Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ `ಪೌತಿ ಖಾತೆ’ ಮುಗಿದ ತಕ್ಷಣ `ಪೋಡಿ ಮುಕ್ತ ಗ್ರಾಮ’ ಅಭಿಯಾನ : ಸಚಿವ ಕೃಷ್ಣ ಬೈರೇಗೌಡ

23/07/2025 10:36 AM

ಮೃತ ವ್ಯಕ್ತಿಯ ಹೆಸರಲ್ಲಿ ಜಮೀನಿದ್ರೆ `ಕಿಸಾನ್ ಸಮ್ಮಾನ್’ ಸೇರಿ ಸರ್ಕಾರದ ಯಾವುದೇ ಸೌಲಭ್ಯ ಸಿಗಲ್ಲ.!

23/07/2025 10:27 AM

ಭಾರತದ ಈ ನಗರದಲ್ಲಿ ಅತಿ ಹೆಚ್ಚು ವಿವಾಹೇತರ ಸಂಬಂಧ | extra marital affairs

23/07/2025 10:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೃತ ವ್ಯಕ್ತಿಯ ಹೆಸರಲ್ಲಿ ಜಮೀನಿದ್ರೆ `ಕಿಸಾನ್ ಸಮ್ಮಾನ್’ ಸೇರಿ ಸರ್ಕಾರದ ಯಾವುದೇ ಸೌಲಭ್ಯ ಸಿಗಲ್ಲ.!
KARNATAKA

ಮೃತ ವ್ಯಕ್ತಿಯ ಹೆಸರಲ್ಲಿ ಜಮೀನಿದ್ರೆ `ಕಿಸಾನ್ ಸಮ್ಮಾನ್’ ಸೇರಿ ಸರ್ಕಾರದ ಯಾವುದೇ ಸೌಲಭ್ಯ ಸಿಗಲ್ಲ.!

By kannadanewsnow5723/07/2025 10:27 AM

ಕಾರವಾರ : ಮೃತ ವ್ಯಕ್ತಿಯ ಹೆಸರಿನಲ್ಲಿರುವ ಜಮೀನಿನ ಮೇಲೆ ಕಿಸಾನ್ ಸಮ್ಮಾನ್, ಕೃಷಿ ಸಬ್ಸಿಡಿ, ಪ್ರವಾಹ ಪರಿಹಾರ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳು ವಾರಸುದಾರರಿಗೆ ಸಿಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಮೃತರ ಹೆಸರಿನಲ್ಲಿರುವ ಜಮೀನಿಗೆ ಕಿಸಾನ್ ಸಮ್ಮಾನ್ ಕೊಡದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೃಷಿ ಸಬ್ಸಿಡಿ, ಪ್ರವಾಹ ಪರಿಹಾರಕ್ಕೂ ಇದು ಅನ್ವಯವಾಗುತ್ತದೆ. ಹೀಗಾಗಿ ಮೃತರ ಹೆಸರಿನಲ್ಲಿರುವ ಆಸ್ತಿಯಲ್ಲಿ ವಾರಸುದಾರರ ಹೆಸರು ಸೇರಿಸಲು ರಾಜ್ಯದಲ್ಲಿ ಪೌತಿ ಖಾತೆ ಅಭಿಯಾನ ಕೈಗೊಂಡಿದ್ದು, ವಾರಸುದಾರರ ಹೆಸರಿಗೆ ಜಮೀನು ನೋಂದಣಿ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪೌತಿ ಖಾತೆ ಅಭಿಯಾನ ಮುಗಿದ ತಕ್ಷಣ ಪೋಡಿ ಮುಕ್ತ ಗ್ರಾಮ ಅಭಿಯಾನ ಕೈಗೊಳ್ಳಲಾಗುವುದು, ಆನ್ಲೈನ್ ಮೂಲಕ ಅಂಗೈಯಲ್ಲಿ ಆಸ್ತಿ ದಾಖಲೆ ನೀಡಲು ಭೂ ಸುರಕ್ಷಾ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ 150 ವರ್ಷಗಳಷ್ಟು ಹಳೆಯ ದಾಖಲೆಗಳಿದ್ದು, ಅವು ಕಳೆದು ಹೋಗಬಾರದು, ಹೆಸರು ತಿದ್ದುಪಡಿ ಮಾಡಬಾರದು ಎಂಬ ಕಾರಣಕ್ಕೆ ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಶೇ. 33 ರಷ್ಟು ಸ್ಕ್ಯಾನಿಂಗ್ ಆಗಿದ್ದು, ಇದು ಪೂರ್ಣಗೊಂಡ ನಂತರ ಜನ ಮನೆಯಲ್ಲಿ ಕುಳಿತು ಅರ್ಜಿ ಹಾಕಿ ಆಸ್ತಿ ದಾಖಲೆ ಪಡೆಯಬಹುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 11.80 ಲಕ್ಷಕ್ಕೂ ಅಧಿಕ ಜನರು ವಿವಿಧ ಯೋಜನೆಗಳಡಿ ಅನಧಿಕೃತವಾಗಿ ಮಾಸಾಶನ ಪಡೆಯುತ್ತಿರುವ ಅನುಮಾನವಿದ್ದು, ಈ ಬಗ್ಗೆ ಪರಿಶೀಲನೆಗೆ ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು 60 ವಯಸ್ಸಿಗಿಂತ ಕಡಿಮೆ ಇರುವ ಲಕ್ಷಾಂತರ ಜನ ವೃದ್ಧಾಪ್ಯ ವೇತನ ಪಡೆಯುತ್ತಿರುವ ಮಾಹಿತಿ ಆಧಾರ್ ಸೀಡಿಂಗ್ನಿಂದ ಕಂಡುಬಂದಿದೆ ಎಂದು ಹೇಳಿದ್ದಾರೆ.

ಸರ್ಕಾರಿ ನೌಕರರ ಎಚ್ಆರ್ಎಂಎಸ್ನಲ್ಲಿ ನೋಂದಣಿಯಾಗಿರುವ 117 ಜನ, ಆದಾಯ ತೆರಿಗೆ ಪಾವತಿ ಮಾಡುವ 13,702 ಜನ, ಎಪಿಎಂಎಲ್ ಕಾರ್ಡ್ ಹೊಂದಿರುವವರು ವಿವಿಧ ಪಿಂಚಣಿ ಸೌಲಭ್ಯ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಂಗವೈಕಲ್ಯ ಇಲ್ಲದವರೂ ವೈದ್ಯರ ನಕಲಿ ಪ್ರಮಾಣಪತ್ರ ಪಡೆದು ಪಿಂಚಣಿ ಪಡೆಯುತ್ತಿರುವುದನ್ನು ಗ್ರಾಮ ಆಡಳಿತ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿದ್ದೇವೆ ಎಂದು ತಿಳಿಸಿದ್ದಾರೆ.

If the land is in the name of the deceased person they will not get any government benefits including 'Kisan Samman'!
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ಪೌತಿ ಖಾತೆ’ ಮುಗಿದ ತಕ್ಷಣ `ಪೋಡಿ ಮುಕ್ತ ಗ್ರಾಮ’ ಅಭಿಯಾನ : ಸಚಿವ ಕೃಷ್ಣ ಬೈರೇಗೌಡ

23/07/2025 10:36 AM1 Min Read

BIG NEWS : `ಆರೋಗ್ಯ ಬಂಧು ಯೋಜನೆ’ಗೆ ಪರಿಷ್ಕೃತ ಮಾರ್ಗಸೂಚಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

23/07/2025 10:22 AM3 Mins Read

BREAKING : ಇನ್ಮುಂದೆ ‘VIP’ ಸಂಚಾರದ ವೇಳೆ ಸೈರನ್ ಬಳಕೆ ಕಡಿಮೆ ಮಾಡಿ : ರಾಜ್ಯದ ಪೊಲೀಸರಿಗೆ ಸೂಚನೆ

23/07/2025 10:20 AM1 Min Read
Recent News

ರಾಜ್ಯದಲ್ಲಿ `ಪೌತಿ ಖಾತೆ’ ಮುಗಿದ ತಕ್ಷಣ `ಪೋಡಿ ಮುಕ್ತ ಗ್ರಾಮ’ ಅಭಿಯಾನ : ಸಚಿವ ಕೃಷ್ಣ ಬೈರೇಗೌಡ

23/07/2025 10:36 AM

ಮೃತ ವ್ಯಕ್ತಿಯ ಹೆಸರಲ್ಲಿ ಜಮೀನಿದ್ರೆ `ಕಿಸಾನ್ ಸಮ್ಮಾನ್’ ಸೇರಿ ಸರ್ಕಾರದ ಯಾವುದೇ ಸೌಲಭ್ಯ ಸಿಗಲ್ಲ.!

23/07/2025 10:27 AM

ಭಾರತದ ಈ ನಗರದಲ್ಲಿ ಅತಿ ಹೆಚ್ಚು ವಿವಾಹೇತರ ಸಂಬಂಧ | extra marital affairs

23/07/2025 10:25 AM

BIG NEWS : `ಆರೋಗ್ಯ ಬಂಧು ಯೋಜನೆ’ಗೆ ಪರಿಷ್ಕೃತ ಮಾರ್ಗಸೂಚಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

23/07/2025 10:22 AM
State News
KARNATAKA

ರಾಜ್ಯದಲ್ಲಿ `ಪೌತಿ ಖಾತೆ’ ಮುಗಿದ ತಕ್ಷಣ `ಪೋಡಿ ಮುಕ್ತ ಗ್ರಾಮ’ ಅಭಿಯಾನ : ಸಚಿವ ಕೃಷ್ಣ ಬೈರೇಗೌಡ

By kannadanewsnow5723/07/2025 10:36 AM KARNATAKA 1 Min Read

ಕಾರವಾರ : ಮೃತರ ಹೆಸರಿನಲ್ಲಿರುವ ಆಸ್ತಿಯಲ್ಲಿ ವಾರಸುದಾರರ ಹೆಸರು ಸೇರಿಸಲು ರಾಜ್ಯದಲ್ಲಿ ಪೌತಿ ಖಾತೆ ಅಭಿಯಾನ ಕೈಗೊಂಡಿದ್ದು, ವಾರಸುದಾರರ ಹೆಸರಿಗೆ…

ಮೃತ ವ್ಯಕ್ತಿಯ ಹೆಸರಲ್ಲಿ ಜಮೀನಿದ್ರೆ `ಕಿಸಾನ್ ಸಮ್ಮಾನ್’ ಸೇರಿ ಸರ್ಕಾರದ ಯಾವುದೇ ಸೌಲಭ್ಯ ಸಿಗಲ್ಲ.!

23/07/2025 10:27 AM

BIG NEWS : `ಆರೋಗ್ಯ ಬಂಧು ಯೋಜನೆ’ಗೆ ಪರಿಷ್ಕೃತ ಮಾರ್ಗಸೂಚಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

23/07/2025 10:22 AM

BREAKING : ಇನ್ಮುಂದೆ ‘VIP’ ಸಂಚಾರದ ವೇಳೆ ಸೈರನ್ ಬಳಕೆ ಕಡಿಮೆ ಮಾಡಿ : ರಾಜ್ಯದ ಪೊಲೀಸರಿಗೆ ಸೂಚನೆ

23/07/2025 10:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.