ ತೆರಳಿ ಮಹಿಳೆಯರಿಗೆ ಅರಿಶಿಣ-ಕುಂಕುಮ ವಿತರಣೆ ಮಾಡುವ ಮೂಲಕ ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು.ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು ಹಾಗೂ ಇತರರು ಹಾಜರಿದ್ದರು.

Innovative campaign to increase voting: Turmeric and kumkum distributed to create voter awareness!
Share. Facebook Twitter LinkedIn WhatsApp Email

Related Posts

ಆರಕ್ಷತೆಗೆ ತೆರಳುವ ವೇಳೆ ವರನನ್ನು ಅಡ್ಡಗಟ್ಟಿ ಚಾಕು ಇರಿತ

30/01/2026 4:02 PM1 Min Read

JOB ALERT: ಗೃಹರಕ್ಷಕ ದಳಕ್ಕೆ ಸೇರಲು ಅರ್ಜಿ ಆಹ್ವಾನ

30/01/2026 3:43 PM1 Min Read

ಉಡುಪಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ದ್ವೇಷ ಹರಡಿದ ಆರೋಪ : ಇಬ್ಬರು ಅರೆಸ್ಟ್

30/01/2026 3:34 PM1 Min Read
Recent News

ಆರಕ್ಷತೆಗೆ ತೆರಳುವ ವೇಳೆ ವರನನ್ನು ಅಡ್ಡಗಟ್ಟಿ ಚಾಕು ಇರಿತ

30/01/2026 4:02 PM

BREAKING : ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ; ಒಂದೇ ಬಾರಿಗೆ ‘ಬೆಳ್ಳಿ’ ಬೆಲೆ 60,000 ರೂಪಾಯಿ ಇಳಿಕೆ!

30/01/2026 3:58 PM

ಪ್ರತಿಯೊಂದು ಶಾಲೆಯೂ ‘ಉಚಿತ ಸ್ಯಾನಿಟರಿ ಪ್ಯಾಡ್’ ಒದಗಿಸ್ಬೇಕು, ಪ್ರತ್ಯೇಕ ಶೌಚಾಲಯ ಹೊಂದಿರಬೇಕು ; ಸುಪ್ರೀಂ ಕೋರ್ಟ್

30/01/2026 3:52 PM

JOB ALERT: ಗೃಹರಕ್ಷಕ ದಳಕ್ಕೆ ಸೇರಲು ಅರ್ಜಿ ಆಹ್ವಾನ

30/01/2026 3:43 PM
State News
KARNATAKA

ಆರಕ್ಷತೆಗೆ ತೆರಳುವ ವೇಳೆ ವರನನ್ನು ಅಡ್ಡಗಟ್ಟಿ ಚಾಕು ಇರಿತ

By kannadanewsnow0930/01/2026 4:02 PM KARNATAKA 1 Min Read

ಚಾಮರಾಜನಗರ: ಜಿಲ್ಲೆಯಲ್ಲಿ ಆರಕ್ಷತೆಗೆ ತೆರವ ವೇಳೆಯಲ್ಲಿ ವರನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದಂತ ಘಟನೆ ನಡೆದಿದೆ. ಗಾಯಗೊಂಡಿದ್ದಂತ ರವೀಶ್ ಎಂಬಾತನನ್ನು ಭೇಟಿಯಾಗಲು…

JOB ALERT: ಗೃಹರಕ್ಷಕ ದಳಕ್ಕೆ ಸೇರಲು ಅರ್ಜಿ ಆಹ್ವಾನ

30/01/2026 3:43 PM

ಉಡುಪಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ದ್ವೇಷ ಹರಡಿದ ಆರೋಪ : ಇಬ್ಬರು ಅರೆಸ್ಟ್

30/01/2026 3:34 PM

SHOCKING : ಮಗನಿಂದಲೇ ತಂದೆ, ತಾಯಿ ಸಹೋದರಿಯ ಭೀಕರ ಹತ್ಯೆ : ನಾಪತ್ತೆ ಕೇಸ್ ದಾಖಲಿಸುವಾಗ ಆರೋಪಿ ಲಾಕ್!

30/01/2026 3:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.