Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ : ಬಾಲಕನ ಅಪಹರಿಸಿ ಹತ್ಯೆಗೈದು ಶವಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು.!

01/08/2025 6:33 AM

ರಾಜ್ಯದಲ್ಲಿ `ಅಡುಗೆ ಎಣ್ಣೆ’ಯಿಂದ ಆರೋಗ್ಯ ಸಮಸ್ಯೆ : 6 ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಲು `ಆಹಾರ ಸುರಕ್ಷತಾ ಇಲಾಖೆ’ ಸೂಚನೆ.!

01/08/2025 6:29 AM

BREAKING: ಗ್ರಾಹಕರಿಗೆ ಗುಡ್ ನ್ಯೂಸ್ : `LPG ವಾಣಿಜ್ಯ ಸಿಲಿಂಡರ್’ ಬೆಲೆ 33.50 ರೂ. ಇಳಿಕೆ | LPG Cylinder Price

01/08/2025 6:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ `ಅಡುಗೆ ಎಣ್ಣೆ’ಯಿಂದ ಆರೋಗ್ಯ ಸಮಸ್ಯೆ : 6 ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಲು `ಆಹಾರ ಸುರಕ್ಷತಾ ಇಲಾಖೆ’ ಸೂಚನೆ.!
KARNATAKA

ರಾಜ್ಯದಲ್ಲಿ `ಅಡುಗೆ ಎಣ್ಣೆ’ಯಿಂದ ಆರೋಗ್ಯ ಸಮಸ್ಯೆ : 6 ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಲು `ಆಹಾರ ಸುರಕ್ಷತಾ ಇಲಾಖೆ’ ಸೂಚನೆ.!

By kannadanewsnow5701/08/2025 6:29 AM

ಬೆಂಗಳೂರು: ರಾಜ್ಯದ ಜನರಲ್ಲಿ ಅಡುಗೆ ಎಣ್ಣೆಯಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆ ತಡೆಯುವ ನಿಟ್ಟಿನಲ್ಲಿ 6 ತಿಂಗಳಿಗೊಮ್ಮೆ ಅಡುಗೆ ಎಣ್ಣೆ ವಿಶ್ಲೇಷಣೆಗೆ ಒಳಪಡಿಸಲು ಆಹಾರ ಸುರಕ್ಷತಾ ಇಲಾಖೆ ಸೂಚನೆ ನೀಡಲಾಗಿದೆ.

ಈ ಕುರಿತು ಆಹಾರ ಸುರಕ್ಷತಾ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ದಿನಾಂಕ:30.07.2025ರಂದು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ಅಡುಗೆ ಎಣ್ಣೆಯಲ್ಲಿ Transfat ಕಡಿಮೆ ಇರುವ ಅಡುಗೆ ಎಣ್ಣೆಯನ್ನು ಉಪಯೋಗಿಸುವ ಬಗ್ಗೆ ಮತ್ತು ಉಪಯೋಗಿಸಿದ ಅಡುಗೆ ಎಣ್ಣೆಯನ್ನು (RUCO) ವಿಲೇವಾರಿ ಮಾಡುವ ಬಗ್ಗೆ ಮತ್ತು ಅಡುಗೆ ಎಣ್ಣೆ ತಯಾರಿಕ ಘಟಕಗಳಲ್ಲಿ ಸ್ವಚ್ಚತೆ ಪ್ಯಾಕೇಜಿಂಗ್, ಲೆಬೆಲಿಂಗ್ ಮತ್ತು ಆಯಿಲ್ ಫೋರ್ಟಿಫಿಕೇಶನ್ ಬಗ್ಗೆ ವೀಡಿಯೋ ಕಾನ್ಸ್‌ರೆನ್ಸ್ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭೆಗೆ ಜಿಲ್ಲಾ ಅಂಕಿತಾಧಿಕಾರಿಗಳು, ಅಡುಗೆ ತಯಾರಿಕಾ ಘಟಕದ ಮಾಲೀಕರು, ವ್ಯವಸ್ಥಾಪಕರು ಹೋಟೆಲ್ ಉದ್ದಿಮೆದಾರರ ಸಂಘದ ಪದಾಧಿಕಾರಿಗಳು, ಬೇಕರಿ ಸಂಘ ಪದಾಧಿಕಾರಿಗಳು, ಎಫ್.ಎಸ್.ಎಸ್.ಐ ನೊಂದಾಯಿತ RUCO ಏಜೆನ್ಸಿಗಳ ಮಾಲೀಕರು ಮತ್ತು ವ್ಯವಸ್ಥಾಪಕರು, Karnataka State Bio Diesel Development Board ಹಾಜರಿದ್ದರು. ಈ ಸಭೆಯಲ್ಲಿ ಆಯುಕ್ತರು ಎಲ್ಲಾ ಅಡುಗೆ ಎಣ್ಣೆ ತಯಾರಿಕಾ ಘಟಕದ ಮಾಲೀಕರಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಎಫ್.ಎಸ್.ಎಸ್. ನಿಯಮಾನುಸಾರ ಲೆಬಲಿಂಗ್ ಮತ್ತು ಆಯಿಲ್ ಫೋರ್ಟಿಫಿಕೇಶನ್ ಹೊಂದಿರುವ (Vitamin A & D) ಅಡುಗೆ ಎಣ್ಣೆಯನ್ನು ಸಾರ್ವಜನಿಕರಿಗೆ ಮಾರಾಟಮಾಡಲು ಕ್ರಮವಹಿಸಬೇಕೆಂದು ಮತ್ತು ಎಲ್ಲಾ ಆಯಿಲ್ ಉದ್ದಿಮೆದಾರರು ತಮ್ಮಲ್ಲಿ ತಯಾರಾದ ಎಣ್ಣೆಯನ್ನು ಪ್ರತಿ 06 ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಲು ತಿಳಿಸಲಾಯಿತು.

ಈ ಸಭೆಗೆ ವಿಡಿಯೋ ಕಾನ್ಸ್‌ರೆನ್ಸ್ ಮೂಲಕ ಹೆಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆಯ ಪ್ರಸಿದ್ಧ ಕ್ಯಾನ್ಸರ್ ತಜ್ಞರಾದ ಡಾ. ವಿಶಾಲ್ ರಾವ್ ರವರು Transfat ಕಡಿಮೆ ಇರುವ ಅಡುಗೆ ಎಣ್ಣೆಯನ್ನು ಅಡುಗೆಗೆ ಮತ್ತು ಬೇಕರಿ ಮಾಲೀಕರು ಉಪಯೋಗಿಸಬೇಕೆಂದು ತಿಳಿಸಿದರು. ಇದರಿಂದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಮತ್ತು ಅಸಂಕ್ರಾಮಿಕ ರೋಗಗಳು ತಡೆಗಟ್ಟಬಹುದೆಂದು ತಿಳಿಸಿದರು.

ಮುಂದುವರೆದು ಆಯುಕ್ತರು RUCO ಏಜೆನ್ಸಿರವರಿಗೆ 2024-25ನೇ ಮತ್ತು 2025-26ನೇ, ಸಾಲಿನಲ್ಲಿ ಒಟ್ಟು 32,68,990 ಲೀಟರ್ ಉಪಯೋಗಿಸಿದ ಎಣ್ಣೆಯನ್ನು ಸಂಗ್ರಹಣೆ ಮಾಡಿದ್ದೇವೆಂದು RUCO ಏಜೆನ್ಸ್ ಮಾಲೀಕರು ಆಯುಕ್ತರಿಗೆ ಮಾಹಿತಿ ನೀಡಿದರು ಮತ್ತು ಇನ್ನು ಹೆಚ್ಚು ಸಂಗ್ರಹಣೆ ಮಾಡಿ BIO DIESEL ತಯಾರಿಕೆ ಘಟಕಕ್ಕೆ ನೀಡಬೇಕೆಂದು ಎಫ್.ಎಸ್.ಎಸ್.ಎ ನೋಂದಾಯಿತ RUCO ಏಜೆನ್ಸಿಗಳಿಗೆ ತಿಳಿಸಲಾಯಿತು. ಮತ್ತು ಸಭೆಗೆ ಹಾಜರಿದ್ದ, ಹೋಟೆಲ್ ಸಂಘದ ಪದಾಧಿಕಾರಿಗಳಿಗೆ ತಾವುಗಳು ಉಪಯೋಗಿಸಿ ಉಳಿದ ಎಣ್ಣೆಯನ್ನು ಕಟ್ಟು ನಿಟ್ಟಾಗಿ RUCO ಏಜೆನ್ಸಿಗಳಿಗೆ ನೀಡಿ ಈ ಎಣ್ಣೆಯು ಮರುಬಳಕೆಯಾಗದಂತೆ ಸಹಕರಿಸಬೇಕೆಂದು ತಿಳಿಸಿದರು.

Health problem due to cooking oil in the state: Food Safety Department instructs to have it analyzed once every 6 months!
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ : ಬಾಲಕನ ಅಪಹರಿಸಿ ಹತ್ಯೆಗೈದು ಶವಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು.!

01/08/2025 6:33 AM1 Min Read

BIG NEWS : ಬೆಂಗಳೂರಿನ ಜನತೆಗೆ ಬಿಗ್ ಶಾಕ್ : ಇಂದಿನಿಂದ ‘ಆಟೋ ಮೀಟರ್ ದರ’ ಹೆಚ್ಚಳ | |Auto fare hike

01/08/2025 6:11 AM1 Min Read

ರೈತರಿಗೆ ಗುಡ್ ನ್ಯೂಸ್ : `ಇ-ಪೌತಿ’ ಆಂದೋಲನದ ಮೂಲಕ ವಾರಸುದಾರರ ಹೆಸರಿಗೆ `ಉಚಿತ ಪಹಣಿ’ ಪತ್ರ.!

01/08/2025 6:06 AM1 Min Read
Recent News

BREAKING : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ : ಬಾಲಕನ ಅಪಹರಿಸಿ ಹತ್ಯೆಗೈದು ಶವಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು.!

01/08/2025 6:33 AM

ರಾಜ್ಯದಲ್ಲಿ `ಅಡುಗೆ ಎಣ್ಣೆ’ಯಿಂದ ಆರೋಗ್ಯ ಸಮಸ್ಯೆ : 6 ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಲು `ಆಹಾರ ಸುರಕ್ಷತಾ ಇಲಾಖೆ’ ಸೂಚನೆ.!

01/08/2025 6:29 AM

BREAKING: ಗ್ರಾಹಕರಿಗೆ ಗುಡ್ ನ್ಯೂಸ್ : `LPG ವಾಣಿಜ್ಯ ಸಿಲಿಂಡರ್’ ಬೆಲೆ 33.50 ರೂ. ಇಳಿಕೆ | LPG Cylinder Price

01/08/2025 6:18 AM

BIG NEWS : ಬೆಂಗಳೂರಿನ ಜನತೆಗೆ ಬಿಗ್ ಶಾಕ್ : ಇಂದಿನಿಂದ ‘ಆಟೋ ಮೀಟರ್ ದರ’ ಹೆಚ್ಚಳ | |Auto fare hike

01/08/2025 6:11 AM
State News
KARNATAKA

BREAKING : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ : ಬಾಲಕನ ಅಪಹರಿಸಿ ಹತ್ಯೆಗೈದು ಶವಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು.!

By kannadanewsnow5701/08/2025 6:33 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಪ್ರತಿಷ್ಠಿತ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರೊಬ್ಬರ ಪುತ್ರನನ್ನು ಅಪಹರಿಸಿ ಕೊಲೆ…

ರಾಜ್ಯದಲ್ಲಿ `ಅಡುಗೆ ಎಣ್ಣೆ’ಯಿಂದ ಆರೋಗ್ಯ ಸಮಸ್ಯೆ : 6 ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಲು `ಆಹಾರ ಸುರಕ್ಷತಾ ಇಲಾಖೆ’ ಸೂಚನೆ.!

01/08/2025 6:29 AM

BIG NEWS : ಬೆಂಗಳೂರಿನ ಜನತೆಗೆ ಬಿಗ್ ಶಾಕ್ : ಇಂದಿನಿಂದ ‘ಆಟೋ ಮೀಟರ್ ದರ’ ಹೆಚ್ಚಳ | |Auto fare hike

01/08/2025 6:11 AM

ರೈತರಿಗೆ ಗುಡ್ ನ್ಯೂಸ್ : `ಇ-ಪೌತಿ’ ಆಂದೋಲನದ ಮೂಲಕ ವಾರಸುದಾರರ ಹೆಸರಿಗೆ `ಉಚಿತ ಪಹಣಿ’ ಪತ್ರ.!

01/08/2025 6:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.