Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕೊಪ್ಪಳದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣ : ಕಾಮುಕನನ್ನು ಬಂಧಿಸಿದ ಪೊಲೀಸರು

21/05/2025 9:25 PM

Watch Video: ಆಲಿಕಲ್ಲು ಮಳೆಗೆ ಸಿಕ್ಕ ದೆಹಲಿ-ಶ್ರೀನಗರ ಇಂಡಿಗೋ ವಿಮಾನ: ಬೆಚ್ಚಿ ಬಿದ್ದ ಪ್ರಯಾಣಿಕರ ವೀಡಿಯೋ ನೋಡಿ | IndiGo Flight Hit By Hailstorm

21/05/2025 9:14 PM

ಸಾಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ರೇಪ್, ಪೋಕ್ಸೋ ಕೇಸ್ ದಾಖಲು

21/05/2025 9:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ :‌ ʻHRMSʼ ತಂತ್ರಾಂಶದಲ್ಲಿ ʻKGIDʼ ಮಾಹಿತಿ ತಿದ್ದುಪಡಿಗೆ ಅವಕಾಶ!
KARNATAKA

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ :‌ ʻHRMSʼ ತಂತ್ರಾಂಶದಲ್ಲಿ ʻKGIDʼ ಮಾಹಿತಿ ತಿದ್ದುಪಡಿಗೆ ಅವಕಾಶ!

By kannadanewsnow0726/02/2024 12:42 PM
vidhana soudha
vidhana soudha

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ʻHRMSʼ ತಂತ್ರಾಂಶದಲ್ಲಿ ತಪ್ಪಾಗಿ ನಮೂದಿಸಿರುವ ಕೆ.ಜಿ ಐಡಿ ಪ್ರಥಮ ಪಾಲಿಸಿ ಸಂಖ್ಯೆಯನ್ನು ಸರಿಪಡಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ಈ ಬಗ್ಗೆ ಆದೇಶವನ್ನು ಕೂಡ ಹೊರಡಿಸಲಾಗಿದೆ.

ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಅದರಲ್ಲಿ ಪ್ರಸ್ತುತ ವಿಮಾದಾರರಿಗೆ online ಮೂಲಕ ಸೇವೆಯನ್ನು ನೀಡಲು ಪ್ರಾರಂಭಿಸಲಾಗಿದೆ. ಈ ಸಂಬಂಧ ಗಣಕೀಕೃತ ಮಾಹಿತಿಯಲ್ಲಿನ ವಿಮಾದಾರರ ಪ್ರಥಮ ಕೆ.ಜಿ.ಐಡಿ ಸಂಖ್ಯೆಯ ದತ್ತಾಂಶವನ್ನು ಹೆಚ್.ಆ‌ರ್ .ಎಂ.ಎಸ್. ತಂತ್ರಾಂಶದಲ್ಲಿರುವ ವಿಮಾದಾರರ ಪ್ರಥಮ ಕೆ.ಜಿ.ಐ.ಡಿ ಸಂಖ್ಯೆಯ ದತ್ತಾಂಶದೊಂದಿಗೆ ಪರಿಶೀಲಿಸಲಾಗಿ ಈ ಕೆಳಕಂಡ ಅಂಶಗಳನ್ನು ಗಮನಿಸಲಾಗಿದೆ.

1) ರಾಜ್ಯ ಸರ್ಕಾರದ ವಿವಿಧ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಅಧಿಕಾರಿ/ನೌಕರರ ಪ್ರಕರಣಗಳಲ್ಲಿ ಪ್ರಥಮ ಕೆ.ಜಿ.ಐ.ಡಿ. ಪಾಲಿಸಿ ಸಂಖ್ಯೆಯನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ನಮೂದಿಸದೆ ಇತರೆ ಸಂಖ್ಯೆಯನ್ನು ನಮೂದಿಸಿ ವೇತನವನ್ನು ಸೆಳೆಯಲಾಗುತ್ತಿದೆ.

2) ಕೆಲವು ಅಧಿಕಾರಿ/ನೌಕರರ ಪ್ರಕರಣಗಳಲ್ಲಿ ಇತರೆ ವಿಮಾದಾರರ ಪ್ರಥಮ/ ತರುವಾಯದ ಪಾಲಿಸಿ ಸಂಖ್ಯೆಯನ್ನು ಪ್ರಥಮ ಪಾಲಿಸಿ ಸಂಖ್ಯೆಯನ್ನಾಗಿ ಹೆಚ್.ಆರ್.ಎಂ.ಎಸ್.ತಂತ್ರಾಂಶದಲ್ಲಿ ನಮೂದಾಗಿರುವುದು ಕಂಡುಬರುತ್ತಿದೆ.

3) ಕೆಲವು ಅಧಿಕಾರಿ/ನೌಕರರ ಪ್ರಕರಣಗಳಲ್ಲಿ ವಿಮಾ ಪಾಲಿಸಿಗಳಲ್ಲಿ ನಮೂದಿಸಿರುವ ಜನ್ಮ ದಿನಾಂಕ ಹಾಗೂ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ನಮೂದಿಸಿರುವ ಜನ್ಮದಿನಾಂಕದಲ್ಲಿ ವ್ಯತ್ಯಾಸವಿರುವುದು ಕಂಡುಬರುತ್ತಿದೆ.

ಇದರಿಂದಾಗಿ ವಿಮಾದಾರರ ವೇತನದಲ್ಲಿ ಕಟಾವಣೆ ಮಾಡಲಾಗಿರುವ ವಿಮಾ ಕಂತು ಹಾಗೂ ಸಾಲದ ಕಂತುಗಳ ಮಾಹಿತಿಯು ವಿಮಾದಾರರ ಖಾತೆಗೆ ಜಮಾವಣೆಗೊಂಡಿರುವುದಿಲ್ಲ. ಅದರಿಂದ ವಿಮಾ ಕಂತುಗಳು ಹಾಗೂ ಸಾಲದ ಕಂತುಗಳು ಬಾಕಿ ಎಂದು ಪರಿಗಣಿಸಲಾಗುತ್ತಿದೆ. ಇಂತಹ ವಿಮಾದಾರರು ವಿಮಾ ಇಲಾಖೆಯಿಂದ ನೀಡಲಾಗುತ್ತಿರುವ ಆನ್‌ಲೈನ್ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ವಿಮಾ ಇಲಾಖೆಯೂ ಸಹ ವಿಮಾದಾರರ ಹಕ್ಕು ಪ್ರಕರಣಗಳನ್ನು (ಫಲಪ್ರದ, ಮರಣಜನ್ಯ ಹಾಗೂ ವಿಮಾತ್ಯಾಗ ಮೌಲ್ಯ) ಸಕಾಲದಲ್ಲಿ ಇತ್ಯರ್ಥಪಡಿಸಲು ಸಾಧ್ಯವಾಗುತ್ತಿಲ್ಲ.

ಈ ಹಿನ್ನಲೆಯಲ್ಲಿ, ಎಲ್ಲಾ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಹೆಚ್.ಆರ್.ಎಂ.ಎಸ್. ನಿರ್ದೇಶನಾಲಯವು ಇಎಸ್‌ಎಸ್ (Employee Self Service) ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ. ಈ ವೆಬ್‌ ಸೈಟ್ https://hrmsess.karnataka.gov.in/login/loadLogin ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಲ್ಲಿ ಎಲ್ಲಾ ಸರ್ಕಾರಿ ನೌಕರರು ಸದರಿ ಸೇವೆಯಲ್ಲಿ ಲಭ್ಯವಿರುವ ವೇತನ ಪತ್ರ/ಚೀಟಿಯನ್ನು ಪಡೆಯಲು, ಕರ್ನಾಟಕ ಆರೋಗ್ಯ ಸಂಜೀವಿನಿ ಸೇವೆಯಡಿ ತಮ್ಮ ಕುಟುಂಬದ ಸದಸ್ಯರುಗಳನ್ನು ನೋಂದಾಯಿಸಲು, ತಮ್ಮ ಎಲ್ಲಾ ಕೆ.ಜಿ.ಐ.ಡಿ ಪಾಲಿಸಿಗಳ ಮಾಹಿತಿಯನ್ನು ಪರಿಶೀಲಿಸಲು ಅವಕಾಶಗಳನ್ನು ಕಲ್ಪಿಸಲಾಗಿದೆ. ಇದರಿಂದ ತಮ್ಮ ಎಲ್ಲಾ ಪಾಲಿಸಿಗಳ ಸರಿಯಾದ ವಿವರಗಳನ್ನು ಹೆಚ್‌ಆರ್‌ಎಂಎಸ್-2 ನಲ್ಲಿ ದಾಖಲಿಸಲು ಅನುಕೂಲವಾಗುವುದಲ್ಲದೇ, ತಮ್ಮ ಕೆಜಿಐಡಿ ಪಾಲಿಸಿಗಳ ಸರಿಯಾದ ಮಾಹಿತಿಯ ಸಾಫ್ಟ್ ಪ್ರತಿಯನ್ನು ಉಳಿಸಿಕೊಳ್ಳಲು ಹಾಗೂ ತಮ್ಮ ಪಾಲಿಸಿಯ ವ್ಯವಹಾರಗಳು ಕೆ.ಜಿ.ಐ.ಡಿ, ಖಜಾನೆ ಹಾಗೂ ಹೆಚ್.ಆರ್.ಎಂ.ಎಸ್. ನಲ್ಲಿ ಸುಗಮವಾಗಿ ಸಾಗಲು ಅನುಕೂಲವಾಗುತ್ತದೆ.

ಆದ್ದರಿಂದ ಈ ಕಾರ್ಯವನ್ನು ಸುಗಮವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುವಂತೆ ವಿಮಾ ಇಲಾಖೆಯಿಂದ ಈ ಕೆಳಕಂಡ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲಾ ವಿಮಾಧಿಕಾರಿಯನ್ನಾಗಲೀ ಅಥವಾ ಈ ಕೆಳಕಂಡ ನೋಡಲ್ ಅಧಿಕಾರಿಯನ್ನಾಗಲೀ ಸಂಪರ್ಕಿಸಬಹುದಾಗಿದೆ ಅಂತ ತಿಳಿಸಿದೆ.

‘ಬಾಸ್ ಇಸ್ ಅಲ್ವೇಸ್ ರೈಟ್’ : ಶೋಭಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ BSY ಹೇಳಿಕೆಗೆ CT ರವಿ ತಿರುಗೇಟು

ಕರ್ನಾಟಕದ 15 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ !

ಪತ್ನಿಗೆ ಸೀರೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಹಲ್ಲೆ ಮಾಡಿದ ಗಂಡ!

'ರಾಜ್ಯ ಸರ್ಕಾರಿ ನೌಕರ'ರಿಗೆ ಮಹತ್ವದ ಮಾಹಿತಿ: 'ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ'ಗೆ ಅರ್ಜ ಆಹ್ವಾನ Important information for state government employees: 'KGID' information can be edited in HRMS software!
Share. Facebook Twitter LinkedIn WhatsApp Email

Related Posts

BIG NEWS : ಕೊಪ್ಪಳದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣ : ಕಾಮುಕನನ್ನು ಬಂಧಿಸಿದ ಪೊಲೀಸರು

21/05/2025 9:25 PM1 Min Read

ಸಾಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ರೇಪ್, ಪೋಕ್ಸೋ ಕೇಸ್ ದಾಖಲು

21/05/2025 9:13 PM1 Min Read

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : ಬೇಟೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು ಯುವಕ ಸಾವು!

21/05/2025 9:09 PM1 Min Read
Recent News

BIG NEWS : ಕೊಪ್ಪಳದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣ : ಕಾಮುಕನನ್ನು ಬಂಧಿಸಿದ ಪೊಲೀಸರು

21/05/2025 9:25 PM

Watch Video: ಆಲಿಕಲ್ಲು ಮಳೆಗೆ ಸಿಕ್ಕ ದೆಹಲಿ-ಶ್ರೀನಗರ ಇಂಡಿಗೋ ವಿಮಾನ: ಬೆಚ್ಚಿ ಬಿದ್ದ ಪ್ರಯಾಣಿಕರ ವೀಡಿಯೋ ನೋಡಿ | IndiGo Flight Hit By Hailstorm

21/05/2025 9:14 PM

ಸಾಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ರೇಪ್, ಪೋಕ್ಸೋ ಕೇಸ್ ದಾಖಲು

21/05/2025 9:13 PM

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : ಬೇಟೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು ಯುವಕ ಸಾವು!

21/05/2025 9:09 PM
State News
KARNATAKA

BIG NEWS : ಕೊಪ್ಪಳದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನ ಪ್ರಕರಣ : ಕಾಮುಕನನ್ನು ಬಂಧಿಸಿದ ಪೊಲೀಸರು

By kannadanewsnow0521/05/2025 9:25 PM KARNATAKA 1 Min Read

ಕೊಪ್ಪಳ : ನಿನ್ನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಹಾಡಹಗಲೇ ಬಸ್ ನಿಲ್ದಾಣದ ಬಳಿ ಮಾನಸಿಕ ಅಸ್ವಸ್ಥೆಯನ್ನು ಕರೆದೋಯ್ದು ಅತ್ಯಾಚಾರಕ್ಕೆ…

ಸಾಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ರೇಪ್, ಪೋಕ್ಸೋ ಕೇಸ್ ದಾಖಲು

21/05/2025 9:13 PM

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : ಬೇಟೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು ಯುವಕ ಸಾವು!

21/05/2025 9:09 PM

BIG NEWS : ಚಿಕ್ಕಮಗಳೂರುಲ್ಲಿ ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ನುಗ್ಗಿದ ಟಿಟಿ : ಪ್ರವಾಸಿಗರ ಪರದಾಟ!

21/05/2025 8:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.