ಬೆಂಗಳೂರು: ನಗರದಲ್ಲಿ ಸೆಲ್ಫಿ ವೀಡಿಯೋ ಮಾಡಿ ಕಾಲೇಜಿನ ಟಾಪರ್ ವಿದ್ಯಾರ್ಥಿಯೊಬ್ಬ Raging ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಬಾಗಲೂರಿನಲ್ಲಿರುವಂತ ಪ್ರತಿಷ್ಠಿತ ಕಾಲೇಜಿನಲ್ಲಿ ರ್ಯಾಗಿಂಗ್ ಗೆ ಹೆದರಿ 22 ವರ್ಷದ ಅರುಣ್ ಆರ್ಕಿಟೆಕ್ಚರ್ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜುಲೈ 10ಕ್ಕೆ ಮನೆಗೆ ಬಂದಿದ್ದಂತ ಅರುಣ್, ಜುಲೈ.11ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ಮುನ್ನ ರ್ಯಾಗಿಂಗ್ ಬಗ್ಗೆ ಹೇಳಿಕೊಂಡಿದ್ದ ಎನ್ನಲಾಗಿದೆ.
ಕಾಲೇಜು ವಾಟ್ಸಾಪ್ ಗ್ರೂಪ್ ನಲ್ಲಿ ವಿದ್ಯಾರ್ಥಿ ಅರುಣ್ ಆತ್ಮಹತ್ಯೆಗೆ ಮುನ್ನ ಮಾಡಿದ್ದಂತ ವೀಡಿಯೋ ವೈರಲ್ ಆಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಕಾಲೇಜಿನಿಂದ ಮನೆಯವರಿಗೆ ಕರೆ ಮಾಡಲಾಗಿತ್ತು. ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಹಾಸನದ ಚನ್ನಕೇಶವ, ತುಳಸಿ ದಂಪತಿಯ ಹಿರಿಯ ಪುತ್ರ ಅರುಣ್ ಆಗಿದದಾರೆ. ಬೆಂಗಳೂರಿನ ನಂದರಾಮಯ್ಯನ ಪಾಳ್ಯದಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಮಗನನ್ನು ತಂದೆ-ತಾಯಿ ಓದಿಸುತ್ತಿದ್ದರು. ಬಾಗಲೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಫ್ರೀ ಸೀಟ್ ಪಡೆದು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಮೂಡಾ ಕೇಸಲ್ಲಿ ಇಡಿ ನೋಟಿಸ್ ವಜಾಮಾಡಿದ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ: ಸಚಿವ ಈಶ್ವರ್ ಖಂಡ್ರೆ
BREAKING : ಬಾಂಗ್ಲಾದೇಶದ ಢಾಕಾ ಶಾಲೆಯ ಮೇಲೆ ವಾಯುಪಡೆಯ ತರಬೇತಿ ಜೆಟ್ ಪತನ ; ಕನಿಷ್ಠ ಒರ್ವ ಸಾವು, ಹಲವರು ಗಾಯ