Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಆಧಾರ್ ಪಿಡಿಎಫ್ ಅನ್ನು ನೇರವಾಗಿ ವಾಟ್ಸಾಪ್ ನಲ್ಲಿ ಪಡೆಯುವುದು ಹೇಗೆ, ಹಂತ ಹಂತದ ಮಾಹಿತಿ ಇಲ್ಲಿದೆ | Aadhaar

25/09/2025 12:52 PM

ರಾಜ್ಯದ `ಮುಸ್ಲಿಂ ಸಮುದಾಯ’ಕ್ಕೆ ಮಹತ್ವದ ಪ್ರಕಟಣೆ : ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಮನವಿ.!

25/09/2025 12:48 PM

BREAKING: ಆಸ್ಟ್ರೇಲಿಯಾ ‘ಎ’ ವಿರುದ್ಧದ ಸರಣಿಗೆ ತಂಡ ಪ್ರಕಟಿಸಿದ BCCI, ಶ್ರೇಯಸ್ ಅಯ್ಯರ್ ನಾಯಕ

25/09/2025 12:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ಮುಸ್ಲಿಂ ಸಮುದಾಯ’ಕ್ಕೆ ಮಹತ್ವದ ಪ್ರಕಟಣೆ : ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಮನವಿ.!
KARNATAKA

ರಾಜ್ಯದ `ಮುಸ್ಲಿಂ ಸಮುದಾಯ’ಕ್ಕೆ ಮಹತ್ವದ ಪ್ರಕಟಣೆ : ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಮನವಿ.!

By kannadanewsnow5725/09/2025 12:48 PM

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದಾದ್ಯಂತ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆಯನ್ನು ಆರಂಭಿಸಿದೆ. 2025ನೇ ಸಾಲಿನ ಸೆಪ್ಟೆಂಬರ್ 22 ರಿಂದ ಅಕ್ಟೋಬ‌ರ್ 7ರವರೆಗೆ ರಾಜ್ಯದ ಮೂಲೆ ಮೂಲೆಗೆ ಗಣತಿದಾರರು ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.

ರಾಜ್ಯದ ಜನತೆಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಿರುವ ಈ ಸಮೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಸಮಾಜದ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಭವಿಷ್ಯದಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲು ಸಹಕಾರಿಯಾಗಲಿದೆ.

ಕರ್ನಾಟಕದಲ್ಲಿ ಮುಸ್ಲಿಮರು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಇತರ ಸಮುದಾಯಗಳ ಪೈಕಿ ಅತ್ಯಂತ ಹಿಂದುಳಿದಿರುವುದು ಸತ್ಯ. ಈ ಮೂರು ಕ್ಷೇತ್ರಗಳಲ್ಲಿ ಮುಸ್ಲಿಮರನ್ನು ಮುಂದೆ ತರಲು ರಾಜ್ಯ ಸರ್ಕಾರದ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಲು, ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಕಲ್ಪಿಸಬೇಕಿದೆ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ನಾವು ಭಾಗವಹಿಸಿ ನಮ್ಮ ಪರಿಸ್ಥಿತಿಯನ್ನು ಸರ್ಕಾರದ ಮುಂದೆ ಇರಿಸಿದರೆ, ಸರ್ಕಾರದಿಂದ ಈಗ ನಮ್ಮ ಕಲ್ಯಾಣಕ್ಕಾಗಿ ಮಾಡುತ್ತಿರುವ ಕಾರ್ಯಕ್ರಮಗಳು, ಯೋಜನೆಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಅಲ್ಲದೇ, ಸರ್ಕಾರದ ನೀತಿ ನಿರೂಪಣೆಯಲ್ಲಿ ನಮ್ಮ ಪಾಲುದಾರಿಕೆಯೂ ಹೆಚ್ಚಾಗುತ್ತದೆ.

ದಯವಿಟ್ಟು ನೆನಪಿಡಿ, ನಾವು ನಮ್ಮ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರ್ಕಾರದ ಗಮನ ಸೆಳೆಯದೆ ನಿರ್ಲಕ್ಷ್ಯ ತೋರಿಸಿದರೆ ಮುಂದಿನ ದಿನಗಳಲ್ಲಿ ಸರ್ಕಾರ ನಮ್ಮ ಕಲ್ಯಾಣಕ್ಕಾಗಿ ಏನು ಮಾಡುತ್ತಿಲ್ಲ ಎಂದು ದೂಷಿಸಿಕೊಂಡು ಕೂತರೆ ಏನು ಪ್ರಯೋಜನವಿಲ್ಲ. ನಮಗೆ ಆಗುವ ನಷ್ಟಕ್ಕೆ ನಾವೇ ಜವಾಬ್ದಾರರಾಗುತ್ತೇವೆ.

ಆದುದರಿಂದ, ನಿಮ್ಮೆಲ್ಲರಲ್ಲೂ ನನ್ನ ಕಳಕಳಿಯ ಮನವಿ ಏನೆಂದರೆ ಗಣತಿದಾರರು ನಿಮ್ಮ ಮನೆ ಬಳಿ ಬಂದಾಗ ಅವರು ಕೇಳುವಂತಹ ಎಲ್ಲಾ 60 ಪ್ರಶ್ನೆಗಳಿಗೂ ಸಮಾಧಾನದಿಂದ ಸ್ಪಷ್ಟವಾಗಿ ಉತ್ತರ ನೀಡಿ. ಈ ಬಗ್ಗೆ ನಿಮಗೆ ಏನಾದರೂ ಅನುಮಾನಗಳಿದ್ದರೆ, ಮಾರ್ಗದರ್ಶನದ ಅಗತ್ಯವಿದ್ದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವು ಸ್ಥಾಪನೆ ಮಾಡಿರುವ ಈ ಕೆಳಕಂಡ ಸಹಾಯವಾಣಿಗಳನ್ನು ಸಂಪರ್ಕಿಸಿ.

ಪ್ರಕಟಣೆ: ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಸಚಿವರು, ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಸ್ ಇಲಾಖೆ, ಕರ್ನಾಟಕ ಸರ್ಕಾರ
ಸಹಾಯವಾಣಿ: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ 080-69146723 | ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 8050770004

ಎಲ್ಲರೂ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025ರಲ್ಲಿ ಪಾಲ್ಗೊಳ್ಳಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ.#SocialAndEducationalSurvey @CMofKarnataka @siddaramaiah @BZZameerAhmedK pic.twitter.com/LhTFk3tpgT

— DIPR Karnataka (@KarnatakaVarthe) September 25, 2025

Important announcement for the state's 'Muslim community': Request to participate in social and educational survey!
Share. Facebook Twitter LinkedIn WhatsApp Email

Related Posts

ರಾಜ್ಯದ ರೈತರೇ ಗಮನಿಸಿ : ‘ಸಹಕಾರ ಸಂಘ’ಗಳಿಂದ ನಿಮಗೆ ಸಿಗುವ ‘ಸಾಲ ಸೌಲಭ್ಯ’ಗಳು ಹೀಗಿವೆ.!

25/09/2025 12:29 PM6 Mins Read

BREAKING : ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಸ್ಮಾರಕ ನಿರ್ಮಾಣ : ಸಿಎಂ ಸಿದ್ದರಾಮಯ್ಯ ಘೋಷಣೆ

25/09/2025 12:27 PM1 Min Read

BREAKING : ಧರ್ಮಸ್ಥಳ ಕೇಸ್ ತನಿಖೆಗೆ ಮತ್ತಷ್ಟು ಚುರುಕು : ಜಿ ಪರಮೇಶ್ವರ್ ಬೇಟಿಯಾದ ‘SIT’ ಮುಖ್ಯಸ್ಥ ಪ್ರಣಬ್ ಮೋಹಂತಿ

25/09/2025 12:25 PM1 Min Read
Recent News

ನಿಮ್ಮ ಆಧಾರ್ ಪಿಡಿಎಫ್ ಅನ್ನು ನೇರವಾಗಿ ವಾಟ್ಸಾಪ್ ನಲ್ಲಿ ಪಡೆಯುವುದು ಹೇಗೆ, ಹಂತ ಹಂತದ ಮಾಹಿತಿ ಇಲ್ಲಿದೆ | Aadhaar

25/09/2025 12:52 PM

ರಾಜ್ಯದ `ಮುಸ್ಲಿಂ ಸಮುದಾಯ’ಕ್ಕೆ ಮಹತ್ವದ ಪ್ರಕಟಣೆ : ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಮನವಿ.!

25/09/2025 12:48 PM

BREAKING: ಆಸ್ಟ್ರೇಲಿಯಾ ‘ಎ’ ವಿರುದ್ಧದ ಸರಣಿಗೆ ತಂಡ ಪ್ರಕಟಿಸಿದ BCCI, ಶ್ರೇಯಸ್ ಅಯ್ಯರ್ ನಾಯಕ

25/09/2025 12:39 PM

ರಾಜ್ಯದ ರೈತರೇ ಗಮನಿಸಿ : ‘ಸಹಕಾರ ಸಂಘ’ಗಳಿಂದ ನಿಮಗೆ ಸಿಗುವ ‘ಸಾಲ ಸೌಲಭ್ಯ’ಗಳು ಹೀಗಿವೆ.!

25/09/2025 12:29 PM
State News
KARNATAKA

ರಾಜ್ಯದ `ಮುಸ್ಲಿಂ ಸಮುದಾಯ’ಕ್ಕೆ ಮಹತ್ವದ ಪ್ರಕಟಣೆ : ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಳ್ಳುವಂತೆ ಮನವಿ.!

By kannadanewsnow5725/09/2025 12:48 PM KARNATAKA 2 Mins Read

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದಾದ್ಯಂತ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಕುರಿತು…

ರಾಜ್ಯದ ರೈತರೇ ಗಮನಿಸಿ : ‘ಸಹಕಾರ ಸಂಘ’ಗಳಿಂದ ನಿಮಗೆ ಸಿಗುವ ‘ಸಾಲ ಸೌಲಭ್ಯ’ಗಳು ಹೀಗಿವೆ.!

25/09/2025 12:29 PM

BREAKING : ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಸ್ಮಾರಕ ನಿರ್ಮಾಣ : ಸಿಎಂ ಸಿದ್ದರಾಮಯ್ಯ ಘೋಷಣೆ

25/09/2025 12:27 PM

BREAKING : ಧರ್ಮಸ್ಥಳ ಕೇಸ್ ತನಿಖೆಗೆ ಮತ್ತಷ್ಟು ಚುರುಕು : ಜಿ ಪರಮೇಶ್ವರ್ ಬೇಟಿಯಾದ ‘SIT’ ಮುಖ್ಯಸ್ಥ ಪ್ರಣಬ್ ಮೋಹಂತಿ

25/09/2025 12:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.