Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ರಾಜ್ಯದ ಹಲವು ಕಡೆ ಭಕ್ತರಿಂದ ಭುಗಿಲೆದ್ದ ಪ್ರತಿಭಟನೆ.!

11/08/2025 1:43 PM
Those who use gas geysers at home, beware: Man dies of suffocation due to gas leak

ALERT : ಮನೆಯಲ್ಲಿ `ಗ್ಯಾಸ್ ಗೀಸರ್’ ಬಳಸುವವರೇ ಎಚ್ಚರ : ಅನಿಲ ಸೋರಿಕೆಯಿಂದ ಉಸಿರುಗಟ್ಟಿ ವ್ಯಕ್ತಿ ಸಾವು!

11/08/2025 1:40 PM

BREAKING : ಬೆಳಗಾವಿಯಲ್ಲಿ ಅಮಾನವೀಯ ಘಟನೆ : ಯುವತಿ ಚುಡಾಯಿಸಿದಕ್ಕೆ ಮರಕ್ಕೆ ಕಟ್ಟಿ ಹಾಕಿ ಯುವಕನ ಮೇಲೆ ಹಲ್ಲೆ!

11/08/2025 1:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ವಕ್ಫ್ ಹಿಂಸೆ’ಗೆ ಇನ್ನೆಷ್ಟು ಬಲಿ ಬೇಕು ‘ಸಿದ್ಧರಾಮಯ್ಯ’ನವರೇ.?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ
KARNATAKA

‘ವಕ್ಫ್ ಹಿಂಸೆ’ಗೆ ಇನ್ನೆಷ್ಟು ಬಲಿ ಬೇಕು ‘ಸಿದ್ಧರಾಮಯ್ಯ’ನವರೇ.?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ

By kannadanewsnow0909/11/2024 3:26 PM

ಬೆಂಗಳೂರು: ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು ಸಿದ್ಧರಾಮಯ್ಯನವರೇ ಎಂಬುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಶ್ನಿಸಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ವಕ್ಫ್ ಮಂಡಳಿಯ ಭೂಕಳ್ಳತನದ ಮಾಫಿಯಾಗೆ ಬೇಸತ್ತು ಈ ಹಿಂದೆ ಹಾನಗಲ್ ತಾಲೂಕಿನ ಹರನಗಿರಿಯಲ್ಲಿ ಓರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. 1964 ರಿಂದ ತಮ್ಮದೇ ಹೆಸರಿನಲ್ಲಿದ್ದ ಜಮೀನನ್ನು 2015 ರಲ್ಲಿ ಕೆಲ ಸಮಾಜಘಾತುಕರು ವಕ್ಫ್ ನಿಯಮದ ಪ್ರಕಾರ ಸಂಪೂರ್ಣ ಜಮೀನು ತಮ್ಮದಾಗಿಸಿಕೊಂಡು ಬೆಳೆದು ನಿಂತಿದ್ದ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡಿ ಬಡ ರೈತನ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನು ಬಹಿರಂಗಪಡಿಸಿದ ಮಾಧ್ಯಮದ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ಕೇಸ್ ದಾಖಲಿಸುತ್ತದೆ. ಇದರ ಕುರಿತು ಟ್ವೀಟ್ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಅವರ ಮೇಲೂ FIR ದಾಖಲಾಗಿದೆ ಎಂದಿದ್ದಾರೆ.

ಈ ಘಟನೆಯ ಸಂಪೂರ್ಣ ಮಾಹಿತಿ ಪಡೆಯಲು ಇಂದು ಸಂಸದರಾದ ಗೋವಿಂದ ಕಾರಜೋಳ ಅವರೊಂದಿಗೆ ಬಡರೈತನ ಮನೆಗೆ ಭೇಟಿ ನೀಡಿ ಅವರಿಂದಲೇ ಮಾಹಿತಿ ಪಡೆದೆನು. ಮೃತ ಯುವಕನ ತಂದೆ ತಾಯಿ ಮತ್ತು ಮನೆಯವರಿಗೆ ಸಾಂತ್ವಾನ ಹೇಳಿ, ಈ ಘಟನೆಗೆ ನ್ಯಾಯಾಲಯದಲ್ಲಿ ಇರುವ ಅವಕಾಶವನ್ನು ಪರಿಶೀಲಿಸಿ ಆ ಮೂಲಕ ನ್ಯಾಯ ಒದಗಿಸಲು ಭಾರತೀಯ ಜನತಾ ಪಕ್ಷದ ವತಿಯಿಂದ ಜವಾಬ್ದಾರಿ ಹೊತ್ತಿದ್ದೇನೆ. ಇಲ್ಲಿ ಮತ್ತೋರ್ವ ಅಲ್ಪಸಂಖ್ಯಾತ ಬಡ ರೈತನ ಜಮೀನನ್ನು ಕೂಡ ವಕ್ಫ್ ಕಬಳಿಸಿದೆ ಎಂಬುದು ಗೊತ್ತಾಗಿದೆ ಎಂದು ಹೇಳಿದ್ದಾರೆ.

ನಾವು ರೈತರ ಪರವಾಗಿ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧರಿದ್ದೇವೆ. ವಕ್ಫ್ ಹೆಸರಿನಲ್ಲಿ ಬಡವರ ಜಮೀನು ಕಸಿದುಕೊಳ್ಳುವ ಯಾವುದೇ ಕ್ರಮವನ್ನು ನಾವು ಒಪ್ಪುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ವಕ್ಫ್ ಹೆಸರಿನಲ್ಲಿ ಬಡವರಿಗೆ ಮತ್ತು ಹಿಂದೂಗಳಿಗೆ ನೋಟೀಸ್ ನೀಡದಂತೆ ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತ ಆದೇಶ ಹೊರಡಿಸುವಂತೆ ಆಗ್ರಹಿಸಿದ್ದಾರೆ.

ಇಂದು ನನ್ನೊಂದಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಮುರುಗೇಶ್ ನಿರಾಣಿ, ಸಂಸದರಾದಂತ ಡಾ.ಜಿಎಂ ಸಿದ್ದೇಶ್ವರ್, ಶಾಸಕರಾದಂತ ಎನ್ ರವಿಕುಮಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಹೇಳಿದ್ದಾರೆ.

ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು @siddaramaiah ನವರೇ?

ವಕ್ಫ್ ಮಂಡಳಿಯ ಭೂಕಳ್ಳತನದ ಮಾಫಿಯಾಗೆ ಬೇಸತ್ತು ಈ ಹಿಂದೆ ಹಾನಗಲ್ ತಾಲೂಕಿನ ಹರನಗಿರಿಯಲ್ಲಿ ಓರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. 1964 ರಿಂದ ತಮ್ಮದೇ ಹೆಸರಿನಲ್ಲಿದ್ದ ಜಮೀನನ್ನು 2015 ರಲ್ಲಿ ಕೆಲ ಸಮಾಜಘಾತುಕರು ವಕ್ಫ್ ನಿಯಮದ ಪ್ರಕಾರ ಸಂಪೂರ್ಣ ಜಮೀನು ತಮ್ಮದಾಗಿಸಿಕೊಂಡು… pic.twitter.com/fgTY8SI78C

— Pralhad Joshi (@JoshiPralhad) November 9, 2024

ವಿಧಾನಸಭಾ ಉಪ ಚುನಾವಣೆ 3 ಕ್ಷೇತ್ರಗಳಲ್ಲೂ ‘NDA ಅಭ್ಯರ್ಥಿ’ಗಳು ಗೆಲುವು: ಬಿ.ಎಸ್.ಯಡಿಯೂರಪ್ಪ ವಿಶ್ವಾಸ

BREAKING: ನಾಳೆ ಮಂಡ್ಯದ KRS ಡ್ಯಾಂ ಬಳಿ ನಡೆಯಬೇಕಿದ್ದ ‘ಸೀ ಪ್ಲೇನ್ ಪ್ರಾಯೋಗಿಕ ಹಾರಾಟ’ ಮುಂದೂಡಿಕೆ | Sea Plane Demonstration

Share. Facebook Twitter LinkedIn WhatsApp Email

Related Posts

BREAKING: ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ರಾಜ್ಯದ ಹಲವು ಕಡೆ ಭಕ್ತರಿಂದ ಭುಗಿಲೆದ್ದ ಪ್ರತಿಭಟನೆ.!

11/08/2025 1:43 PM1 Min Read
Those who use gas geysers at home, beware: Man dies of suffocation due to gas leak

ALERT : ಮನೆಯಲ್ಲಿ `ಗ್ಯಾಸ್ ಗೀಸರ್’ ಬಳಸುವವರೇ ಎಚ್ಚರ : ಅನಿಲ ಸೋರಿಕೆಯಿಂದ ಉಸಿರುಗಟ್ಟಿ ವ್ಯಕ್ತಿ ಸಾವು!

11/08/2025 1:40 PM1 Min Read

BREAKING : ಬೆಳಗಾವಿಯಲ್ಲಿ ಅಮಾನವೀಯ ಘಟನೆ : ಯುವತಿ ಚುಡಾಯಿಸಿದಕ್ಕೆ ಮರಕ್ಕೆ ಕಟ್ಟಿ ಹಾಕಿ ಯುವಕನ ಮೇಲೆ ಹಲ್ಲೆ!

11/08/2025 1:38 PM1 Min Read
Recent News

BREAKING: ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ರಾಜ್ಯದ ಹಲವು ಕಡೆ ಭಕ್ತರಿಂದ ಭುಗಿಲೆದ್ದ ಪ್ರತಿಭಟನೆ.!

11/08/2025 1:43 PM
Those who use gas geysers at home, beware: Man dies of suffocation due to gas leak

ALERT : ಮನೆಯಲ್ಲಿ `ಗ್ಯಾಸ್ ಗೀಸರ್’ ಬಳಸುವವರೇ ಎಚ್ಚರ : ಅನಿಲ ಸೋರಿಕೆಯಿಂದ ಉಸಿರುಗಟ್ಟಿ ವ್ಯಕ್ತಿ ಸಾವು!

11/08/2025 1:40 PM

BREAKING : ಬೆಳಗಾವಿಯಲ್ಲಿ ಅಮಾನವೀಯ ಘಟನೆ : ಯುವತಿ ಚುಡಾಯಿಸಿದಕ್ಕೆ ಮರಕ್ಕೆ ಕಟ್ಟಿ ಹಾಕಿ ಯುವಕನ ಮೇಲೆ ಹಲ್ಲೆ!

11/08/2025 1:38 PM

BREAKING : ಬೀದಿ ನಾಯಿಗಳಿಂದ ತೊಂದರೆಗೆ ದೊಡ್ಡ ಪರಿಹಾರ : ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ಸುಪ್ರೀಂಕೋರ್ಟ್

11/08/2025 1:38 PM
State News
KARNATAKA

BREAKING: ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ರಾಜ್ಯದ ಹಲವು ಕಡೆ ಭಕ್ತರಿಂದ ಭುಗಿಲೆದ್ದ ಪ್ರತಿಭಟನೆ.!

By kannadanewsnow5711/08/2025 1:43 PM KARNATAKA 1 Min Read

ಬೆಂಗಳೂರು: ಧರ್ಮಸ್ಥಳದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ…

Those who use gas geysers at home, beware: Man dies of suffocation due to gas leak

ALERT : ಮನೆಯಲ್ಲಿ `ಗ್ಯಾಸ್ ಗೀಸರ್’ ಬಳಸುವವರೇ ಎಚ್ಚರ : ಅನಿಲ ಸೋರಿಕೆಯಿಂದ ಉಸಿರುಗಟ್ಟಿ ವ್ಯಕ್ತಿ ಸಾವು!

11/08/2025 1:40 PM

BREAKING : ಬೆಳಗಾವಿಯಲ್ಲಿ ಅಮಾನವೀಯ ಘಟನೆ : ಯುವತಿ ಚುಡಾಯಿಸಿದಕ್ಕೆ ಮರಕ್ಕೆ ಕಟ್ಟಿ ಹಾಕಿ ಯುವಕನ ಮೇಲೆ ಹಲ್ಲೆ!

11/08/2025 1:38 PM

BREAKING : ಸಂಸದ `ಡಾ.ಕೆ. ಸುಧಾಕರ್’ಗೆ ಬಂಧನ ಭೀತಿ : ಇಂದು ಮಧ್ಯಾಹ್ನ 2.30ಕ್ಕೆ ಹೈಕೋರ್ಟ್ ನಲ್ಲಿ ತುರ್ತು ಅರ್ಜಿ ವಿಚಾರಣೆ.!

11/08/2025 1:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.