Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬ್ರೆಜಿಲ್‌ನಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ, ಆಪರೇಷನ್ ಸಿಂಧೂರ್ ಥೀಮ್ ಮೇಲೆ ನೃತ್ಯ ಪ್ರದರ್ಶಿಸಿದ ಭಾರತೀಯರು: ವಿಡಿಯೋ ನೋಡಿ

06/07/2025 5:24 PM

VIRAL VIDEO: ಹಾಲಿನ ಡಬ್ಬಕ್ಕೆ ಉಗಿದ ಮಾರಾಟಗಾರ, ಸಿಸಿಟಿವಿ ದೃಶ್ಯ ವೈರಲ್

06/07/2025 5:21 PM

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಸರಣಿ ಸಾವು : ಕಾರಲ್ಲೇ ಹಾರ್ಟ್ ಅಟ್ಯಾಕ್ ಗೆ ವ್ಯಕ್ತಿ ಬಲಿ!

06/07/2025 5:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಿಎಂ ಜನೌಷಧಿ ಕೇಂದ್ರಗಳ ಉತ್ತಮ ಗುಣಮಟ್ಟದ ಔಷಧಗಳು ಕೃಷಿ ಪತ್ತಿನ ಸಂಘಗಳ(PACS) ಮೂಲಕ ಹಳ್ಳಿಯ ಬಡಜನರಿಗೂ ತಲುಪಲಿವೆ: ಅಮಿತ್ ಶಾ
INDIA

ಪಿಎಂ ಜನೌಷಧಿ ಕೇಂದ್ರಗಳ ಉತ್ತಮ ಗುಣಮಟ್ಟದ ಔಷಧಗಳು ಕೃಷಿ ಪತ್ತಿನ ಸಂಘಗಳ(PACS) ಮೂಲಕ ಹಳ್ಳಿಯ ಬಡಜನರಿಗೂ ತಲುಪಲಿವೆ: ಅಮಿತ್ ಶಾ

By kannadanewsnow0709/01/2024 8:10 PM

ನವದೆಹಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಸೋಮವಾರ ಐದು ರಾಜ್ಯಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಮೂಲಕ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಕಾರ್ಯಾಚರಣೆಗಾಗಿ ಸ್ಟೋರ್ ಕೋಡ್ಗಳನ್ನು ವಿತರಿಸಿದರು. “ಈಗ, ಪಿಎಂ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಕೈಗೆಟುಕುವ ಮತ್ತು ಉತ್ತಮ ಗುಣಮಟ್ಟದ ಔಷಧಿಗಳನ್ನು PACS ಮೂಲಕ ಗ್ರಾಮೀಣ ಪ್ರದೇಶದ ಬಡವರಿಗೆ ತಲುಪಿಸಲಾಗುವುದು” ಎಂದು ಶಾ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮತ್ತು ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಪ್ರವೀಣ ಮಾರ್ಗದರ್ಶನದಲ್ಲಿ, PACS ನ್ನು ಬಹುಕ್ರಿಯಾತ್ಮಕವಾಗಿ ಪರಿವರ್ತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಹಕಾರ ಚಳುವಳಿಯನ್ನು ಉತ್ತೇಜಿಸುತ್ತಾ ಅದಕ್ಕೆ ಹೊಸದಿಕ್ಕು ನೀಡುತ್ತಿರುವ ಶಾ, ರಾಷ್ಟ್ರವ್ಯಾಪಿ 2,373 ಕೃಷಿ ಪತ್ತಿನ ಸಂಘಗಳಲ್ಲಿ ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಮುನ್ನುಡಿ ಬರೆಯುತ್ತಿದ್ದಾರೆ.

ಶಾರವರ ದೂರದೃಷ್ಟಿಯ ಈ ಹೆಜ್ಜೆಯು ಕೈಗೆಟುಕುವ ಔಷಧಿಗಳ ಪ್ರಯೋಜನಗಳು PACS ಮೂಲಕ ಗ್ರಾಮೀಣ ಬಡವರಿಗೆ ಮತ್ತು ರೈತರಿಗೆ ಲಭ್ಯವಾಗಲಿದೆ. ಈ ಹಿಂದೆ, ನಗರ ಪ್ರದೇಶಗಳಲ್ಲಿ ನೆಲೆಸಿರುವ ಬಡವರು ಜನೌಷಧಿ ಕೇಂದ್ರಗಳ ಪ್ರಾಥಮಿಕ ಫಲಾನುಭವಿಗಳಾಗಿದ್ದರು.

ಮೋದಿ ಸರ್ಕಾರದ ಅಡಿಯಲ್ಲಿ, ಕಳೆದ ಒಂದು ದಶಕದಲ್ಲಾದ ಗಮನಾರ್ಹ ಸುಧಾರಣೆಗಳು ಭಾರತದ ಫಾರ್ಮಾ ಕ್ಷೇತ್ರವನ್ನು ಜಾಗತಿಕವಾಗಿ ಮುಂಚೂಣಿಯಲ್ಲಿರಿಸಿದೆ. ಒಂದು ಕಾಲದಲ್ಲಿ ತನ್ನ ಜನಸಂಖ್ಯೆಗೆ ಔಷಧಿಗಳನ್ನು ಪಡೆಯಲು ಹೆಣಗಾಡುತ್ತಿದ್ದ ರಾಷ್ಟ್ರವು, ಇಂದು ಹಿಂದಿನದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ಜಗತ್ತಿನೆಲ್ಲೆಡೆಗೆ ಔಷಧಿಗಳನ್ನು ಕಳುಹಿಸುತ್ತಿದೆ. ಅಮಿತ್ ಶಾ ಅವರ ನೀತಿಗಳಿಂದ, ಭಾರತೀಯ ಜನೌಷಧಿ ಕೇಂದ್ರಗಳ ಮೂಲಕ 60 ಕೋಟಿಗೂ ಹೆಚ್ಚು ಸೌಲಭ್ಯ ವಂಚಿತ ವ್ಯಕ್ತಿಗಳು ಇದರ ಫಲಾನುಭವಿಗಳಾಗಲಿದ್ದಾರೆ. ಇದರಿಂದ ಜೆನೆರಿಕ್ ಔಷಧಿಗಳ ವಿತರಣೆಯು ಹಳ್ಳಿಹಳ್ಳಿಗೂ ಸುವ್ಯವಸ್ಥಿತವಾಗಿ ತಲುಪಲಿದೆ.

ಮೋದಿಯವರ ಆಡಳಿತದಲ್ಲಿ ಸಹಕಾರಿ ಉಪಕ್ರಮಗಳ ಮೇಲೆ ಹೆಚ್ಚಿನ ಗಮನಹರಿಸುವಿಕೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ರಕ್ಷಣೆ ಗಣನೀಯ ಸುಧಾರಣೆಯನ್ನು ಕಂಡಿದೆ. ಸಹಕಾರ ಮತ್ತು ಆರೋಗ್ಯದ ಸಮಾಗಮವು ಸಮೃದ್ಧಿ ಮತ್ತು ಉತ್ತಮ ಆರೋಗ್ಯದ ಸಂಗಮ ಎಂಬುದು ಶಾರ ನಂಬಿಕೆ. ಪ್ರಸ್ತುತ, ಕರ್ನಾಟಕ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ,ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 2,300 ಪಿಎಸಿಎಸ್ಗಳು ಕೈಗೆಟುಕುವ ಬೆಲೆಯಲ್ಲಿ ಔಷಧಿಗಳನ್ನು ವಿತರಿಸುತ್ತಿವೆ.

PACS ಮೂಲಕ ಜನೌಷಧಿ ಕೇಂದ್ರಗಳ ವ್ಯಾಪ್ತಿಯನ್ನು ವಿಸ್ತರಿಸುವ ಬದ್ಧತೆ ಹೊಂದಿರುವ ಶಾರವರು ಸಹಕಾರ ಸಚಿವಾಲಯದ ಮೂಲಕ 2 ಲಕ್ಷ ಹೊಸ PACS ಅನ್ನು ಸ್ಥಾಪಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪ್ರತಿ ಪಂಚಾಯತ್ನಲ್ಲಿ ಜನೌಷಧಿ ಕೇಂದ್ರಗಳ ಉಪಸ್ಥಿತಿಯಿರಲಿದೆ.

ಕಳೆದ ಒಂಬತ್ತು ವರ್ಷಗಳ ಮಹತ್ವಾಕಾಂಕ್ಷೆಯ ಆರೋಗ್ಯ ಸುಧಾರಣೆಗಳ ಅಡಿಯಲ್ಲಿ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಆಯುಷ್ಮಾನ್ ಯೋಜನೆ, ಪ್ರಧಾನಮಂತ್ರಿ- ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಮಿಷನ್, ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್, ಮಲೇರಿಯಾ ಮುಕ್ತ ಭಾರತ, ಸಾರ್ವತ್ರಿಕ ಲಸಿಕೆಗಾಗಿ ಇಂದ್ರಧನುಷ್ ಮಿಷನ್ ಮುಂತಾದ ವಿವಿಧ ಯೋಜನೆಗಳು, ಟಿಬಿ ನಿವಾರಣೆ ಕಾರ್ಯಕ್ರಮ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಜನನಿ ಸುರಕ್ಷಾ ಯೋಜನೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ಫಿಟ್ ಇಂಡಿಯಾ, ಖೇಲೋ ಇಂಡಿಯಾ, ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.

ಇಂದು, 10,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು, 2,260 ಕ್ಕೂ ಹೆಚ್ಚು ಔಷಧಿಗಳನ್ನು ನೀಡುತ್ತಿವೆ. ಗೃಹ ಸಚಿವರ ಅವಿರತ ಪ್ರಯತ್ನಗಳು ಸಹಕಾರಿ ಉಪಕ್ರಮಗಳ ಮೂಲಕ ಕಡು ಬಡವರನ್ನೂ ಕೂಡ ಮೇಲಕ್ಕೆತ್ತುತ್ತಿವೆ. ಸಹಕಾರಿ ಉಪಕ್ರಮಗಳ ಮೂಲಕ ಪ್ರಧಾನಿ ಮೋದಿಯವರ ಅಭ್ಯುದಯದ ಕನಸನ್ನು ನನಸು ಮಾಡುವ ಶಾರವರ ಪ್ರಯತ್ನಗಳು ಮುಂಬರುವ ವರ್ಷಗಳಲ್ಲಿ ರಾಷ್ಟ್ರದಿಂದ ಬಡತನದ ನೆರಳನ್ನು ಸಂಪೂರ್ಣವಾಗಿ ತೊಡೆದುಹಾಕಲಿವೆ.

Good quality medicines of PM Jan Aushadhi Kendras will reach the poor people of the village through Agricultural Credit Societies (PACS): Amit Shah ಪಿಎಂ ಜನೌಷಧಿ ಕೇಂದ್ರಗಳ ಉತ್ತಮ ಗುಣಮಟ್ಟದ ಔಷಧಗಳು ಕೃಷಿ ಪತ್ತಿನ ಸಂಘಗಳ(PACS) ಮೂಲಕ ಹಳ್ಳಿಯ ಬಡಜನರಿಗೂ ತಲುಪಲಿವೆ: ಅಮಿತ್ ಶಾ
Share. Facebook Twitter LinkedIn WhatsApp Email

Related Posts

ಬ್ರೆಜಿಲ್‌ನಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ, ಆಪರೇಷನ್ ಸಿಂಧೂರ್ ಥೀಮ್ ಮೇಲೆ ನೃತ್ಯ ಪ್ರದರ್ಶಿಸಿದ ಭಾರತೀಯರು: ವಿಡಿಯೋ ನೋಡಿ

06/07/2025 5:24 PM1 Min Read

VIRAL VIDEO: ಹಾಲಿನ ಡಬ್ಬಕ್ಕೆ ಉಗಿದ ಮಾರಾಟಗಾರ, ಸಿಸಿಟಿವಿ ದೃಶ್ಯ ವೈರಲ್

06/07/2025 5:21 PM1 Min Read

BREAKING: ತಮಿಳುನಾಡು ಪಟಾಕಿ ಘಟಕದಲ್ಲಿ ಸ್ಫೋಟ; ಒಬ್ಬ ಸಾವು, ಐವರಿಗೆ ಗಾಯ

06/07/2025 3:56 PM1 Min Read
Recent News

ಬ್ರೆಜಿಲ್‌ನಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ, ಆಪರೇಷನ್ ಸಿಂಧೂರ್ ಥೀಮ್ ಮೇಲೆ ನೃತ್ಯ ಪ್ರದರ್ಶಿಸಿದ ಭಾರತೀಯರು: ವಿಡಿಯೋ ನೋಡಿ

06/07/2025 5:24 PM

VIRAL VIDEO: ಹಾಲಿನ ಡಬ್ಬಕ್ಕೆ ಉಗಿದ ಮಾರಾಟಗಾರ, ಸಿಸಿಟಿವಿ ದೃಶ್ಯ ವೈರಲ್

06/07/2025 5:21 PM

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಸರಣಿ ಸಾವು : ಕಾರಲ್ಲೇ ಹಾರ್ಟ್ ಅಟ್ಯಾಕ್ ಗೆ ವ್ಯಕ್ತಿ ಬಲಿ!

06/07/2025 5:08 PM

SHOCKING : ಯಾದಗಿರಿ : ಮೊಹರಂ ಕೆಂಡ ತುಳಿದ ಕೆಲವೇ ಕ್ಷಣಗಳಲ್ಲಿ ‘ಹೃದಯಘಾತಕ್ಕೆ’ ವ್ಯಕ್ತಿ ಬಲಿ

06/07/2025 4:35 PM
State News
KARNATAKA

SHOCKING : ಹಾಸನದಲ್ಲಿ ಮುಂದುವರೆದ ‘ಹೃದಯಾಘಾತ’ ಸರಣಿ ಸಾವು : ಕಾರಲ್ಲೇ ಹಾರ್ಟ್ ಅಟ್ಯಾಕ್ ಗೆ ವ್ಯಕ್ತಿ ಬಲಿ!

By kannadanewsnow0506/07/2025 5:08 PM KARNATAKA 1 Min Read

ಹಾಸನ : ಇತ್ತೀಚೆಗೆ ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಹಾಸನದಲ್ಲಿ ಕಳೆದ 45 ದಿನಗಳಲ್ಲಿ 35ಕ್ಕೂ ಹೆಚ್ಚು ಜನರು…

SHOCKING : ಯಾದಗಿರಿ : ಮೊಹರಂ ಕೆಂಡ ತುಳಿದ ಕೆಲವೇ ಕ್ಷಣಗಳಲ್ಲಿ ‘ಹೃದಯಘಾತಕ್ಕೆ’ ವ್ಯಕ್ತಿ ಬಲಿ

06/07/2025 4:35 PM

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ‘KSRTC’ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು!

06/07/2025 4:28 PM

ನಿಮ್ಮ ಸುತ್ತ ಮುತ್ತ ಯಾರಾದರೂ ಕುಸಿದು ಬಿದ್ದಾಗ ಏನು ಮಾಡಬೇಕು? ಮಿಸ್‌ ಮಾಡದೇ ಓದಿ

06/07/2025 4:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.