Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಉಚಿತವಾಗಿ ಒಂದು ಜೊತೆ ಶೂ, ಸಾಕ್ಸ್ ವಿತರಣೆಗೆ ಸರ್ಕಾರದಿಂದ ಹಣ ಬಿಡುಗಡೆ

26/06/2025 7:48 AM

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಜ್ಞಾನಸೇತು’ ಕಾರ್ಯಕ್ರಮ ಅನುಷ್ಠಾನಕ್ಕೆ ಅನುಮೋದನೆ ನೀಡಿ ಸರ್ಕಾರ ಮಹತ್ವದ ಆದೇಶ

26/06/2025 7:39 AM

ಮೆಕ್ಸಿಕೋದ ಧಾರ್ಮಿಕ ಉತ್ಸವದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ : ಕನಿಷ್ಠ 12 ಮಂದಿ ಸಾವು

26/06/2025 7:35 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಜ್ಞಾನಸೇತು’ ಕಾರ್ಯಕ್ರಮ ಅನುಷ್ಠಾನಕ್ಕೆ ಅನುಮೋದನೆ ನೀಡಿ ಸರ್ಕಾರ ಮಹತ್ವದ ಆದೇಶ
KARNATAKA

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಜ್ಞಾನಸೇತು’ ಕಾರ್ಯಕ್ರಮ ಅನುಷ್ಠಾನಕ್ಕೆ ಅನುಮೋದನೆ ನೀಡಿ ಸರ್ಕಾರ ಮಹತ್ವದ ಆದೇಶ

By kannadanewsnow5726/06/2025 7:39 AM

ಬೆಂಗಳುರು : 2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ ಸಂಖ್ಯೆ: 111(vii) ‘ಜ್ಞಾನಸೇತು’ ಕಾರ್ಯಕ್ರಮವನ್ನು ಖಾನ್ ಅಕಾಡೆಮಿ ಸಹಯೋಗದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡುವ ಕುರಿತು.

ಖಾನ್ ಅಕಾಡೆಮಿ ಇಂಡಿಯಾ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಕಲಿಕೆಯಲ್ಲಿ ಆಸಕ್ತಿ ಉಳ್ಳವರಿಗೆ ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸುವ ಧೈಯವನ್ನು ಹೊಂದಿರುತ್ತದೆ. ಹಾಗೂ ಕಲಿಯುವವರಿಗೆಲ್ಲರಿಗೂ ಇದು ಉಚಿತವಾಗಿದೆ.

ಭಾರತೀಯ ಶಿಕ್ಷಣಕ್ಕೆ ಅನುಗುಣವಾಗಿ NCERT ಪಠ್ಯಕ್ರಮ ಆಧಾರಿತ 1 ರಿಂದ 10ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ಸೇರಿದಂತೆ ಆಯ್ಕೆ ವಿಷಯಗಳು ಸಂಪೂರ್ಣ ಉಚಿತವಾಗಿ ಲಭ್ಯವಿದೆ. ಈ ವಿಷಯಗಳನ್ನು ಈಗಾಗಲೇ ಕರ್ನಾಟಕದಲ್ಲಿ NCERT ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಬೋಧನೆ ಮಾಡಲಾಗುತ್ತಿದೆ.

ಖಾನ್ ಅಕಾಡೆಮಿ.ಇಂಡಿಯಾದ ಉಚಿತ ಸಂಪನ್ಮೂಲಗಳೊಂದಿಗೆ ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸಿ ಮತ್ತು ಆನ್‌ಲೈನ್ ಕಲಿಕೆಯನ್ನು ಸಂತಸದಾಯಕ ಮತ್ತು ಪರಿಣಾಮಕಾರಿಯಾಗಿಸಿ ತ್ವರಿತ ಪ್ರಾರಂಭಿಕ ಮಾರ್ಗದರ್ಶಿಗಳು, ವೆಬಿನಾರ್‌ಳು ಮತ್ತು ಕಲಿಕಾ ಯೋಜನೆಗಳಿಗೆ ಪ್ರವೇಶ ಒದಗಿಸುತ್ತದೆ.

ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿಯ ಹೊರಗಡೆಯು ಸಹ ಕಲಿಕೆಯ ಪುನರ್‌ಬಲನ ಹಾಗೂ ಶಿಕ್ಷಕರಿಗೆ ಖಾನ್ ಅಕಾಡೆಮಿ ಇಂಡಿಯಾ ಜಾಲತಾಣದ ಮೂಲಕ ಲಾಗಿನ್ ಆಗಲು ಹಾಗೂ ಮೊಬೈಲ್ APP ಮೂಲಕ ಲಾಗಿನ್ ಆಗಲು ಸಂಪೂರ್ಣ ಉಚಿತವಾಗಿರುತ್ತದೆ.

8, 9 & 10ನೇ ತರಗತಿಯ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅವರ ಕಲಿಕಾ ಸಾಧನಗಳನ್ನು ಹೆಚ್ಚಿಸಲು ಮತ್ತು 6, 7, 8, 9, 10ನೇ ತರಗತಿಯ & ಪ್ರಥಮ-ದ್ವಿತೀಯ ಪಿಯುಸಿ ತರಗತಿಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರು/ಉಪನ್ಯಾಸಕರಿಗೆ ‘ಖಾನ್‌ಮಿಗೊ’ ಕೃತಕ ಬುದ್ಧಿಮತ್ತೆ (Khanmigo Artificial Intelligence) ಬಳಕೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಪ್ರತಿ ಶನಿವಾರದಂದು ಒಂದು ಬೋಧನಾ ಅವಧಿಯನ್ನು ಖಾನ್ ಅಕಾಡೆಮಿ ಇಂಡಿಯಾ ಮೂಲಕ Science, Tenchnology, Engineering, Arts and Mathematics (STEAM) ໖ ನಿಗಧಿಪಡಿಸಬಹುದಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (1) ರಲ್ಲಿನ 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದಂತೆ ಕಂಡಿಕೆ 111(vii) ರಲ್ಲಿ ‘ಜ್ಞಾನಸೇತು’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ ಘೋಷಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (2) ರಲ್ಲಿನ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರ ಪ್ರಸ್ತಾವನೆಯಲ್ಲಿ 2025-2026ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ವಿಧಾನದಲ್ಲಿ ನಾವೀನ್ಯತೆ ಅಳವಡಿಸಿಕೊಳ್ಳುವ ಉದ್ದೇಶದೊಂದಿಗೆ ಖಾನ್ ಅಕಾಡೆಮಿಯಲ್ಲಿ ಲಭ್ಯವಿರುವ ಡಿಜಿಟಲ್ ಸಂಪನ್ಮೂಲಗಳನ್ನು ಮತ್ತು ಅಭ್ಯಾಸಗಳನ್ನು ಬಳಸಿಕೊಂಡು ಪರಿಣಾಮಕಾರಿ ಕಲಿಕೆಯನ್ನು ಹೊಂದುವ ಸಲುವಾಗಿ ರಾಜ್ಯದ ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಶಾಲೆಗಳಲ್ಲಿ 6 ರಿಂದ 10ನೇ ತರಗತಿವರೆಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಡಿಜಿಟಲ್ ಕಲಿಕೆಗಾಗಿ ಅಲ್ಲದೇ ಸದರಿ ವಿಷಯಗಳನ್ನು ಸಂಪೂರ್ಣವಾಗಿ ಅಧ್ಯಯಿಸಿಸಲು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಮತ್ತು ಉತ್ತಮ ದರ್ಜೆಯನ್ನು ಪಡೆಯಲು ಖಾನ್ ಅಕಾಡೆಮಿ ಇಂಡಿಯಾ (KAI) ರವರ ಆನ್‌ಲೈನ್ ಕಲಿಕಾ ವ್ಯವಸ್ಥೆಯು ಸಂಪೂರ್ಣವಾಗಿ ಅನುಕೂಲವಾಗುತ್ತದೆ.

ಈ ಹಿನ್ನೆಲೆಯಲ್ಲಿ ಖಾನ್ ಅಕಾಡೆಮಿ ಇಂಡಿಯಾ ರವರ ಸಹಯೋಗದೊಂದಿಗೆ ‘ಜ್ಞಾನಸೇತು’ ಎಂಬ ಕಾರ್ಯಕ್ರಮವನ್ನು 2025-26ನೇ ಸಾಲಿನಿಂದ ಅನುಷ್ಠಾನಗೊಳಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ.

ಕಾರ್ಯಕ್ರಮದ ಉದ್ದೇಶಗಳು:

1. ಖಾನ್ ಅಕಾಡೆಮಿಯಲ್ಲಿ ಲಭ್ಯವಿರುವ 6ನೇ ತರಗತಿಯಿಂದ 12ನೇ ತರಗತಿವರೆಗಿನ ಡಿಜಿಟಲ್ ಸಂಪನ್ಮೂಲಗಳನ್ನು ಮತ್ತು ಅಭ್ಯಾಸಗಳನ್ನು ಶಾಲಾ ಶಿಕ್ಷಣ ಇಲಾಖೆಯ ಶಾಲಾ/ಕಾಲೇಜುಗಳಲ್ಲಿನ ಕಲಿಕಾ ಬೋಧನೆ ಚಟುವಟಿಕೆಗಳೊಂದಿಗೆ ಸಮ್ಮಿಳಿತಗೊಳಿಸುವುದು.

2. 8, 9 & 10ನೇ ತರಗತಿಯ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅವರ ಕಲಿಕಾ ಸಾಧನಗಳನ್ನು ಹೆಚ್ಚಿಸಲು ಮತ್ತು 6, 7, 8, 9, 10ನೇ ತರಗತಿಯ & ಪ್ರಥಮ-ದ್ವಿತೀಯ ಪಿಯುಸಿ ತರಗತಿಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರು/ಉಪನ್ಯಾಸಕರಿಗೆ ಅವರ ತರಗತಿ ಬೋಧನೆಯಲ್ಲಿ ಪಾಠ ಯೋಜನೆ, ಪ್ರಶ್ನೆ ಪತ್ರಿಕೆ ಮತ್ತು ರಸಪ್ರಶ್ನೆಗಳನ್ನು ಸಿದ್ದಪಡಿಸಿ ಪರಿಣಾಮಕಾರಿ ತರಗತಿ ಪ್ರಕ್ರಿಯೆಗಳನ್ನು ನಡೆಸಲು ಅನುವಾಗುವಂತೆ Khanmigo Al ಒಳಗೊಂಡಂತೆ ಪೂರಕ ಬೋಧನಾ ಉಪಕರಣಗಳನ್ನು (Teaching tools) ನೀಡುವುದು.

3. ಸ್ವವೇಗದೊಂದಿಗೆ ವೈಯಕ್ತಿಕವಾಗಿ ಕಲಿಯಲು ಅನುವಾಗುವಂತೆ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳಿಗೆ ನೀಡುವುದು.

4. CET, JEE, NEET, CLAT, CUET & CA ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು.

5. ಡಿಜಿಟಲ್ ಕಲಿಕಾ ಅಭ್ಯಾಸಗಳನ್ನು ಮತ್ತು ಶೈಕ್ಷಣಿಕ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೀಡುವುದು.

ಯೋಜನೆಯ ವ್ಯಾಪ್ತಿ:

A. ಪಠ್ಯಕ್ರಮ ಆಧಾರಿತ ಪೂರಕ ಅಧ್ಯಯನ (6 ರಿಂದ 10ನೇ ತರಗತಿಗೆ):

ಗಣಿತ ಮತ್ತು ವಿಜ್ಞಾನ: NCERT ಪಠ್ಯಕ್ರಮಕ್ಕೆ ಹೊಂದಾಣಿಕೆಯಾಗುವಂತೆ ಖಾನ್ ಅಕಾಡೆಮಿಯ ವೀಡಿಯೋಗಳು ಹಾಗೂ ಅಭ್ಯಾಸಗಳನ್ನು ಬಳಸಿಕೊಳ್ಳುವುದು.

ಇಂಗ್ಲಿಷ್ ಮತ್ತು ಇತರ ವಿಷಯಗಳು: Reading Comprehension ಮತ್ತು ಬುನಾದಿ ಸಾಕ್ಷರತಾ ಸಾರ್ಮಥ್ಯ್ರಗಳನ್ನು ಬಳಸಿಕೊಳ್ಳುವುದು.

ಶಿಕ್ಷಕರ ಸಬಲೀಕರಣ: ಖಾನ್ ಅಕಾಡೆಮಿಯನ್ನು ಶಿಕ್ಷಕರು ಡಿಜಿಟಲ್ ಬೋಧನಾ ಉಪಕರಣವಾಗಿ ಮತ್ತು ಪಾಠ ಯೋಜನೆಗಳಲ್ಲಿ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸಾಮರ್ಥ್ಯ ಅಭಿವೃದ್ಧಿ ತರಬೇತಿಯನ್ನು ನೀಡುವುದು.

GOOD NEWS: Good news for the students of the state: The government has issued an important order approving the implementation of the `Jnanasetu' program.
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಉಚಿತವಾಗಿ ಒಂದು ಜೊತೆ ಶೂ, ಸಾಕ್ಸ್ ವಿತರಣೆಗೆ ಸರ್ಕಾರದಿಂದ ಹಣ ಬಿಡುಗಡೆ

26/06/2025 7:48 AM2 Mins Read

BREAKING : ರಾಜ್ಯದಲ್ಲಿ ಭಾರೀ ಮಳೆ : 19 ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ.!

26/06/2025 7:32 AM2 Mins Read

BREAKING : ಭಾರೀ ಮಳೆಯಿಂದಾಗಿ ಮಣ್ಣು ಕುಸಿತ : ಶಿರಾಡಿಘಾಟ್ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್.!

26/06/2025 7:28 AM1 Min Read
Recent News

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಉಚಿತವಾಗಿ ಒಂದು ಜೊತೆ ಶೂ, ಸಾಕ್ಸ್ ವಿತರಣೆಗೆ ಸರ್ಕಾರದಿಂದ ಹಣ ಬಿಡುಗಡೆ

26/06/2025 7:48 AM

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಜ್ಞಾನಸೇತು’ ಕಾರ್ಯಕ್ರಮ ಅನುಷ್ಠಾನಕ್ಕೆ ಅನುಮೋದನೆ ನೀಡಿ ಸರ್ಕಾರ ಮಹತ್ವದ ಆದೇಶ

26/06/2025 7:39 AM

ಮೆಕ್ಸಿಕೋದ ಧಾರ್ಮಿಕ ಉತ್ಸವದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ : ಕನಿಷ್ಠ 12 ಮಂದಿ ಸಾವು

26/06/2025 7:35 AM

BREAKING : ರಾಜ್ಯದಲ್ಲಿ ಭಾರೀ ಮಳೆ : 19 ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ.!

26/06/2025 7:32 AM
State News
KARNATAKA

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್: ಉಚಿತವಾಗಿ ಒಂದು ಜೊತೆ ಶೂ, ಸಾಕ್ಸ್ ವಿತರಣೆಗೆ ಸರ್ಕಾರದಿಂದ ಹಣ ಬಿಡುಗಡೆ

By kannadanewsnow5726/06/2025 7:48 AM KARNATAKA 2 Mins Read

ಬೆಂಗಳೂರು : 2025-26ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ…

GOOD NEWS : ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಜ್ಞಾನಸೇತು’ ಕಾರ್ಯಕ್ರಮ ಅನುಷ್ಠಾನಕ್ಕೆ ಅನುಮೋದನೆ ನೀಡಿ ಸರ್ಕಾರ ಮಹತ್ವದ ಆದೇಶ

26/06/2025 7:39 AM

BREAKING : ರಾಜ್ಯದಲ್ಲಿ ಭಾರೀ ಮಳೆ : 19 ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ.!

26/06/2025 7:32 AM

BREAKING : ಭಾರೀ ಮಳೆಯಿಂದಾಗಿ ಮಣ್ಣು ಕುಸಿತ : ಶಿರಾಡಿಘಾಟ್ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್.!

26/06/2025 7:28 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.