Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಒಂದು ಸಾಲಿನ ಮಂತ್ರವನ್ನು ಪಠಿಸಿ, ನಿಮ್ಮ ಮಕ್ಕಳು ದಡ್ಡರಾಗಿದ್ದರೂ ಅಧ್ಯಯನದಲ್ಲಿ ಮುಂದಾಗುತ್ತಾರೆ

20/01/2026 6:27 PM

ಪತ್ರಕರ್ತರಿಂದ ಸಲಹೆ, ಸಹಕಾರ ಪಡೆದು ಸುಶಿಕ್ಷಿತನಾಗಲು ಸಾಧ್ಯವಾಗಿದೆ: ಸಚಿವ ಮಧು ಬಂಗಾರಪ್ಪ

20/01/2026 6:21 PM

ರಾಜ್ಯ ಆರೋಗ್ಯ ಇಲಾಖೆಯಲ್ಲಿ 2026ನೇ ಸಾಲಿಗೆ ವರ್ಗಾವಣೆಗೆ ನೇಮಿಸಿದ್ದ ಅಧಿಕಾರಿ, ಸಿಬ್ಬಂದಿಗಳ ಆದೇಶ ಹಿಂಪಡೆದ ಸರ್ಕಾರ

20/01/2026 6:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪತ್ರಕರ್ತರಿಂದ ಸಲಹೆ, ಸಹಕಾರ ಪಡೆದು ಸುಶಿಕ್ಷಿತನಾಗಲು ಸಾಧ್ಯವಾಗಿದೆ: ಸಚಿವ ಮಧು ಬಂಗಾರಪ್ಪ
KARNATAKA

ಪತ್ರಕರ್ತರಿಂದ ಸಲಹೆ, ಸಹಕಾರ ಪಡೆದು ಸುಶಿಕ್ಷಿತನಾಗಲು ಸಾಧ್ಯವಾಗಿದೆ: ಸಚಿವ ಮಧು ಬಂಗಾರಪ್ಪ

By kannadanewsnow0920/01/2026 6:21 PM

ಶಿವಮೊಗ್ಗ: ರಾಜಕೀಯವಾಗಿ ಅನುನುಭವಿಯಾಗಿದ್ದ ನನಗೆ ರಾಜಕೀಯ ಪ್ರಜ್ಞೆ ಮೂಡಲು ತಾಲ್ಲೂಕಿನ ಪತ್ರಕರ್ತರಿಂದ ಸಲಹೆ, ಸಹಕಾರ ಪಡೆದು ಸುಶಿಕ್ಷಿತನಾಗಲು ಸಾಧ್ಯವಾಗಿದೆ ಎಂದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಮಂಗಳವಾರ ಪಟ್ಟಣದ ಶ್ರೀರಂಗ ಕನ್ವೆನ್ಷನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಂಗ,ಕಾರ್ಯಾಂಗ,ಶಾಸಕಾಂಗದ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಸಮರ್ಥವಾಗಿರುವ ಪತ್ರಿಕಾ ರಂಗ ತನ್ನದೇ ಆದ ಶಕ್ತಿ ಉಳಿಸಿಕೊಂಡಿದೆ. ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಬಂದ ಮೇಲೆ ಪತ್ರಿಕಾ ರಂಗದ ನಿಜವಾದ ದಿಕ್ಕು,ದಿಸೆ ಬದಲಾಗಿದೆ. ಸಮಾಜಕ್ಕೆ ಸರಿ ದಾರಿ ತೋರಿಸುವ ಕ್ಷೇತ್ರ ತನ್ನ ನಿಜತನವನ್ನು ಬದಲಾಯಿಸಿಕೊಂಡರೆ ಯಾರಿಗೆ ಪ್ರಶ್ನೆ ಮಾಡಲು ಸಾಧ್ಯ. ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ಎಲ್ಲರೂ ತಮ್ಮ ತನವನ್ನು ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವನಾಗಿ ಉತ್ತಮ ಕೆಲಸ ಮಾಡಿದ್ದರೂ ತಿರುಚಿ ಹಾಕಿದಾಗ ಬಹಳ ಬೇಸರವಾಗುತ್ತದೆ. ಸಾರ್ವಜನಿಕರು ರಾಜಕಾರಣಿಗಳನ್ನು ದೂರಿದಂತೆ ಪತ್ರಕರ್ತರನ್ನು ದೂರುವ ಸಂದರ್ಭ ಹೆಚ್ಚಾಗಿದೆ. ವೃತ್ತಿಯಲ್ಲಿ ಬದ್ಧತೆ, ನೈತಿಕತೆ ಕಾಪಾಡಿಕೊಳ್ಳುವ ಮೂಲಜ ನಿಮ್ಮನ್ನು ನೀವು ತಿದ್ದಿಕೊಳ್ಳಿ ಎಂದು ಸಲಹೆ ನೀಡಿದರು.

ಜಡೆ ಮಠದ ಡಾ.ಮಹಾಂತ‌‌ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪತ್ರಿಕೆಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣಗೊಳ್ಳು ಸಾಧ್ಯ. ಈ ನಿಟ್ಟಿನಲ್ಲಿ ತಾಲ್ಲೂಕಿನ ಮಾಧ್ಯಮ ಸ್ನೇಹಿತರು ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ದಿನದ ಬಹುತೇಕ ಸಮಯವನ್ನು ಸಮಾಜದ ಅಭಿವೃದ್ಧಿಗೆ ಕಳೆಯುತ್ತಿರುವ ಪತ್ರಕರ್ತರಿಗೆ ಸರ್ಕಾರದಿಂದ ಸವಲತ್ತುಗಳು ಸಿಗಬೇಕಿದೆ. ಪತ್ರಿಕಾ ಭವನ ಕಟ್ಟಡ ನಿರ್ಮಾಣಕ್ಕೆ ನಾನೂ ಕೂಡ ಮಠದ ವತಿಯಿಂದ ಸಹಾಯ‌ ಮಾಡುತ್ತೇನೆ ಎಂದರು.

ರಾಜ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್ ಮಾತನಾಡಿ, ವ್ಯೆಯಕ್ತಿಕ ಬದುಕನ್ನು ತ್ಯಾಗ ಮಾಡಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರು ರಾಜ್ಯದಲ್ಲಿ ಕೋವಿಡ್ ಕಾಲದಲ್ಲಿ 54 ಜನ ಮೃತಪಟ್ಟರು.

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಹೊಸ ಪೀಳಿಗೆಯ ಪತ್ರಕರ್ತರಾಗಲು ಬಯಸುವವರು ಆಸ್ತಿ,ಮನೆ ಭದ್ರವಿದ್ದರೆ ಮಾತ್ರ ಸೇವೆ ಸಲ್ಲಿಸುವ ಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

ಕಾವ್ಯಾ ಭಾವೆ ಪ್ರಾರ್ಥಿಸಿ, ಪತ್ರಕರ್ತರಾದ ಡಾ.ಎಸ್.ಎಂ.ನಿಲೇಶ್ ಸ್ವಾಗತಿಸಿ, ಶಿವಪ್ಪ ಹಿತ್ಲರ್ ವಂದಿಸಿ, ರವಿ ಕಲ್ಲಂಬಿ ನಿರೂಪಿಸಿದರು. ಈ ಹಿಂದೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಪತ್ರಕರ್ತರನ್ನು ಸನ್ಮಾನಿಸಲಾಯಿತು. ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯನಿರತ ಪತ್ರಕರ್ತ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ವೈದ್ಯ, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ರಾಜ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್, ಜಿಲ್ಲಾ ಉಪಾಧ್ಯಕ್ಷ ಹುಚ್ಚರಾಯಪ್ಪ, ಕಾರ್ಯದರ್ಶಿ ದೀಪಕ್ ಸಾಗರ್, ತಾಲೂಕು ಘಟಕದ ನಿಯೋಜಿತ ಅಧ್ಯಕ್ಷ ಜಿ.ಎಂ.ತೋಟಪ್ಪ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬಾಪಟ್, ಮಾಜಿ ಅಧ್ಯಕ್ಷ ನಾಗರಾಜ್ ಜೈನ್, ತಹಶೀಲ್ದಾರ್ ಮಂಜುಳಾ ಹೆಗಡಾಳ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜೈಶೀಲಗೌಡ ಅಂಕರವಳ್ಳಿ, ತಾಲ್ಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ,ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ, ಪುರಸಭೆ ಮುಖ್ಯಾಧಿಕಾರಿ ಚಂದನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ಈ ಒಂದು ಸಾಲಿನ ಮಂತ್ರವನ್ನು ಪಠಿಸಿ, ನಿಮ್ಮ ಮಕ್ಕಳು ದಡ್ಡರಾಗಿದ್ದರೂ ಅಧ್ಯಯನದಲ್ಲಿ ಮುಂದಾಗುತ್ತಾರೆ

20/01/2026 6:27 PM2 Mins Read

ರಾಜ್ಯ ಆರೋಗ್ಯ ಇಲಾಖೆಯಲ್ಲಿ 2026ನೇ ಸಾಲಿಗೆ ವರ್ಗಾವಣೆಗೆ ನೇಮಿಸಿದ್ದ ಅಧಿಕಾರಿ, ಸಿಬ್ಬಂದಿಗಳ ಆದೇಶ ಹಿಂಪಡೆದ ಸರ್ಕಾರ

20/01/2026 6:11 PM1 Min Read

ಶಿವಮೊಗ್ಗ: ಜ.22ರಂದು ಸೊರಬದ ‘ಉಳವಿ ವ್ಯಾಪ್ತಿ’ಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

20/01/2026 5:53 PM1 Min Read
Recent News

ಈ ಒಂದು ಸಾಲಿನ ಮಂತ್ರವನ್ನು ಪಠಿಸಿ, ನಿಮ್ಮ ಮಕ್ಕಳು ದಡ್ಡರಾಗಿದ್ದರೂ ಅಧ್ಯಯನದಲ್ಲಿ ಮುಂದಾಗುತ್ತಾರೆ

20/01/2026 6:27 PM

ಪತ್ರಕರ್ತರಿಂದ ಸಲಹೆ, ಸಹಕಾರ ಪಡೆದು ಸುಶಿಕ್ಷಿತನಾಗಲು ಸಾಧ್ಯವಾಗಿದೆ: ಸಚಿವ ಮಧು ಬಂಗಾರಪ್ಪ

20/01/2026 6:21 PM

ರಾಜ್ಯ ಆರೋಗ್ಯ ಇಲಾಖೆಯಲ್ಲಿ 2026ನೇ ಸಾಲಿಗೆ ವರ್ಗಾವಣೆಗೆ ನೇಮಿಸಿದ್ದ ಅಧಿಕಾರಿ, ಸಿಬ್ಬಂದಿಗಳ ಆದೇಶ ಹಿಂಪಡೆದ ಸರ್ಕಾರ

20/01/2026 6:11 PM

Alert : ಸಾವಿರಾರು ‘PG ವೈದ್ಯಕೀಯ ಸೀಟು’ಗಳು ಖಾಲಿ ಉಳಿದಿವೆ!

20/01/2026 5:56 PM
State News
KARNATAKA

ಈ ಒಂದು ಸಾಲಿನ ಮಂತ್ರವನ್ನು ಪಠಿಸಿ, ನಿಮ್ಮ ಮಕ್ಕಳು ದಡ್ಡರಾಗಿದ್ದರೂ ಅಧ್ಯಯನದಲ್ಲಿ ಮುಂದಾಗುತ್ತಾರೆ

By kannadanewsnow0920/01/2026 6:27 PM KARNATAKA 2 Mins Read

ನಾವು ನಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗಳಲ್ಲಿ ಓದುವಂತೆ ಮಾಡುತ್ತೇವೆ, ಇದರಿಂದ ನಾವು ಕಷ್ಟಪಟ್ಟರೂ ಅವರು ಓದಬಹುದು ಮತ್ತು ಉತ್ತಮ ಅಂಕಗಳನ್ನು…

ಪತ್ರಕರ್ತರಿಂದ ಸಲಹೆ, ಸಹಕಾರ ಪಡೆದು ಸುಶಿಕ್ಷಿತನಾಗಲು ಸಾಧ್ಯವಾಗಿದೆ: ಸಚಿವ ಮಧು ಬಂಗಾರಪ್ಪ

20/01/2026 6:21 PM

ರಾಜ್ಯ ಆರೋಗ್ಯ ಇಲಾಖೆಯಲ್ಲಿ 2026ನೇ ಸಾಲಿಗೆ ವರ್ಗಾವಣೆಗೆ ನೇಮಿಸಿದ್ದ ಅಧಿಕಾರಿ, ಸಿಬ್ಬಂದಿಗಳ ಆದೇಶ ಹಿಂಪಡೆದ ಸರ್ಕಾರ

20/01/2026 6:11 PM

ಶಿವಮೊಗ್ಗ: ಜ.22ರಂದು ಸೊರಬದ ‘ಉಳವಿ ವ್ಯಾಪ್ತಿ’ಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

20/01/2026 5:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.