Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : `ಆಪರೇಷನ್ ಸಿಂಧೂರ್’ ಮೂಲಕ 72 ಗಂಟೆಗಳಲ್ಲಿ ಪಾಕಿಸ್ತಾನದ 40 ಸೈನಿಕರ ಹತ್ಯೆ, 9 ಉಗ್ರ ನೆಲೆಗಳು ನಾಶ.!

12/05/2025 8:41 AM

ಉದ್ಯೋಗವಾರ್ತೆ : ‘IDBI’ ಬ್ಯಾಂಕ್ ನಲ್ಲಿ 675 ಹುದ್ದೆಗಳಿಗೆ ಅರ್ಜಿ ಆಹ್ವಾನ | IDBI Bank Recruitment 2025

12/05/2025 8:37 AM

BIG NEWS : `ಆಪರೇಷನ್ ಸಿಂಧೂರ್ ಮೂಲಕ ಭಾರತ ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದೆ : `DGMO’ ಪತ್ರಿಕಾಗೋಷ್ಠಿಯ 15 ಪ್ರಮುಖ ಅಂಶಗಳು ಹೀಗಿವೆ | Operation Sindoor

12/05/2025 8:29 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕರ್ನಾಟಕದಲ್ಲಿ 2024ರ ಮುಂಗಾರು ಮುನ್ಸೂಚನೆ ಹಾಗೂ ಕೃಷಿ ಸಿದ್ದತೆ ವಿವರ ಹೀಗಿದೆ
KARNATAKA

ಕರ್ನಾಟಕದಲ್ಲಿ 2024ರ ಮುಂಗಾರು ಮುನ್ಸೂಚನೆ ಹಾಗೂ ಕೃಷಿ ಸಿದ್ದತೆ ವಿವರ ಹೀಗಿದೆ

By kannadanewsnow0723/04/2024 4:52 PM

ಬೆಂಗಳೂರು: ಭಾರತ ಹವಾಮಾನ ಇಲಾಖೆ 2024ರ ಹವಾಮಾನ ಮುನ್ಸೂಚನೆಯನ್ನು ಪ್ರಕಟಿಸಿದ್ದು, ಈ ಬಾರಿ ಉತ್ತಮ ಮುಂಗಾರಿನ ಸಂಭವನೀಯತೆಯನ್ನು ವಿವರಿಸಿದೆ. ಈ ಮುನ್ಸೂಚನೆಯಂತೆ ಭಾರತದಲ್ಲಿ ಈ ವರ್ಷದ ಮುಂಗಾರು ಅವಧಿಯಲ್ಲಿ ದೀರ್ಘಾವಧಿ (1971 ರಿಂದ 2020) ಸರಾಸರಿ ಮಳೆ (87 ಸೆಂ.ಮೀ.) ಅನುಸಾರ ಮಳೆ ಪ್ರಮಾಣದಲ್ಲಿ ಶೇ.6 ರಷ್ಟು ಹೆಚ್ಚಳದೊಂದಿಗೆ ವಾಡಿಕೆಯ ಶೇ.106 ರಷ್ಟು ಮಳೆಯಾಗುವ ಸಾದ್ಯತೆಯಿದೆ. ನಮ್ಮ ರಾಜ್ಯದಲ್ಲಿ 2024ರ ಮುಂಗಾರು (ಜೂನ್-ಸೆಪ್ಟೆಂಬರ್), ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸೂಚನೆ ನೀಡಿದೆ.

ಈ ನಿಟ್ಟಿನಲ್ಲಿ, ಕೃಷಿ ಉತ್ಫಾದನೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಏಪ್ರಿಲ್ ಕೊನೆ ಹಾಗೂ ಮೇ ತಿಂಗಳಲ್ಲಿ ಮಳೆ ಮುನ್ಸೂಚನೆಯಿರುವುದರಿಂದ ಮಾಗಿ ಉಳುಮೆ ಕೈಗೊಂಡು ಮಣ್ಣು ಮತ್ತು ನೀರು ಸಂರಕ್ಷಣೆಗೆ ಒತ್ತು ನೀಡಬೇಕು. ಮಳೆನೀರಿನ ಸಂರಕ್ಷಣೆಗೆ ಬದು ಹಾಗೂ ಕೃಷಿ ಹೊಂಡಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು. ಎರಡನೆ ಅಥವಾ ಮೂರನೆ ಮಳೆ ನಂತರ, ಭೂಮಿ ಹದಗೊಳಿಸಿ ಹಸಿರೆಲೆ ಗೊಬ್ಬರಗಳಾದ ಅಪ್‍ಸೆಣಬು, ಚಂಬೆ, ಹುರುಳಿಯನ್ನು 45-60 ದಿನಗಳಲ್ಲಿ ಹಸಿರೆಲೆ ಗೊಬ್ಬರವಾಗಿ ಅಥವಾ ಹಸಿಕಾಯಿಗೆ ಸೂಕ್ತ ದ್ವಿದಳ ಬೆಳೆಗಳಾದ ಅವರೆ, ಅಲಸಂದೆಯನ್ನು ಬಿತ್ತಿ ಹಸಿಕಾಯಿ ಕಿತ್ತ ನಂತರ ಸೊಪ್ಪನ್ನು ಭೂಮಿಗೆ ಸೇರಿಸುವುದು. ಇದರಿಂದ ಮಣ್ಣಿನ ಫಲವತ್ತೆತೆ ಹೆಚ್ಚುವುದಲ್ಲದೆ, ಮಣ್ಣಿನಲ್ಲಿ ತೇವಾಂಶವನ್ನು ಹೆಚ್ಚಿನ ಕಾಲ ಸಂಗ್ರಹಿಸಲು ಸಾಧ್ಯವಾಗುತ್ತದೆ.
ಸಾವಯವ ಗೊಬ್ಬರಗಳು ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ, ಮಣ್ಣಿಗೆ ಕನಿಷ್ಟ ಶಿಫಾರಿತ ಕೊಟ್ಟಿಗೆ ಗೊಬ್ಬರ / ಕಾಂಪೆÇೀಸ್ಟ್ ಸೇರಿಸಲು ಕ್ರಮಕೈಗೊಳ್ಳಬೇಕು. ಕೊಟ್ಟಿಗೆ ಗೊಬ್ಬರದ ಲಭ್ಯತೆ ಕಡಿಮೆಯಿದ್ದಲ್ಲಿ ಅಥವಾ ಹೆಚ್ಚಿನ ಸಾವಯವ ಅಂಶ ಸೇರಿಸುವ ನಿಟ್ಟಿನಲ್ಲಿ, ವಿವಿಧ ಮರಗಳ ಹಸಿರು ಸೊಪ್ಪನ್ನು ಅಥವಾ ರಸ್ತೆ ಬದಿಯಲ್ಲಿನ ಕಳೆಗಳನ್ನು ಹೂವಾಡುವ ಹಂತಕ್ಕಿಂತ ಮುಂಚಿತವಾಗಿ ಮಣ್ಣಿಗೆ ಸೇರಿಸಬಹುದು. ಕೆರೆಗೋಡನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಕಳೆದ ಬಾರಿಯ ಮಳೆ ಕೊರತೆ ಹಾಗೂ ಕುಸಿದಿರುವ ಅಂತರ್ಜಲ ಮಟ್ಟದಿಂದ, ಈ ಬಾರಿ ಮಣ್ಣಿನಲ್ಲಿ ತೇವಾಂಶದ ಕೊರತೆಯಿದ್ದು ಕೆರೆಕಟ್ಟೆ ಹಾಗೂ ಅಣೆಕಟ್ಟುಗಳಿಗೆ ನೀರಿನ ಆಗಮನ ವಿಳಂಬವಾಗುವ ಸಾಧ್ಯತೆಯಿದ್ದು, ಈ ಪ್ರದೇಶದಲ್ಲಿ ಬೆಳೆಗಳ ಮಧ್ಯಮವಧಿ ಹಾಗೂ ಅಲ್ಫಾವಧಿ ತಳಿಗಳ ಬಿತ್ತನೆಗೆ ಅವಶ್ಯಕವಾದ ಬಿತ್ತನೆಬೀಜ ಸಿದ್ಧಪಡಿಸಿಕೊಳ್ಳಬೇಕು.

ಮಳೆಯಾಶ್ರಿತ ಪ್ರದೇಶದಲ್ಲಿ ವಿವಿಧ ಬೆಳೆಗಳ ಸುಧಾರಿತ ಮಧ್ಯಮಾವಧಿ ಹಾಗೂ ಅಲ್ಫಾವಧಿ ತಳಿಗಳ ಬಿತ್ತನೆಯನ್ನು ಸಂಗ್ರಹಿಸಿಕೊಳ್ಳಬೇಕು. ಏಪ್ರಿಲ್ ಕೊನೆಯ ಭಾಗದಲ್ಲಿ ಹತ್ತಿ ಬಿತ್ತಬಹುದು. ಮೇ ತಿಂಗಳಿನ ಬಿತ್ತನೆಗೆ ತೊಗರಿ, ಹರಳು (ಔಡಲ), ಎಳ್ಳು, ಹೆಸರು, ಅವರೆ, ಅಲಸಂದೆ, ಆಲೂಗಡ್ಡೆ ಉತ್ತಮ. ಜೂನ್ ತಿಂಗಳಿನ ಬಿತ್ತನೆಗೆ ಮುಸುಕಿನ ಜೋಳ, ನೆಲಗಡಲೆ, ತೊಗರಿ ಉತ್ತಮ. ಜುಲೈ ತಿಂಗಳಿನ ಬಿತ್ತನೆಗೆ ನೆಲಗಡಲೆ, ರಾಗಿ (ದೀರ್ಘಾವÀಧಿ), ಸಿರಿಧಾನ್ಯಗಳಾದ ನವಣೆ, ಹಾರಕ, ಊದಲು, ಕೊರಲೆ ಉತ್ತಮ. ಆಗಸ್ಟ್ ತಿಂಗಳಲ್ಲಿ ರಾಗಿ (ಮಧ್ಯಮಾವಧಿ / ಅಲ್ಫಾವಧಿ), ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಬರಗು, ಕೊರಲೆ, ಅವರೆ, ಅಲಸಂದೆ, ಸೂರ್ಯಕಾಂತಿ, ಹುಚ್ಚೆಳ್ಳು ಉತ್ತಮ. ಸೆಪ್ಟೆಂಬರ್ ತಿಂಗಳಲ್ಲಿ ಸಿರಿಧಾನ್ಯಗಳಾದ ಬರಗು, ಸಾಮೆ, ಹುರುಳಿ, ಹೆಚ್ಚೆಳ್ಳು ಉತ್ತಮ.ಮೇವಿನ ಬೆಳೆಗಳಾದ ಮೇವಿನ ಮುಸುಕಿನ ಜೋಳ, ಮೇವಿನ ಜೋಳ, ಮೇವಿನ ಸಜ್ಜೆಯನ್ನು ಮೇವಿನ ಅವಶ್ಯಕತೆಗನುಗುಣವಾಗಿ ಮೇ ಯಿಂದ ಸೆಪ್ಟೆಂಬರ್ ವರೆಗೆಯಾವಾಗಲಾದರೂ ಬಿತ್ತಬಹುದು.

ಬಹುವಾರ್ಷಿಕ ಮೇವಿನ ಬೆಳೆಗಳಾದ ನೇಪಿಯರ್ ಹುಲ್ಲು ಅಥವಾ ಮರಗಳಾದ ಹೆಬ್ಬೇವು, ಡಾಲ್‍ಬರ್ಜಿಯಾ, ದಶರಥ ಹುಲ್ಲು, ಜಾಲಿ ಇತ್ಯಾದಿಗಳನ್ನು ಬದುಗಳ ಮೇಲೆ ಅಥವಾ ಹೊಲದ ಸುತ್ತ ಬೆಳೆಯುವುದರಿಂದ ಬರ ಪರಿಸ್ಥಿತಿಯಲ್ಲಿ ರಾಸುಗಳಿಗೆ ಮೇವು ಪಡೆಯಬಹುದು. ಮಳೆಯಾಶ್ರಿತ ಪ್ರದೇಶಗಳಲ್ಲಿ ವಿವಿಧ ಕೃಷಿ ಚಟುವಟಿಕೆಗಳಿಗೆ ದೊರೆಯುವ ಸಮಯ ಅತ್ಯಲ್ಪ. ಈ ನಿಟ್ಟಿನಲ್ಲಿ ನಿಧಾನಗತಿಯ ಬೇಸಾಯ ಕ್ರಮದಿಂದ ಸೂಕ್ತ ಹದ ದೊರೆಯದೆ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆದ್ಧರಿಂದ ಕೃಷಿ ಚಟುವಟಿಕೆಗಳನ್ನು ಹದವರಿತು, ಕಡಿಮೆ ಸಮಯದಲ್ಲಿ ನಿರ್ವಹಿಸಬೇಕು. ಇದಕ್ಕಾಗಿ ಅನೇಕ ರಾಸು ಮತ್ತು ಟ್ರಾಕ್ಟರ್ ಚಾಲಿತ ಯಂತ್ರಗಳಾದ ಎಂ.ಬಿ ನೇಗಿಲು, ಕೂರಿಗೆ, ಬಹು ಸಾಲು ತೆಗೆಯುವ ಯಂತ್ರ, ಕಳೆ ತೆಗೆಯುವ ಸಾಧನಗಳು, ಬದು ನಿರ್ಮಾಪಕ, ರೋಟವೇಟರ್, ಗುಂಡಿ ತೆಗೆಯುವ ಯಂತ್ರ, ಇತ್ಯಾದಿಗಳನ್ನು ಸಿದ್ದಪಡಿಸಿಕೊಳ್ಳುವುದರಿಂದ ಕಡಿಮೆ ಸಮಯದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಈ ಯಂತ್ರಗಳು ರೈತರಿಗೆ ಖರೀದಿಸಲು ಸಾಧ್ಯವಿಲ್ಲದಿದ್ದಲ್ಲಿ, ಬಾಡಿಗೆ ಕೇಂದ್ರಗಳಲ್ಲಿ ಅಥವಾ ಖಾಸಗಿಯವರಲ್ಲಿ ಬಾಡಿಗೆಗೆ ಪಡೆಯಬಹುದು.

Here is the forecast for monsoon 2024 in Karnataka and the preparedness of agriculture
Share. Facebook Twitter LinkedIn WhatsApp Email

Related Posts

ALERT : ಪಾಕಿಸ್ತಾನದಿಂದ ಸೈಬರ್ ದಾಳಿ ಸಾಧ್ಯತೆ : ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರಿಂದ ಮಹತ್ವದ ಪ್ರಕಟಣೆ.!

12/05/2025 7:16 AM1 Min Read

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು.!

12/05/2025 7:09 AM1 Min Read

BREAKING : ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ `ರಾಕೇಶ್ ಪೂಜಾರಿ’ ನಿಧನ | Rakesh Poojary passes away

12/05/2025 6:59 AM1 Min Read
Recent News

BIG NEWS : `ಆಪರೇಷನ್ ಸಿಂಧೂರ್’ ಮೂಲಕ 72 ಗಂಟೆಗಳಲ್ಲಿ ಪಾಕಿಸ್ತಾನದ 40 ಸೈನಿಕರ ಹತ್ಯೆ, 9 ಉಗ್ರ ನೆಲೆಗಳು ನಾಶ.!

12/05/2025 8:41 AM

ಉದ್ಯೋಗವಾರ್ತೆ : ‘IDBI’ ಬ್ಯಾಂಕ್ ನಲ್ಲಿ 675 ಹುದ್ದೆಗಳಿಗೆ ಅರ್ಜಿ ಆಹ್ವಾನ | IDBI Bank Recruitment 2025

12/05/2025 8:37 AM

BIG NEWS : `ಆಪರೇಷನ್ ಸಿಂಧೂರ್ ಮೂಲಕ ಭಾರತ ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದೆ : `DGMO’ ಪತ್ರಿಕಾಗೋಷ್ಠಿಯ 15 ಪ್ರಮುಖ ಅಂಶಗಳು ಹೀಗಿವೆ | Operation Sindoor

12/05/2025 8:29 AM

ಬಾರ್ಮರ್ನಲ್ಲಿ ಡ್ರೋನ್ ಚಟುವಟಿಕೆ ಪತ್ತೆ, ನಿವಾಸಿಗಳಿಗೆ ಮನೆಯೊಳಗೆ ಇರಲು ಸೂಚನೆ | India – Pak Tensions

12/05/2025 8:25 AM
State News
KARNATAKA

ALERT : ಪಾಕಿಸ್ತಾನದಿಂದ ಸೈಬರ್ ದಾಳಿ ಸಾಧ್ಯತೆ : ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರಿಂದ ಮಹತ್ವದ ಪ್ರಕಟಣೆ.!

By kannadanewsnow5712/05/2025 7:16 AM KARNATAKA 1 Min Read

ಬೆಂಗಳೂರು : ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಪಾಕ್ ಸೈಬರ್ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್…

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು.!

12/05/2025 7:09 AM

BREAKING : ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ `ರಾಕೇಶ್ ಪೂಜಾರಿ’ ನಿಧನ | Rakesh Poojary passes away

12/05/2025 6:59 AM

BREAKING : ಲೋ ಬಿಪಿಯಿಂದ ಕಾಮಿಡಿ ಕಿಲಾಡಿಗಳು ಖ್ಯಾತಿಯ `ರಾಕೇಶ್ ಪೂಜಾರಿ’ ಸಾವು.!

12/05/2025 6:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.