ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನಲ್ಲಿ ಇದರಿಂದಾಗಿ ಇತ್ತೀಚೆಗೆ ಮರ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಎಚ್ಚೆತ್ತ ಜಿಲ್ಲಾಡಳಿತ ಇಂದು ಶಾಲಾ- ಕಾಲೇಜುಗಳಿಗೆ ಘೋಷಣೆ ಮಾಡಿದ್ದಾರೆ.  

ಈಗಾಗಲೇ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಸೇತುವೆಗಳೆಲ್ಲ ಮುಳುಗಡೆಯಾಗಿದ್ದು, ತೋಟ, ಗದ್ದೆಗಳೆಲ್ಲ ಸಂಪೂರ್ಣ ಜಾಲವೃತಗೊಂಡಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

Share.
Exit mobile version