ಬೆಂಗಳೂರು: ಕರ್ನಾಟಕದಿಂದ ಆಂಧ್ರಕ್ಕೆ ಹೆಚ್ಎಎಲ್ ಸ್ಥಳಾಂತರ ಸಾಧ್ಯವೇ ಇಲ್ಲ. ಆದರೇ ಹೊಸ ಘಟಕವನ್ನು ಸ್ಥಾಪನೆ ಮಾಡುವುದು ಮಾಧ್ಯವೇ ಸಾಧ್ಯವಿದೆ ಎಂಬುದಾಗಿ ಬಿಜೆಪಿ ಮುಖಂಡ ಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ದಶಕಗಳಿಂದ ಬೆಂಗಳೂರಿನಲ್ಲಿ ಭದ್ರವಾಗಿ ನೆಲೆಸಿರುವ HAL ಆಂಧ್ರಕ್ಕೆ ಸ್ಥಳಾಂತರವಾಗುವುದು ಅಸಾಧ್ಯವಾದ ಕೆಲಸ. ಕೇವಲ ಹತ್ತು ಸಾವಿರ ಎಕರೆ ಜಮೀನು ಕೊಡುವರೆಂದು ಉದ್ದಿಮೆ ಸ್ಥಳಾಂತರ ಮಾಡಲಾಗುವುದಿಲ್ಲ ಎಂದಿದ್ದಾರೆ.
ಸಾವಿರಾರು ಜನರ ನುರಿತ ಅನುಭವಿ ನೌಕರರನ್ನು ಕರೆದೊಯ್ಯಲಾಗದು. ನೂರಾರು ತಂತ್ರಜ್ಞರು ಸರ್ಕಾರದ ರಾಗಕ್ಕೆ ಕುಣಿಯುವುದಿಲ್ಲ. ಈಗಾಗಲೇ ಸ್ಥಾಪಿತವಾಗಿರುವ ಬೃಹತ್ ಉಪಕರಣಗಳು ಮೂಲಸೌಕರ್ಯಗಳನ್ನು ಪುನರ್ ನಿರ್ಮಾಣ ಮಾಡುವುದು ಅಸಾಧ್ಯ ಎಂದು ಹೇಳಿದ್ದಾರೆ.
HAL ಮತ್ತೊಂದು ಘಟಕವನ್ನು ಹೊಸದಾಗಿ ಸ್ಥಾಪನೆ ಮಾಡಲು ಮಾತ್ರ ಸಾಧ್ಯ. ಅನಗತ್ಯ ವಿವಾದವನ್ನು ಹುಟ್ಟು ಹಾಕಲಾಗಿದೆ. ಆದರೆ ಬಿಜೆಪಿ ನಾಯಕರುಗಳಿಗೆ ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಅನ್ನಿಸದಿರುವುದು ಶೋಚನೀಯ ಎಂಬುದಾಗಿ ತಿಳಿಸಿದ್ದಾರೆ.
ದಶಕಗಳಿಂದ ಬೆಂಗಳೂರಿನಲ್ಲಿ ಭದ್ರವಾಗಿ ನೆಲೆಸಿರುವ HAL ಆಂಧ್ರಕ್ಕೆ ಸ್ಥಳಾಂತರವಾಗುವುದು ಅಸಾಧ್ಯವಾದ ಕೆಲಸ
ಕೇವಲ ಹತ್ತು ಸಾವಿರ ಎಕರೆ ಜಮೀನು ಕೊಡುವರೆಂದು ಉದ್ದಿಮೆ ಸ್ಥಳಾಂತರ ಮಾಡಲಾಗುವುದಿಲ್ಲ
ಸಾವಿರಾರು ಜನರ ನುರಿತ ಅನುಭವಿ ನೌಕರರನ್ನು ಕರೆದೊಯ್ಯಲಾಗದು. ನೂರಾರು ತಂತ್ರಜ್ಞರು ಸರ್ಕಾರದ ರಾಗಕ್ಕೆ ಕುಣಿಯುವುದಿಲ್ಲ.
ಈಗಾಗಲೇ…
— Prakash Sesharaghavachar 🇮🇳 (@sprakaashbjp) May 28, 2025
BREAKING: ಭಾರೀ ಮಳೆ ಹಿನ್ನಲೆ: ನಾಳೆ, ನಾಡಿದ್ದು ಕೊಡಗು ಜಿಲ್ಲೆಯ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ನಾಳೆ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಅಣಕು ಕವಾಯತು | Mega security drill