Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದಲ್ಲಿ `ಶ್ರವಣ ಸಂಜೀವಿನಿ’ ಯೋಜನೆ ಮರುವಿನ್ಯಾಸಗೊಳಿಸಿ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ

14/06/2025 6:20 AM

GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ `ಗೃಹ ಆರೋಗ್ಯ’ ಯೋಜನೆ ವಿಸ್ತರಿಸಿ ಸರ್ಕಾರ ಆದೇಶ

14/06/2025 6:17 AM

ವಾಹನ ಸವಾರರಿಗೆ ಬಿಗ್ ಶಾಕ್ ; ಹೊಸ ಸಂಚಾರ ನಿಯಮ ಜಾರಿ, ಈ ತಪ್ಪು ಮಾಡಿದ್ರೆ 25 ಸಾವಿರ ದಂಡ

14/06/2025 6:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ `ಗೃಹ ಆರೋಗ್ಯ’ ಯೋಜನೆ ವಿಸ್ತರಿಸಿ ಸರ್ಕಾರ ಆದೇಶ
KARNATAKA

GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ `ಗೃಹ ಆರೋಗ್ಯ’ ಯೋಜನೆ ವಿಸ್ತರಿಸಿ ಸರ್ಕಾರ ಆದೇಶ

By kannadanewsnow5714/06/2025 6:17 AM

ಬೆಂಗಳೂರು : 2025-26ನೇ ಸಾಲಿನ ಆಯವ್ಯಯ ಖಂಡಿಕೆ 143 ರಲ್ಲಿ ಘೋಷಿಸಿರುವಂತೆ ಗೃಹ ಆರೋಗ್ಯ ಯೋಜನೆಯ ಕಾರ್ಯಕ್ರಮವನ್ನು ಹೆಚ್ಚುವರಿ ಅಸಾಂಕ್ರಾಮಿಕ ಖಾಯಿಲೆಗಳ ರೋಗ ತಪಾಸಣೆಯೊಂದಿಗೆ ರಾಜ್ಯದಾದ್ಯಂತ ವಿಸ್ತರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಮೇಲೆ ಓದಲಾದ ಆಯುಕ್ತರು, ಆಕುಕ ಸೇವೆಗಳು ಇವರಿಂದ ಸ್ವೀಕೃತವಾದ ಏಕಕಡತದಲ್ಲಿ 2025-26ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ 143 ರಲ್ಲಿ “ ಗೃಹ ಆರೋಗ್ಯ ಯೋಜನೆಯಡಿ 2025-26ನೇ ಸಾಲಿನಲ್ಲಿ 6 ಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸಾ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗುವುದು. ಈ ಯೋಜನೆಯನ್ನು ರೂ.100.00 ಕೋಟಿಗಳ ವೆಚ್ಚದಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು.” ಎಂದು ಘೋಷಿಸಲಾಗಿದೆ.

ಕೋಲಾರ ಜಿಲ್ಲೆಯ ಪ್ರಾಯೋಗಿಕ ಹಂತದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು ಮತ್ತು ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ಸುಸಜ್ಜಿತ ಆರೋಗ್ಯ ತಂಡಗಳು ತಮ್ಮ ತಮ್ಮ ಆಯುಷ್ಮಾನ್ ಆರೋಗ್ಯ ಮಂದಿರದ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ 6 ಪ್ರಮುಖ ಅಸಾಂಕ್ರಾಮಿಕ ಖಾಯಿಲೆಗಳ (Non-Communicable Diseases NCDs) ಮಧುಮೇಹ, ಅಧಿಕ ರಕ್ತದೊತ್ತಡ, ಮಾನಸಿಕ ಆರೋಗ್ಯ ಮತ್ತು ಮೂರು ಸಾಮಾನ್ಯ ಕ್ಯಾನ್ಸರ್ಗಳಾದ ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು (Screening) ನಡೆಸಲಾಗಿದೆ.

ತಪಾಸಣೆ ಜೊತೆಗೆ, ಎಲ್ಲಾ ವ್ಯಕ್ತಿಗಳಿಗೆ ಜೀವನಶೈಲಿ ಮಾರ್ಪಾಡುಗಳ ಬಗ್ಗೆ ಸಲಹೆ ನೀಡಲಾಯಿತು. ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಮನೆ ಮನೆಗೆ ಭೇಟಿ ನೀಡಿದಾಗ ಉಚಿತ ಔಷಧಿಗಳನ್ನು ಒದಗಿಸಲಾಯಿತು. ಗೃಹ ಆರೋಗ್ಯ ಯೋಜನೆಯನ್ನು 2024ರ ಅಕ್ಟೋಬರ್ 29 ರಿಂದ 2025ರ ಮಾರ್ಚ್ 25 ರವರೆಗೆ ಒಟ್ಟು 60 ದಿನಗಳ ಕಾಲ ನಡೆಸಲಾಗಿದೆ.

ಆರಂಭದಲ್ಲಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ 6 ಅಸಾಂಕ್ರಾಮಿಕ ಖಾಯಿಲೆಗಳನ್ನು (NCDs) ಸೇರ್ಪಡೆ ಮಾಡಲಾಗಿತ್ತು. ತದನಂತರ ರಾಜ್ಯ-ನಿರ್ದಿಷ್ಟ ಉಪಕ್ರಮವಾಗಿ, ಹೆಚ್ಚುವರಿಯಾಗಿ 7 ಅಸಾಂಕ್ರಾಮಿಕ ಖಾಯಿಲೆಗಳನ್ನು (NCDs) ಸೇರಿಸಲಾಗಿದೆ. ಆರೋಗ್ಯ ಸೌಲಭ್ಯಗಳಲ್ಲಿ (ಎಎಎಂ/ಪಿಎಚ್ಸಿ/ತಾಲ್ಲೂಕು ಆಸ್ಪತ್ರೆ/ಜಿಲ್ಲಾ ಆಸ್ಪತ್ರೆ) ಉಚಿತವಾಗಿ ಸೀನಿಂಗ್ ಮಾಡಲಾಗುವ 13 ಅಸಾಂಕ್ರಾಮಿಕ ಕಾಯಿಲೆಗಳಾದ (NCDs) ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಡಯಾಬಿಟಿಕ್ ಪೂಟ್. ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನರವೈಜ್ಞಾನಿಕ ಅಸ್ವಸ್ಥತೆಗಳು, ಅಡಚಣೆಯುಳ್ಳ ನಿದ್ರೆಯಲ್ಲಿ ಉಸಿರುಕಟ್ಟುವಿಕೆ : (Obstructive Sleep Apnea), ” ថ, ជ (Chronic Kidney Disease CKD), ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಖಾಯಿಲೆ (Chronic Obstructive Pulmonary Disease – COPD) (Non-Alcoholic Fatty Liver Disease – NAFLD), ಯಾವುದೇ ಅಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರು ಎಂದು ಗುರುತಿಸಲ್ಪಟ್ಟ ನಂತರ, ವ್ಯಕ್ತಿಗಳಿಗೆ ಅವರ ಹತ್ತಿರದ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಉಚಿತ ತಪಾಸಣೆ ಔಷಧಿಗಳನ್ನು ಮತ್ತು ಅಗತ್ಯವಿರುವ ಇತರ ಚಿಕಿತ್ಸೆಯನ್ನು ಹತ್ತಿರದ ಸೂಕ್ತ ಆರೋಗ್ಯ ಸೌಲಭ್ಯದಲ್ಲಿ ಒದಗಿಸಲಾಗುವುದು.

ಆದ್ದರಿಂದ 2025-26ನೇ ಸಾಲಿನ ಆಯವ್ಯಯ ಭಾಷಣದ ಖಂಡಿಕೆ-143 ರಲ್ಲಿ ಘೋಷಿಸಿರುವಂತೆ ಗೃಹ ಆರೋಗ್ಯ ಯೋಜನೆಯ ಕಾರ್ಯಕ್ರಮವನ್ನು ರಾಜ್ಯದಾದ್ಯಂತ KSMSCL ನಲ್ಲಿ ಲಭ್ಯವಿರುವ ಮೊತ್ತ ರೂ. 115,08,70,256, 15ನೇ ಹಣಕಾಸು ಆಯೋಗದ ಅನುದಾನ ರೂ. 40,70,39,235 ಮತ್ತು KSMSCL ನಲ್ಲಿನ ಉಳಿತಾಯದ ರೂ. 29,95,50,000 ಗಳು ಸೇರಿ ಒಟ್ಟು ರೂ. 185,74,59,491 ಗಳ ಅನುದಾನದಲ್ಲಿ ಈ ಯೋಜನೆಗೆ ಅಗತ್ಯವಿರುವ ಉಪಕರಣ ಹಾಗೂ ಔಷಧಿಗಳನ್ನು ಖರೀದಿಸಿ ಅನುಷ್ಠಾನಗೊಳಿಸಲು ಅನುಮೋದನೆ ನೀಡುವಂತೆ ಕೋರಲಾಗಿದೆ.

ಸರ್ಕಾರಿ ಆದೇಶ ಸಂಖ್ಯೆ:ಆಕುಕ 147 ಎಫ್ ಪಿ ಆರ್ 2025, ಬೆಂಗಳೂರು, ದಿನಾಂಕ:12.06.2025

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೆ.ಎಸ್.ಎಂ.ಎಸ್.ಸಿ.ಎಲ್. ಹಾಗೂ 15ನೇ ಹಣಕಾಸು ಆಯೋಗದ ಅನುದಾನದಿಂದ ರೂ.1,85,74,59,491/- ಗಳನ್ನು ಭರಿಸಿಕೊಂಡು ಈ ಕೆಳಕಂಡಂತೆ ಕ್ರಮಕೈಗೊಳ್ಳಲು ಅನುಮೋದನೆ ನೀಡಲಾಗಿದೆ.

1. ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ 13 ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ನಿರ್ವಹಣೆಗಾಗಿ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸುವುದು.

2. ಅಸಾಂಕ್ರಾಮಿಕ ರೋಗಗಳ ಪರೀಕ್ಷೆಗಾಗಿ ಹಾಗೂ ನಿರ್ವಣೆಗಾಗಿ ಅಗತ್ಯವಿರುವ ತಪಾಸಣಾ ಉಪಕರಣಗಳನ್ನು ಹಾಗೂ ಔಷಧಿಗಳನ್ನು ಈ ಕೆಳಕಂಡಂತೆ ಅನುದಾನದಿಂದ ಭರಿಸಿ ಕೆ.ಟಿ.ಪಿ.ಪಿ ಕಾಯ್ದೆಗಳಡಿ ಖರೀದಿಸಿ ಬಲವರ್ಧನೆಗೊಳಿಸುವುದು.

GOOD NEWS: Good news for the people of the state: Government orders expansion of the `Home Health' scheme across the state
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ `ಶ್ರವಣ ಸಂಜೀವಿನಿ’ ಯೋಜನೆ ಮರುವಿನ್ಯಾಸಗೊಳಿಸಿ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ

14/06/2025 6:20 AM2 Mins Read

GOOD NEWS : ರಾಜ್ಯದ `ಖಾಸಗಿ ಪ್ರಾಥಮಿಕ ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ’ ಗುಡ್ ನ್ಯೂಸ್ : `ನಿವೃತ್ತಿ ವೇತನ’ ಹೆಚ್ಚಳ ಮಾಡಿ ಸರ್ಕಾರ ಆದೇಶ.!

14/06/2025 6:09 AM1 Min Read

ರಾಜ್ಯದಲ್ಲಿ 108 ಅಂಬ್ಯುಲೆನ್ಸ್ ಖಾಸಗಿ ಹಿಡಿತದಿಂದ ಮುಕ್ತ: ಆರೋಗ್ಯ ಇಲಾಖೆಯಿಂದ ನಿರ್ವಹಣೆ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ

14/06/2025 6:08 AM1 Min Read
Recent News

BIG NEWS : ರಾಜ್ಯದಲ್ಲಿ `ಶ್ರವಣ ಸಂಜೀವಿನಿ’ ಯೋಜನೆ ಮರುವಿನ್ಯಾಸಗೊಳಿಸಿ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ

14/06/2025 6:20 AM

GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ `ಗೃಹ ಆರೋಗ್ಯ’ ಯೋಜನೆ ವಿಸ್ತರಿಸಿ ಸರ್ಕಾರ ಆದೇಶ

14/06/2025 6:17 AM

ವಾಹನ ಸವಾರರಿಗೆ ಬಿಗ್ ಶಾಕ್ ; ಹೊಸ ಸಂಚಾರ ನಿಯಮ ಜಾರಿ, ಈ ತಪ್ಪು ಮಾಡಿದ್ರೆ 25 ಸಾವಿರ ದಂಡ

14/06/2025 6:15 AM

BREAKING : ಇಸ್ರೇಲ್ ನ ಟೆಲ್ ಅವಿವ್ ನಗರದ ಮೇಲೆ ಇರಾನ್ ನಿಂದ ಕ್ಷಿಪಣಿ ದಾಳಿ | Israel-Iran War

14/06/2025 6:14 AM
State News
KARNATAKA

BIG NEWS : ರಾಜ್ಯದಲ್ಲಿ `ಶ್ರವಣ ಸಂಜೀವಿನಿ’ ಯೋಜನೆ ಮರುವಿನ್ಯಾಸಗೊಳಿಸಿ ಅನುಷ್ಠಾನ : ಸರ್ಕಾರದಿಂದ ಮಹತ್ವದ ಆದೇಶ

By kannadanewsnow5714/06/2025 6:20 AM KARNATAKA 2 Mins Read

ಬೆಂಗಳೂರು : 2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ರಾಜ್ಯಾದ್ಯಂತ ಶ್ರವಣ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ…

GOOD NEWS : ರಾಜ್ಯದ ಜನತೆಗೆ ಗುಡ್ ನ್ಯೂಸ್ : ರಾಜ್ಯಾದ್ಯಂತ `ಗೃಹ ಆರೋಗ್ಯ’ ಯೋಜನೆ ವಿಸ್ತರಿಸಿ ಸರ್ಕಾರ ಆದೇಶ

14/06/2025 6:17 AM

GOOD NEWS : ರಾಜ್ಯದ `ಖಾಸಗಿ ಪ್ರಾಥಮಿಕ ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ’ ಗುಡ್ ನ್ಯೂಸ್ : `ನಿವೃತ್ತಿ ವೇತನ’ ಹೆಚ್ಚಳ ಮಾಡಿ ಸರ್ಕಾರ ಆದೇಶ.!

14/06/2025 6:09 AM

ರಾಜ್ಯದಲ್ಲಿ 108 ಅಂಬ್ಯುಲೆನ್ಸ್ ಖಾಸಗಿ ಹಿಡಿತದಿಂದ ಮುಕ್ತ: ಆರೋಗ್ಯ ಇಲಾಖೆಯಿಂದ ನಿರ್ವಹಣೆ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ

14/06/2025 6:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.