ಬೆಂಗಳೂರು: ಮೊನ್ನೆ ನಡೆದಂತ ಸಣ್ಣ ಘಟನೆಯಿಂದ ನನಗೆ ಸರ್ಜರಿ ಆಗಿತ್ತು. ಒಂದು ದೊಡ್ಡ ಅಪಘಾತವಾಗಬಹುದಾಗಿತ್ತು. ಆದ್ರೇ.. ವೈದ್ಯರು ಸರ್ಜರಿ ಮೂಲಕ ತಪ್ಪಿಸಿ, ಗುಣಮುಖರನ್ನಾಗಿ ಮಾಡಿದ್ದಾರೆ ಎಲ್ಲರಿಗೂ ಧನ್ಯವಾದ ಎಂಬುದಾಗಿ ಸ್ಯಾಂಡಲ್ ವುಡ್ ನಟ ದಿಗಂತ್ ( Actor Diganth ) ಹೇಳಿದ್ದಾರೆ.

BIG NEWS: ರಾಜ್ಯದ ಎಲ್ಲಾ ‘ವಾಣಿಜ್ಯ ಅಂಗಡಿ-ಮುಂಗಟ್ಟು’ಗಳ ಮೇಲೆ ‘ಕನ್ನಡ ನಾಮಫಲಕ’ ಕಡ್ಡಾಯ: ತಪ್ಪಿದ್ರೇ ಅಂಗಡಿ ಪರವಾನಿಗೆ ರದ್ದು – ಸರ್ಕಾರ ಎಚ್ಚರಿಕೆ

ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ನನಗಾದಂತ ಸಣ್ಣ ಘಟನೆಯಿಂದಾಗಿ ಒಂದು ಸಣ್ಣ ಸರ್ಜರಿಯಾಗಿದೆ. ಈ ವೇಳೆ ನನಗೆ ಬಹಳಷ್ಟು ಜನರು ಸಹಕರಿಸಿದ್ದಾರೆ. ಗೋವಾದಿಂದ ಏರ್ ಲಿಫ್ಟ್ ಮಾಡೋದಕ್ಕೆ ಗೋವಾ ಸಿಎಂ ಸಹಕರಿಸಿದ್ದಾರೆ. ಚಿಕಿತ್ಸೆಯ ಮೂಲಕ ಮಣಿಪಾಲ್ ಆಸ್ಪತ್ರೆಯ ವೈದ್ಯರು ನೆರವಾಗಿದ್ದಾರೆ ಅಪರೆಲ್ಲರಿಗೂ ನನ್ನ ಧನ್ಯವಾದಗಳು ಎಂದರು.

ಹೊನ್ನಾವರದ ಪ್ರತಿಷ್ಠಿತ ‘ಎಂಪಿಇ ಸೊಸೈಟಿ’ಯ ಸೆಂಟ್ರಲ್ ಶಾಲೆಗೆ ಜಿಲ್ಲಾಮಟ್ಟದ ‘ಸ್ವಚ್ಛ ವಿದ್ಯಾಲಯ ಪುರಸ್ಕಾರ’

ಮಣಿಪಾಲ್ ಆಸ್ಪತ್ರೆಯ ವೈದ್ಯರಾದಂತ ಡಾ.ವಿದ್ಯಾಧರ್ ಅವರು ದೇವರ ರೂಪದಲ್ಲಿ ಬಂದು ನನಗೆ ಸರ್ಜರಿ ಮಾಡಿದ್ದಾರೆ. ಅವರಿಗೆ ಧನ್ಯವಾದಗಳು. ನನ್ನ ಆರೋಗ್ಯ ಬಗ್ಗೆ ತೀರ್ಥಹಳ್ಳಿಯ ಶಾಲಾ ಸ್ನೇಹಿತರು. ನನ್ನ ಸಿನಿಮಾ ಇಂಡಸ್ಟ್ರಿಯ ಗೆಳೆಯರು ವಿಚಾರಿಸಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು ಅಂತ ಹೇಳಿದ್ದಾರೆ.

Share.
Exit mobile version