ಚಿಕ್ಕಬಳ್ಳಾಪುರ: ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ), ಸಚಿವ ಸುಧಾಕರ್ ( Minister Sudhakar ) ವಿರುದ್ಧ ಇಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಬಾಯಿ ಮುಚ್ಚಿಕೊಂಡು ಇರದೇ ಇದ್ದರೇ.. ನಿನ್ನ ಎಲ್ಲಾ ಕತೆಯನ್ನು ಬಿಚ್ಚಿಡೋದಾಗಿ ಖಡಕ್ ಎಚ್ಚರಿಕೆ ಕೂಡ ನೀಡಿದ್ದಾರೆ.

ಮೊದಲು ವಿಧಾನಸೌಧ 3ನೇ ಮಹಡಿ ಸ್ವಚ್ಚ ಮಾಡಿ- ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ವಿಪಕ್ಷ ನಾಯಕ ಸಿದ್ಧರಾಮಯ್ಯ, ಸುಧಾಕರ್ ಈ ಹಿಂದೆ ಯಾವ ಪಕ್ಷದಲ್ಲಿ ಇದ್ದರು ಅಂತ ಎಲ್ಲರಿಗೂ ಗೊತ್ತಿದೆ. ಅವರಿಗೆ ಟಿಕೆಟ್ ಕೊಡಿಸಿದ್ದೇ ಚುನಾವಣೆಗೆ ನಿಲ್ಲೋದಕ್ಕೆ ನಾನು. ಅವರ ಇನ್ನೂ ಹಲವು ವಿಚಾರಗಳು ನನಗೆ ಗೊತ್ತು. ಈಗ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲ ಅಂದ್ರೇ ಎಲ್ಲಾ ಬಿಚ್ಚಿಡುತ್ತೇನೆ ಎಂದರು.

ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ

ನಾನು ಸಮಯ ಬಂದಾಗ ಸುಧಾಕರ್ ಬಗ್ಗೆ ಮಾತನಾಡುತ್ತೇನೆ. ಈಗ ಹೆಚ್ಚು ಏನೂ ಹೇಳುವುದಿಲ್ಲ. ಮುಂಬರುವಂತ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ( Karnataka Assembly Election-2023 ) ಕಾಂಗ್ರೆಸ್ ಪಕ್ಷದಿಂದ ( Congress Party ) ಸುಧಾಕರ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಹಾಕಲಿದ್ದೇವೆ. ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲಿದ್ದೇವೆ ಎಂಬುದಾಗಿ ಗುಡುಗಿದರು.

Share.
Exit mobile version