ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಯ ನಿದ್ದೆ ಕೆಡಿಸಿದ್ಯಾ? ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ನಾಯಕರ ಮೇಲಿನ ಬಿಜೆಪಿ ದ್ವೇಷವು ಎಷ್ಟು ಕ್ರೂರವಾಗಿದೆ ಎಂದರೆ, ನ್ಯಾಯದ ಪ್ರಜ್ಞೆಯೇ ಅವರಿಗೆ ಕಳೆದು ಹೋಗಿದೆ ಅನ್ನಿಸುತ್ತೆ ಎಂಬುದಾಗಿ ಕಾಂಗ್ರೆಸ್ ನ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬಡವರು, ರೈತರು, ಮಧ್ಯಮವರ್ಗದವರೂ ಸೇರಿದಂತೆ ಎಲ್ಲಾ ವರ್ಗದ ಏಳಿಗೆಗಾಗಿ ದುಡಿಯುತ್ತಿರುವ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಮಸಿ ಬಳಿಯಲು ಬಿಜೆಪಿ ವಾಮ ಮಾರ್ಗಗಳನ್ನು ಅನುಸರಿಸುವ ದುಷ್ಟ ಪ್ರಯತ್ನಕ್ಕೆ ಕೈ ಹಾಕಿದೆ. ಇದಕ್ಕಾಗಿ ಕಾಂಗ್ರೆಸ್ನ ಪರಿಶಿಷ್ಟ ಪಂಗಡದ ಸಂಸದ ತುಕಾರಾಂ, ಪರಿಶಿಷ್ಟ ಪಂಗಡದ ಶಾಸಕರಾದ ನಾಗೇಂದ್ರ, ಕಂಪ್ಲಿ ಗಣೇಶ್ ಮತ್ತು ಶ್ರೀನಿವಾಸ್, ಜೊತೆಗೆ ಶಾಸಕ ಭರತ್ ರೆಡ್ಡಿ ಅವರ ಮೇಲೆ ಇಡಿ ದಾಳಿ ನಡೆಸಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ, ಬಿಜೆಪಿಯ ಕೈಗೊಂಬೆ ED, ಈಗ ಕಾಂಗ್ರೆಸ್ ಶಾಸಕರ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ, ಬಿಜೆಪಿ ಇದೇ ದುರುದ್ದೇಶಪೂರಿತ ED ಯಂತ್ರವನ್ನು ಬಳಸಿ ಒಬಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಮಣ್ಣಿನ ಮಗ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೂ ಇದೇ ರೀತಿಯ ದಾಳಿಗೆ ಸಂಚು ನಡೆಸಿತ್ತು. ನಂತರ, ದಲಿತ ನಾಯಕ ಮತ್ತು ಗೃಹ ಸಚಿವ ಡಾ. ಪರಮೇಶ್ವರ್ ಅವರ ಮೇಲೂ ED ದಾಳಿಗಳನ್ನು ನಡೆಸಿತು, ಈಗ ಪರಿಶಿಷ್ಟ ಪಂಗಡದ ಸಂಸದರು ಮತ್ತು ಶಾಸಕರ ಮೇಲೆ ದಾಳಿ ಮಾಡಲಾಗುತ್ತಿದೆ ಎಂಬುದಾಗಿ ಆರೋಪಿಸಿದ್ದಾರೆ.
ದ್ವೇಷ ರಾಜಕೀಯ ಅನ್ನೋದು ಬಿಜೆಪಿಯ ನರನಾಡಿಯಲ್ಲೂ ಹರಿದಾಡುತ್ತಿದೆ ಅನ್ನಿಸುತ್ತೆ, ಅದಕ್ಕಾಗಿ ಕೇವಲ ರಾಜಕೀಯ ದ್ವೇಷದಿಂದ ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ಮಾಡಲು ಸರ್ಕಾರಿ ಏಜೆನ್ಸಿಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಆದರೆ ಇವರ ಇಡಿ ದಾಳಿ ಕೇವಲ ರಾಜಕೀಯ ಪ್ರೇರಿತ ಅನ್ನೋದು ಕನ್ನಡಿಯಲ್ಲಿ ಕಂಡಷ್ಟೇ ಸತ್ಯ, ಕಳೆದ 10 ವರ್ಷಗಳಲ್ಲಿ ರಾಜಕೀಯ ಪ್ರೇರಿತ 193 ಇಡಿ ಕೇಸ್ ಗಳು ದಾಖಲಾಗಿವೆ. ಆದರೆ ಶಿಕ್ಷೆ ದೊರಕಿರುವುದು ಮಾತ್ರ ಎರಡೇ ಎರಡು ಪ್ರಕರಣಗಳಲ್ಲಿ. ಅಂದರೆ ಇವರು ಗೊಂಬೆಯಾಟದ ಇಡಿಯನ್ನು ಬಳಸುತ್ತಿರುವುದು ವಿರೋಧ ಪಕ್ಷಗಳನ್ನು ಹೆದರಿಸಲು ಮತ್ತು ಹಣಿಯಲು ಅಷ್ಟೇ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ ಇಟ್ಟಂತೆ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಷ್ಟೇ ದುಷ್ಟಪ್ರಯತ್ನಗಳಿಗೆ ಕೈ ಹಾಕಿದರೂ ಕಾಂಗ್ರೆಸ್ ಪಕ್ಷದ ಒಗ್ಗಟ್ಟನ್ನಾಗಲಿ ಅಥವಾ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗಲಿ ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಯ ನಿದ್ದೆ ಕೆಡಿಸಿದ್ಯಾ?
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ನಾಯಕರ ಮೇಲಿನ ಬಿಜೆಪಿ ದ್ವೇಷವು ಎಷ್ಟು ಕ್ರೂರವಾಗಿದೆ ಎಂದರೆ, ನ್ಯಾಯದ ಪ್ರಜ್ಞೆಯೇ ಅವರಿಗೆ ಕಳೆದು ಹೋಗಿದೆ ಅನ್ನಿಸುತ್ತೆ…
ಬಡವರು, ರೈತರು, ಮಧ್ಯಮವರ್ಗದವರೂ ಸೇರಿದಂತೆ ಎಲ್ಲಾ ವರ್ಗದ…
— Randeep Singh Surjewala (@rssurjewala) June 11, 2025
BREAKING: UPSC CSE ಪ್ರಿಲಿಮ್ಸ್ 2025ರ ಫಲಿತಾಂಶ ಪ್ರಕಟ | UPSC CSE Prelims 2025 result
BIG NEWS : ಪ್ರಧಾನಿ ಮೋದಿಯಿಂದ ದೇಶದ ಬಡತನ ಕಡಿಮೆಯಾಗಿಲ್ಲ : CM ಸಿದ್ದರಾಮಯ್ಯ ವಾಗ್ದಾಳಿ