Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ದೇಶದ ಜನತೆಗೆ ಗುಡ್ ನ್ಯೂಸ್: `LPG’ ವಾಣಿಜ್ಯ ಸಿಲಿಂಡರ್ ದರ 5 ರೂ. ಇಳಿಕೆ | LPG Cylinder Price

01/11/2025 6:20 AM

ರಾಜ್ಯದ ಸರ್ಕಾರಿ ಸಭೆಗಳಲ್ಲಿ `ಪ್ಲಾಸ್ಟಿಕ್ ನೀರಿನ ಬಾಟಲಿ’ ನಿಷೇಧ, ನಂದಿನಿ ತಿನಿಸು ಕಡ್ಡಾಯ : ಸಿಎಂ ಸಿದ್ದರಾಮಯ್ಯ ಆದೇಶ

01/11/2025 6:12 AM

ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಮನೆ, ಕಟ್ಟಡ ನಿರ್ಮಿಸಿದವರಿಗೆ ಗುಡ್ ನ್ಯೂಸ್ : ಶೇ.15ರಷ್ಟು ದಂಡ ಕಟ್ರಿದ್ರೆ ಸಕ್ರಮ.!

01/11/2025 6:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ತೊಗರಿ ಹಾನಿಗೆ ಪರಿಹಾರ ನೀಡಲು ಸರ್ಕಾರದ ಮೀನಾ ಮೇಷ: ರಾಜಕುಮಾರ ಪಾಟೀಲ್ ತೇಲ್ಕೂರ ಆಕ್ರೋಶ
KARNATAKA

ತೊಗರಿ ಹಾನಿಗೆ ಪರಿಹಾರ ನೀಡಲು ಸರ್ಕಾರದ ಮೀನಾ ಮೇಷ: ರಾಜಕುಮಾರ ಪಾಟೀಲ್ ತೇಲ್ಕೂರ ಆಕ್ರೋಶ

By kannadanewsnow0918/01/2025 7:50 PM

ಕಲಬುರಗಿ: ಪ್ರಸಕ್ತವಾಗಿ ನೆಟೆರೋಗದಿಂದ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಸಂಪೂರ್ಣವಾಗಿ ಹಾಳಾಗಿ ರೈತ ಕಂಗಾಲಾಗಿದ್ದರೂ ರಾಜ್ಯ ಸರ್ಕಾರ ಪರಿಹಾರ ನೀಡಲು ಮೀನಾ ಮೇಷ ಮಾಡುತ್ತಿರುವುದು ರೈತ ವಿರೋಧಿ ಧೋರಣೆಗೆ ಹಿಡಿದ ಕನ್ನಡಿಯಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ನೆಟೆರೋಗದಿಂದ ಶೇ ಅರ್ಧದಷ್ಟು ಅಂದರೆ ಸರಿಸುಮಾರು ಮೂರು ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಸಂಪೂರ್ಣ ತೊಗರಿ ಹಾನಿಯಾಗಿದೆ. ಜತೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಇಂತಹ ಸಮಯದಲ್ಲಿ ತುರ್ತಾಗಿ ನೆರವಿಗೆ ಬರುವುದು ಬಿಟ್ಟು ಖುರ್ಚಿ ಉಳಿಸಿಕೊಳ್ಳುವಲ್ಲಿ ಮಗ್ನವಾಗಿರುವುದು ನಾಚಿಗೇಡಿತನ ಸಂಗತಿಯಾಗಿದೆ. ಈಗಲಾದರೂ ತನ್ನ ಧೋರಣೆಯಿಂದ ಹೊರ ಬಂದು ಪರಿಹಾರ ನೀಡಬೇಕೆಂದು ತೇಲ್ಕೂರ ಆಗ್ರಹಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನೆಟೆರೋಗದಿಂದ ತೊಗರಿ ಬೆಳೆ ಹಾನಿಯಾದಾಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಹಾರ ಮಂಜೂರಾತಿ ನೀಡಿದ್ದನ್ನು ಇಲ್ಲಿ ಅವಲೋಕಿಸಬಹುದಾಗಿದೆ. ಆವಾಗ ಯಾವುದೇ ನಿಟ್ಟಿನಲ್ಲಿ ಸಮೀಕ್ಷೆ ಹಾಗೂ ವರದಿ ಎಂದು ಸಮಯ ವಿಳಂಬ ತೋರದೇ 187 ಕೋ.ರೂ ಬೃಹತ್ ಪರಿಹಾರ ಘೋಷಿಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾರದ ನಡೆ ನೋಡಿದರೆ ತೊಗರಿ ಹಾನಿಗೆ ಪರಿಹಾರ ನೀಡೋದು ಅನುಮಾನ ಕಾಡುತ್ತಿದೆ.

ಘೋಷಣೆಯಲ್ಲೇ ಉಳಿದ ತೊಗರಿ ಖರೀದಿ: ಕೇಂದ್ರದ ಬೆಂಬಲ ಬೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ 177 ತೊಗರಿ ಖರೀದಿ ಕೇಂದ್ರಗಳನ್ನು ಘೋಷಿಸಲಾಗಿದೆ. ಮಾರುಕಟ್ಟೆಯಲ್ಲಿ ಕೇಂದ್ರದ ಎಂಎಸ್ ಪಿ ಕ್ವಿಂಟಾಲ್ ಗ 7550 ರೂ ದರದ ಸಮೀಪವಿದೆ. ಆದರೆ ಖರೀದಿ ಪ್ರಕ್ರಿಯೆ ಆರಂಭವಾದರೆ ಮಾರುಕಟ್ಟೆಯಲ್ಲಿ ದರ ಹೆಚ್ಚಳ ವಾಗುತ್ತದೆ. ಆದರೆ ತಾಂತ್ರಿಕ ಕಾರಣವೊಡ್ಡಿ ಇನ್ನೂ ರೈತರ ನೊಂದಣಿ ಪ್ರಕ್ರಿಯೆಯೇ ಆರಂಭವಾಗಿಲ್ಲ ಎಂದು ತೇಲ್ಕೂರ ದೂರಿದ್ದಾರೆ.

ಟೆಕ್ಸ್ ಟೈಲ್ ಪಾರ್ಕ್ ಗೂ ನಿರ್ಲಕ್ಷ್ಯ: ಕಲಬುರಗಿ ಜಿಲ್ಲೆಯ ಫರಹತಾಬಾದ್ ಬಳಿ ಕೇಂದ್ರದ ಪಿಎಂ ಮಿತ್ರ ಟೆಕ್ಸ್ ಟೈಲ್ ಪಾಕ್೯ ಗೆ ಅಡಿಗಲ್ಲು ಹಾಕಿ ಎರಡು ವರ್ಷಗಳಾದರೂ ನಿಂತಲ್ಲೇ ನಿಂತಿದೆ. ಕಳೆದ ವರ್ಷ ರಾಜ್ಯದ ಮುಂಗಡ ಪತ್ರದಲ್ಲಿ ಟೆಕ್ಸ್ ಟೈಲ್ ಪಾರ್ಕ್ ನ ಮೂಲಭೂತ ಸೌಕರ್ಯಗಳಿಗಾಗಿ 50 ಕೋ.ರೂ ಎಂದು ಘೋಷಿಸಲಾಗಿದೆ. ಆದರೆ ಈಗ ಮತ್ತೊಂದು ಮುಂಗಡ ಪತ್ರ ಬಂದರೂ ಅನುದಾನ ಬಿಡುಗಡೆಯಾಗದಿರುವುದು ನಿರ್ಲಕ್ಷ್ಯ ತನಕ್ಕೆ ಹಿಡಿದ ಕನ್ನಡಿಯಾಗಿದೆ. ಅದಲ್ಲದೇ ಈಗ ರಾಜ್ಯ ಸರ್ಕಾರದ ಬದಲು ಕೆಕೆಆರ್ ಡಿಬಿ ಯಿಂದಲೇ ಮೊದಲ ಕಂತಾಗಿ 30 ಕೋ.ರೂ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಮೂಲಭೂತ ಸೌಕರ್ಯ ಕಲ್ಪಿಸಿದ್ದಲ್ಲಿ ಕೇಂದ್ರದಿಂದ ಮೊದಲ ಕಂತಾಗಿ 300 ಬಿಡುಗಡೆಯಾಗಲಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.

SHOCKING: ಯುವಜನತೆಯಲ್ಲಿ ಹೆಚ್ಚುತ್ತಿದೆ ‘ಹೃದಯಾಘಾತ’: ಕಾಲೇಜಿನಿಂದ ಮನೆಗೆ ಬರುವಾಗ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು.!

BREAKING: ಬೆಂಗಳೂರಲ್ಲಿ ಕಾಲೇಜಿನ ಕಟ್ಟಡದಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

Share. Facebook Twitter LinkedIn WhatsApp Email

Related Posts

ರಾಜ್ಯದ ಸರ್ಕಾರಿ ಸಭೆಗಳಲ್ಲಿ `ಪ್ಲಾಸ್ಟಿಕ್ ನೀರಿನ ಬಾಟಲಿ’ ನಿಷೇಧ, ನಂದಿನಿ ತಿನಿಸು ಕಡ್ಡಾಯ : ಸಿಎಂ ಸಿದ್ದರಾಮಯ್ಯ ಆದೇಶ

01/11/2025 6:12 AM1 Min Read

ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಮನೆ, ಕಟ್ಟಡ ನಿರ್ಮಿಸಿದವರಿಗೆ ಗುಡ್ ನ್ಯೂಸ್ : ಶೇ.15ರಷ್ಟು ದಂಡ ಕಟ್ರಿದ್ರೆ ಸಕ್ರಮ.!

01/11/2025 6:01 AM1 Min Read

BIG NEWS : ಎಲ್ಲಾ ಚಿತ್ರಮಂದಿರಗಳಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಕನ್ನಡ ಚಿತ್ರಗಳ ಪ್ರದರ್ಶನ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

01/11/2025 5:55 AM1 Min Read
Recent News

BREAKING: ದೇಶದ ಜನತೆಗೆ ಗುಡ್ ನ್ಯೂಸ್: `LPG’ ವಾಣಿಜ್ಯ ಸಿಲಿಂಡರ್ ದರ 5 ರೂ. ಇಳಿಕೆ | LPG Cylinder Price

01/11/2025 6:20 AM

ರಾಜ್ಯದ ಸರ್ಕಾರಿ ಸಭೆಗಳಲ್ಲಿ `ಪ್ಲಾಸ್ಟಿಕ್ ನೀರಿನ ಬಾಟಲಿ’ ನಿಷೇಧ, ನಂದಿನಿ ತಿನಿಸು ಕಡ್ಡಾಯ : ಸಿಎಂ ಸಿದ್ದರಾಮಯ್ಯ ಆದೇಶ

01/11/2025 6:12 AM

ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಮನೆ, ಕಟ್ಟಡ ನಿರ್ಮಿಸಿದವರಿಗೆ ಗುಡ್ ನ್ಯೂಸ್ : ಶೇ.15ರಷ್ಟು ದಂಡ ಕಟ್ರಿದ್ರೆ ಸಕ್ರಮ.!

01/11/2025 6:01 AM

BIG NEWS : ಎಲ್ಲಾ ಚಿತ್ರಮಂದಿರಗಳಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಕನ್ನಡ ಚಿತ್ರಗಳ ಪ್ರದರ್ಶನ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

01/11/2025 5:55 AM
State News
KARNATAKA

ರಾಜ್ಯದ ಸರ್ಕಾರಿ ಸಭೆಗಳಲ್ಲಿ `ಪ್ಲಾಸ್ಟಿಕ್ ನೀರಿನ ಬಾಟಲಿ’ ನಿಷೇಧ, ನಂದಿನಿ ತಿನಿಸು ಕಡ್ಡಾಯ : ಸಿಎಂ ಸಿದ್ದರಾಮಯ್ಯ ಆದೇಶ

By kannadanewsnow5701/11/2025 6:12 AM KARNATAKA 1 Min Read

ಬೆಂಗಳೂರು: ರಾಜ್ಯಾಧ್ಯಂತ ಎಲ್ಲಾ ಸರ್ಕಾರಿ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಬಳಸದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಖಡಕ್…

ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಮನೆ, ಕಟ್ಟಡ ನಿರ್ಮಿಸಿದವರಿಗೆ ಗುಡ್ ನ್ಯೂಸ್ : ಶೇ.15ರಷ್ಟು ದಂಡ ಕಟ್ರಿದ್ರೆ ಸಕ್ರಮ.!

01/11/2025 6:01 AM

BIG NEWS : ಎಲ್ಲಾ ಚಿತ್ರಮಂದಿರಗಳಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಕನ್ನಡ ಚಿತ್ರಗಳ ಪ್ರದರ್ಶನ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

01/11/2025 5:55 AM

‘ಬೆಂಗಳೂರು ನಗರ ವಿವಿಯ ಸಿಂಡಿಕೇಟ್ ಸದಸ್ಯ’ರನ್ನಾಗಿ ‘ಡಾ.ಮಹಂತೇಶ್ ಪಾಟೀಲ್’ ನೇಮಿಸಿ ಸರ್ಕಾರ ಆದೇಶ

31/10/2025 10:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.