Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೈಯಂತೆ ಕಾಣುವ ಈ ‘ಹಣ್ಣು’ ತಿನ್ನುವುದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

30/06/2025 10:08 PM

ಮಳೆಯಲ್ಲಿ ಆಟವಾಡಲು ಹೋಗ್ತೀನಿ ಎಂದಿದ್ದಕ್ಕೆ 10 ವರ್ಷದ ಸ್ವಂತ ಮಗನನ್ನೇ ಇರಿದು ಕೊಂದ ಪಾಪಿ ತಂದೆ

30/06/2025 9:45 PM

ಕುವೆಂಪು ವಿವಿಯಲ್ಲಿ 16ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆರಂಭ: 5 ದಿನ ಪೂರ್ವ ಏಷ್ಯಾದ ಸಿನಿಮಾ ಪ್ರದರ್ಶನ

30/06/2025 9:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಳ್ಳಿ ಪಾತ್ರೆಗಳನ್ನು ಶುಚಿಗೊಳಿಸುವ ಸೂಕ್ತ ವಿಧಾನಗಳು ಹೀಗಿವೆ!
LIFE STYLE

ಬೆಳ್ಳಿ ಪಾತ್ರೆಗಳನ್ನು ಶುಚಿಗೊಳಿಸುವ ಸೂಕ್ತ ವಿಧಾನಗಳು ಹೀಗಿವೆ!

By kannadanewsnow0728/02/2024 9:56 AM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬೆಳ್ಳಿ ಪಾತ್ರೆಗಳು ಕೆಲವೊಮ್ಮೆ ಉಪಯೋಗಿಸದೇ ಇದ್ದರೂ ಇಟ್ಟಲ್ಲಿಯೇ ಇಟ್ಟು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇನ್ನು ಪೂಜೆಗಳಿಗೆ ಬಳಸಿದ, ದೀಪ ಹಚ್ಚಲು ಬೆಳ್ಳಿ ಆಭರಣಗಳ ಸಂರಕ್ಷಣೆ ಅಷ್ಟು ಸುಲಭವಾದ ಕೆಲಸವಲ್ಲ. ಎಣ್ಣೆ, ತುಪ್ಪದ ಜಿಡ್ಡು ಬೆಳ್ಳಿ ದೀಪಗಳಿಗೆ ಅಂಟಿಕೊಂಡುಬಿಡುತ್ತದೆ. ಇಂತಹ ಕಠಿಣ ಕಲೆಗಳನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಅನೇಕ ಪೌಡರ್‌, ಸೋಪ್‌ಗಳಿವೆ. ಇವೆಲ್ಲಾ ರಾಸಾಯನಿಕಯುಕ್ತವಾಗಿರುತ್ತವೆ. ಇಂತಹ ರಾಸಾಯನಿಕಯುಕ್ತ ಪೌಡರ್‌ಗಳು ಬೆಳ್ಳಿಯ ಪಾತ್ರೆಗಳಿಗೆ ಕೆಲವೊಮ್ಮೆ ಹಾನಿಯುಂಟು ಮಾಡಬಹುದು. ಹಾಗಾಗಿ ಮನೆಯಲ್ಲಿಯೇ ಸಿಗುವ ಕೆಲ ಪದಾರ್ಥಗಳಿಂದ ಬೆಳ್ಳಿ ಪಾತ್ರೆಗಳನ್ನು ಹೆಚ್ಚು ಶ್ರಮವಿಲ್ಲದೇ ಸರಳವಾಗಿ ಶುಚಿಗೊಳಿಸಬಹುದು.

ಕೆಲವೊಬ್ಬರು ನಿತ್ಯವೂ ಬೆಳ್ಳಿ ಪಾತ್ರೆಗಳನ್ನು ತೊಳೆಯುತ್ತಾರೆ. ನಿತ್ಯವೂ ಬೆಳ್ಳಿ ಪಾತ್ರೆ ತೊಳೆಯುತ್ತಿದ್ದರೆ, ನಿಂಬೆ ರಸಕ್ಕೆ ಅರ್ಧ ಚಮಚ ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನೀರು ಬೆರಸಿ ಇವೆಲ್ಲವನ್ನೂ ಮಿಶ್ರಣ ಮಾಡಿ ಮೃದುವಾದ ಬ್ರೇಷ್‌ನಿಂದ ಬೆಳ್ಳಿ ಪಾತ್ರೆಗಳನ್ನು ಉಜ್ಜಿ ತೊಳೆಯಿರಿ. ಇದರಿಂದ ನೈಸರ್ಗಿಕವಾಗಿ ಬೆಳ್ಳಿ ಪಾತ್ರೆಗಳು ಶುಚಿಯಾಗಿ ಹೊಳೆಯುತ್ತವೆ.

ದೀಪದ ಬೆಳ್ಳಿ ಪಾತ್ರೆಗಳ ಜಿಡ್ಡನ್ನು ತೆಗೆಯಲು ಟಮೆಟೋ ಕೆಚಪ್‌ ತುಂಬಾ ಉತ್ತಮವಾದ ಪರಿಣಾಮ ಬೀರುತ್ತದೆ. ಹುಳಿ ಅಂಶವಿರುವ ಇದು ಎಂತಹ ಕರೆಗಟ್ಟಿದ ಜಿಡ್ಡನ್ನೂ ಕೆಚಪ್‌ ಮಾಯ ಮಾಡುವ ಗುಣ ಹೊಂದಿದೆ. ಕೆಚಪ್‌ಅನ್ನು ಬಟ್ಟೆಗೆ ಹಾಕಿಕೊಂಡು ಜಿಡ್ಡಿರುವ ಬೆಳ್ಳಿ ಪಾತ್ರೆಗೆ ನೀರಿನ ಸಹಾಯವಿಲ್ಲದೇ ಹಾಗೇ ಉಜ್ಜಿಕೊಳ್ಳಿ. ಕೆಚಪ್‌ನಿಂದ ಉಜ್ಜಿದಂತೆಲ್ಲಾ ಪಾತ್ರೆಗಳ ಕರೆ ಕಡಿಮಾಗುತ್ತಾ ಹೋಗುತ್ತದೆ. ನಂತರ ನೀರಿನಲ್ಲಿ ಚೆನ್ನಾಗಿ ತೊಳೆದು ಇಡಿ. ನೀರಿನಲ್ಲಿ ತೊಳದ ಮೇಲೆ ಬಟ್ಟಯಿಂದ ಒರೆಸಲು ಮರೆಯಬೇಡಿ. ಇಲ್ಲದಿದ್ದರೆ ನೀರಿನ ಕರೆ ಬೆಳ್ಳಿ ಪಾತ್ರೆಗಳಲ್ಲಿ ಹಾಗೆಯೇ ಉಳಿದುಬಿಡುತ್ತದೆ.
ಕೊರೊನಾ ಕಾಲದಿಂದಾಗಿ ಹೆಚ್ಚಿನ ಬಳಕೆಗೆ ಬಂದ ಹ್ಯಾಂಡ್‌ ಸ್ಯಾನಿಟೈಸರ್‌ ಕೂಡ ಬೆಳ್ಳಿ ಪಾತ್ರೆಗಳನ್ನು ಶುಚಿಗೊಳಿಸಲು ಬಳಸಬಹುದು. ಬೀರುವಿನಲ್ಲಿ ಇಟ್ಟ ಬೆಳ್ಳಿ ಆಭರಣಗಳು ಕಪ್ಪಾಗಿದ್ದರೆ ಅದಕ್ಕೆ ಸ್ಯಾನಿಟೈಸರ್‌ ಹಾಕಿ ಶ್ವಚ್ಛವಾದ ಬಿಳಿ ಬಟ್ಟೆಯಿಂದ ಕೂಡಲೇ ಉಜ್ಜಿ ಒರೆಸಿಕೊಳ್ಳಿ. ಬೆಳ್ಳಿ ಪಾತ್ರೆಗಳು ಮತ್ತೆ ತಮ್ಮ ನಿಜವಾದ ರೂಪ ಪಡೆದುಕೊಳ್ಳುತ್ತವೆ.

ಒಂದು ಬಿಳಿ ಶುಚಿಯಾದ ಬಟ್ಟೆಯ ಮೇಲೆ ಟೂತ್‌ಪೇಸ್ಟ್‌ ಹಾಕಿಕೊಂಡು ಬೆಳ್ಳಿ ಪಾತ್ರೆಗಳ ಮೇಲೆ ಉಜ್ಜಿದರೆ ಪಾತ್ರೆಗಳು ಮತ್ತೆ ಹೊಳೆಯುವ ರೂಪ ಪಡೆದುಕೊಳ್ಳುತ್ತವೆ.

ತುಂಬಾ ಬೆಳ್ಳಿ ಪಾತ್ರೆಗಳನ್ನು ತೊಳೆಯುವುದಿದ್ದರೆ ಅದಕ್ಕೆ ಒಂದು ಕೆಲಸ ಮಾಡಿ. ಒಂದು ನಿಂಬೆ ಹಣ್ಣನ್ನು ಒಂದು ಬಟ್ಟಲಿಗೆ ಸರ ಹಿಂಡಿಕೊಳ್ಳಿ. ಅದಕ್ಕೆ ಒಂದು ಚಮಚ ಉಪ್ಪು, ಒಂದು ಚಮಚ ಸೋಡಾಪುಡಿ ಹಾಕಿ ಅರ್ಧ ಲೋಟ ನೀರನ್ನು ಹಾಕಿ ಕಲೆಸಿಕೊಳ್ಳಿ. ಎಲ್ಲಾ ಪಾತ್ರೆಗಳನ್ನು ಹೀಗೆ ತೊಳೆದರೆ ಕರೆಗಳು ಸುಲಭವಾಗಿ ಕರೆ ಹೋಗುತ್ತದೆ ಮತ್ತು ಬೆಳ್ಳಿ ಪಾತ್ರೆಗಳನ್ನು ತೊಳೆಯಲು ಅಷ್ಟು ಶ್ರಮ ಬೇಕಾಗುವುದಿಲ್ಲ.

ಬೆಳ್ಳಿ ಪಾತ್ರೆಗಳನ್ನು ಎತ್ತಿಡಬೇಕಾದರೆ ಶುಭ್ರವಾದ ಬಿಳಿ ಬಟ್ಟೆಯಲ್ಲಿ ಪ್ರತಿಯೊಂದು ಬೆಳ್ಳಿ ಪಾತ್ರೆಗಳನ್ನು ಸರಿಯಾಗಿ ಬಟ್ಟೆಯಿಂದ ರ್ಯಾಪ್‌ ಮಾಡಿ, ಮತ್ತೊಂದು ರಟ್ಟಿನ ಬಾಕ್ಸ್‌ನಲ್ಲಿ ಹಾಕಿಡಿ. ಗಾಳಿಯಾಡದಂತೆ ಮುಚ್ಚಿ. ಹೀಗೆ ಮಾಡಿದರೆ ಬೀರುವಿನಲ್ಲಿ ಇಟ್ಟ ಬೆಳ್ಳಿ ಪಾತ್ರೆಗಳು ತಮ್ಮ ಹೊಳಪನ್ನು ಕಳೆದುಕೊಳ್ಳದೇ ಹೊಳೆಯುವ ರೂಪದಲ್ಲಿಯೇ ಇರುತ್ತವೆ.

Here are the appropriate ways to clean silver utensils! ಬೆಳ್ಳಿ ಪಾತ್ರೆಗಳನ್ನು ಶುಚಿಗೊಳಿಸುವ ಸೂಕ್ತ ವಿಧಾನಗಳು ಹೀಗಿವೆ!
Share. Facebook Twitter LinkedIn WhatsApp Email

Related Posts

ಕೈಯಂತೆ ಕಾಣುವ ಈ ‘ಹಣ್ಣು’ ತಿನ್ನುವುದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

30/06/2025 10:08 PM2 Mins Read

ಶನಿಯ ಸ್ಥಾನ ಪಲ್ಲಟದಿಂದ ಈ ಮೂರು ರಾಶಿಯವರಿಗೆ ಶುಭ ಫಲ

30/06/2025 6:36 PM2 Mins Read

‘ಉಪ್ಪು’ ಯಾವಾಗ ಖರೀದಿಸಬೇಕು? ಯಾವ ಸಮಯದಲ್ಲಿ ಖರೀದಿಸಬಾರದು ಗೋತ್ತಾ? ಇಲ್ಲಿದೆ ಮಾಹಿತಿ

30/06/2025 6:25 PM3 Mins Read
Recent News

ಕೈಯಂತೆ ಕಾಣುವ ಈ ‘ಹಣ್ಣು’ ತಿನ್ನುವುದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

30/06/2025 10:08 PM

ಮಳೆಯಲ್ಲಿ ಆಟವಾಡಲು ಹೋಗ್ತೀನಿ ಎಂದಿದ್ದಕ್ಕೆ 10 ವರ್ಷದ ಸ್ವಂತ ಮಗನನ್ನೇ ಇರಿದು ಕೊಂದ ಪಾಪಿ ತಂದೆ

30/06/2025 9:45 PM

ಕುವೆಂಪು ವಿವಿಯಲ್ಲಿ 16ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆರಂಭ: 5 ದಿನ ಪೂರ್ವ ಏಷ್ಯಾದ ಸಿನಿಮಾ ಪ್ರದರ್ಶನ

30/06/2025 9:35 PM

ಹೃದಯ ವಿದ್ರಾವಕ ದುರಂತ ; ಕಡಲೆಕಾಯಿ ಕುದಿಸುತ್ತಿದ್ದ ಪಾತ್ರೆಗೆ ಬಿದ್ದು 1 ವರ್ಷದ ಮಗು ದುರ್ಮರಣ

30/06/2025 9:28 PM
State News
KARNATAKA

ಕುವೆಂಪು ವಿವಿಯಲ್ಲಿ 16ನೇ ಸಹ್ಯಾದ್ರಿ ಚಲನಚಿತ್ರೋತ್ಸವ ಆರಂಭ: 5 ದಿನ ಪೂರ್ವ ಏಷ್ಯಾದ ಸಿನಿಮಾ ಪ್ರದರ್ಶನ

By kannadanewsnow0930/06/2025 9:35 PM KARNATAKA 2 Mins Read

ಶಿವಮೊಗ್ಗ: ಸಿನಿಮಾಗಳು ಕೇವಲ ದೃಶ್ಯ ಕಥಾನಕಗಳಲ್ಲ. ಅವು ಜೀವನದ ಸಣ್ಣ ತುಣುಕುಗಳು. ದೃಶ್ಯ, ಧ್ವನಿ, ಸಂಗೀತ, ಪಾತ್ರ ಮತ್ತು ದೃಶ್ಯ…

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವಿನ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಿ ವರದಿ ನೀಡಲು ಆದೇಶ: ಸಚಿವ ದಿನೇಶ್ ಗುಂಡೂರಾವ್

30/06/2025 9:28 PM

ಬೆಂಗಳೂರಲ್ಲಿ ಇ-ಖಾತಾ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್: 2 ದಿನಗಳಲ್ಲಿ 1,259 ವಿತರಣೆ | BBMP E-Khata Mela

30/06/2025 8:37 PM

SHOCKING: ಹಾಸನದಲ್ಲಿ ಆಟೋ ಚಲಾವಣೆ ವೇಳೆಯೇ ಹೃದಯಾಘಾತದಿಂದ ವ್ಯಕ್ತಿ ಸಾವು: ಇಂದು ಒಂದೇ ದಿನ ನಾಲ್ವರು ಬಲಿ

30/06/2025 8:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.