ಬೆಂಗಳೂರು: ರಾಜ್ಯದಲ್ಲಿ ಕಳಪೆ ಗುಣಮಟ್ಟದ ಔಷಧಗಳು, ವಸ್ತುಗಳ ಬಳಕೆಗಳ ಬಗ್ಗೆ ಆರೋಗ್ಯ ಸಂಸ್ಥೆ ಮಟ್ಟದಲ್ಲಿ ದೂರುಗಳನ್ನು ನಿರ್ವಹಿಸಲು ಅನುಮೋದಿತ ಪ್ರಾಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು(ಎಸ್ಓಪಿ) ಅನುಸರಿಸುವ ಮೂಲಕ ಪ್ರಮಾಣೀಕೃತ ಕಾರ್ಯವಿಧಾನವನ್ನು ಜಾರಿಗೊಳಿಸಲಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, ಔಷಧಗಳು/ಉಪಭೋಗ ವಸ್ತುಗಳನ್ನು ಪ್ರಮಾಣಿತ ಪ್ರಯೋಗಾಲಯದಿಂದ ಗುಣಮಟ್ಟದ ಪರಿಶೀಲನೆಯ ನಂತರ ಸರಬರಾಜು ಮಾಡಿದರೂ, ಔಷಧಗಳು/ಉಪಭೋಗ್ಯ ವಸ್ತುಗಳ ಗುಣಮಟ್ಟದ ಮೇಲಿನ ದೂರುಗಳನ್ನು ಪರಿಹರಿಸಲು ಪ್ರಮಾಣಿತ ಕಾರ್ಯವಿಧಾನದ ಅಗತ್ಯವಿದೆ ಎಂದು ಕೆ.ಎಸ್.ಎಂ.ಎಸ್.ಸಿ.ಎಲ್. ರವರು ಪುಸ್ತಾಪಿಸಿರುತ್ತಾರೆ ಎಂದಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಈ ಕೆಳಗಿನ ಪಮುಖ ವಿಷಯಗಳನ್ನೊಳಗೊಂಡಂತೆ ಔಷಧಗಳು/ಉಪಭೋಗ್ಯ ವಸ್ತುಗಳ ಗುಣಮಟ್ಟದ ಮೇಲಿನ ದೂರುಗಳನ್ನು ಪರಿಹರಿಸಲು ಪ್ರಮಾಣೀಕೃತ ಕಾರ್ಯವಿಧಾನದ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲಾ ಆರೋಗ್ಯ ಸೌಲಭ್ಯಗಳಿಗೆ SOP ಅನ್ನು ಹೊರಡಿಸಲು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL)ಕ್ಕೆ ನಿರ್ದೇಶಿಸಲಾಗಿದೆ.
1.ಪ್ರತಿಯೊಂದು ಆರೋಗ್ಯ ಸೌಲಭ್ಯದ ಮಟ್ಟದಲ್ಲಿ ಅಸ್ತಿತ್ವದಲ್ಲಿರುವ ಔಷಧ ಚಿಕಿತ್ಸಕ ಸಮಿತಿಯು ಔಷಧಗಳು ಮತ್ತು ಉಪಭೋಗ್ಯ ವಸ್ತುಗಳ ಗುಣಮಟ್ಟದ ಮೇಲೆ ನಿಗಾ ಇಡುವ ಜವಾಬ್ದಾರಿಯನ್ನು ಹೊಂದಿದೆ. ಪ್ರತಿಕೂಲ ಔಷಧ ಪ್ರತಿಕ್ರಿಯೆಗಳ ಯಾವುದೇ ಸಮಸ್ಯೆಯನ್ನು ಅಥವಾ ಯಾವುದೇ ಶಂಕಿತ ಕಳಪೆ ಗುಣಮಟ್ಟದ ಸಮಸ್ಯೆಯನ್ನು ವೈದ್ಯಕೀಯ ಕಾಲೇಜುಗಳ ಬಾಹ್ಯ ತಜ್ಞರನ್ನು ಒಳಗೊಳ್ಳುವ ಮೂಲಕ ಸಮರ್ಪಕವಾಗಿ ಪರಿಶೀಲಿಸಿದ ನಂತರ, ಅವಶ್ಯವಿರುವ ಕಡೆ ಸದರಿ ಸಮಿತಿಯು ತಕ್ಷಣವೇ ಇ- ಔಷಧ ವೇದಿಕೆಯಲ್ಲಿ ಎಚ್ಚರಿಕೆಯನ್ನು ನೀಡಬೇಕು.
2. ಇ-ಔಷಧ ವೇದಿಕೆಯಲ್ಲಿ ಗುಣಮಟ್ಟದ ಬಗ್ಗೆ ನೋಂದಾಯಿಸಿದ ನಂತರ/ ಎಚ್ಚರಿಕೆ ನೀಡಿದ ನಂತರ, ಅಗತ್ಯವಿದ್ದರೆ, ಆಸ್ಪತ್ರೆಗೆ ಸಂಬಂಧಪಟ್ಟ ಔಷಧ ಉಪಭೋಗ್ಯ ವಸ್ತುಗಳ ಸ್ಥಳೀಯ ಸಂಗ್ರಹಣೆ ಮಾಡಲು ಅನುಮತಿ ಇರುತ್ತದೆ. 3. ಎಚ್ಚರಿಕೆಯನ್ನು (Alert) ಪರಿಹರಿಸುವವರೆಗೆ ಅಂದರೆ, ಸರಿಯಾದ ಪರಿಶೀಲನೆಯ ನಂತರ ದೃಢೀಕರಿಸುವ ಅಥವಾ ತಿರಸ್ಕರಿಸುವವರೆಗೆ ಔಷಧ/ ಸೇವಿಸಬಹುದಾದ ವಸ್ತುಗಳ ವಿತರಣೆ ನಡೆಯದಂತೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ಖಚಿತಪಡಿಸಿಕೊಳ್ಳತಕ್ಕದ್ದು ಎಂದು ತಿಳಿಸಿದೆ.