ಬೆಳಗಾವಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿದ್ದಂತ ಕೂಲಿ ಕಾರ್ಮಿಕರ ಮೇಲೆ ಆಯಿಲ್ ಟ್ಯಾಂಕ್ ಹರಿದು ಉರುಳಿ ಬಿದ್ದ ಪರಿಣಾಮ, ಮೂವರು ಸಾವನ್ನಪ್ಪಿ, ಮತ್ತೆ ಮೂವರು ಗಾಯಗೊಂಡಿರುವಂತ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಇಟಗಿ ಕ್ರಾಸ್ ನಲ್ಲಿ ಇಂದು ಭೀಕರ ದುರ್ಘಟನೆ ಸಂಭವಿಸಿದೆ. ಟ್ಯಾಂಕರ್ ಹರಿದು ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಆಯಿಲ್ ಟ್ಯಾಂಕ್ ಹರಿದ ಪರಿಣಾಮ ಈ ದುರ್ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 4ರ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಕಲಬುರ್ಗಿಯ ವಡ್ಡರಗಲ್ಲಿ ನಿವಾಸಿ ರಾಮಚಂದ್ರ ಚಾಧವ್(45), ರಾಮಚಂದ್ರ ಪುತ್ರ ಮಹೇಶ್ ರಾಮಚಂದ್ರ ಜಾಧವ್ (18), ಶಿರೋಳಿ ನಿವಾಸಿ ರಾಮಣ್ಣ ಆಲಿಯಾಸ್ ರಮೇಶ್ (38) ಎಂಬುವರು ಸಾವನ್ನಪ್ಪಿದ್ದಾರೆ.
ಇನ್ನೂ ಈ ಅಪಘಾತದಲ್ಲಿ ರಾಮಣ್ಣ ಆಲಿಯಾಸ್ ರಮೇಶ್ ಪತ್ನಿ ಭೀಮವ್ವನವರ ಎರಡು ಕಾಲ್ ಕಟ್ ಆಗಿದೆ. ರಾಮಚಂದ್ರ ಜಾಧವ್ ಪತ್ನಿ ಲಕ್ಷ್ಮೀ ಭಾಯಿಗೂ ಗಂಭೀರ ಗಾಯವಾಗಿದೆ. ಆಯಿಲ್ ಟ್ಯಾಂಕರ್ ಚಾಲಕ ದಿನೇಶ್ ಶೆಟ್ಟಿಗೂ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೂಲಿ ಕೆಲಸಕ್ಕೆಂದು ಕಲಬುರ್ಗಿ ಜಿಲ್ಲೆಯಿಂದ ಬಂದಿದ್ದ ಕಾರ್ಮಿಕರು. ಎನ್ ಹೆಚ್ ಎ ಐ ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಆಯಿಲ್ ಟ್ಯಾಂಕ್ ಉರುಳಿ ಬಿದ್ದಿರುವ ಕಾರಣ ಈ ದುರ್ಘಟನೆ ಸಂಭವಿಸಿದೆ.
ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ 2 ಲಕ್ಷ ರೂ. ಸಬ್ಸಿಡಿ ಸಾಲ.!