Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಇನ್ನೊಂದು ವಾರದಲ್ಲಿ ಕೆಂಪೇಗೌಡರ ಸ್ಮಾರಕ ಭವನಕ್ಕೆ ಭೂಮಿ ಪೂಜೆ : ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ

27/06/2025 9:54 AM

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : `ಕರೆಂಟ್ ಶಾಕ್’ನಿಂದ ದಂಪತಿ ಸಾವು.!

27/06/2025 9:53 AM

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಬೆಂಗಳೂರಲ್ಲಿ ಹಾಡಹಗಲೇ ಚಾಕು ಇರಿದು, 2 ಕೋಟಿ ರೂಪಾಯಿ ಕಳ್ಳತನ!

27/06/2025 9:49 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೀಗಿದೆ ‘ಪಿತೃಪಕ್ಷ’ದಲ್ಲಿ ‘ತರ್ಪಣ ಶ್ರಾದ್ಧ’ ಮಾಡುವ ವಿಧಿ ವಿಧಾನಗಳು
KARNATAKA

ಹೀಗಿದೆ ‘ಪಿತೃಪಕ್ಷ’ದಲ್ಲಿ ‘ತರ್ಪಣ ಶ್ರಾದ್ಧ’ ಮಾಡುವ ವಿಧಿ ವಿಧಾನಗಳು

By kannadanewsnow0922/09/2024 6:21 PM

18-09-2024 ರಿಂದ. 02-10-2024 ಬುಧವಾರದ ತನಕ ಪಂಚಾಂಗ ರೀತ್ಯಾ ಪಿತೃಪಕ್ಷ ಎಂದೇ ಪರಿಗಣಿತವಾಗಿರುವ ಎರಡು ವಾರಗಳ ಅವಧಿ ಭಾದ್ರಪದ ಮಾಸದ ಎರಡನೆಯ ಭಾಗದಲ್ಲಿ ಬಂದು ಮಹಾಲಯ ಅಮಾವಾಸ್ಯೆಗೆ ಪೂರ್ಣಗೊಳ್ಳುತ್ತದೆ. ಈ ಸಮಯದಲ್ಲಿ ಮಕ್ಕಳು ಗತಿಸಿಹೋದ ತಮ್ಮ ಪೂರ್ಜರಿಗೆ ನಡೆಸುವ ಪಿತೃತರ್ಪಣಕ್ಕೆ ನಮ್ಮಲ್ಲಿ ಬಹಳ ಹೆಚ್ಚಿನ ಮಹತ್ವ ಇದೆ.‌ ಈ ತರ್ಪಣವೇ ಶ್ರದ್ಧಾಪೂರ್ವಕವಾಗಿ ತಿಲೋದಕದ ಮೂಲಕ ನಡೆಸುವ ಶ್ರಾದ್ಧವಿಧಿ.‌

ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.

ಶಬ್ದದಲ್ಲಿ ಅದರ ಸ್ಪರ್ಶ, ರೂಪ, ರಸ, ಗಂಧ ಮತ್ತು ಅದರ ಶಕ್ತಿ ಇವೆಲ್ಲ ಸಮ್ಮಿಲಿತವಾಗಿರುತ್ತವೆ ಎಂದು ನಮ್ಮ ಪಾರಂಪರಿಕ ನಂಬಿಕೆ ಹೇಳುತ್ತದೆ.
ಪ್ರತಿಯೊಂದು ವಸ್ತುವು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಈ ಪಂಚತತ್ತ್ವಗಳ ಸಹಾಯದಿಂದಲೇ ನಿರ್ಮಾಣವಾಗಿದೆ. ಶ್ರಾದ್ಧದಲ್ಲಿ ಪಿತೃಗಳ ಹೆಸರುಗಳನ್ನು ಹೇಳುವುದರಿಂದ ಮಂತ್ರಗಳ ಸಹಾಯದಿಂದ ಅನುರಣಿತವಾದ ಶಬ್ದಕಂಪನಗಳು ವಾಯುಮಂಡಲದಲ್ಲಿ ಭ್ರಮಣಗೈಯುತ್ತಿರುವ ಅಶರೀರ
ದೇಹಗಳ ವಾಸನಾಮಯ ಕೋಶವನ್ನು ಭೇದಿಸಿ ಅವುಗಳನ್ನು ಶ್ರಾದ್ಧದ ಸ್ಥಳಕ್ಕೆ ಆಕರ್ಷಿಸುತ್ತವೆ.

ಇದರಿಂದ ಆಯಾ ಗೋತ್ರದ ಪಿತೃಗಳು ಆಯಾ ಸ್ಥಳಗಳಿಗೆ ಬಂದು ಶ್ರಾದ್ಧದಲ್ಲಿನ ಆಹಾರವನ್ನು ಸೇವಿಸಿ ತೃಪ್ತರಾಗುತ್ತಾರೆ. ಆಯಾ ಪಿತೃಗಳ ಹೆಸರಿನ ಶಬ್ದಗಳಿಂದ ಪ್ರಕ್ಷೇಪಣೆಯಾಗುವ ಧ್ವನಿಯ ಕಂಪನಗಳಿಗೆ ಮಂತ್ರಮಾರ್ಗವಾಗಿ ಒಂದು ಚಲನೆಯು ಪ್ರಾಪ್ತವಾಗಿ ಅವು ತಮ್ಮ ಸೂಕ್ಷ್ಮಪರಿಣಾಮವನ್ನು ವಾಯುಮಂಡಲದ ಮೇಲೆ ಬೀರುತ್ತವೆ ಮತ್ತು ಸೂಕ್ಷ್ಮ ಸ್ತರದಲ್ಲಿ ವಾಯುರೂಪದಲ್ಲಿ ಅಥವಾ ಸ್ಪರ್ಶರೂಪದಲ್ಲಿ ಪಿತೃಗಳು ಹವ್ಯವನ್ನು ಸ್ವೀಕರಿಸುವಂತೆ ಮಾಡುತ್ತವೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564

ಸಾಮಾನ್ಯವಾಗಿ ತಂದೆ ತಾಯಿಯ ಮೃತ್ಯುವಿನ ತಿಥಿಯಂದೇ ಶ್ರಾದ್ಧವನ್ನು ಮಾಡುತ್ತಾರೆ. ಅದಕ್ಕೆ ವಾರ್ಷಿಕ ಶ್ರಾದ್ಧವೆನಿಸಿಕೊಳ್ಳುತ್ತದೆ. ಇದರಲ್ಲಿ ತಂದೆಯ ಶ್ರಾದ್ಧವಿದ್ದರೆ ತಂದೆ, ಅಜ್ಜ, ಮುತ್ತಜ್ಜ ಹಾಗೂ ತಾಯಿಯದ್ದಾಗಿದ್ದರೆ ತಾಯಿ, ಅಜ್ಜಿ ಹಾಗೂ ಮುತ್ತಜ್ಜಿ ಪಿತೃಗಳು ಬರುತ್ತಾರೆ. ಮಹಾಲಯ ಅಥವಾ ಪಿತೃಪಕ್ಷದ ಶ್ರಾದ್ಧದಲ್ಲಿ ಮಾತ್ರ ಅವರೊಂದಿಗೆ ಚಿಕ್ಕಪ್ಪ, ಮಾವ, ಅತ್ತೆ, ಸಹೋದರಿ, ಚಿಕ್ಕಮ್ಮ, ಇನ್ನೂ ಇತರ ಬಂಧುಗಳು ಹೀಗೆ ತುಂಬ ಪಿತೃಗಳು ಹವ್ಯವನ್ನು ಪಡೆಯುತ್ತಾರೆ. ಈ ಶ್ರಾದ್ಧದ ವೈಶಿಷ್ಟ್ಯವೆಂದರೆ ಇದರಲ್ಲಿ ಆಪ್ತರೆಂದು ನಮ್ಮ ಪರಿಚಿತರು, ಮಿತ್ರರು, ಹಿತಚಿಂತಕರಿಗೂ ಪಿಂಡವನ್ನು ನೀಡಬಹುದು. ಆದ್ದರಿಂದ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡಬೇಕು ಎಂದು ಹೇಳುತ್ತಾರೆ.

ಪಿತೃಕಾರ್ಯದಲ್ಲಿ ದರ್ಭೆ ಮತ್ತು ಎಳ್ಳಿಗೆ ಪ್ರಾಮುಖ್ಯತೆ ಇದೆ.

ದರ್ಭೆ, ಕುಶ, ಕಾಶ,ಬರ್ಹಿ, ಇವುಗಳು ಪವಿತ್ರ ದರ್ಬೆಯ ಬೇರೆ ಬೇರೆ ಹೆಸರುಗಳು. ಒಮ್ಮೆ ಗರುಡನು ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದ್ರುವಿನಿಂದ ದಾಸ್ಯದ ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ತರುತ್ತಾನೆ. ಮುಂದೆ ದೇವೇಂದ್ರನು ಬಂದು ಅಮೃತವನ್ನು ಮರಳಿ ಒಯ್ಯುವಾಗ ಅಮೃತದ ಒಂದು ಬಿಂದು ದರ್ಭೆಯ ಮೇಲೆ ಬೀಳುತ್ತದೆ. ಆ ಕಾರಣದಿಂದ ದರ್ಭೆಯು ಶುದ್ಧ ಮತ್ತು ಪವಿತ್ರವೆನಿಸಿದೆ.ಅಲ್ಲದೇ ಯಜ್ಞ ವರಾಹ ರೂಪೀ ಭಗವಂತನ ರೋಮದಿಂದ ದರ್ಭೆ, ಮತ್ತು ಸ್ವೇದದಿಂದ ಎಳ್ಳು ಹೊರ ಬಂದಿವೆ ಹಾಗಾಗಿ ಇವನ್ನು ಎಲ್ಲಾ ಪಿತೃಕಾರ್ಯಗಳಿಗೂ ಪಾವಿತ್ರ್ಯತೆಯನ್ನು‌ ನೀಡಲು ಬಳಸುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9686268564

ಯಾವುದೇ ಧಾರ್ಮಿಕ ಆಚರಣೆಗೆ ನಂಬಿಕೆಯೇ ತಳಹದಿ. ಅದೇ ಕಾರಣದಿಂದಾಗಿ ಭಾರತವಷ್ಟೇ ಅಲ್ಲ‌ ಜಗತ್ತಿನ ಉದ್ದಗಲಕ್ಕೂ ಪಿತೃಗಳಿಗೆ ಅಶನವನ್ನು ಉಣಿಸುವ ಅನೇಕ ವಿಧಾನಗಳು ಪ್ರಚಲಿತವಾಗಿವೆ. ಪಿತೃಶಾಂತಿಯಾದ ಹಿರಿಯರು ಮಕ್ಕಳ ಸರ್ವತೋಮುಖ‌ ಏಳಿಗೆಯ ಆಶೀರ್ವಾದವನ್ನು ಕೊಟ್ಟು ಮರಳುತ್ತಾರೆ ಎಂಬ ಶ್ರದ್ಧೆಯಿಂದ ನಡೆಸುವ ಪಿತೃಕರ್ಮ ಮಕ್ಕಳ ಕರ್ತವ್ಯವಾಗಿದೆ.

ಈ ಮಹಾಲಯ ಕಾಲದಲ್ಲಿ ಮನೆಯಲ್ಲಿ ಗತಿಸಿದ ನಮ್ಮ ಎಲ್ಲಾ ಹಿರಿಯರಿಗೆ (ಪಿತೃಗಳಿಗೆ) ಗೌರವವನ್ನು ಕೊಡುವುದು ನಮ್ಮ ಆದ್ಯ ಕರ್ತವ್ಯ. ಅವರೆಲ್ಲರಿಗೂ ತರ್ಪಣದ ಮುಖಾಂತರ ಆರಾಧನೆಯನ್ನು ನಡೆಸುವುದು ಶಾಸ್ತ್ರಸಮ್ಮತ

ತರ್ಪಣ ಎಂದರೆ ತೃಪ್ತಿಪಡಿಸುವ ಪ್ರಕ್ರಿಯೆ.

ಗತಿಸಿ ಹೋದ ನಮ್ಮ ಸರ್ವ ಪಿತೃಗಳಿಗೂ
ಗೋತ್ರ ನಾಮ ಉಚ್ಚಾರ ಮಾಡುತ್ತಾ ನೆನಪಿಸಿಕೊಳ್ಳುವ
ಭಾವನಾತ್ಮಕವಾದ ಒಂದು ಆರಾಧನೆ*
ಮನೆಯಲ್ಲಿಯೇ ಸುಲಭವಾಗಿ ತರ್ಪಣವನ್ನು ಕೊಡಲು ಈ ತರ್ಪಣ ವಿಧಿಯನ್ನು ಕೊಡಲಾಗಿದೆ

ಆಚಮನ 2 ಸಲ

ಆಚಮನಮ್

ಓಂ ಶ್ರೀ ಕೇಶವಾಯ ಸ್ವಾಹಾ
ಓಂ ಶ್ರೀ ನಾರಾಯಣಾಯ ಸ್ವಾಹಾ
ಶ್ರೀ ಮಾಧವಾಯ ಸ್ವಾಹಾ
ಶ್ರೀ ಗೋವಿಂದಾಯ ನಮಃ
ಓಂ ಶ್ರೀ ವಿಷ್ಣವೇ ನಮಃ
ಓಂ ಶ್ರೀ ಮಧುಸೂದನಾಯ ನಮಃ
ಓಂ ಶ್ರೀ ತ್ರಿವಿಕ್ರಮಾಯ ನಮಃ
ಓಂ ಶ್ರೀ ವಾಮನಾಯ ನಮಃ
ಓಂ ಶ್ರೀ ಶ್ರೀಧರಾಯ ನಮಃ
ಶ್ರೀ ಹೃಷಿಕೇಶಾಯ ನಮಃ
ಓಂ ಶ್ರೀ ಪದ್ಮನಾಭಾಯ ನಮಃ
ಓಂ ಶ್ರೀ ದಾಮೋದರಾಯ ನಮಃ
ಓಂ ಶ್ರೀ ಸಂಕರ್ಷಣಾಯ ನಮಃ
ಐಓಂ ಶ್ರೀ ವಾಸುದೇವಾಯ ನಮಃ
ಓಂ ಶ್ರೀ ಪ್ರದ್ಯುಮ್ಯಾಯ ನಮಃ
ಓಂ ಶ್ರೀ ಅನಿರುದ್ಧಾಯ ನಮಃ
ಓಂ ಶ್ರೀ ಪುರುಷೋತ್ತಮಾಯ ನಮಃ
ಓಂ ಶ್ರೀ ಅಧೋಕ್ಷಜಾಯ ನಮಃ
ಓಂ ಶ್ರೀ ನಾರಸಿಂಹಾಯ ನಮಃ
ಓಂ ಶ್ರೀ ಅಚ್ಯುತಾಯ ನಮಃ
ಓಂ ಶ್ರೀ ಜನಾರ್ದನಾಯ ನಮಃ
ಓಂ ಶ್ರೀ ಉಪೇಂದ್ರಾಯ ನಮಃ
ಓಂ ಶ್ರೀ ಹರಯೇ ನಮಃ
ಓಂ ಶ್ರೀ ಕೃಷ್ಣಾಯ ನಮಃ
ಪುನರಾಚಮನಮ್
[ ಪುನಃ ಆಚಮನ ಮಾಡುವುದು]2 ಸಲ

ಪ್ರಾಣಾಯಾಮಃ
ಓಂ | ಪ್ರಣವಸ್ಯ | ಪರಮೇಷ್ಠಿ | ಪರಬ್ರಹ್ಮ ಋಷಿಃ | ಪರಮಾತ್ಮಾ ದೇವತಾ | ದೈವೀಗಾಯತ್ರೀ ಛಂದಃ | ಪ್ರಾಣಾಯಾಮೇ ವಿನಿಯೋಗಃ||

ಓಂ ಭೂಃ || ಓಂ ಭುವಃ || ಓಂ ಸ್ವಃ || ಓಂ ಮಹಃ || ಓಂ ಜನಃ ||ಓಂ ತಪಃ || ಓಂ ಸತ್ಯಮ್ ||
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||

ಓಂ ಆಪೋಜ್ಯೋತಿ ರಸೋಮೃತಂ ಬ್ರಹ್ಮ ಭೂರ್ಭುವಃ ಸ್ವರೋಮ್ | (ಕಣ್ಣಿಗೆ ನೀರನ್ನು ಹಚ್ಚಿಕೊಳ್ಳುವುದು)

ಪವಿತ್ರ ಇದ್ದಲ್ಲಿ ಧರಿಸುವುದು

ದೇಶಕಾಲೌ ಸಂಕೀರ್ತ್ಯ , ಶ್ರೀ ವಿಷ್ಣು ಪ್ರೇರಣಯಾ , ಶ್ರೀ ವಿಷ್ಣು ಪ್ರೀತ್ಯರ್ಥಂ ದೇವ – ಋಷಿ – ಆಚಾರ್ಯ – ಪಿತೃ ತರ್ಪಣಾಖ್ಯಂ ಕರ್ಮ ಕರಿಷ್ಯೇ (ಪಿತೃ ತರ್ಪಣ ಅಧಿಕಾರ ಇದ್ದವರಿಗೆ ಮಾತ್ರ)ಎಂದು ನೀರು ಬಿಡುವುದು.
ತೀರ್ಥವನ್ನು ತೆಗೆದುಕೊಂಡು ಅದರಲ್ಲಿ ನಿರ್ಮಾಲ್ಯ ಮತ್ತು ಹೂವನ್ನು, ಎರಡು ಚಿಕ್ಕ ದರ್ಬೆಯನ್ನು ತೀರ್ಥದಲ್ಲಿ ಹಾಕಿ( ದರ್ಬೆ ಇದ್ದಲ್ಲಿ ಮಾತ್ರ) ಬ್ರಹ್ಮಾಂಜಲಿ ಮಾಡಿಕೊಂಡು{ ಬಲಕೈನ್ನು ಮೇಲ್ಮುಖವಾಗಿ ಎಡಗೈಯನ್ನು ಕೆಳಮುಖವಾಗಿ ಬಲಗಾಲ ಮೇಲೆ ಇಟ್ಟುಕೊಂಡು} ಗಾಯತ್ರಿ ಮಂತ್ರ ದಿಂದ ಅಭಿ ಮಂತ್ರಣ ಮಾಡಿ. ನಂತರ ಅಭಿ ಮಂತ್ರಣ ಮಾಡಿದ ತೀರ್ಥದಿಂದ

ಮೊದಲಿಗೆ ದೇವ ತರ್ಪಣ

|| ದೇವತರ್ಪಣಮ್ ||

(ವಿಧಿಃ – ಪ್ರಾಙ್ಮುಖಃ ಸವ್ಯೇನ ಕುಶಾಗ್ರೈಃ ಅಂಗುಲ್ಯಗ್ರೈ: ದೇವ ತೀರ್ಥೇನ ಶಾಲಗ್ರಾಮತೀರ್ಥೋದಕಿನ ಏಕೈಕಮಂಜಲಿಂ ದದ್ಯಾತ್ .)
ಪೂರ್ವಾಭಿಮುಖವಾಗಿ ಕುಳಿತುಕೊಂಡು
ಬಲಗೈಯಲ್ಲಿ ನಿರ್ಮಾಲ್ಯ ಹೂವು
( ಮನೆಯ ದೇವರ ಕೋಣೆಯಲ್ಲಿ ದೇವರಿಗೆ ಇಟ್ಟಂತಹ ಹೂವು ಮತ್ತು ತುಳಸಿಯನ್ನು ತೆಗೆದುಕೊಳ್ಳುವುದು)
ಹಿಡಿದುಕೊಂಡು

೧ ತೀರ್ಥದೇವತಾ ……… ಸ್ತೃಪ್ಯಂತು
೨ ಅಗ್ನಿ………..ಸ್ತೃಪ್ಯಂತು
೩ ವಿಷ್ಣು ….. ಸ್ತೃಪ್ಯಂತು
೪ ಪ್ರಜಾಪತಿ … …ಸ್ತೃಪ್ಯಂತು
೫ ಬ್ರಹ್ಮಾ …….. ತೃಪ್ಯತು
೬ ವೇದಾ ……… ಸ್ತೃಪ್ಯಂತು
೭ ದೇವಾ ……… ಸ್ತೃಪ್ಯಂತು
೮ ಋಷಯ ……. ಸ್ತೃಪ್ಯಂತು
೯ ಸರ್ವಾಣಿಛಂದಾಂಸಿ ……..ತೃಪ್ಯಂತು
೧೦ ಓಂಕಾರ ……..ಸ್ತೃಪ್ಯಂತು
೧೧ ವಷಟ್ಕಾರ……..ಸ್ತೃಪ್ಯಂತು
೧೨ ವ್ಯಾಹೃತಯ………. ಸ್ತೃಪ್ಯಂತು
೧೩ ಸಾವಿತ್ರೀ ……….ತೃಪ್ಯತು
೧೪ ಯಜ್ಞಾ……….. ಸ್ತೃಪ್ಯಂತು
೧೫ ದ್ಯಾವಾಪೃಥಿವೀ ………ತೃಪ್ಯತಾಂ
೧೬ ಅಂತರಿಕ್ಷಂ………. ತೃಪ್ಯತು
೧೭ಅಹೋರಾತ್ರಾಣಿ …..ತೃಪ್ಯಂತು
೧೮ಸಾಂಖ್ಯಾ………. ಸ್ತೃಪ್ಯಂತುl
೧೯ಸಿದ್ಧಾ ………ಸ್ತೃಪ್ಯಂತು
೨೦ ಸಮುದ್ರಾ ……….ಸ್ತೃಪ್ಯಂತು
೨೧ ನದ್ಯ………… ಸ್ತೃಪ್ಯಂತುp
೨೨ ಗಿರಯ ಸ್ತೃಪ್ಯಂತು
೨೩ಕ್ಷೇತ್ರೌಷಧಿ ವನಸ್ಪತಿ
ಗಂಧರ್ವ ಅಪ್ಸರಸ… .ಸ್ತೃಪ್ಯಂತು
೨೪ ನಾಗ ………ಸ್ತೃಪ್ಯಂತು
೨೫ ವಯಾಂಸಿ……… ಸ್ತೃಪ್ಯಂತು
೨೬ ಗಾವ ……… ಸ್ತೃಪ್ಯಂತು
೨೭ಸಾಧ್ಯಾ ……. ಸ್ತೃಪ್ಯಂತು
೨೮ ವಿಪ್ರಾ……….. ಸ್ತೃಪ್ಯಂತು
೨೯ಯಕ್ಷಾ ……….ಸ್ತೃಪ್ಯಂತು
೩೦ ರಕ್ಷಾಂಸಿ ……….ಸ್ತೃಪ್ಯಂತು
೩೧ ಭೂತಾನಿ………. ಸ್ತೃಪ್ಯಂತು
೩೨ ಏವಮಂತಾನಿ…….. ಸ್ತೃಪ್ಯಂತು.

||ಋಷಿ ತರ್ಪಣಮ್||

ಉತ್ತರಾಭಿಮುಖವಾಗಿ ಉಪವೀತವನ್ನು ಋಷಿ ಮಾಲೆ ಅಂದರೆ ಮಾಲಾಕಾರವಾಗಿ ಹಾಕಿಕೊಂಡು ಎರಡಾವರ್ತಿ (ಎರಡು ಸಲ) ತರ್ಪಣವನ್ನು ಋಷಿಗಳಿಗೆ ಕೊಡುವುದು

೧ ಶತರ್ಚಿನ…….ಸ್ತೃಪ್ಯಂತು
೨ ಮಾಧ್ಯಮಾ ……….ಸ್ತೃಪ್ಯಂತು
೩ ಗೃತ್ಸಮದ………ಸ್ತೃಪ್ಯತು
೪ ವಿಶ್ವಾಮಿತ್ರ ……. ಸ್ತೃಪ್ಯತು
೫ ವಾಮದೇವ…………..ಸ್ತೃಪ್ಯತು
೬ ಅತ್ರಿ . ………..ಸ್ತೃಪ್ಯತು
೭ ಭರದ್ವಾಜ … ……ಸ್ತೃಪ್ಯತು
೮ ವಸಿಷ್ಠ ………ಸ್ತೃಪ್ಯತು
೯ ಪ್ರಗಾಥಾ ………ಸ್ತೃಪ್ಯಂತು
೧೦ ಪಾವಮಾನ್ಯ……… ಸ್ತೃಪ್ಯಂತು
೧೧ ಕ್ಷುದ್ರಸೂಕ್ತಾ ……… ಸ್ತೃಪ್ಯಂತು
೧೨ ಮಹಾಸೂಕ್ತಾ ……..ಸ್ತೃಪ್ಯಂತು

ಆಚಾರ್ಯ ತರ್ಪಣಂ

(ವಿಧಿಃ – ದಕ್ಷಿಣಾಭಿಮುಖಃ ಕುಶಮೂಲಾಗ್ರೆ ; ತರ್ಜನ್ಯಂಗುಷ್ಠ ಮಧ್ಯ ಪಿತೃತೀರ್ಥೇನ ಸಕೃನ್ಮಂತ್ರೇಣ ತ್ರೀನ್ ತ್ರೀನ್ ಅಂಜಲೀನ್ ದದ್ಯಾತ್)
ದಕ್ಷಿಣಾಭಿಮುಖವಾಗಿ ಜನಿವಾರವನ್ನು ಅಂಗುಷ್ಟ ದಲ್ಲಿ ಹಿಡಿದುಕೊಂಡು ಮೂರು ಸಲ ತರ್ಪಣವನ್ನು ಕೊಡುವುದು

೧.ಸುಮಂತು – ಜೈಮಿನಿ – ವೈಶಂಪಾಯನ – ಪೈಲ – ಸೂತ್ರ ಭಾಷ್ಯ -ಭಾರತ – ಮಹಾಭಾರತ – ಧರ್ಮಾಚಾರ್ಯ….. ಸ್ತೃಪ್ಯಂತು
೨.ಜಾನಂತಿ – ಬಾಹವಿ – ಗಾರ್ಗ್ಯ – ಗೌತಮ – ಶಾಕಲ್ಯ – ಬಾಭ್ರವ್ಯ -ಮಾಂಡವ್ಯ – ಮಾಂಡೂಕೇಯಾ
……..ಸ್ತೃಪ್ಯಂತು
೩ ಗರ್ಗೀವಾಚಕ್ನವಿ…….. ತೃಪ್ಯತು
೪ ವಡವಾಪ್ರಾತೀಥೆಯೀ …….ತೃಪ್ಯತು
೫ ಸುಲಭಾಮೈತ್ರೇಯೀ ……..ತೃಪ್ಯತು
೬ ಕಹೋಳಂ ………..ತರ್ಪಯಾಮಿ
೭ ಕೌಷೀತಕಂ ……..ತರ್ಪಯಾಮಿ
೮ ಮಹಾಕೌಷೀತಕಂ……… ತರ್ಪಯಾಮಿ
೯ ಪೈಂಗ್ಯಂ ………ತರ್ಪಯಾಮಿ
೧೦ ಮಹಾಪೈಂಗ್ಯಂ ……..ತರ್ಪಯಾಮಿ
೧೧ ಸುಯಜ್ಞಂ ” ……..ತರ್ಪಯಾಮಿ
೧೨ ಸಾಂಖ್ಯಾಯನಂ……..ತರ್ಪಯಾಮಿ
೧೩ .ಐತರೇಯಂ ತರ್ಪಯಾಮಿ
೧೪ ಮಹೈತರೇಯಂ…….. ತರ್ಪಯಾಮಿ
೧೫ ಶಾಕಲಂ……..ತರ್ಪಯಾಮಿ
೧೬ ಬಾಷ್ಕಲಂ …….ತರ್ಪಯಾಮಿ
೧೭ ಸುಜಾತವಸಕ್ತ್ರಂ ……..ತರ್ಪಯಾಮಿ
೧೮ ಔದವಾಹಿಂ ……..ತರ್ಪಯಾಮಿ
೧೯ ಮಹೌದವಾಹಿಂ………ತರ್ಪಯಾಮಿ
೨೦ ಸೌಜಾಮಿಂ……ತರ್ಪಯಾಮಿ
೨೧ ಶೌನಕಂ ……..ತರ್ಪಯಾಮಿ
೨೨ ಆಶ್ವಲಾಯನಂ……… ತರ್ಪಯಾಮಿ
ಯೇಚಾನ್ಯೇ ಆಚಾರ್ಯಾಸ್ತೇ ಸರ್ವೆ
ತೃಪ್ಯಂತು ತೃಪ್ಯಂತು ತೃಪ್ಯಂತು
Ŕ0
||ಪಿತೃ ತರ್ಪಣ||
ಕೈಯಲ್ಲಿರುವ ನಿರ್ಮಾಲ್ಯ ದರ್ಬೆಯನ್ನು ಕೆಳಗಿಟ್ಟು ತಿಲವನ್ನು ಬಲಗೈಯಲ್ಲಿ ಹಾಕಿಕೊಂಡು ಅಪಸವ್ಯ ಮಾಡಿಕೊಂಡು ದಕ್ಷಿಣಾಭಿಮುಖವಾಗಿ ನಾಮ ಗೋತ್ರ ಉಚ್ಚಾರ ಮಾಡಿಕೊಂಡು ಅಂಗುಷ್ಟ ತೋರುಬೆರಳು ಮಧ್ಯದಿಂದ ತರ್ಪಣವನ್ನು ಕೊಡುವುದು

ತಂದೆ …….3 ವಸು
ಅಜ್ಜ ………3 ರುದ್ರ
ಮುತ್ತಜ್ಜ……3 ಆದಿತ್ಯ

ತಾಯಿ…….3
ಅಜ್ಜಿ (ತಂದೆಯ ತಾಯಿ)…….3
ಮುತ್ತಜ್ಜಿ (ತಂದೆಯ ತಂದೆಯ ತಾಯಿ)….3

(ತಂದೆಯ ಎರಡನೇ ಹೆಂಡತಿ ಇದ್ದಲ್ಲಿ)……2
ಇನ್ನು ಎಲ್ಲರಿಗೂ ಒಂದೇ ಸಲ ತರ್ಪಣ ಕೊಡುವುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರು ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9686268564 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9686268564

ಅಮ್ಮನ ತಂದೆ……
ಅಮ್ಮನ ತಂದೆಯ ತಂದೆ..
ಅಮ್ಮನ ಅಜ್ಜನ ತಂದೆ….

ಅಮ್ಮನ ಅಮ್ಮ
ಅಮ್ಮನ ಅಜ್ಜಿ
ಅಮ್ಮನ ಮುತ್ತಜ್ಜಿ

ಹೆಂಡತಿ ….ಮಗ….ಮಗಳು

ತಂದೆಯ ಕಡೆಯಿಂದ
ನಿಮ್ಮ ದೊಡ್ಡಪ್ಪ -ಹೆಂಡತಿ-ಮಕ್ಕಳು (ತಂದೆಯ ಅಣ್ಣ)
ನಿಮ್ಮ ಚಿಕ್ಕಪ್ಪ -ಹೆಂಡತಿ-ಮಕ್ಕಳು (ತಂದೆಯ ತಮ್ಮ)
ನಿಮ್ಮ ತಂದೆಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮತ್ತು ಮಕ್ಕಳು

ನಿಮ್ಮ ಒಡಹುಟ್ಟಿದವರು
ನಿಮ್ಮ ಅಣ್ಣ ಅಥವಾ ತಮ್ಮ ಅವರ ಹೆಂಡತಿ ಮತ್ತು ಮಕ್ಕಳು
ನಿಮ್ಮ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮತ್ತು ಮಕ್ಕಳು

ತಾಯಿಯ ಕಡೆಯಿಂದ
ತಾಯಿಯ ಅಣ್ಣ ಅಥವಾ ತಮ್ಮ ಅವರ ಹೆಂಡಂದಿರು ಮಕ್ಕಳು
ತಾಯಿಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮಕ್ಕಳು

ಹೆಂಡತಿ ಕಡೆಯಿಂದ
ಹೆಂಡತಿಯ ತಂದೆ-ತಾಯಿ
ಹೆಂಡತಿಯ ಅಣ್ಣ ಅಥವಾ ತಮ್ಮ ಅವರ ಹೆಂಡಂದಿರು
ಹೆಂಡತಿಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು

ಮಾತೃ ಸಂಬಂಧಿನಾಂ
ಪಿತೃ ಸಂಬಂಧಿನಾಂ

ಗುರು ಸಪತ್ನೀಕಂ (ವಿದ್ಯೆ ಕೊಟ್ಟ ಗುರು)
ಆಚಾರ್ಯಾಂ (ಸಪತ್ನೀಕಂ ಪುರೋಹಿತರು ಇತ್ಯಾದಿ)
ಸ್ವಾಮಿನಂ ಸಪತ್ನೀಕಂ (ಪೋಷಕರು ಮಾಲೀಕರು)
ಸಖಾಯಾಂ ಸಪತ್ನೀಕಂ( ಸ್ನೇಹಿತರು)

ಜನಿವಾರವನ್ನು ಸವ್ಯ ಮಾಡಿ

ಸೂತ್ರ ನಿಷ್ಪೀಡನಂ
ಜನಿವಾರವನ್ನು ಮಾಲಾಕಾರವಾಗಿ ಮಾಡಿ ನೀವು ಬಿಟ್ಟಂತಹ ತರ್ಪಣದ ನೀರಿನಲ್ಲಿ ಒಮ್ಮೆ ಮುಳುಗಿಸಿ ಅದನ್ನು ಹಿಂಡಬೇಕು
ಪೂರ್ವಕ್ಕೆ ಮುಖ ಮಾಡಿಕೊಂಡು ಹೂವು ಮತ್ತು ನಿರ್ಮಾಲ್ಯ ವನ್ನು ತೆಗೆದುಕೊಂಡು ಕೃಷ್ಣಾರ್ಪಣ ಮಾಡಿ

ಕಾಯೇನ ವಾಚಾ ಮನಸೇಂದ್ರಿಯೆರ್ವಾ ಬುದ್ಧಾತ್ಮನಾವಾ ಪ್ರಕೃತೇ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ | ಅನೇನ ದೇವ-ಋಷಿ-ಆಚಾರ್ಯ-ಪಿತೃ ತರ್ಪಣೇನ
ಭಗವಾನ್ ಶ್ರೀ ಜನಾರ್ದನ-ವಾಸುದೇವಮೂರ್ತಿ ಪ್ರಿಯತಾಮ ಪ್ರೀತೋ ಭವತು ಶ್ರೀಕೃಷ್ಣಾರ್ಪಣಮಸ್ತು

ಎಂದುಚ್ಚರಿಸಿ ಪವಿತ್ರ ಹಾಕಿಕೊಂಡಲ್ಲಿ ಗಂಟುನ್ನು ಬಿಚ್ಚಿ ನೀರಿನಲ್ಲಿ ಹಾಕಿ ಆಚಮನ ಮಾಡುವುದು

ನ್ಯೂಯಾತಿರಿಕ್ತ ದೋಷ ಪ್ರಾಯಶ್ಚಿತಾರ್ಥಂ
ನಾಮ ತ್ರಯ ಜಪ ಮಹಂ ಕರಿಷ್ಯೇ
ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ ನಮಃ ಎಂದುಚ್ಚರಿಸುವುದು .

ಸರ್ವ ಪಿತೃ ರನ್ನು ಈ ಕೆಳಗಿನ ಪ್ರಾರ್ಥನೆಯ ಮುಖಾಂತರ ಮನಸ್ಸಿನಿಂದ ಪ್ರಾರ್ಥನೆ ಮಾಡುವುದು
ಗತಿಸಿದ ಹಿರಿಯರ ಅನುಗ್ರಹದಿಂದ ವಂಶವು ಅಭಿವೃದ್ಧಿಯಾಗುತ್ತದೆ.

ಪಿತೃಪ್ರಾರ್ಥನೆ :

ಅಮೂರ್ತಾನಾಂ ಸುಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಮ್ |
ನಮಸ್ಯಾಮಿ ಸದಾ ಭಕ್ತ್ಯಾ ಧ್ಯಾಯಿನಾಂ ಯೋಗಚಕ್ಷುಸಾಮ್ ||
ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ |
ನಮಃ ಸ್ವಧಾಯೈ ಸ್ವಾಹಾಯೈ ನಿತ್ಯಮೇವ ನಮೋ ನಮಃ

Share. Facebook Twitter LinkedIn WhatsApp Email

Related Posts

BIG NEWS : ಇನ್ನೊಂದು ವಾರದಲ್ಲಿ ಕೆಂಪೇಗೌಡರ ಸ್ಮಾರಕ ಭವನಕ್ಕೆ ಭೂಮಿ ಪೂಜೆ : ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ

27/06/2025 9:54 AM1 Min Read

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : `ಕರೆಂಟ್ ಶಾಕ್’ನಿಂದ ದಂಪತಿ ಸಾವು.!

27/06/2025 9:53 AM1 Min Read

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಬೆಂಗಳೂರಲ್ಲಿ ಹಾಡಹಗಲೇ ಚಾಕು ಇರಿದು, 2 ಕೋಟಿ ರೂಪಾಯಿ ಕಳ್ಳತನ!

27/06/2025 9:49 AM1 Min Read
Recent News

BIG NEWS : ಇನ್ನೊಂದು ವಾರದಲ್ಲಿ ಕೆಂಪೇಗೌಡರ ಸ್ಮಾರಕ ಭವನಕ್ಕೆ ಭೂಮಿ ಪೂಜೆ : ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ

27/06/2025 9:54 AM

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : `ಕರೆಂಟ್ ಶಾಕ್’ನಿಂದ ದಂಪತಿ ಸಾವು.!

27/06/2025 9:53 AM

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಬೆಂಗಳೂರಲ್ಲಿ ಹಾಡಹಗಲೇ ಚಾಕು ಇರಿದು, 2 ಕೋಟಿ ರೂಪಾಯಿ ಕಳ್ಳತನ!

27/06/2025 9:49 AM

BREAKING: ಏರ್ ಇಂಡಿಯಾ ವಿಮಾನ ದುರಂತ: ವಿಶ್ವಸಂಸ್ಥೆ ತನಿಖಾಧಿಕಾರಿಗೆ ಪ್ರವೇಶ ನಿರಾಕರಿಸಿದ ಭಾರತ

27/06/2025 9:45 AM
State News
KARNATAKA

BIG NEWS : ಇನ್ನೊಂದು ವಾರದಲ್ಲಿ ಕೆಂಪೇಗೌಡರ ಸ್ಮಾರಕ ಭವನಕ್ಕೆ ಭೂಮಿ ಪೂಜೆ : ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ

By kannadanewsnow0527/06/2025 9:54 AM KARNATAKA 1 Min Read

ಬೆಂಗಳೂರು : ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿ ಉತ್ಸವ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ…

SHOCKING : ಶಿವಮೊಗ್ಗದಲ್ಲಿ ಘೋರ ದುರಂತ : `ಕರೆಂಟ್ ಶಾಕ್’ನಿಂದ ದಂಪತಿ ಸಾವು.!

27/06/2025 9:53 AM

BREAKING : ರಾಜ್ಯದಲ್ಲಿ ಮತ್ತೊಂದು ದರೋಡೆ : ಬೆಂಗಳೂರಲ್ಲಿ ಹಾಡಹಗಲೇ ಚಾಕು ಇರಿದು, 2 ಕೋಟಿ ರೂಪಾಯಿ ಕಳ್ಳತನ!

27/06/2025 9:49 AM

BREAKING : ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ : ಮುಸ್ಲಿಂ ಯುವತಿಗೆ ಡ್ರಾಪ್ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ.!

27/06/2025 8:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.