Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಧನೆ ಮೂಲಕ ಮಾತನಾಡಲು ಪ್ರಿಯಾಂಕ್ ಖರ್ಗೆಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸವಾಲು

13/10/2025 4:22 PM

BREAKING : ‘ರಾಹುಲ್ ಗಾಂಧಿ’ಗೆ ಬಿಗ್ ರಿಲೀಫ್ ; ‘ವೋಟ್ ಚೋರಿ’ ಆರೋಪ ಕುರಿತು ‘SIT’ ತನಿಖೆಗೆ ‘ಸುಪ್ರೀಂಕೋರ್ಟ್’ ನಕಾರ

13/10/2025 4:22 PM

BREAKING: ತಮಿಳುನಾಡಿನಲ್ಲಿ ಕೈಗೊಂಡಂತೆ ‘RSS’ ವಿರುದ್ಧ ಕರ್ನಾಟಕದಲ್ಲಿ ಕ್ರಮ: ಸಿಎಂ ಸಿದ್ಧರಾಮಯ್ಯ ಘೋಷಣೆ

13/10/2025 4:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ‘ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿ’ಗೆ NAAC ಮಾನ್ಯತೆ: ಪ್ರಾಂಶುಪಾಲೆ ಡಾ.ರಾಜೇಶ್ವರಿ
KARNATAKA

ಸಾಗರದ ‘ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿ’ಗೆ NAAC ಮಾನ್ಯತೆ: ಪ್ರಾಂಶುಪಾಲೆ ಡಾ.ರಾಜೇಶ್ವರಿ

By kannadanewsnow0921/10/2024 9:19 PM

ಶಿವಮೊಗ್ಗ: ಜಿಲ್ಲೆಯ ಸಾಗರದ ಶ್ರೀಮತಿ ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ NAAC ಮೌಲ್ಯಮಾಪನದಲ್ಲಿ CGPA 2.8 B++ ಶ್ರೇಣಿ ಲಭ್ಯವಾಗಿದೆ ಎಂಬುದಾಗಿ ಪ್ರಾಂಶುಪಾಲೆ ಡಾ.ರಾಜೇಶ್ವರಿ ಅವರು ತಿಳಿಸಿದರು. ಅಲ್ಲದೇ ಇದಕ್ಕೆ ಕಾರಣರಾದಂತ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಶ್ರೀಮತಿ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕಾಲೇಜು ಆರಂಭಗೊಂಡು 33 ವರ್ಷಗಳ ಸಾರ್ಥಕ ಶೈಕ್ಷಣಿಕ ಸೇವೆಯನ್ನು  ಕಳೆದಿದೆ. 1991ರಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಕಾಲೇಜು ಇಂದು 3000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುವಂತೆ ಆಗಿದೆ. ಇಲ್ಲಿ ಹಲವಾರು ಕೋರ್ಸ್, ವಿಭಾಗಗಳಿದ್ದಾವೆ. ಇಲ್ಲಿನ ಬಹುಮುಖ ಪ್ರತಿಭೆಗಳು, ಗಣನೀಯ ಸಾಧನೆಗಳು ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿವೆ ಎಂದರು.

ನ್ಯಾಕ್ ಮಾನ್ಯತೆ ಎನ್ನುವುದು ಎಲ್ಲಾ ಕಾಲೇಜುಗಳಿಗೂ ಅನಿವಾರ್ಯವಾಗಿದೆ. ಅದರಲ್ಲೂ ಪದವಿ ಕಾಲೇಜುಗಳಿ ಬಹುಮುಖ್ಯ. ಈ ಕಾಲೇಜು 2004, 2012 ಮತ್ತು 2018ರಲ್ಲಿ ಮೂರು ವರ್ಷ ಬಾರಿ ನ್ಯಾಕ್ ಪ್ರಕ್ರಿಯೆಗೆ ಒಳಗಾಗಿದೆ. ಮೂರು ಬಾರಿಯೂ ನ್ಯಾಕ್ ಪ್ರಕ್ರಿಯೆಯಲ್ಲಿ ಕಾಲೇಜಿಗೆ ‘ಬಿ’ ಗ್ರೇಡ್ ಲಭಿಸಿದೆ ಎಂದು ತಿಳಿಸಿದರು.

2024ರ ಈ ವರ್ಷದಲ್ಲಿ ಅಕ್ಟೋಬರ್.9 ಮತ್ತು 10ರಂದು ನ್ಯಾಕ್ ಪ್ರಕ್ರಿಯೆಗೆ ಒಳಪಟ್ಟಿತ್ತು. ನ್ಯಾಕ್ ಮಾನ್ಯತೆಗೆ ಮಾನದಂಡ ಅಂದ್ರೆ ಕಾಲೇಜಿನ ಎಲ್ಲಾ ರೀತಿಯ ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿನಿಯರ ಸಾಧನೆಗಳು, ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ದೊರಕುತ್ತಿರುವಂತ ಶೈಕ್ಷಣಿಕ ಸೌಲಭ್ಯಗಳು, ಮೂಲಭೂತ ಸೌಲಭ್ಯಗಳು, ಈ ಎಲ್ಲವನ್ನು ಪರಿಶೀಲಿಸಿ ಜೊತೆಗೆ ನಮ್ಮಲ್ಲಿನ ದಾಖಲೆಗಳನ್ನು ಆಧರಿಸಿ ನ್ಯಾಕ್ ಮಾನ್ಯತೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.

ಈ ಬಾರಿ ಶ್ರೀಮತಿ ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 2.8 ಶ್ರೇಯಾಂಕದೊಂದಿಗೆ ಬಿ++ ಶ್ರೇಣಿಯ ಮಾನ್ಯತೆಯನ್ನು ನೀಡಲಾಗಿ ಎಂಬುದನ್ನು ಹೇಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತೇನೆ ಎಂದರು.

ಇದಕ್ಕಾಗಿ ಶ್ರಮಿಸಿದಂತ ಎಲ್ಲಾ ಕಾಲೇಜಿನ ಅಧ್ಯಾಪಕರಿಗೆ, ಕಾರ್ಯಾಲಯ ಸಿಬ್ಬಂದಿ ವರ್ಗದವರಿಗೆ, ಡಿ-ಗ್ರೂಪ್ ನೌಕರರಿಗೆ, ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಹೊರ ಹೋಗಿರುವಂತ ಹಿರಿಯ ವಿದ್ಯಾರ್ಥಿನಿಯರಿಗೆ, ಪ್ರಸ್ತುತ ವ್ಯಾಸಂಗ ಮಾಡುತ್ತಿರುವಂತ ಎಲ್ಲಾ ವಿದ್ಯಾರ್ಥಿನಿಯರಿಗೆ, ವಿದ್ಯಾರ್ಥಿನಿಯರ ಪೋಷಕರಿಗೆ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ನಮ್ಮ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದಂತ ಗೋಪಾಲಕೃಷ್ಣ ಬೇಳೂರು ಅವರು ನ್ಯಾಕ್ ಪ್ರಕ್ರಿಯೆಗೆ ಮುತುವರ್ಜಿ ವಹಿಸಿ, ಕಾಲೇಜಿಗೆ ಖುದ್ದಾಗಿ ಭೇಟಿ ನೀಡಿ, ಇಂದು ನ್ಯಾಕ್ ಮಾನ್ಯತೆ ದೊರೆಯಲು ಕಾರಣಕರ್ತರಾಗಿದ್ದಾರೆ. ಅವರಿಗೂ ಕೂಡ ಧನ್ಯವಾದಗಳು. ಅವರೊಟ್ಟಿಗೆ ಕಾಲೇಜು ಅಭಿವೃದ್ಧಿ ಸಮತಿಯ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳನ್ನು ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ರಾಜೇಶ್ವರಿ ಧನ್ಯವಾದವನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಡಾ.ಶಿವಾನಂದ್ ಎಸ್, ಡಾ.ಮಹಾವೀರ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಡಾ. ಮೂಕಪ್ಪ ನಾಯ್ಕ, ಮಧುಮಾಲತಿ, ಉಷಾ ಎನ್. ರಂಜನ್ ಶೆಟ್ಟಿ, ಎಲ್.ಚಂದ್ರಪ್ಪ, ವೈ.ವಿ.ಗೋಪಾಲಕೃಷ್ಣ ಸೇರಿದಂತೆ ಇತರರು ಹಾಜರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಈ ಪ್ರಸಿದ್ಧ ‘ಡೊಳ್ಳು ಕಲಾವಿದ’ನಿಗೆ ಸಿಗುವುದೇ ‘ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ’.!?

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ಭಾರೀ ಮಳೆಗೆ ಗೋಡೆ ಕುಸಿದು ‘ವೃದ್ಧೆ ಸಾವು’

ರೈತರ ಮಕ್ಕಳಿಗೆ ಗುಡ್ ನ್ಯೂಸ್: ‘ಜೇನುಗಾರಿಕೆ ತರಬೇತಿ’ಗೆ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

ಸಾಧನೆ ಮೂಲಕ ಮಾತನಾಡಲು ಪ್ರಿಯಾಂಕ್ ಖರ್ಗೆಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸವಾಲು

13/10/2025 4:22 PM1 Min Read

BREAKING: ತಮಿಳುನಾಡಿನಲ್ಲಿ ಕೈಗೊಂಡಂತೆ ‘RSS’ ವಿರುದ್ಧ ಕರ್ನಾಟಕದಲ್ಲಿ ಕ್ರಮ: ಸಿಎಂ ಸಿದ್ಧರಾಮಯ್ಯ ಘೋಷಣೆ

13/10/2025 4:18 PM1 Min Read

ಶಾಸಕರ ಅಭಿಪ್ರಾಯ ಇಲ್ಲದೆ ‘ಸಿಎಂ’ ಆಗಲು ಸಾಧ್ಯವಿಲ್ಲ : ಪರೋಕ್ಷವಾಗಿ ಡಿಕೆ ಶಿವಕುಮಾರ್ ‘CM’ ಆಗಲ್ಲ ಎಂದ ಸಿದ್ದರಾಮಯ್ಯ!

13/10/2025 4:08 PM1 Min Read
Recent News

ಸಾಧನೆ ಮೂಲಕ ಮಾತನಾಡಲು ಪ್ರಿಯಾಂಕ್ ಖರ್ಗೆಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸವಾಲು

13/10/2025 4:22 PM

BREAKING : ‘ರಾಹುಲ್ ಗಾಂಧಿ’ಗೆ ಬಿಗ್ ರಿಲೀಫ್ ; ‘ವೋಟ್ ಚೋರಿ’ ಆರೋಪ ಕುರಿತು ‘SIT’ ತನಿಖೆಗೆ ‘ಸುಪ್ರೀಂಕೋರ್ಟ್’ ನಕಾರ

13/10/2025 4:22 PM

BREAKING: ತಮಿಳುನಾಡಿನಲ್ಲಿ ಕೈಗೊಂಡಂತೆ ‘RSS’ ವಿರುದ್ಧ ಕರ್ನಾಟಕದಲ್ಲಿ ಕ್ರಮ: ಸಿಎಂ ಸಿದ್ಧರಾಮಯ್ಯ ಘೋಷಣೆ

13/10/2025 4:18 PM

ಶಾಸಕರ ಅಭಿಪ್ರಾಯ ಇಲ್ಲದೆ ‘ಸಿಎಂ’ ಆಗಲು ಸಾಧ್ಯವಿಲ್ಲ : ಪರೋಕ್ಷವಾಗಿ ಡಿಕೆ ಶಿವಕುಮಾರ್ ‘CM’ ಆಗಲ್ಲ ಎಂದ ಸಿದ್ದರಾಮಯ್ಯ!

13/10/2025 4:08 PM
State News
KARNATAKA

ಸಾಧನೆ ಮೂಲಕ ಮಾತನಾಡಲು ಪ್ರಿಯಾಂಕ್ ಖರ್ಗೆಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸವಾಲು

By kannadanewsnow0913/10/2025 4:22 PM KARNATAKA 1 Min Read

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರಚಾರದ ಗೀಳಿನಿಂದ ಅಪ್ರಸ್ತುತ ಮಾತನಾಡುತ್ತಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್…

BREAKING: ತಮಿಳುನಾಡಿನಲ್ಲಿ ಕೈಗೊಂಡಂತೆ ‘RSS’ ವಿರುದ್ಧ ಕರ್ನಾಟಕದಲ್ಲಿ ಕ್ರಮ: ಸಿಎಂ ಸಿದ್ಧರಾಮಯ್ಯ ಘೋಷಣೆ

13/10/2025 4:18 PM

ಶಾಸಕರ ಅಭಿಪ್ರಾಯ ಇಲ್ಲದೆ ‘ಸಿಎಂ’ ಆಗಲು ಸಾಧ್ಯವಿಲ್ಲ : ಪರೋಕ್ಷವಾಗಿ ಡಿಕೆ ಶಿವಕುಮಾರ್ ‘CM’ ಆಗಲ್ಲ ಎಂದ ಸಿದ್ದರಾಮಯ್ಯ!

13/10/2025 4:08 PM

BIG NEWS : ಧರ್ಮ, ಜಾತಿ ವ್ಯವಸ್ಥೆಯಿಂದ ನಮ್ಮಲ್ಲಿ ಗುಲಾಮಗಿರಿ ಮನೆ ಮಾಡಿಕೊಂಡಿದೆ : ಸಿಎಂ ಸಿದ್ದರಾಮಯ್ಯ

13/10/2025 3:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.