ಬೆಂಗಳೂರು: ರಾಜ್ಯ ಸರ್ಕಾರದಿಂದ 2026ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿ ಪ್ರಕಟಿಸಲಾಗಿದೆ. ಹಾಗಾದ್ರೇ 2026ನೇ ಸಾಲಿಗೆ ಮಂಜೂರಾದ ಸಾರ್ವತ್ರಿಕೆ ರಜಾ ದಿನಗಳು ಹಾಗೂ ಪರಿಮಿತ ರಜಾ ದಿನಗಳ ಅಧಿಕೃತ ಪಟ್ಟಿಯನ್ನು ಮುಂದಿದೆ ನೋಡಿ..
ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅಧಿಸೂಚನೆ ಹೊರಡಿಸಿದ್ದಾರೆ. 2026ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಸಾರ್ವಜನಿಕರಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ ಎಂದಿದ್ದಾರೆ.
ಹೀಗಿದೆ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ
- ದಿನಾಂಕ 15-01-2026 ಗುರುವಾರ, ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
- ದಿನಾಂಕ 26-01-2026 ಸೋಮವಾರ, ಗಣರಾಜ್ಯೋತ್ಸವ
- ದಿನಾಂಕ 19-03-2026 ಗುರುವಾರ, ಯುಗಾದಿ ಹಬ್ಬ
- ದಿನಾಂಕ 21-03-2026 ಶನಿವಾರ, ಖುತುಬ್ ಎ ರಂಜಾನ್
- ದಿನಾಂಕ 31-03-2026 ಮಂಗಳವಾರ, ಮಹಾವೀರ ಜಯಂತಿ
- ದಿನಾಂಕ 03-04-2026 ಶುಕ್ರವಾರ, ಗುಡ್ ಪ್ರೈಡೆ
- ದಿನಾಂಕ 14-04-2026 ಮಂಗಳವಾರ, ಡಾ.ಬಿಆರ್ ಅಂಬೇಡ್ಕರ್ ಜಯಂತಿ
- ದಿನಾಂಕ 04-04-2026 ಸೋಮವಾರ, ಬಸವಜಯಂತಿ, ಅಕ್ಷಯ ತೃತೀಯ
- ದಿನಾಂಕ 01-05-206 ಶುಕ್ರವಾರ, ಕಾರ್ಮಿಕ ದಿನಾಚರಣೆ
- ದಿನಾಂಕ 28-05-2026 ಗುರುವಾರ, ಬಕ್ರೀದ್
- ದಿನಾಂಕ 26-06-2026 ಶುಕ್ರವಾರ, ಮೊಹರಂ ಕಡೆಯ ದಿನ
- ದಿನಾಂಕ 15-08-2026 ಶನಿವಾರ, ಸ್ವಾತಂತ್ರ್ಯ ದಿನಾಚರಣೆ
- ದಿನಾಂಕ 26-08-2026 ಬುಧವಾರ, ಈದ್ ಮಿಲಾದ್
- ದಿನಾಂಕ 14-09-2026 ಸೋಮವಾರ, ವರಸಿದ್ಧಿ ವಿನಾಯಕ ವ್ರತ
- ದಿನಾಂಕ 02-10-2026 ಶುಕ್ರವಾರ, ಗಾಂಧಿ ಜಯಂತಿ
- ದಿನಾಂಕ 20-10-2026 ಮಂಗಳವಾರ, ಮಹಾನವಮಿ, ಆಯುಧಪೂಜೆ
- ದಿನಾಂಕ 21-10-2026 ಬುಧವಾರ, ವಿಜಯದಶಮಿ
- ದಿನಾಂಕ 10-11-2026 ಮಂಗಳವಾರ, ಬಲಿಪಾಡ್ಯಮಿ, ದೀಪಾವಳಿ
- ದಿನಾಂಕ 27-11-2026 ಶುಕ್ರವಾರ, ಕನಕದಾಸ ಜಯಂತಿ
- ದಿನಾಂಕ 25-12-2026 ಶುಕ್ರವಾರ, ಕ್ರಿಸ್ ಮಸ್
1. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಮಹಾ ಶಿವರಾತ್ರಿ (15.02.2026), ಮಹರ್ಷಿ ವಾಲ್ಮೀಕಿ ಜಯಂತಿ (25.10.2026), ಕನ್ನಡ ರಾಜ್ಯೋತ್ಸವ (01.11.2026) ಹಾಗೂ ನರಕ ಚತುರ್ದಶಿ (08.11.2026) & ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (10.10.2026) ಈ ರಜೆ ಪಟ್ಟಿಯಲ್ಲಿ
ನಮೂದಿಸಿರುವುದಿಲ್ಲ.
2. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
3. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
4. ದಿನಾಂಕ:03.09.2026 (ಗುರುವಾರ) ಕೈಲ್ ಮೂಹೂರ್ತ, ದಿನಾಂಕ:18.10.2026 (ಭಾನುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:26.11.2026 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
5. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ರಜೆಗಳಿಗೆ ಅನ್ವಯಿಸಿದಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಪಕಟಿಸುವರು.
6. ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2026ನೇ ವರ್ಷದಲ್ಲಿ ಅಧಿಸೂಚನೆ-1ರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು ಎಂದಿದ್ದಾರೆ.

ಹೀಗಿದೆ 2026ನೇ ಸಾಲಿನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡಿರುವ ಪರಿಮಿತ ರಜಾ ದಿನಗಳ ಪಟ್ಟಿ
- ದಿನಾಂಕ 01-01-2026 ಗುರುವಾರ, ನೂತನ ವರ್ಷಾರಂಭ
- ದಿನಾಂಕ 27-01-2026 ಮಂಗಳವಾರ, ಮಧ್ವ ನವಮಿ
- ದಿನಾಂಕ 04-02-2026 ಬುಧವಾರ, ಷಬ್ ಎ ಬರಾತ್
- ದಿನಾಂಕ 02-03-2026 ಸೋಮವಾರ, ಹೋಳಿ ಹಬ್ಬ
- ದಿನಾಂಕ 17-03-2026 ಮಂಗಳವಾರ, ಷಬ್ ಎ ಖಾದರ್
- ದಿನಾಂಕ 20-03-2026 ಶುಕ್ರವಾರ, ಜುಮತ್ ಉಲ್ ವಿದಾ
- ದಿನಾಂಕ 23-03-2026 ಸೋಮವಾರ, ದೇವರ ದಾಸೀಮಯ್ಯ ಜಯಂತಿ
- ದಿನಾಂಕ 27-03-2026 ಶುಕ್ರವಾರ, ಶ್ರೀರಾಮ ನವಮಿ
- ದಿನಾಂಕ 04-04-2026 ಶನಿವಾರ, ಹೋಲಿ ಸ್ಯಾಟರ್ ಡೇ
- ದಿನಾಂಕ 21-04-2026 ಮಂಗಳವಾರ, ಶ್ರೀ ಶಂಕರಾಚಾರ್ಯ ಜಯಂತಿ
- ದಿನಾಂಕ 22-04-2026 ಬುಧವಾರ, ಶ್ರೀ ರಾಮಾನುಜಾಚಾರ್ಯ ಜಯಂತಿ
- ದಿನಾಂಕ 21-08-2026 ಶುಕ್ರವಾರ, ಶ್ರೀ ವರಮಹಾಲಕ್ಷ್ಮಿ ವ್ರತ
- ದಿನಾಂಕ 27-08-2026 ಗುರುವಾರ, ಯಜುರ್ ಉಪಕರ್ಮ
- ದಿನಾಂಕ 28-08-2026 ಶುಕ್ರವಾರ, ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ರಕ್ಷಾ ಬಂಧನ
- ದಿನಾಂಕ 04-09-2026 ಶುಕ್ರವಾರ, ಶ್ರೀಕೃಷ್ಣ ಜನ್ಮಾಷ್ಟಮಿ
- ದಿನಾಂಕ 08-09-2026 ಮಂಗಳವಾರ, ಕನ್ಯಾ ಮರಿಯಮ್ಮ ಜಯಂತಿ
- ದಿನಾಂಕ 17-09-2026 ಗುರುವಾರ, ವಿಶ್ವಕರ್ಮ ಜಯಂತಿ
- ದಿನಾಂಕ 25-09-2026 ಶುಕ್ರವಾರ, ಶ್ರೀ ಅನಂತಪದ್ಮನಾಭ ವ್ರತ
- ದಿನಾಂಕ 24-11-2026 ಮಂಗಳವಾರ, ಗುರು ನಾನಕ್ ಜಯಂತಿ
- ದಿನಾಂಕ 26-11-2026 ಗುರುವಾರ, ಹುತ್ತರಿ ಹಬ್ಬ
- ದಿನಾಂಕ 24-12-2026 ಗುರುವಾರ ಕ್ರಿಸ್ ಮಸ್ ಈವ್
ಈ ಕೆಳಕಂಡ ರಜೆಗಳನ್ನು ನಮೂದಿಸಿರುವುದಿಲ್ಲ
ದಿನಾಂಕ:14.04.2026ರ ಮಂಗಳವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯ ಸಾರ್ವತ್ರಿಕ ರಜೆಯಂದು ಬರುವ ಸೌರಮಾನ ಯುಗಾದಿ.
ದಿನಾಂಕ:01.05.2026ರ ಶುಕ್ರವಾರ ಕಾರ್ಮಿಕ ದಿನಾಚರಣೆಯ ಸಾರ್ವತ್ರಿಕ ರಜೆಯಂದು ಬರುವ ಬುದ್ಧ ಪೂರ್ಣಿಮ.
ದಿನಾಂಕ:26.08.2026ರ ಬುಧವಾರ ಈದ್-ಮಿಲಾದ್ ಸಾರ್ವತ್ರಿಕ ರಜೆಯಂದು ಬರುವ ಋಗ್ ಉಪಕರ್ಮ/ತಿರುಓಣಂ,
ದಿನಾಂಕ:14.09.2026ರ ಸೋಮವಾರ ವರಸಿದ್ಧಿ ವಿನಾಯಕ ವ್ರತ ಸಾರ್ವತ್ರಿಕ ರಜೆಯಂದು ಬರುವ ಸ್ವರ್ಣಗೌರಿ ವ್ರತ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

SHOCKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಕೃತ್ಯ: ಕಟ್ಟಡ ಮೇಲಿಂದ ತಳ್ಳಿ ಪತಿಯನ್ನೇ ಕೊಂದ ಪಾಪಿ ಪತ್ನಿ
ಶಿವಮೊಗ್ಗ: ಅಲ್ಪಸಂಖ್ಯಾತ ಬಂಧುಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು- ಶಾಸಕ ಗೋಪಾಲಕೃಷ್ಣ ಬೇಳೂರು








