Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಆಪರೇಷನ್ ಸಿಂಧೂರ್ ಮೈದಾನದಲ್ಲಿ’: ಏಷ್ಯಾಕಪ್ ಫೈನಲ್ ನಲ್ಲಿ ಭಾರತ ಪಾಕ್ ತಂಡವನ್ನು ಮಣಿಸಿದ ನಂತರ ಪ್ರಧಾನಿ ಮೋದಿ

29/09/2025 7:11 AM

ರಾಜ್ಯದ ಶಾಲಾ ಮಕ್ಕಳಿಗೆ ʻಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನʼ ಆಚರಣೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

29/09/2025 7:10 AM

Shocking: ಮದ್ಯ ಖರೀದಿಸಲು ಹಣ ನಿರಾಕರಿಸಿದ ತಾಯಿಯನ್ನು ಹೊಡೆದು ಕೊಂದ ಪಾಪಿ ಮಗ

29/09/2025 7:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಶಾಲಾ ಮಕ್ಕಳಿಗೆ ʻಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನʼ ಆಚರಣೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ
KARNATAKA

ರಾಜ್ಯದ ಶಾಲಾ ಮಕ್ಕಳಿಗೆ ʻಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನʼ ಆಚರಣೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

By kannadanewsnow5729/09/2025 7:10 AM

ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ಸಂಭ್ರಮ ಶನಿವಾರ’- (ಬ್ಯಾಗ್ ರಹಿತ ದಿನ – No Bag Day) – ಕಾರ್ಯಕ್ರಮದ ವರದಿಯನ್ನು ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಶಾಲಾ ಬ್ಯಾಗ್ ಹೊರೆಯನ್ನು ತಗ್ಗಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವನ್ನು ಆಚರಿಸುವಂತೆ ಉಲ್ಲೇಖ-1 ರ ಪತ್ರದಲ್ಲಿ ಆದೇಶಿಸಲಾಗಿದೆ. ಅದರಂತೆ, ಪ್ರಸಕ್ತ ಸಾಲಿನಲ್ಲಿ ಕ್ರಮವಹಿಸಲು ಉಲ್ಲೇಖ-2 ರ ಸುತ್ತೋಲೆಯಲ್ಲಿ ಮಾರ್ಗದರ್ಶನ ನೀಡಲಾಗಿದೆ.

ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು, ವಿವಿಧ ಥೀಮ್ ಗಳನ್ನು ಆಧರಿಸಿ ವಿದ್ಯಾರ್ಥಿಗಳಿಗಾಗಿ 10 ಸ್ವಯಂ ವಿವರಣಾತ್ಮಕ ಮಾಡ್ಯೂಲ್ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು DSERT ವತಿಯಿಂದ ಸಿದ್ಧಪಡಿಸಲಾಗಿದೆ. ಸದರಿ ಮಾಡ್ಯೂಲ್ ಗಳು ಅರಿವು, ಅನುಭವ ಮತ್ತು ಅವಲೋಕನ ಎಂಬ ಮೂರು ಹಂತಗಳನ್ನು ಹೊಂದಿದ್ದು, ವಿದ್ಯಾರ್ಥಿಗಳೇ ಸ್ವತಃ ಕೈಗೊಳ್ಳಬಹುದಾದ ಚಟುವಟಿಕೆಗಳಾಗಿವೆ.

‘ಸಂಭ್ರಮ ಶನಿವಾರ’ ದಿನದಂದು Website ನಲ್ಲಿ ಲಭ್ಯವಿರುವ DSERT ಯಿಂದ ಸಿದ್ಧಪಡಿಸಿರುವ ಹಾಗೂ NCERT ಯಿಂದ ನೀಡಿರುವ ಕಲಿಕಾ ಸಾಮಗ್ರಿಗಳನ್ನು ಉಪಯೋಗಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಲ್ಲಾ ಶಿಕ್ಷಕರಿಗೆ ಮಾಹಿತಿ ಒದಗಿಸುವುದು. ಈ ಕುರಿತು ಜಿಲ್ಲೆ, ಬ್ಲಾಕ್, ಕ್ಲಸ್ಟರ್ ಮತ್ತು ಶಿಕ್ಷಕರ ಸಭೆಗಳಲ್ಲಿ ಕ್ಷೇತ್ರ ಮಟ್ಟದ ಎಲ್ಲಾ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡುವುದು ಹಾಗೂ ‘ಸಂಭ್ರಮ ಶನಿವಾರ’ ದಿನದಂದು ಕಡ್ಡಾಯವಾಗಿ ಶಾಲೆಗಳಿಗೆ ಭೇಟಿ ನೀಡಿ ಅನುಪಾಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಮೇಲುಸ್ತುವಾರಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿರುತ್ತದೆ.

NCERT ಮಾರ್ಗಸೂಚಿಯಲ್ಲಿ ನೀಡಿರುವ ಚಟುವಟಿಕೆಗಳನ್ನು ಸಂಭ್ರಮ ಶನಿವಾರ ಆಚರಿಸುವ ದಿನಗಳಂದು ಅಗತ್ಯಾನುಸಾರ ನಿರ್ವಹಿಸಲು ಉಲ್ಲೇಖ-3 ರಂತೆ ತಿಳಿಸಲಾಗಿತ್ತು. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳ ವರದಿಯನ್ನು ಕೆಲವು ಡಯಟ್ ಗಳು ಮಾತ್ರ ಸಲ್ಲಿಸಿದ್ದು ಸದರಿ ವರದಿಗಳಲ್ಲಿ ಇದರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸದರಿ ಚಟುವಟಿಕೆಗಳು ಶೈಕ್ಷಣಿಕ ವೃತ್ತಿ ಮಾರ್ಗದರ್ಶನಕ್ಕೆ ಪೂರಕವಾಗಿರುವುದರಿಂದ ಎಲ್ಲರೂ ಕಟ್ಟುನಿಟ್ಟಾಗಿ ಕ್ರಮವಹಿಸಲು ತಿಳಿಸಿದೆ.

‘ಸಂಭ್ರಮ ಶನಿವಾರ’ದ ಆಚರಣೆ ಕುರಿತಾದ ಜಿಲ್ಲಾ ಹಂತದ ವರದಿಯನ್ನು ಉಪನಿರ್ದೇಶಕರು ಅಭಿವೃದ್ಧಿ ಮತ್ತು ಆಡಳಿತ ರವರು 3ನೇ ಶನಿವಾರ/ಶುಕ್ರವಾರದಂದು ಸಂಭ್ರಮ ಶನಿವಾರ ಕಾರ್ಯಕ್ರಮವನ್ನು ಆಚರಿಸಿ ಕಡ್ಡಾಯವಾಗಿ 2 ಪುಟಗಳ ಚಿತ್ರಸಹಿತ ವರದಿಯನ್ನು 3 ದಿನಗಳೊಳಗಾಗಿ DSERT ಕಛೇರಿಯ EVG ಶಾಖೆಯ Email ID: evg.kardsert1@gmail.com ಗೆ ಸಲ್ಲಿಸುವುದು ಹಾಗೂ ಉಲ್ಲೇಖ-4 ರ ನಿರ್ದೇಶನದಂತೆ ವರದಿಯನ್ನು ತಮ್ಮ ಡಯಟ್ ಗಳ Website ನಲ್ಲಿ Upload ಮಾಡುವುದು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಮಾನ್ಯ ಆಯುಕ್ತರ ಗಮನಕ್ಕೆ ತರಲಾಗುವುದು.

'Happy Saturday Bag-Free Day' to be observed for school children in the state: Important order from the Education Department
Share. Facebook Twitter LinkedIn WhatsApp Email

Related Posts

ದೇಶದಲ್ಲೇ ಅತ್ಯಧಿಕ `ವಿಸ್ಕಿ; ಮಾರಾಟದಲ್ಲಿ ಕರ್ನಾಟಕ ನಂ.1 : ವರದಿ

29/09/2025 7:03 AM2 Mins Read

ALERT : `ವರ್ಕ್ ಫ್ರಂ ಹೋಮ್ ಜಾಹೀರಾತು’ ನೋಡಿ ಹೂಡಿಕೆ ಮಾಡುವವರೇ ಎಚ್ಚರ : ₹2.5 ಲಕ್ಷ ಕಳೆದುಕೊಂಡ ಮಹಿಳೆ

29/09/2025 6:27 AM1 Min Read

SHOCKING : ಫೇಸ್ ಬುಕ್ ನಲ್ಲಿ ಶಿಕ್ಷಕಿಗೆ ರೇಪ್ ಬೆದರಿಕೆ : ನಟ ದರ್ಶನ್ ಅಭಿಮಾನಿಗಳ ವಿರುದ್ಧ `FIR’ ದಾಖಲು.!

29/09/2025 6:16 AM1 Min Read
Recent News

‘ಆಪರೇಷನ್ ಸಿಂಧೂರ್ ಮೈದಾನದಲ್ಲಿ’: ಏಷ್ಯಾಕಪ್ ಫೈನಲ್ ನಲ್ಲಿ ಭಾರತ ಪಾಕ್ ತಂಡವನ್ನು ಮಣಿಸಿದ ನಂತರ ಪ್ರಧಾನಿ ಮೋದಿ

29/09/2025 7:11 AM

ರಾಜ್ಯದ ಶಾಲಾ ಮಕ್ಕಳಿಗೆ ʻಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನʼ ಆಚರಣೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

29/09/2025 7:10 AM

Shocking: ಮದ್ಯ ಖರೀದಿಸಲು ಹಣ ನಿರಾಕರಿಸಿದ ತಾಯಿಯನ್ನು ಹೊಡೆದು ಕೊಂದ ಪಾಪಿ ಮಗ

29/09/2025 7:06 AM

ದೇಶದಲ್ಲೇ ಅತ್ಯಧಿಕ `ವಿಸ್ಕಿ; ಮಾರಾಟದಲ್ಲಿ ಕರ್ನಾಟಕ ನಂ.1 : ವರದಿ

29/09/2025 7:03 AM
State News
KARNATAKA

ರಾಜ್ಯದ ಶಾಲಾ ಮಕ್ಕಳಿಗೆ ʻಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನʼ ಆಚರಣೆ : ಶಿಕ್ಷಣ ಇಲಾಖೆ ಮಹತ್ವದ ಆದೇಶ

By kannadanewsnow5729/09/2025 7:10 AM KARNATAKA 2 Mins Read

ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ಸಂಭ್ರಮ ಶನಿವಾರ’- (ಬ್ಯಾಗ್ ರಹಿತ ದಿನ – No Bag Day) -…

ದೇಶದಲ್ಲೇ ಅತ್ಯಧಿಕ `ವಿಸ್ಕಿ; ಮಾರಾಟದಲ್ಲಿ ಕರ್ನಾಟಕ ನಂ.1 : ವರದಿ

29/09/2025 7:03 AM

ALERT : `ವರ್ಕ್ ಫ್ರಂ ಹೋಮ್ ಜಾಹೀರಾತು’ ನೋಡಿ ಹೂಡಿಕೆ ಮಾಡುವವರೇ ಎಚ್ಚರ : ₹2.5 ಲಕ್ಷ ಕಳೆದುಕೊಂಡ ಮಹಿಳೆ

29/09/2025 6:27 AM

SHOCKING : ಫೇಸ್ ಬುಕ್ ನಲ್ಲಿ ಶಿಕ್ಷಕಿಗೆ ರೇಪ್ ಬೆದರಿಕೆ : ನಟ ದರ್ಶನ್ ಅಭಿಮಾನಿಗಳ ವಿರುದ್ಧ `FIR’ ದಾಖಲು.!

29/09/2025 6:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.