Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಇಂದು ಸಂಜೆ 5 ಗಂಟೆಗೆ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ | Karnataka 2nd PUC Exam Results

16/05/2025 3:27 PM

ದುಷ್ಟ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸಬೇಕೇ? ಅಮಾವಾಸ್ಯೆಯಂದು ಈ ಶಕ್ತಿ ಶಾಲಿ ಮಂತ್ರ ಪಠಿಸಿ

16/05/2025 3:13 PM

BREAKING : ಬೆಂಗಳೂರಲ್ಲಿ ರಸ್ತೆಯ ಮೇಲೆ ಬಿದ್ದ ಯುವತಿಯ ಮೇಲೆ ಹರಿದ ಕಾರು : ಸ್ಥಳದಲ್ಲೇ ವಿದ್ಯಾರ್ಥಿನಿ ಸಾವು!

16/05/2025 3:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Big Exclusive: ಗ್ರಾಮ ಪಂಚಾಯಿತಿ ಗ್ರಂಥಾಲಯ ನೇಮಕಾತಿಯಲ್ಲಿ ‘ಭಾರೀ ಅಕ್ರಮ’: ಕ್ರಮಕ್ಕೆ ಅಧಿಕಾರಿಗಳೇ ಹಿಂದೇಟು
KARNATAKA

Big Exclusive: ಗ್ರಾಮ ಪಂಚಾಯಿತಿ ಗ್ರಂಥಾಲಯ ನೇಮಕಾತಿಯಲ್ಲಿ ‘ಭಾರೀ ಅಕ್ರಮ’: ಕ್ರಮಕ್ಕೆ ಅಧಿಕಾರಿಗಳೇ ಹಿಂದೇಟು

By kannadanewsnow0913/08/2024 7:02 AM

ತುಮಕೂರು: ಜಿಲ್ಲೆಯ ಗ್ರಾಮ ಪಂಚಾಯ್ತಿ ಒಂದರಲ್ಲಿನ ಗ್ರಂಥಾಲಯ ನೇಮಕಾತಿಯಲ್ಲಿ ಭಾರೀ ಅಕ್ರಮವೇ ನಡೆದಿರೋದಾಗಿ ತಿಳಿದು ಬಂದಿದೆ. ಈ ಅಕ್ರಮದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದರೂ, ಅಧಿಕಾರಿಗಳು ಮಾತ್ರ ಕ್ರಮಕ್ಕೆ ಹಿಂದೇಟು ಹಾಕುತ್ತಿರೋದಾಗಿ ಹೇಳಲಾಗುತ್ತಿದೆ.

ತುಮಕೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯ್ತಿಯಲ್ಲಿನ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯಲ್ಲಿ ಅಕ್ರಮ ನಡೆಸಲಾಗಿದೆ. ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಲಾಗುತ್ತದೆ.

ಈ ದೂರನ್ನು ಆಧರಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ದಿನಾಂಕ 05-07-2024ರಂದು ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರು ಪತ್ರವನ್ನು ಬರೆದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಾರೆ.

ಆದೇಶ ಪತ್ರದಲ್ಲಿ ಏನಿದೆ.?

ಸಂಜೀವಯ್ಯ ಹೆಚ್. ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಕಾರ್ಯಾಲಯ ದೇವಲಾಪುರ ಇವರ ದೂರಿನ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ ಕುರಿತಂತೆ ಉಪ ನಿರ್ದೇಶಕರು (ಪ ಇವರು ತುಮಕೂರು ಸಲ್ಲಿಸಿರುವ ಜಿಲ್ಲಾ ಗ್ರಂಥಾಲಯ, ಕೇಂದ್ರ ದಿನಾಂಕ 17.11.2023 ವರದಿಯಲ್ಲಿ ತುಮಕೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯಲ್ಲಿ ಅವ್ಯವಹಾರ / ಪ್ರಕ್ರಿಯೆ ಲೋಪ ಆಗಿರುವುದ ಕಂಡು ಬಂದಿರುತ್ತದೆ ಎಂದಿದ್ದಾರೆ.

ಆದುದರಿಂದ, ತುಮಕೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯಲ್ಲಿ ನೇಮಕಾತಿಯಲ್ಲಿ ಅವ್ಯವಹಾರ / ಪುಕ್ರಿಯ ಲೋಪ ಆಗ ಕಾರಣಿಭೂತರಾದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧಿಕಾರಿ ಮತ್ತು ನೌಕರರ ವಿರುದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಅಪೀಲು) ನಿಯಮಗಳು 194 ರಡಿಆಯುಕ್ತರ ಹಂತದಲ್ಲಿ ಕೂಡಲೇ ಶಿಸ್ತು ಕ್ರಮವಹಿಸುವಂತೆ ತಮ್ಮನ್ನು ಕೋರ ನಿರ್ದೇಶಿಸಲ್ಪಟ್ಟಿದ್ದೇನೆ ಅಂತ ಹೇಳಿದ್ದಾರೆ.

ಆದರೇ ರಾಜ್ಯ ಸರ್ಕಾರದ ಸೂಚನೆ ಬಂದು ಒಂದು ತಿಂಗಳೇ ಕಳೆಯುತ್ತಿದ್ದರೂ, ಯಾವುದೇ ವಿಚಾರಣೆಯಾಗಲೀ, ಕ್ರಮವಾಗಿಲ್ಲ ಎಂಬುದಾಗಿ ದೂರುದಾರರು ಆರೋಪಿಸುತ್ತಿದ್ದಾರೆ.

ಇದಲ್ಲದೇ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿರುವಂತ ಅವರು, ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ಅನ್ಯಾಯವನ್ನು ಸರಿ ಪಡಿಸಿ ಕೂಡಲೇ, ನ್ಯಾಯ ಸಮ್ಮತ ತನಿಖೆ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮದಲ್ಲಿ ಭಾಗಯಾಗಿರುವ ಎಲ್ಲರ ವಿರುದ್ಧ ಸರ್ಕಾರ ಸೂಕ್ತ ಕ್ರಮವನ್ನು ಜರುಗಿಸಿ ನ್ಯಾಯ ಒದಗಿಸ ಬೇಕು ಎಂದು ಆಗ್ರಹಿಸಿದ್ದಾರೆ.

ದೇವಲಾಪುರ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷರೇ ಈ ಗಂಭೀರ ಆರೋಪವನ್ನು ಮಾಡಿ, ತನಿಖೆಗೆ ಆಗ್ರಹಿಸಿದ್ದಾರೆ. ಹೀಗಿದ್ದರೂ ಈವರೆಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ವಹಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯಲ್ಲಿ ಆಗಿರುವಂತ ಅವ್ಯವಹಾರ, ಪ್ರಕ್ರಿಯ ಲೋಪದ ಬಗ್ಗೆ ತನಿಖೆ ನಡೆಸಿ, ಸಂಬಂಧಿಸಿದಂತವರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ವಸಂತ ಬಿ ಈಶ್ವರಗೆರೆ ಜೊತೆಗೆ ಅವಿನಾಶ್ ಭೀಮಸಂದ್ರ

Share. Facebook Twitter LinkedIn WhatsApp Email

Related Posts

BREAKING: ಇಂದು ಸಂಜೆ 5 ಗಂಟೆಗೆ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ | Karnataka 2nd PUC Exam Results

16/05/2025 3:27 PM1 Min Read

ದುಷ್ಟ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸಬೇಕೇ? ಅಮಾವಾಸ್ಯೆಯಂದು ಈ ಶಕ್ತಿ ಶಾಲಿ ಮಂತ್ರ ಪಠಿಸಿ

16/05/2025 3:13 PM3 Mins Read

BREAKING : ಬೆಂಗಳೂರಲ್ಲಿ ರಸ್ತೆಯ ಮೇಲೆ ಬಿದ್ದ ಯುವತಿಯ ಮೇಲೆ ಹರಿದ ಕಾರು : ಸ್ಥಳದಲ್ಲೇ ವಿದ್ಯಾರ್ಥಿನಿ ಸಾವು!

16/05/2025 3:05 PM1 Min Read
Recent News

BREAKING: ಇಂದು ಸಂಜೆ 5 ಗಂಟೆಗೆ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ | Karnataka 2nd PUC Exam Results

16/05/2025 3:27 PM

ದುಷ್ಟ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸಬೇಕೇ? ಅಮಾವಾಸ್ಯೆಯಂದು ಈ ಶಕ್ತಿ ಶಾಲಿ ಮಂತ್ರ ಪಠಿಸಿ

16/05/2025 3:13 PM

BREAKING : ಬೆಂಗಳೂರಲ್ಲಿ ರಸ್ತೆಯ ಮೇಲೆ ಬಿದ್ದ ಯುವತಿಯ ಮೇಲೆ ಹರಿದ ಕಾರು : ಸ್ಥಳದಲ್ಲೇ ವಿದ್ಯಾರ್ಥಿನಿ ಸಾವು!

16/05/2025 3:05 PM

ಕೇಂದ್ರ ಸಚಿವ HDK ಭೇಟಿಯಾದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ: ಕರ್ನಾಟಕಕ್ಕೆ ಎಲೆಕ್ಟ್ರಿಕ್ ಬಸ್ ಹಂಚಿಕೆಗೆ ಮನವಿ

16/05/2025 2:59 PM
State News
KARNATAKA

BREAKING: ಇಂದು ಸಂಜೆ 5 ಗಂಟೆಗೆ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ | Karnataka 2nd PUC Exam Results

By kannadanewsnow0916/05/2025 3:27 PM KARNATAKA 1 Min Read

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿತ್ತು. ಈ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ-2 ( Second PUC Exam-2)…

ದುಷ್ಟ ಶಕ್ತಿಗಳಿಂದ ನಿಮ್ಮನ್ನು ರಕ್ಷಿಸಬೇಕೇ? ಅಮಾವಾಸ್ಯೆಯಂದು ಈ ಶಕ್ತಿ ಶಾಲಿ ಮಂತ್ರ ಪಠಿಸಿ

16/05/2025 3:13 PM

BREAKING : ಬೆಂಗಳೂರಲ್ಲಿ ರಸ್ತೆಯ ಮೇಲೆ ಬಿದ್ದ ಯುವತಿಯ ಮೇಲೆ ಹರಿದ ಕಾರು : ಸ್ಥಳದಲ್ಲೇ ವಿದ್ಯಾರ್ಥಿನಿ ಸಾವು!

16/05/2025 3:05 PM

ಕೇಂದ್ರ ಸಚಿವ HDK ಭೇಟಿಯಾದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ: ಕರ್ನಾಟಕಕ್ಕೆ ಎಲೆಕ್ಟ್ರಿಕ್ ಬಸ್ ಹಂಚಿಕೆಗೆ ಮನವಿ

16/05/2025 2:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.