Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮನೆಯಲ್ಲಿ `ಇನ್ವರ್ಟರ್ ಬ್ಯಾಟರಿ’ ಬಳಸುವವರು ತಪ್ಪದೇ ಇದನ್ಮೊಮ್ಮೆ ಓದಲೇಬೇಕು.!

06/02/2026 10:40 AM

ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರ ಬಂಧನ ಕೇಸ್ : ಸಿದ್ದಾಪುರ ಠಾಣೆಯ ಎಸ್ಐ, ಹೆಡ್ ಕಾನ್ಸ್ಟೇಬಲ್ ವರ್ಗಾವಣೆ

06/02/2026 10:40 AM

BREAKING: ಮ್ಯಾನ್ಮಾರ್ ನಲ್ಲಿ 4.9 ತೀವ್ರತೆಯ ಭೂಕಂಪ | Earthquake

06/02/2026 10:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆರೋಗ್ಯವೇ ಭಾಗ್ಯ ಚಿಕ್ಕಂದಿನಿಂದಲೇ ಚೆನ್ನಾಗಿ ಕಾಪಾಡಿಕೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ
KARNATAKA

ಆರೋಗ್ಯವೇ ಭಾಗ್ಯ ಚಿಕ್ಕಂದಿನಿಂದಲೇ ಚೆನ್ನಾಗಿ ಕಾಪಾಡಿಕೊಳ್ಳಿ: ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ

By kannadanewsnow0918/10/2025 9:17 PM

ಶಿವಮೊಗ್ಗ : ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಭಾಗ್ಯ ಚಿಕ್ಕಂದಿನಿಂದ ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಪ್ರಸ್ತುತ ದಿನಮಾನದಲ್ಲಿ ಯುವ ಸಮೂಹ ಒತ್ತಡದಿಂದ ಹೊರಗೆ ಬರಬೇಕು. ದೈನಂದಿನ ಚಟುವಟಿಕೆ ಜೊತೆಗೆ ಜಿಮ್, ಯೋಗ, ಧ್ಯಾನ, ವಾಕಿಂಗ್‌ನoತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸಲಹೆ ಮಾಡಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಒಕ್ಕಲಿಗರ ಸಭಾಭವನದಲ್ಲಿ ಶನಿವಾರ ಮಂಗಳೂರಿನ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಶಿಯೇಷನ್, ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಶಿಯೇಶನ್, ಸಾಧನಾ ಮಲ್ಟಿಜಿಮ್ ವತಿಯಿಂದ ದಿ. ರುಕ್ಮಿಣಿ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಶಿವಮೊಗ್ಗ ಜಿಲ್ಲಾಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ದಿನನಿತ್ಯ ಸೇವಿಸುವ ಆಹಾರ ಮನುಷ್ಯ ದೇಹದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಉತ್ತಮ ಫಸಲಿಗಾಗಿ ರಾಸಾಯನಿಕವನ್ನು ಹೆಚ್ಚು ಬಳಕೆ ಮಾಡಲಾಗುತ್ತಿದೆ. ಇದು ಪರೋಕ್ಷವಾಗಿ ನಮ್ಮ ದೇಹವನ್ನು ಸೇರುತ್ತಿದೆ. ಇದರ ಜೊತೆಗೆ ಜಂಕ್‌ಫುಡ್ ಸೇವನೆ ಆರೋಗ್ಯದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯ ಮಾರ್ಗ ಕಂಡು ಕೊಳ್ಳಬೇಕು. ದೈಹಿಕ ದೃಢತೆ ಜೊತೆಗೆ ಮಾನಸಿಕವಾಗಿಯೂ ನಾವು ಗಟ್ಟಿಯಾಗಲು ವ್ಯಾಯಾಮ ಶಾಲೆಗಳು ಹೆಚ್ಚು ಅಗತ್ಯ. ನಿರಂತರವಾಗಿ ದೈಹಿಕ ದೃಢತೆ ಕಾಪಾಡಿಕೊಂಡು ಬಂದರೆ ಅನಾರೋಗ್ಯದಿಂದ ದೂರ ಉಳಿಯಬಹುದು, ಕ್ರೀಡೆಯಲ್ಲಿ ನಿರಂತರತೆ ಅಗತ್ಯವಿದೆ ಎಂದು ಹೇಳಿದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾಗಾನಯನಂದ ಸ್ವಾಮೀಜಿ ಮಾತನಾಡಿ, ಸಾಧನಾ ಮಲ್ಟಿಜಿಮ್ ಉತ್ತಮವಾಗಿ ಕೆಲಸ ಮಾಡುವ ಜೊತೆಗೆ ಯುವ ಸಮೂಹವನ್ನು ಆರೋಗ್ಯದ ಕಡೆ ಕರೆದೊಯ್ಯುವ ಕೆಲಸ ಮಾಡುತ್ತಿದೆ. ಜಿಮ್ ಮುಖ್ಯಸ್ಥ ರಮೇಶ್ ತಮ್ಮ ತಾಯಿಯವರ ಹೆಸರಿನಲ್ಲಿ ಪವರ್ ಲಿಫ್ಟಿಂಗ್ ಸ್ಪರ್ಧೆ ಆಯೋಜಿಸುವ ಮೂಲಕ ಮಾದರಿಯಾಗಿದ್ದಾರೆ. ಪ್ರತಿಯೊಬ್ಬರಿಗೂ ತಂದೆತಾಯಿ ಜಗತ್ತಿನಲ್ಲಿ ಅತಿ ಶ್ರೇಷ್ಟ ವ್ಯಕ್ತಿಗಳಾಗಿರುತ್ತಾರೆ. ಅವರ ಹೆಸರಿನಲ್ಲಿ ಇಂತಹ ಕಾರ್ಯಕ್ರಮ ನಡೆಸುವುದು ಔಚಿತ್ಯಪೂರ್ಣ ಎಂದರು.

ಇದೇ ಸಂದರ್ಭದಲ್ಲಿ ರಾಷ್ಟಮಟ್ಟದ ವಿಶೇಷ ಒಲಿಂಪಿಕ್ಸ್ನ ಪವರ್ ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗೆದ್ದ ಮುಂಗರವಳ್ಳಿ ಚೈತನ್ಯ ವಿಶೇಷ ಮಕ್ಕಳ ಶಾಲೆಯ ಅನುಷಾ, ಶರತ್ ಶೆಟ್ಟಿ, ಸ್ನೇಹ ಅವರನ್ನು ಸನ್ಮಾನಿಸಲಾಯಿತು.

ಸಾಗರದ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಮಧುಮಾಲತಿ, ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಗುಂಡಪ್ಪ ಗೌಡ, ಮಂಜುನಾಥ್, ನಿಂಗಪ್ಪ ಬಿ.ಪುಷ್ಪ ರಮೇಶ್, ಪ್ರಕಾಶ್ ಕಾರಂತ್  ಅಭಿಷೇಕ್. ರಮೇಶ್ ಎನ್. ಧರ್ಮರಾಜ್ ಇತರರು ಹಾಜರಿದ್ದರು.

ಸಹಕಾರಿ ಸಂಸ್ಥೆಗಳಲ್ಲಿ ಸೇವೆಯೇ ಜೀವಾಳ, ರಾಜಕೀಯ ಪ್ರವೇಶ ಇರಬಾರದು: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

ರಾಜ್ಯದ ‘ಗ್ರಾಮೀಣ ಜನತೆ’ಗೆ ಮತ್ತೊಂದು ಗುಡ್ ನ್ಯೂಸ್: ಇನ್ಮುಂದೆ ಸಿಗಲಿದೆ ಗ್ರಾ.ಪಂ ವ್ಯಾಪ್ತಿಯಲ್ಲಿ ‘ಇ-ಸ್ವತ್ತು’

Share. Facebook Twitter LinkedIn WhatsApp Email

Related Posts

ALERT : ಮನೆಯಲ್ಲಿ `ಇನ್ವರ್ಟರ್ ಬ್ಯಾಟರಿ’ ಬಳಸುವವರು ತಪ್ಪದೇ ಇದನ್ಮೊಮ್ಮೆ ಓದಲೇಬೇಕು.!

06/02/2026 10:40 AM1 Min Read

ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರ ಬಂಧನ ಕೇಸ್ : ಸಿದ್ದಾಪುರ ಠಾಣೆಯ ಎಸ್ಐ, ಹೆಡ್ ಕಾನ್ಸ್ಟೇಬಲ್ ವರ್ಗಾವಣೆ

06/02/2026 10:40 AM1 Min Read

ಸಾಲದಿಂದ ಹೊರಬರಬೇಕೆಂದು ಬಯಸುವಿರಾ? ಸುಮ್ಮನೆ ಇದನ್ನು ಮಾಡಿ. ಸಂಪತ್ತು ತಾನಾಗಿಯೇ ಬರುತ್ತದೆ

06/02/2026 10:18 AM3 Mins Read
Recent News

ALERT : ಮನೆಯಲ್ಲಿ `ಇನ್ವರ್ಟರ್ ಬ್ಯಾಟರಿ’ ಬಳಸುವವರು ತಪ್ಪದೇ ಇದನ್ಮೊಮ್ಮೆ ಓದಲೇಬೇಕು.!

06/02/2026 10:40 AM

ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರ ಬಂಧನ ಕೇಸ್ : ಸಿದ್ದಾಪುರ ಠಾಣೆಯ ಎಸ್ಐ, ಹೆಡ್ ಕಾನ್ಸ್ಟೇಬಲ್ ವರ್ಗಾವಣೆ

06/02/2026 10:40 AM

BREAKING: ಮ್ಯಾನ್ಮಾರ್ ನಲ್ಲಿ 4.9 ತೀವ್ರತೆಯ ಭೂಕಂಪ | Earthquake

06/02/2026 10:36 AM

BREAKING : ಡ್ರಗ್ಸ್ ಹೊಂದಿದ ಆರೋಪ : ತಮಿಳು ನಟಿ ಅಂಜು ಕೃಷ್ಣ, ಸಹಾಯಕ ನಿರ್ದೇಶಕಿ ಸೇರಿದಂತೆ 8 ಜನರು ಅರೆಸ್ಟ್!

06/02/2026 10:30 AM
State News
KARNATAKA

ALERT : ಮನೆಯಲ್ಲಿ `ಇನ್ವರ್ಟರ್ ಬ್ಯಾಟರಿ’ ಬಳಸುವವರು ತಪ್ಪದೇ ಇದನ್ಮೊಮ್ಮೆ ಓದಲೇಬೇಕು.!

By kannadanewsnow5706/02/2026 10:40 AM KARNATAKA 1 Min Read

ಇಂದು ಪ್ರತಿ ಮನೆಯಲ್ಲೂ ಇನ್ವರ್ಟರ್ಗಳ ಬಳಕೆ ಹೆಚ್ಚಾಗಿದೆ. ಆಗಾಗ್ಗೆ ವಿದ್ಯುತ್ ಕಡಿತಗೊಂಡಾಗ ಫ್ಯಾನ್ಗಳು ಮತ್ತು ದೀಪಗಳನ್ನು ಚಲಾಯಿಸಲು ಇನ್ವರ್ಟರ್ಗಳು ಬಹಳ…

ಜ್ಯೋತಿಷಿ ಕಮಲಾಕರ ಭಟ್, ಸುಚಿತ್ರ ಬಂಧನ ಕೇಸ್ : ಸಿದ್ದಾಪುರ ಠಾಣೆಯ ಎಸ್ಐ, ಹೆಡ್ ಕಾನ್ಸ್ಟೇಬಲ್ ವರ್ಗಾವಣೆ

06/02/2026 10:40 AM

ಸಾಲದಿಂದ ಹೊರಬರಬೇಕೆಂದು ಬಯಸುವಿರಾ? ಸುಮ್ಮನೆ ಇದನ್ನು ಮಾಡಿ. ಸಂಪತ್ತು ತಾನಾಗಿಯೇ ಬರುತ್ತದೆ

06/02/2026 10:18 AM

ಪ್ರಯಾಣಿಕರೇ ಗಮನಿಸಿ : ರೈಲಿನಲ್ಲಿ `ಆರೋಗ್ಯ ತುರ್ತು ಪರಿಸ್ಥಿತಿ’ ಇದ್ದರೆ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ : ವೈದ್ಯರು ಬಂದು ಚಿಕಿತ್ಸೆ ನಿಡ್ತಾರೆ.!

06/02/2026 10:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.