Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದಿನ ಮೈಸೂರು ಸಚಿವರು, ಶಾಸಕರ ಜೊತೆಗಿನ ಸಿಎಂ ಸಿದ್ಧರಾಮಯ್ಯ ಸಭೆಯ ಪ್ರಮುಖ ಹೈಲೈಟ್ಸ್

29/07/2025 6:12 PM

ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ, ಜನಸೇವೆಯೇ ನನ್ನ ಧ್ಯೇಯ: ಶಾಸಕ ಕೆ.ಎಂ.ಉದಯ್

29/07/2025 6:03 PM

ಆಪರೇಷನ್ ಸಿಂಧೂರ್ ವೇಳೆ ಮೋದಿ ಸರ್ಕಾರ ಸೇನೆಯ ಕೈ ಕಟ್ಟಿ ಹಾಕಿತ್ತು: ರಾಹುಲ್‌ ಗಾಂಧಿ ಗಂಭೀರ ಆರೋಪ

29/07/2025 5:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ, ಜನಸೇವೆಯೇ ನನ್ನ ಧ್ಯೇಯ: ಶಾಸಕ ಕೆ.ಎಂ.ಉದಯ್
KARNATAKA

ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ, ಜನಸೇವೆಯೇ ನನ್ನ ಧ್ಯೇಯ: ಶಾಸಕ ಕೆ.ಎಂ.ಉದಯ್

By kannadanewsnow0929/07/2025 6:03 PM

ಮಂಡ್ಯ : ಸಚಿವ ಸ್ಥಾನ ಅಥವಾ ನಿಗಮ, ಮಂಡಳಿಗೆ ಆಕಾಂಕ್ಷಿ ನಾನಲ್ಲ ಮದ್ದೂರು ಕ್ಷೇತ್ರದ ಜನರ ಸೇವೆಯೇ ನನ್ನ ಧ್ಯೇಯವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಎಂದು ಮಂಗಳವಾರ ಸ್ಪಷ್ಟಪಡಿಸಿದರು.

ಮದ್ದೂರು ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ತಮಿಳು ಕಾಲೋನಿಯ 106 ಮಂದಿ ನಿವೇಶನದ ಅರ್ಹ ಫಲಾನುಭವಿಗಳಿಗೆ ಪರಿಚಯ ಪತ್ರ ವಿತರಣೆ ಮಾಡಿ ಮಾತನಾಡಿದರು.

ಪ್ರಸ್ತುತ ರಾಜ್ಯದಲ್ಲಿ ಸಚಿವ ಸ್ಥಾನ ಮತ್ತು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕೆಲ ಶಾಸಕರು ಲಾಭಿ ನಡೆಸುತ್ತಿರುವುದು ನಿಜ. ಆದರೆ, ನಾನಂತು ಈ ಎರಡು ಸ್ಥಾನಗಳ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

ಸಚಿವ ಹಾಗೂ ನಿಗಮ, ಮಂಡಳಿಗಳಿಗೆ‌ ಆಯ್ಕೆಯಾದರೇ ಇಡೀ ರಾಜ್ಯದಲ್ಲಿ ಪ್ರವಾಸ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಗ ನನ್ನ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಮಯ ಸಾಕಾಗುವುದಿಲ್ಲ. ಹೀಗಾಗಿ ಸಚಿವ ಅಥವಾ ನಿಗಮ, ಮಂಡಳಿ ಸ್ಥಾನದ ಆಕಾಂಕ್ಷಿಯಲ್ಲ ಎಂದರು.

ಈಗಾಗಲೇ ನಮ್ಮ ಸರ್ಕಾರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ 1146 ಕೋಟಿ ರೂ ಅನುದಾನ ನೀಡಿದ್ದು, ಸೋಮವಾರವಷ್ಟೆ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಸಿಎಂ ಮತ್ತು ಡಿಸಿಎಂ ಹಾಗೂ ಸಚಿವ ಸಂಪುಟ ಸಚಿವರು ನೆರವೇರಿಸಿದ್ದಾರೆ. ಕ್ಷೇತ್ರದಲ್ಲಿ ಇನ್ನು ಮಹತ್ತರ ಯೋಜನೆಗಳನ್ನು ತರಲು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹೀಗಾಗಿ ನನಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಸ್ಥಾನವನ್ನು ನೀಡಿದರು ಸಹ ನಾನು ತಿರಸ್ಕರಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಹಳೇ ಎಂ.ಸಿ ರಸ್ತೆಯಲ್ಲಿರುವ ತಮಿಳು ಕಾಲೋನಿ ನಿವಾಸಿಗಳಿಗೆ ಶೀಘ್ರದಲ್ಲೇ ನಿವೇಶನ ಒದಗಿಸಲಾಗುವುದು ಎಂದರು.

ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪದ ಕುದರಗುಂಡಿ ವ್ಯಾಪ್ತಿಯ ಸರ್ವೆ 245 ರಲ್ಲಿ ಜಿಲ್ಲಾಡಳಿತದಿಂದ 3 ಎಕರೆ ವಿಸ್ತೀರ್ಣದಲ್ಲಿ ತಮಿಳು ಕಾಲೋನಿ ನಿವಾಸಿಗಳಿಗೆ ನಿವೇಶನ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಇನ್ನು ಮುಂದಿನ ಎರಡು ಮೂರು ತಿಂಗಳಲ್ಲಿ ಎಲ್ಲಾ 106 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಪುರಸಭೆ ಅಧ್ಯಕ್ಷೆ ಕೋಕಿಲ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಮನ್ ಮುಲ್ ನಿರ್ದೇಶಕ ಹರೀಶ್, ಉಪ ತಹಶೀಲ್ದಾರ್ ಸೋಮಶೇಖರ್, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಎಇಇ ಚಂದ್ರಪ್ಪ ಹಾಗೂ ಸಿಬ್ಬಂದಿಗಳು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ಆಪರೇಷನ್ ಸಿಂಧೂರ್ ಚರ್ಚೆ: ಪಾಕಿಸ್ತಾನದ ಮುಂದೆ ಸರ್ಕಾರ ಶರಣಾಗಿದೆ ಎಂದ ರಾಹುಲ್ ಗಾಂಧಿ

ರಾಜ್ಯದ ಶುಂಠಿ ಬೆಳೆಗಾರರಿಗೆ ಮಹತ್ವದ ಮಾಹಿತಿ: ‘ಎಲೆಚುಕ್ಕೆ ರೋಗ’ ನಿಯಂತ್ರಣಕ್ಕೆ ಈ ಸಲಹೆ ಪಾಲಿಸಿ

Share. Facebook Twitter LinkedIn WhatsApp Email

Related Posts

ಇಂದಿನ ಮೈಸೂರು ಸಚಿವರು, ಶಾಸಕರ ಜೊತೆಗಿನ ಸಿಎಂ ಸಿದ್ಧರಾಮಯ್ಯ ಸಭೆಯ ಪ್ರಮುಖ ಹೈಲೈಟ್ಸ್

29/07/2025 6:12 PM1 Min Read

ರಾಜ್ಯದ ಶುಂಠಿ ಬೆಳೆಗಾರರಿಗೆ ಮಹತ್ವದ ಮಾಹಿತಿ: ‘ಎಲೆಚುಕ್ಕೆ ರೋಗ’ ನಿಯಂತ್ರಣಕ್ಕೆ ಈ ಸಲಹೆ ಪಾಲಿಸಿ

29/07/2025 5:35 PM2 Mins Read

ಕೃಷಿ ಪರಿಕರಗಳ ವಿಸ್ತರಣಾ ಸೇವೆ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

29/07/2025 5:29 PM1 Min Read
Recent News

ಇಂದಿನ ಮೈಸೂರು ಸಚಿವರು, ಶಾಸಕರ ಜೊತೆಗಿನ ಸಿಎಂ ಸಿದ್ಧರಾಮಯ್ಯ ಸಭೆಯ ಪ್ರಮುಖ ಹೈಲೈಟ್ಸ್

29/07/2025 6:12 PM

ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ, ಜನಸೇವೆಯೇ ನನ್ನ ಧ್ಯೇಯ: ಶಾಸಕ ಕೆ.ಎಂ.ಉದಯ್

29/07/2025 6:03 PM

ಆಪರೇಷನ್ ಸಿಂಧೂರ್ ವೇಳೆ ಮೋದಿ ಸರ್ಕಾರ ಸೇನೆಯ ಕೈ ಕಟ್ಟಿ ಹಾಕಿತ್ತು: ರಾಹುಲ್‌ ಗಾಂಧಿ ಗಂಭೀರ ಆರೋಪ

29/07/2025 5:56 PM

ಆಪರೇಷನ್ ಸಿಂಧೂರ್ ಚರ್ಚೆ: ಪಾಕಿಸ್ತಾನದ ಮುಂದೆ ಸರ್ಕಾರ ಶರಣಾಗಿದೆ ಎಂದ ರಾಹುಲ್ ಗಾಂಧಿ

29/07/2025 5:53 PM
State News
KARNATAKA

ಇಂದಿನ ಮೈಸೂರು ಸಚಿವರು, ಶಾಸಕರ ಜೊತೆಗಿನ ಸಿಎಂ ಸಿದ್ಧರಾಮಯ್ಯ ಸಭೆಯ ಪ್ರಮುಖ ಹೈಲೈಟ್ಸ್

By kannadanewsnow0929/07/2025 6:12 PM KARNATAKA 1 Min Read

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೈಸೂರು ಜಿಲ್ಲೆಯ ಸಚಿವರು ಹಾಗೂ ಶಾಸಕರ ಜೊತೆ ಸಭೆ ನಡೆಸಿ, ಜಿಲ್ಲಾ ವ್ಯಾಪ್ತಿಯ…

ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ, ಜನಸೇವೆಯೇ ನನ್ನ ಧ್ಯೇಯ: ಶಾಸಕ ಕೆ.ಎಂ.ಉದಯ್

29/07/2025 6:03 PM

ರಾಜ್ಯದ ಶುಂಠಿ ಬೆಳೆಗಾರರಿಗೆ ಮಹತ್ವದ ಮಾಹಿತಿ: ‘ಎಲೆಚುಕ್ಕೆ ರೋಗ’ ನಿಯಂತ್ರಣಕ್ಕೆ ಈ ಸಲಹೆ ಪಾಲಿಸಿ

29/07/2025 5:35 PM

ಕೃಷಿ ಪರಿಕರಗಳ ವಿಸ್ತರಣಾ ಸೇವೆ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

29/07/2025 5:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.