Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಿಡ್ನಿ ವೈಫಲ್ಯ ಆಗುವವರೆಗೂ ಕಾಯ್ಬೇಡಿ, ಈ 4 ಪರೀಕ್ಷೆಗಳು ನಿಮ್ಮ ಜೀವ ಉಳಿಸ್ಬೋದು!

24/12/2025 10:03 PM

Dhanushkodi Tragedy : ಇಡೀ ರೈಲು ಸಮುದ್ರದಲ್ಲಿ ಮುಳುಗಿತು.! ಭಾರತದ ಅತಿ ದೊಡ್ಡ ದುರಂತಕ್ಕೆ 59 ವರ್ಷ!

24/12/2025 9:49 PM

BIG NEWS : ಬ್ಯಾಲೆಟ್ ಪೇಪರ್ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ : ಕಾಂಗ್ರೆಸ್ ಗೆ ಬಿವೈ ವಿಜಯೇಂದ್ರ ತಿರುಗೇಟು

24/12/2025 9:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೈಕೋರ್ಟ್ ತೀರ್ಪು ‘ಪೋಲಿಟಿಕಲ್ ಜಡ್ಜ್ ಮೆಂಟ್’ ಜಮೀರ್ ಹೇಳಿಕೆಯಿಂದ ನ್ಯಾಯಾಂಗ ನಿಂದನೆ: ಭಗವಂತ ಖುಬಾ ಆಕ್ರೋಶ
KARNATAKA

ಹೈಕೋರ್ಟ್ ತೀರ್ಪು ‘ಪೋಲಿಟಿಕಲ್ ಜಡ್ಜ್ ಮೆಂಟ್’ ಜಮೀರ್ ಹೇಳಿಕೆಯಿಂದ ನ್ಯಾಯಾಂಗ ನಿಂದನೆ: ಭಗವಂತ ಖುಬಾ ಆಕ್ರೋಶ

By kannadanewsnow0926/09/2024 4:38 PM

ಮಂಡ್ಯ : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಹೈಕೋರ್ಟ್ ತೀರ್ಪು ‘ಪೋಲಿಟಿಕಲ್ ಜಡ್ಜ್ ಮೆಂಟ್’ ಎಂದು ಸಚಿವ ಜಮೀರ್ ಅಹ್ಮದ್ ಹೇಳಿಕೆಯಿಂದ ನ್ಯಾಯಾಂಗ ನಿಂದನೆಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖುಬಾ ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರು ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ಮುಡಾ ಹಗರಣ ಪ್ರಕರಣದಲ್ಲಿ ಹೈಕೋರ್ಟ್ ರಾಜ್ಯಪಾಲರ ನಿರ್ಧಾರ ಎತ್ತಿಹಿಡಿದು ತನಿಖೆಗೆ ಆದೇಶಿಸಿದೆ. ಸಂವಿಧಾನಕ್ಕೆ ಅಪಮಾನ ಮಾಡಿದರೆ ಸಹಿಸಲ್ಲ, ನ್ಯಾಯಾಲಯದ ಬಗ್ಗೆ ಮಾತನಾಡುವಾಗ ಜಮೀರ್ ಗೆ ಮಾತಿನ ಮೇಲೆ ನಿಗಾ ಇರಬೇಕು. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನಕ್ಕೆ ಅಪಮಾನ ಮಾಡಿದರೆ ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನ್ಯಾಯಾಂಗ ವ್ಯವಸ್ಥೆಯ ತೀರ್ಪು ಅಂತಿಮವಾದ್ದದ್ದು. ಅದರ ವಿರುದ್ಧ ಹೇಳಿಕೆ ನೀಡುವುದು, ತೀರ್ಪಿನ ಕುರಿತು ಬಹಿರಂಗವಾಗಿ ಮಾತನಾಡುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಒಂದು ವೇಳೆ ತೀರ್ಪು ನಿಮಗೆ ಸಮಂಜಸವಾಗದಿದ್ದಲ್ಲಿ, ಸಮಾಧಾನ ತರದಿದ್ದಲ್ಲಿ ನೀವು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದನ್ನು ಹೊರತುಪಡಿಸಿ ಹೀಗೆ ತೀರ್ಪಿನ ಮೇಲೆ ಅನುಮಾನ ರೀತಿಯ ಮಾತನಾಡಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಕಿಡಿಕಾರಿದರು.

ಇನ್ನು ಈ ನೆಲದ ಕಾನೂನಿನ ಮೇಲೆ ನಿಮಗೆ ಗೌರವವಿದ್ದರೆ ನಿಮ್ಮ ಭಂಡತನವನ್ನು ಬಿಟ್ಟು ತಕ್ಷಣವೇ ರಾಜೀನಾಮೆ ನೀಡಿ ತನಿಖೆ ಎದುರಿಸಿ. ನೀವು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಬಲಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಹೀಗಾಗಿ ನನಗೆ 10 ಜಿಲ್ಲೆಗಳ ಪರಿಶೀಲನಾ ಮೇಲುಸ್ತುವಾರಿಯನ್ನು ನೀಡಲಾಗಿದ್ದು, ಪ್ರಥಮವಾಗಿ ಮದ್ದೂರಿನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ 4 ಲಕ್ಷ ಸದಸ್ಯತ್ವದ ಗುರಿಯನ್ನು ಹೊಂದಲಾಗಿದ್ದು, ಹೀಗಾಗಿ ನಮ್ಮ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಮತ್ತಷ್ಟು ಸದಸ್ಯತ್ವಕ್ಕೆ ಸೇರ್ಪಡೆ ಮಾಡಬೇಕೆಂದು ತಿಳಿಸಿದರು.

ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮನ್ ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಮುಖಂಡರಾದ ವಿವೇಕ್, ಎಂ‌.ಸಿ.ಸಿದ್ದು, ಕೆಂಪುಬೋರಯ್ಯ, ಮಧು, ಸುಧಾಕರ್, ಮಲ್ಲಿಕಾರ್ಜುನ, ಶಿವಕುಮಾರ್, ದ್ಯಾವಯ್ಯ ಮತ್ತಿತರರು ಇದ್ದರು.

ವರದಿ: ಗಿರೀಶ್ ರಾಜ್, ಮಂಡ್ಯ

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ‘CBI ಮುಕ್ತ ಅನುಮತಿ ಅಧಿಸೂಚನೆ’ ವಾಪಾಸ್ಸಿಗೆ ಮಹತ್ವದ ನಿರ್ಧಾರ

BREAKING:ಅಕ್ರಮ ಹಣ ವರ್ಗಾವಣೆ ಪ್ರಕರಣ: ತಮಿಳುನಾಡಿನ ಮಾಜಿ ಸಚಿವ ಸೆಂಥಿಲ್ ಬಾಲಾಜಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು

BREAKING: ‘ಗ್ರಾಮೀಣ ಪತ್ರಕರ್ತ’ರಿಗೆ ಭರ್ಜರಿ ಸಿಹಿಸುದ್ದಿ: ‘ಉಚಿತ ಬಸ್ ಪಾಸ್’ ವಿತರಣೆಗೆ ‘ರಾಜ್ಯ ಸರ್ಕಾರ’ ಆದೇಶ | Journalist Bus Pass

Share. Facebook Twitter LinkedIn WhatsApp Email

Related Posts

BIG NEWS : ಬ್ಯಾಲೆಟ್ ಪೇಪರ್ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ : ಕಾಂಗ್ರೆಸ್ ಗೆ ಬಿವೈ ವಿಜಯೇಂದ್ರ ತಿರುಗೇಟು

24/12/2025 9:36 PM1 Min Read

ರಾಜ್ಯದಲ್ಲಿ ಮಂಗನ ಕಾಯಿಲೆ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ಅಲರ್ಟ್ : ಮತ್ತೊಂದು ಲ್ಯಾಬ್ ಸ್ಥಾಪನೆಗೆ ಸರ್ಕಾರ ನಿರ್ಧಾರ

24/12/2025 9:20 PM1 Min Read

ಕ್ರಿಸ್ಮಸ್, ನ್ಯೂ ಇಯರ್ ಗೆ ಕೇಕ್ ತಿನ್ನುವ ಮುನ್ನ ಇರಲಿ ಎಚ್ಚರ : ಈ ಎಲ್ಲ ಕಾಯಿಲೆಗಳು ಬರೋದು ಗ್ಯಾರಂಟಿ!

24/12/2025 8:41 PM2 Mins Read
Recent News

ಕಿಡ್ನಿ ವೈಫಲ್ಯ ಆಗುವವರೆಗೂ ಕಾಯ್ಬೇಡಿ, ಈ 4 ಪರೀಕ್ಷೆಗಳು ನಿಮ್ಮ ಜೀವ ಉಳಿಸ್ಬೋದು!

24/12/2025 10:03 PM

Dhanushkodi Tragedy : ಇಡೀ ರೈಲು ಸಮುದ್ರದಲ್ಲಿ ಮುಳುಗಿತು.! ಭಾರತದ ಅತಿ ದೊಡ್ಡ ದುರಂತಕ್ಕೆ 59 ವರ್ಷ!

24/12/2025 9:49 PM

BIG NEWS : ಬ್ಯಾಲೆಟ್ ಪೇಪರ್ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ : ಕಾಂಗ್ರೆಸ್ ಗೆ ಬಿವೈ ವಿಜಯೇಂದ್ರ ತಿರುಗೇಟು

24/12/2025 9:36 PM

‘ಭಾವನೆಗಳಿಗೆ ನೋವುಂಟಾಗಿದೆ’ : ಥೈಲ್ಯಾಂಡ್ ಕಾಂಬೋಡಿಯಾ ಗಡಿಯಲ್ಲಿ ವಿಷ್ಣು ಪ್ರತಿಮೆ ಧ್ವಂಸಕ್ಕೆ ಭಾರತ ಕಳವಳ

24/12/2025 9:26 PM
State News
KARNATAKA

BIG NEWS : ಬ್ಯಾಲೆಟ್ ಪೇಪರ್ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ : ಕಾಂಗ್ರೆಸ್ ಗೆ ಬಿವೈ ವಿಜಯೇಂದ್ರ ತಿರುಗೇಟು

By kannadanewsnow0524/12/2025 9:36 PM KARNATAKA 1 Min Read

ಬೆಂಗಳೂರು : ನಾಳೆ ರಾಜ್ಯಾದ್ಯಂತ ವಾಜಪೇಯಿ ಅವರ ಹುಟ್ಟುಹಬ್ಬ ಆಚರಣೆ ಮಾಡುತ್ತೇವೆ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದಿದೆ.…

ರಾಜ್ಯದಲ್ಲಿ ಮಂಗನ ಕಾಯಿಲೆ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ಅಲರ್ಟ್ : ಮತ್ತೊಂದು ಲ್ಯಾಬ್ ಸ್ಥಾಪನೆಗೆ ಸರ್ಕಾರ ನಿರ್ಧಾರ

24/12/2025 9:20 PM

ಕ್ರಿಸ್ಮಸ್, ನ್ಯೂ ಇಯರ್ ಗೆ ಕೇಕ್ ತಿನ್ನುವ ಮುನ್ನ ಇರಲಿ ಎಚ್ಚರ : ಈ ಎಲ್ಲ ಕಾಯಿಲೆಗಳು ಬರೋದು ಗ್ಯಾರಂಟಿ!

24/12/2025 8:41 PM

BIG NEWS : ಪೋಲೀಸರ ಭರ್ಜರಿ ಕಾರ್ಯಾಚರಣೆ : ಯುವಕನನ್ನು ಕೊಂದ ಅರ್ಧಗಂಟೆಯಲ್ಲೇ ಆರೋಪಿಗಳು ಅರೆಸ್ಟ್!

24/12/2025 8:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.