ಬೆಂಗಳೂರು: ಈ ಹಿಂದೆ ಬಿಗ್ ಬಾಸ್ ಸ್ಪರ್ಧಿ, ನಟ ಪ್ರಥಮ್ ಗೆ ಸೋಷಿಯಲ್ ಮೀಡಿಯಾದ ಮೂಲಕ ದರ್ಶನ್ ಅಭಿಮಾನಿಗಳು ಕಾಟ ಕೊಟ್ಟಿದ್ದರು. ಈಗ ಅಣ್ಣಾವ್ರ ಅಭಿಮಾನಿಗಳ ಹಿಂದೆ ಬಿದ್ದಿದ್ದಾರೆ. ಡಿ ಬಾಸ್ ಅಭಿಮಾನಿಗಳ ಕೈಗೆ ಸಿಕ್ಕರೇ ನಿನ್ನನ್ನು ಮುಗಿಸುತ್ತೇನೆ ಎಂಬುದಾಗಿ ಬೆದರಿಕೆ ಹಾಕಲಾಗಿದೆ. ಹೀಗಾಗಿ ಡಿ ಬಾಸ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲಾಗಿದೆ.
ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದೆ. ಪರಪ್ಪನ ಅಗ್ರಹಾರ ಜೈಲು ಸೇರಿರುವಂತ ನಟ ದರ್ಶನ್, ನನಗೆ ಜೈಲೂಟ ಬೇಡ. ಮನೆಯೂಟ ಬೇಕು. ನನ್ನ ತೂಕ ಕಡಿಮೆ ಆಗುತ್ತಿದೆ ಎಂಬುದಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರೂ, ನ್ಯಾಯಾಲಯ ಜೈಲಿನ ಖೈದಿಗಳಿಗೆ ಬೇರೆ ಆಹಾರ, ನಿನಗೆ ಬೇರೆ ಆಹಾರಕ್ಕೆ ಅವಕಾಶ ಮಾಡಿಕೊಡೋದಿಲ್ಲ ಅಂತ ನಿರಾಕರಿಸಿ, ಅರ್ಜಿ ವಜಾಗೊಳಿಸಿತ್ತು. ಈಗ ಜೈಲೂಟವೇ ಗತಿಯಾಗಿದೆ.
ಇದರ ನಡುವೆ ದಿವಂಗತ ಡಾ.ರಾಜ್ ಕುಮಾರ್ ಅಭಿಮಾನಿಯಾಗಿರುವಂತ ಯೋಗಿ ಎಂಬಾತನಿಗೆ ನಟ ದರ್ಶನ್ ಅಭಿಮಾನಿಗಳು ಬೆದರಿಕೆ ಹಾಕೋದಕ್ಕೆ ಶುರುಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಣ್ಣಾವ್ರ ಅಭಿಮಾನಿ ಯೋಗಿಗೆ ಕಾಲ್ ಮಾಡುತ್ತಿರುವಂತ ಡಿ ಬಾಸ್ ಅಭಿಮಾನಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಿರುವುದಾಗಿ ಹೇಳಲಾಗುತ್ತಿದೆ.
ಇದಷ್ಟೇ ಅಲ್ಲದೇ ಫೇಕ್ ಫೇಸ್ ಬುಕ್ ಅಕೌಂಟ್ ಕ್ರಿಯೇಟ್ ಮಾಡಿರುವಂತ ಡಿ ಬಾಸ್ ಅಭಿಮಾನಿಗಳು. ಅದರಲ್ಲಿ ಡಿ ಬಾಸ್ ಅಭಿಮಾನಿಗಳ ಕೈಗೆ ನೀನು ಸಿಕ್ಕರೇ ನಿನ್ನ ಕತೆಯನ್ನೇ ಮುಗಿಸುತ್ತೇವೆ ಎಂಬುದಾಗಿಯೂ ಮೆಸೇಜ್ ಹಾಕುತ್ತಿದ್ದಾರಂತೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಣ್ಣಾವ್ರ ಅಭಿಮಾನಿ ಯೋಗಿ ಎಂಬುವರು ಬೆಂಗಳೂರಿನ ಪಶ್ಚಿಮ ವಿಭಾಗದ ಸೈಬರ್ ಪೊಲೀಸ್ ಠಾಮೆಗೆ ಡಿ ಬಾಸ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದಾರೆ.