Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

3 ದಿನಗಳ ಹರ್ ಘರ್ ತಿರಂಗಾ ಚಲನಚಿತ್ರೋತ್ಸವ ದೇಶಾದ್ಯಂತ ಆರಂಭ: ಭಾರತದ ಸ್ವಾತಂತ್ರ್ಯ, ಏಕತೆಯ ಕಥೆಗಳ ಪ್ರದರ್ಶನ

11/08/2025 10:10 PM

ಚಿಕ್ಕದಿದ್ರೂ ದೊಡ್ಡ ಕೆಲಸ.. ಊಟದ ನಂತ್ರ ಹೀಗೆ ಮಾಡಿದ್ರೆ, 48 ಗಂಟೆಗಳಲ್ಲಿ ಊಹಿಸದ ಬದಲಾವಣೆ

11/08/2025 10:05 PM

ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ ‘ಗ್ಯಾರೆಂಟಿ ಭಾಗ್ಯ’: ಆರ್.ಅಶೋಕ್

11/08/2025 10:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯೋಗ ಬಲ್ಲವನಿಗೆ ರೋಗ ಇಲ್ಲ, ವೈದ್ಯರು ನೀಡುವ ಔಶಧಿ ಗುಣ ಯೋಗದಲ್ಲಿದೆ: ಐಯುಡಿಪಿ ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷರಾದ ರಾಮಣ್ಣ
KARNATAKA

ಯೋಗ ಬಲ್ಲವನಿಗೆ ರೋಗ ಇಲ್ಲ, ವೈದ್ಯರು ನೀಡುವ ಔಶಧಿ ಗುಣ ಯೋಗದಲ್ಲಿದೆ: ಐಯುಡಿಪಿ ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷರಾದ ರಾಮಣ್ಣ

By kannadanewsnow0922/10/2024 4:45 PM

ಚಿತ್ರದುರ್ಗ:ಯೋಗ ಬಲ್ಲವನಿಗೆ ರೋಗ ಇಲ್ಲ. ವೈದ್ಯರು ನೀಡುವ ಔಶಧಿ ಗುಣ ಯೋಗದಲ್ಲಿದೆ ಎಂದು ಐಯುಡಿಪಿನಿಸರ್ಗ ಯೋಗ ಕೇಂದ್ರದ ಅಧ್ಯಕ್ಷರಾದ ರಾಮಣ್ಣ ತಿಳಿಸಿದರು.

ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದಲ್ಲಿ ನಡೆದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು,ನಮ್ಮ ಯೋಗ ಕೇಂದ್ರದ ಯೋಗಪಟುಗಳಾದ ಗೀತಮ್ಮ ಹಾಗು ವಾಸವಿಯವರು ಹರಿದ್ವಾರದಲ್ಲಿ ನಡೆದ ಶಿಕ್ಷಕ ತರಭೇತಿ ಶಿಭಿರದಲ್ಲಿ ಭಾಗವಹಿಸಿ ಯಶಸ್ವಿಯಾಗಿ ತರಭೇತಿ‌ಪಡೆದು ತವರಿಗೆ ಮರಳಿದ್ದಾರೆ.

ಇದು ನಮ್ಮ ಯೋಗ ಕೇಂದ್ರಕ್ಕೊಂದು ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಧನೆ ಇಡೀ ಹೆಣ್ಣು ಸಂಕುಲಕ್ಕೆ ಮಾದರಿ ಎನಿಸಿದೆ‌. ಇಂದು ಹೆಣ್ಣು ಸಂಕುಲವು ಯಾವುದರಲ್ಲು ಕಡಿಮೆ ಇಲ್ಲ. ಇಡೀ ಜಗತ್ತಿಗೆ ಹೆಣ್ಣಿನ‌ಸಾಧನೆ ಮಾದರಿ ಎನಿಸಿದೆ. ಹೆಣ್ಣು ಈಜಗತ್ತಿನ ಸೃಷ್ಟಿ ದೇವತೆ ಎನಿಸಿದ್ದಾರೆ. ಈ ಭೂಮಿ ಹೆಣ್ಣು,ನಾವು ನಿತ್ಯ ಖರ್ಚು ಮಾಡುವ ಲಕ್ಷ್ಮಿ ಹೆಣ್ಣು ಅಂತೆಯೇ ಕಲಿಯುವ ವಿದ್ಯೆ ಎನಿಸಿರುವ ಸರಸ್ವತಿ‌ ಕೂಡ ಹೆಣ್ಣಾಗಿದ್ದು, ಎಲ್ಲಾ‌ ಕ್ಷೇತ್ರಗಳಲ್ಲು ಹೆಣ್ಮಕ್ಕಳು ಸಾಧನೆಯಲ್ಲಿ ಮುಂದಿದ್ದಾರೆ. ಹೀಗಾಗಿ
ಹೆಣ್ಣುಮಕ್ಕಳು ಯಾವುದರಲ್ಲು ಕಡಿಮೆ ಇಲ್ಲ ಎನ್ನಿಸ್ತಿದೆ. ಒಂದು ಹೆಣ್ಣು ಮನಸು ಮಾಡಿದರೆ ಯಾವುದು ಕಷ್ಟಸಾದ್ಯ ಎನಿಸಿದ್ದು,ಮನೆಮಂದಿಯನ್ನು ಬಿಟ್ಟು ಯೋಗಸಾಧನೆಗಾಗಿ ಹರಿದ್ವಾರಕ್ಕೆ ತೆರಳಿ,ಅಲ್ಲಿ‌ಶಿಕ್ಷಕ ತರಭೇತಿ ಪಡೆದು ನಿಸ್ವಾರ್ಥದಿಂದ ಚಿತ್ರದುರ್ಗದಾದ್ಯಂತ ಯೋಗ ಸಂಘಟನೆಗೆ ಮುಂದಾಗಿರುವ ಇವರ ಕಾರ್ಯ ಶ್ಲಾಘನೀಯ ಎಂದರು.

ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ನಿಸರ್ಗ ಯೋಗ ಕೇಂದ್ರದ ಪ್ರಧಾನ ಕಾರ್ಯ ದರ್ಶಿ ಸಿದ್ದರಾಜು ಅವರು, ಯಾವುದೇ ಕ್ಷೇತ್ರದಲ್ಲಾಗಲಿ ಸಾಧಿಸಿದ ಸಾಧಕರನ್ನು ಗುರುತಿಸಿ,ಗೌರವಿಸಿದಾಗ ಅದು ಸಾಧಕರಿಗೆ ಸ್ಪೂರ್ತಿಯಾಗಲಿದೆ.ಹೀಗಾಗಿ ನಮ್ಮ ಸಂಘದ‌ವತಿಯಿಂದ ಹರಿದ್ವಾರಕ್ಕೆ ತೆರಳಿ ಯೋಗ ತರಭೇತಿ ಪಡೆದು ಮರಳಿರುವ ಸಾಧಕರಿಗೆ ಸನ್ಮಾನಿಸಿದ್ದು ಅರ್ಥಪೂರ್ಣ ಎನಿಸಿದೆ.

ಇಂತಹ ಕಾರ್ಯಗಳು ನಿರಂತರವಾಗಿರಬೇಕು.ಆಗ ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮಲಿವೆ.ಹಾಗೆಯೇ ಸಾಧಕರಾದ ವಾಸವಿ,ಗೀತಮ್ಮ ಇಬ್ಬರು‌ಸಹ ಉತ್ತಮ‌ಸ್ನೇಹಜೀವಿಗಳಾಗಿದ್ದಾರೆ‌.ಸಂಘಟನಾ ಚತುರರಾಗಿದ್ದಾರೆ.ಇಂತಹ ಸಾಧಕರು ಹರಿದ್ವಾರದಲ್ಲಿ ‌ಯೋಗ ತರಭೇತಿ ಪಡೆದು ಮರಳಿರೋದು‌ಚಿತ್ರದುರ್ಗ ಜಿಲ್ಲೆಗೊಂದು ಕೀರ್ತಿಯ ಕಳಶ ಎಂದರು.

ಬಳಿಕ ಮಾತನಾಡಿದ ಸನ್ಮಾನಿತರಾದ ಗೀತಮ್ಮ‌ಅವರು ಹರಿದ್ವಾರದಲ್ಲಿ ಯೋಗತರಭೇತಿ ಪಡೆದ ಕ್ಷಣಗಳನ್ನು ಸ್ಮರಿಸಿದರು.ನಾವು ನಿತ್ಯ‌ಯೋಗ, ಪ್ರಾಣಾಯಾಮ ಮಾಡಿದಷ್ಟು ನಮ್ಮ ದೇಹ ಕ್ಕೆ ಎನರ್ಜಿ ಸಿಗಲಿದೆ.ಪ್ರಾಣಯಾಮ ಮಾಡಿದಷ್ಟು ಆಯಸ್ಸು ಹೆಚ್ಚಾಗಲಿದೆ. ದೇಹ ನಿಧಾನವಾಗಿ ಶಕ್ತಿ ಪಡೆಯಲಿದೆ ಎಂದರು.ಜೊತೆಗೆ ದೈನಂದಿನ ಊಟೋಪಚಾರ ಪದ್ದತಿ ಅನುಸರಿಸಬೇಕು.ಆಹಾರ ಬಳಕೆಯಲ್ಲಿ ಹೆಚ್ಚು ದ್ವಿದಳ ಧಾನ್ಯ,ತರಕಾರಿ ಬಳಕೆ ಹಾಗು ಕಶಾಯ ಬಳಕೆಯಿಂದ ನಮ್ಮ ಆರೋಗ್ಯ‌ದ ಸ್ಥಿತಿಗತಿ ಸುಧಾರಣೆಯಾಗಲಿದೆ ಎಂದರು.

ಇದೇ ವೇಳೆ ಇನ್ನೋರ್ವ‌ಸಾಧಕಿ ವಾಸವಿ ಕೂಡ ‌ಅವರ ಅನಿಸಿಕೆ ತಿಳಿಸಿದ್ದು,ಹರಿದ್ವಾರದಲ್ಲಿ ‌ಶಿಸ್ತು,ಸಂಯಮ ಹಾಗು ಸಮಯ ಪಾಲನೆಯ ಮಹತ್ವ ತಿಳಿದೆವು.ಹರಿದ್ವಾರದಲ್ಲಿ ಗುರುಗಳು ಕಟ್ಟಿಸಿರುವ ಗೋಶಾಲೆ ಹಾಗು ಶಿಕ್ಷಣ ಸಂಸ್ಥೆಗಳನ್ನು ಕಂಡು ಪುಳಕಿತರಾದೆವು ಎಂದರು.

ಇನ್ನು ಇದೇ ವೇಳೆ ಸಾಧಕರರನ್ನು ಅಭಿನಂದಿಸಿದ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗು ಯೋಗ ಕೇಂದ್ರದ‌ಉಪಾಧ್ಯಕ್ಷರಾದ ಅನುಸೂಯ ಅವರು ದೇಶ ಸುತ್ತಬೇಕು ಅಥವಾ ಕೋಶ ಓದಬೇಕೆಂಬಂತೆ ನಮ್ಮ ಯೋಗ ಕೇಂದ್ರದ ಗೀತಮ್ಮ‌ಮತ್ತುವಾಸವಿ ಹರಿದ್ವಾರಕ್ಕೆ ತೆರಳಿ ಯೋಗದ ತರಭೇತಿ ಪಡೆದಿರೋದು ಅಭಿನಂದನಾರ್ಹ.

ಅವರು ಹರಿದ್ವಾರಕ್ಕೆ ತೆರಳಿದ್ದು ಸಂತಸ ತಂದಿದೆ ಎಂದರು.ಬಳಿಕ ಬಸವೇಶ್ವರ ಆಸ್ಪತ್ರೆಯ ಮಂಜುಳ ಅವರು ಮಾತನಾಡಿದ್ದುಯೋಗ ಅಂದ್ರೆ ನಮಗೆಲ್ಲಾ ತುಂಭ ಇಷ್ಟ. ಆದರೆ ಆರಂಭದ ದಿನಗಳಲ್ಲಿ ಯೋಗದ ಮಹತ್ವ ಜನರಗೆ ತಿಳಿಯಲಿಲ್ಲ.ಯೋಗ ಇಂದು ಹೆಮ್ಮರವಾಗಿ‌ಬೆಳೆದಿದೆ.

ಅಂದು ಯಾವುದೇ ರೀತಿಯ ಯೋಗ ತರಭೇತಿಗಳಿರಲಿಲ್ಲ.ಈಗ ಯೋಗ ಕಲಿಸಲೆಂದೇ ಇಂತಹ ಶಿಕ್ಷಣ ತರಭೇತಿಯನ್ನು ನೀಡ್ತಿರೋದು ಸಂತೋಷದ ಸಂಗತಿಯಾಗಿದೆ. ನಾವು ನಿತ್ಯ ಯೋಗದ ವೇಳೆ ಪ್ರಾರ್ಥಿಸುವ ಮಂತ್ರ ನಮ್ಮ ಜೀವನಕ್ಕೆ ದಾರಿದೀಪವಾಗಲಿದೆ ಎಂದರು.ಇವರೊಂದಿಗೆ ಅನೇಕ ಜನ ಯೋಗಪಟುಗಳು ಅವರ ಅಭಿಪ್ರಾಯ ಹಂಚಿಕೊಡಿದ್ದು,ಯೋಗ ಶಿಕ್ಷಕಿ ಹಾಗು ಅಂಗನವಾಡಿ ಕಾರ್ಯಕರ್ತೆ ಮಂಜುಳ‌ ಯೋಗಕೇಂದ್ರವೊಂದು ಕುಟುಂಬದಂತೆ.ನಾವೆಲ್ಲರು ಒಟ್ಟಾಗಿ‌ಯೋಗ ಮಾಡುವ ಮೂಲಕ ಶಿಸ್ತು ಕಲಿಯುತ್ತೇವೆ.

ಆರೋಗ್ಯ ಕಾಪಾಡಿಕೊಳ್ತೇವೆ.ಇಲ್ಲಿ ಯಾವ್ದೇ ದ್ವೇಷ,ಅಸೂಯೆ ಹಾಗು ಅಸಮಾನತೆ ಬೆಳೆಸಿಕೊಳ್ಳದೇ‌ನಿಸ್ವಾರ್ಥದಿಂದ ಯೋಗಾಭ್ಯಾಸ ಮಾಡಬೇಕು ಎಂದರು.ಈ ವೇಳೆ ಯೋಗ ಸಾಧಕರಾದ. ವಾಸವಿ ಹಾಗು ಗೀತಮ್ಮ ಅವರನ್ನು ಯೋಗ ಕೇಂದ್ರದ ಪಧಾಧಿಕಾರಿಗಳೆಲ್ಲರು ಸೇರಿ ಅಭಿನಂಧಿಸಿದರು.ಸಾಧಕರ ಮೇಲೆ ಹೂಮಳೆ‌ಸುರಿಸಿ‌‌ ಸನ್ಮಾನಿಸಿದರು.ಎಲ್ಲರಿಗೂ ಸಿಹಿ ಹಂಚಿ‌ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹಲಿಂಗಪ್ಪ‌ನಿರೂಪಿಸಿದರು.ಅನುಸೂಯ ಸ್ವಾಗತಿಸಿದರು.ಮಂಜುಳ ಪ್ರಾರ್ಥಿಸಿದರು‌.ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ಯೋಗ ಪಟುಗಳಾದ ಜಯ್ಯಣ್ಣ, ಡಯಟ್ ಸುಪರಿಡೆಂಟ್ ಗೀತಾ, ಭದ್ರಾ ಮೇಲ್ದಂಡೆ ಕಚೇರಿಯ ಇಂಜಿನಿಯರ್ ದಿವ್ಯ, ಪುಷ್ಪ, ಪುಷ್ಪವತಿ, ಸಂಯಕ್ತ, ಸ್ವಾಮಿ, ಅಣ್ಣೇಶ್, ಶೇಖರಪ್ಪ, ಕೌಸಲ್ಯ, ಶಿಕ್ಷಕರಾದ ಅನಿತ, ಲೀಲಾವತಿ, ಸ್ವಾಮಿ, ಲತಾ, ರಂಗಮ್ಮ ಸೇರಿದಂತೆ ಮಹಿಳಾ‌ ಯೋಗ ಕೇಂದ್ರದ ಯೋಗ ಪಟುಗಳು ಸೇರಿ ಇತರರು ಇದ್ದರು.

ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut In Bengaluru

BREAKING: ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ: ಅವಶೇಷಗಳಡಿ ಹಲವು ಕಾರ್ಮಿಕರು ಸಿಲುಕಿರುವ ಶಂಕೆ

Share. Facebook Twitter LinkedIn WhatsApp Email

Related Posts

3 ದಿನಗಳ ಹರ್ ಘರ್ ತಿರಂಗಾ ಚಲನಚಿತ್ರೋತ್ಸವ ದೇಶಾದ್ಯಂತ ಆರಂಭ: ಭಾರತದ ಸ್ವಾತಂತ್ರ್ಯ, ಏಕತೆಯ ಕಥೆಗಳ ಪ್ರದರ್ಶನ

11/08/2025 10:10 PM5 Mins Read

ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ ‘ಗ್ಯಾರೆಂಟಿ ಭಾಗ್ಯ’: ಆರ್.ಅಶೋಕ್

11/08/2025 10:05 PM1 Min Read

ಕಾನನ ಪ್ರದೇಶದೊಳಗೆ ಸಾಗುವ ರಸ್ತೆಗಳಲ್ಲಿ ಅರಣ್ಯ ಇಲಾಖೆಯ ಗಸ್ತು ವಾಹನ ನಿಯೋಜನೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ

11/08/2025 10:01 PM1 Min Read
Recent News

3 ದಿನಗಳ ಹರ್ ಘರ್ ತಿರಂಗಾ ಚಲನಚಿತ್ರೋತ್ಸವ ದೇಶಾದ್ಯಂತ ಆರಂಭ: ಭಾರತದ ಸ್ವಾತಂತ್ರ್ಯ, ಏಕತೆಯ ಕಥೆಗಳ ಪ್ರದರ್ಶನ

11/08/2025 10:10 PM

ಚಿಕ್ಕದಿದ್ರೂ ದೊಡ್ಡ ಕೆಲಸ.. ಊಟದ ನಂತ್ರ ಹೀಗೆ ಮಾಡಿದ್ರೆ, 48 ಗಂಟೆಗಳಲ್ಲಿ ಊಹಿಸದ ಬದಲಾವಣೆ

11/08/2025 10:05 PM

ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ ‘ಗ್ಯಾರೆಂಟಿ ಭಾಗ್ಯ’: ಆರ್.ಅಶೋಕ್

11/08/2025 10:05 PM

ಕಾನನ ಪ್ರದೇಶದೊಳಗೆ ಸಾಗುವ ರಸ್ತೆಗಳಲ್ಲಿ ಅರಣ್ಯ ಇಲಾಖೆಯ ಗಸ್ತು ವಾಹನ ನಿಯೋಜನೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ

11/08/2025 10:01 PM
State News
KARNATAKA

3 ದಿನಗಳ ಹರ್ ಘರ್ ತಿರಂಗಾ ಚಲನಚಿತ್ರೋತ್ಸವ ದೇಶಾದ್ಯಂತ ಆರಂಭ: ಭಾರತದ ಸ್ವಾತಂತ್ರ್ಯ, ಏಕತೆಯ ಕಥೆಗಳ ಪ್ರದರ್ಶನ

By kannadanewsnow0911/08/2025 10:10 PM KARNATAKA 5 Mins Read

ನವದೆಹಲಿ: ಹರ್ ಘರ್ ತಿರಂಗಾ – ದೇಶಭಕ್ತಿಯ ಚಲನಚಿತ್ರೋತ್ಸವವು ಇಂದು ಉತ್ಸಾಹಭರಿತ ಪ್ರತಿಕ್ರಿಯೆಯೊಂದಿಗೆ ಪ್ರಾರಂಭವಾಯಿತು, ಇದು ಭಾರತದ ಸ್ವಾತಂತ್ರ್ಯಕ್ಕೆ ಮೂರು ದಿನಗಳ…

ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ ‘ಗ್ಯಾರೆಂಟಿ ಭಾಗ್ಯ’: ಆರ್.ಅಶೋಕ್

11/08/2025 10:05 PM

ಕಾನನ ಪ್ರದೇಶದೊಳಗೆ ಸಾಗುವ ರಸ್ತೆಗಳಲ್ಲಿ ಅರಣ್ಯ ಇಲಾಖೆಯ ಗಸ್ತು ವಾಹನ ನಿಯೋಜನೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ

11/08/2025 10:01 PM

ಸಾಗರದಲ್ಲಿ ಧರ್ಮಸ್ಥಳ ಕ್ಷೇತ್ರದ ಗೌರವ, ಘನತೆ ಕುಗ್ಗಿಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ನಾಗರೀಕ ಸಮಿತಿ ಒತ್ತಾಯ

11/08/2025 8:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.