Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘CA’ ಅಂತಿಮ ಫಲಿತಾಂಶ ಬಿಡುಗಡೆ ; ಶೇ 83.33 ಅಂಕ ಪಡೆದ ‘ಮುಕುಂದ್’ ಪ್ರಥಮ ಸ್ಥಾನ |ICAI CA Result

03/11/2025 3:55 PM

ಶ್ರೀಗಂಧ ಕುಶಲಕರ್ಮಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದನೆ: ಶಾಸಕ ಗೋಪಾಲಕೃಷ್ಣ ಬೇಳೂರು

03/11/2025 3:47 PM

BREAKING: ಮಂಡ್ಯದಲ್ಲಿ ಅಕ್ರಮವಾಗಿ 50ಕ್ಕೂ ಹೆಚ್ಚು ದನದ ಕರುಗಳನ್ನು ಮಾರಾಟಕ್ಕೆ ಯತ್ನ

03/11/2025 3:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶ್ರೀಗಂಧ ಕುಶಲಕರ್ಮಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದನೆ: ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಶ್ರೀಗಂಧ ಕುಶಲಕರ್ಮಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದನೆ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0903/11/2025 3:47 PM

ಶಿವಮೊಗ್ಗ : ಶ್ರೀಗಂಧ ಕೊರತೆಯಿಂದ ಕುಶಲಕರ್ಮಿಗಳ ಬದುಕು ಕಷ್ಟಕರವಾಗಿದೆ. ಕುಶಲಕರ್ಮಿಕಗಳ ಸಂಕಷ್ಟಕ್ಕೆ ಸರ್ಕಾರ ಸದಾ ಸ್ಪಂದಿಸುತ್ತದೆ. ಡಿಪೋದಲ್ಲಿ ಸಂಗ್ರಹಿಸಿಟ್ಟು ಕೊಂಡಿರುವ ಗಂಧವನ್ನು ಕುಶಲಕರ್ಮಿಗಳಿಗೆ ಮೊದಲು ಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶ್ರೀಗಂಧ ಸಂಕೀರ್ಣದಲ್ಲಿ ಕರಕುಶಲ ಅಭಿವೃದ್ದಿ ನಿಗಮದ ವತಿಯಿಂದ ಮಂಜೂರಾದ 65 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದಂತ ಅವರು, ಒಂದು ಕಾಲದಲ್ಲಿ ವಿಧಾನಸೌಧ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ಸಾಗರದ ಕುಶಲಕರ್ಮಿಗಳು ಕೆತ್ತಿದ ಕೆತ್ತನೆ ಇಂದಿಗೂ ಪ್ರದರ್ಶನಗೊಳ್ಳುತ್ತಿದೆ. ನಂತರ ಶ್ರೀಗಂಧದ ಕೊರತೆಯಿಂದ ಸಂಕಷ್ಟ ಎದುರಾಗಿತ್ತು. ಇತರೆ ಮರ ಉಪಯೋಗಿಸಿ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದು ಇದಕ್ಕೂ ಅಗತ್ಯ ಮಾರುಕಟ್ಟೆಯನ್ನು ನಿಗಮದ ವತಿಯಿಂದ ಮಾಡಿಕೊಡಲಾಗುತ್ತಿದೆ. ಕುಶಲಕರ್ಮಿಗಳು ತಮ್ಮ ಕುಲಕಸುಬನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದರು.

ಶ್ರೀಗಂಧ ಸಂಕೀರ್ಣದಲ್ಲಿ ಕ್ಯಾಂಟಿನ್ ನಿರ್ಮಾಣಕ್ಕೆ 8 ಲಕ್ಷ ರೂ., ಶಾಲಾ ಕೊಠಡಿ ನಿರ್ಮಾಣಕ್ಕೆ 35 ಲಕ್ಷ ರೂ. ಸೇರಿ ಒಟ್ಟು 65 ಲಕ್ಷ ರೂ. ಮಂಜೂರು ಮಾಡಲಾಗಿದೆ. ವಿಶ್ವ ಯೋಜನೆಯಡಿ ಸಾಗರ ಶ್ರೀಗಂಧ ಸಂಕೀರ್ಣಕ್ಕೆ 109 ಮನೆ ನಿರ್ಮಾಣ ಮಂಜೂರಾಗಿತ್ತು. ಈ ಪೈಕಿ 66 ಮನೆಗಳು ಹಸ್ತಾಂತರವಾಗಿರಲಿಲ್ಲ. ಇದೀಗ 16 ಮನೆಗಳು ಮಂಜೂರಾತಿಗೆ ಸಿದ್ದವಾಗಿದೆ. ರಾಜ್ಯದಲ್ಲಿಯೆ ಸಾಗರದಲ್ಲಿ ವಿಶ್ವ ಯೋಜನೆಯಡಿ ಮೊದಲ ಬಾರಿಗೆ ಮನೆ ಮಂಜೂರಾತಿ ನಡೆಯುತ್ತಿದೆ. ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷೆ ರೂಪಕಲಾ ಅವರು ಕುಶಲಕರ್ಮಿಗಳ ಶ್ರೇಯೋಭಿವೃದ್ದಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಸಂಕೀಣಕ್ಕೆ ಅಗತ್ಯವಿರುವ ಕುಡಿಯುವ ನೀರು, ಬೀದಿದೀಪ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಈ ವೇಳೆ ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಶಂಕರ ಅಳ್ವಿಕೋಡಿ, ಮಧುಮಾಲತಿ, ರವಿ ಲಿಂಗನಮಕ್ಕಿ, ಬಂಗಾರಪ್ಪ, ಕಲಸೆ ಚಂದ್ರಪ್ಪ, ಗಣೇಶ್ ಸಿಂಗ್, ಅಣ್ಣಪ್ಪ ಇನ್ನಿತರರು ಹಾಜರಿದ್ದರು.

BREAKING: ಮಂಡ್ಯದಲ್ಲಿ ಅಕ್ರಮವಾಗಿ 50ಕ್ಕೂ ಹೆಚ್ಚು ದನದ ಕರುಗಳನ್ನು ಮಾರಾಟಕ್ಕೆ ಯತ್ನ

BREAKING : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೇ ತಯಾರಕ `ಪೆನ್ನ ಓಬಳಯ್ಯ’ ನಿಧನ : ಸಿಎಂ ಸಂತಾಪ

Share. Facebook Twitter LinkedIn WhatsApp Email

Related Posts

BREAKING: ಮಂಡ್ಯದಲ್ಲಿ ಅಕ್ರಮವಾಗಿ 50ಕ್ಕೂ ಹೆಚ್ಚು ದನದ ಕರುಗಳನ್ನು ಮಾರಾಟಕ್ಕೆ ಯತ್ನ

03/11/2025 3:38 PM1 Min Read

ಖಾನಾಪುರದಲ್ಲಿ ಜೋಡಿ ಆನೆಗಳು ಸಾವು: ತನಿಖೆಗೆ ಸಚಿವ ಖಂಡ್ರೆ ಆದೇಶ

03/11/2025 3:31 PM1 Min Read

BREAKING : ಅಕ್ರಮವಾಗಿ ರೆಸಾರ್ಟ್ ನಡೆಸುವವರ ವಿರುದ್ಧ ಕಾನೂನು ಕ್ರಮ : CM ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

03/11/2025 2:02 PM1 Min Read
Recent News

BREAKING : ‘CA’ ಅಂತಿಮ ಫಲಿತಾಂಶ ಬಿಡುಗಡೆ ; ಶೇ 83.33 ಅಂಕ ಪಡೆದ ‘ಮುಕುಂದ್’ ಪ್ರಥಮ ಸ್ಥಾನ |ICAI CA Result

03/11/2025 3:55 PM

ಶ್ರೀಗಂಧ ಕುಶಲಕರ್ಮಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದನೆ: ಶಾಸಕ ಗೋಪಾಲಕೃಷ್ಣ ಬೇಳೂರು

03/11/2025 3:47 PM

BREAKING: ಮಂಡ್ಯದಲ್ಲಿ ಅಕ್ರಮವಾಗಿ 50ಕ್ಕೂ ಹೆಚ್ಚು ದನದ ಕರುಗಳನ್ನು ಮಾರಾಟಕ್ಕೆ ಯತ್ನ

03/11/2025 3:38 PM

ಖಾನಾಪುರದಲ್ಲಿ ಜೋಡಿ ಆನೆಗಳು ಸಾವು: ತನಿಖೆಗೆ ಸಚಿವ ಖಂಡ್ರೆ ಆದೇಶ

03/11/2025 3:31 PM
State News
KARNATAKA

ಶ್ರೀಗಂಧ ಕುಶಲಕರ್ಮಿಗಳ ಸಂಕಷ್ಟಕ್ಕೆ ಸರ್ಕಾರ ಸ್ಪಂದನೆ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0903/11/2025 3:47 PM KARNATAKA 1 Min Read

ಶಿವಮೊಗ್ಗ : ಶ್ರೀಗಂಧ ಕೊರತೆಯಿಂದ ಕುಶಲಕರ್ಮಿಗಳ ಬದುಕು ಕಷ್ಟಕರವಾಗಿದೆ. ಕುಶಲಕರ್ಮಿಕಗಳ ಸಂಕಷ್ಟಕ್ಕೆ ಸರ್ಕಾರ ಸದಾ ಸ್ಪಂದಿಸುತ್ತದೆ. ಡಿಪೋದಲ್ಲಿ ಸಂಗ್ರಹಿಸಿಟ್ಟು ಕೊಂಡಿರುವ…

BREAKING: ಮಂಡ್ಯದಲ್ಲಿ ಅಕ್ರಮವಾಗಿ 50ಕ್ಕೂ ಹೆಚ್ಚು ದನದ ಕರುಗಳನ್ನು ಮಾರಾಟಕ್ಕೆ ಯತ್ನ

03/11/2025 3:38 PM

ಖಾನಾಪುರದಲ್ಲಿ ಜೋಡಿ ಆನೆಗಳು ಸಾವು: ತನಿಖೆಗೆ ಸಚಿವ ಖಂಡ್ರೆ ಆದೇಶ

03/11/2025 3:31 PM

BREAKING : ಅಕ್ರಮವಾಗಿ ರೆಸಾರ್ಟ್ ನಡೆಸುವವರ ವಿರುದ್ಧ ಕಾನೂನು ಕ್ರಮ : CM ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

03/11/2025 2:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.