Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುದ್ಧದ ಅಂಚಿನಿಂದ ಹಿಂದೆ ಸರಿದ ಇರಾನ್: ಟ್ರಂಪ್ ‘ಶಾಂತಿ ಮಂತ್ರ’ಕ್ಕೆ ಓಗೊಟ್ಟ ಟೆಹ್ರಾನ್; 14 ದಿನಗಳ ಕಾಲ ಕದನ ವಿರಾಮ ಘೋಷಣೆ!

08/04/2026 6:31 AM

ರಾಜ್ಯದಲ್ಲಿ ನಾಳೆ ಮತದಾನ ಮುಗಿದ ಬಳಿಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

08/04/2026 6:25 AM

ನಮ್ಮ ಆಲೋಚನಾ ಶಕ್ತಿಯನ್ನೇ ನುಂಗಿ ಹಾಕುತ್ತಿದೆಯೇ ಚಾಟ್ ಜಿಪಿಟಿ?: ಎಂಐಟಿ ಮತ್ತು ಸ್ಟ್ಯಾನ್‌ಫೋರ್ಡ್ ಅಧ್ಯಯನದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ!

08/04/2026 6:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ರೇಷ್ಮೆ ಇಲಾಖೆ’ಯಲ್ಲಿ ನಿಮಗೆ ಸಿಗಲಿವೆ ಈ ಎಲ್ಲಾ ಯೋಜನೆ, ಸಹಾಯಧನಗಳು.!
KARNATAKA

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ರೇಷ್ಮೆ ಇಲಾಖೆ’ಯಲ್ಲಿ ನಿಮಗೆ ಸಿಗಲಿವೆ ಈ ಎಲ್ಲಾ ಯೋಜನೆ, ಸಹಾಯಧನಗಳು.!

By kannadanewsnow5722/12/2025 2:32 PM

ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ರೇಷ್ಮೆ ಇಲಾಖೆಯಲ್ಲಿ ರೈತರಿಗೆ ಹಲವು ಯೋಜನೆಗಳು ಮತ್ತು ಸಹಾಯಧನ ನೀಡುತ್ತಿದ್ದು, ಅವುಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ರೇಷ್ಮೆ ಹುಳು ಸಾಕಾಣಿಕೆ (ಸುಧಾರಿತ ಮೌಂಟೇಜಸ್‌ಗಳು ಸೇರಿದಂತೆ) ಸಲಕರಣೆಗಳ/ಹಿಪ್ಪುನೇರಳೆ ತೋಟ

ನಿರ್ವಹಣಾ ಸಲಕರಣೆಗಳ ಖರೀದಿಗೆ ಸಹಾಯಧನ:

ಈ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ರೇಷ್ಮೆ ಬೆಳೆಗಾರರಿಗೆ ಸೌಲಭ್ಯ ಒದಗಿಸುವ ಹಿತದೃಷ್ಟಿಯಿಂದ ಸಲಕರಣೆ ಖರೀದಿಗೆ ಘಟಕ ದರ ರೂ.75.000/- ನಿಗದಿಪಡಿಸಿದ್ದು, ಸಹಾಯಧನ ರೂ.56250/-(ಶೇಕಡ 75), ಸಲಕರಣೆ ಖರೀದಿಗೆ ಹೊಸ ರೈತರಿಗೆ ಮೊದಲ ಆಧ್ಯತೆ ನೀಡುವುದು.

1. ಮೈಸೂರು ಶುದ್ಧ ತಳಿ/ದ್ವಿತಳಿ/ಸುಧಾರಿತ ಮಿಶ್ರ ತಳಿ ಗೂಡು ಬೆಳೆಯುವ ರೇಷ್ಮೆ ಬೆಳೆಗಾರರನ್ನು ಸಲಕರಣೆ ಖರೀದಿಗೆ ಸಹಾಯಧನ ನೀಡಲು ಆಯ್ಕೆ ಮಾಡಬೇಕು.

2. ಇಲಾಖೆಯ ಖರೀದಿ ಸಮಿತಿ ಅನುಮೋದಿಸುವ ಸಲಕರಣೆಗಳ ಘಟಕ ದರಮಿತಿಗೆ ಒಳಪಟ್ಟು ಅನುಮೋದಿತ ಸಂಸ್ಥೆಗಳಿಂದ ಮಾತ್ರ ಖರೀದಿಸಬೇಕು.

3. ಇಲಾಖೆಯು ಅನುಮೋದಿಸುವ ಸಲಕರಣೆಗಳನ್ನು ಖರೀದಿಸಬಹುದಾಗಿದೆ. ಈ ಕುರಿತು ರೇಷ್ಮೆ ನಿರ್ದೇಶನಾಲಯದಿಂದ ಪ್ರತ್ಯೇಕ ಸುತ್ತೋಲೆ ನೀಡಲಾಗುವುದು.

4. ಹುಳು ಸಾಕಾಣಿಕೆ ಮಾಡುವ ಬಗ್ಗೆ ಚಾಲ್ತಿಯಲ್ಲಿರುವ ಪಾಸ್ ಪುಸ್ತಕ/ರೇಷ್ಮೆ ಕಾರ್ಡ್ ಹೊಂದಿರಬೇಕು.

5. ಹುಳು ಸಾಕಾಣಿಕೆಯನ್ನು ಮುಂದಿನ 3 ವರ್ಷಗಳವರೆಗೆ ಮುಂದುವರೆಸಿಕೊಂಡು ಹೋಗುವ ಬಗ್ಗೆ ರೂ.50/-ಗಳ ಛಾಪಾಕಾಗದದಲ್ಲಿ ನಿಗದಿತ ನಮೂನೆಯಲ್ಲಿ ಮುಚ್ಚಳಿಕೆ ಪಡೆಯಬೇಕು.

6. ರೇಷ್ಮೆ ಬೆಳೆಗಾರರು ಸಲಕರಣೆ ಸರಬರಾಜು ಪಡೆಯಲು ಇಚ್ಛಿಸುವ ಸಲಕರಣೆ ಮತ್ತು ಸಂಸ್ಥೆಗಳ ವಿವರಗಳನ್ನು ರೇಷ್ಮೆ ಬೆಳೆಗಾರರಿಂದ ಪಡೆಯುವ ಕೋರಿಕೆಯ ಅರ್ಜಿಯಲ್ಲಿ ವಿವರಗಳನ್ನು ಪಡೆಯುವುದು.

7. ಸಲಕರಣೆಗಳ ಸರಬರಾಜು ಪಡೆದು ಸಹಾಯಧನ ವಿತರಣೆ :

ಇಲಾಖೆಯು ಅನುಮೋದಿಸಿ empanel ಮಾಡಿರುವ ಸಂಸ್ಥೆಗಳಿಂದ ಮಾತ್ರ ಸಲಕರಣೆಗಳನ್ನು ಸರಬರಾಜು ಪಡೆಯುವುದು ಕಡ್ಡಾಯವಾಗಿದೆ.

ರೇಷ್ಮೆ ಬೆಳೆಗಾರರು ಸಲಕರಣೆಗಳ ಸಂಪೂರ್ಣ ಮೊತ್ತವನ್ನು ಪಾವತಿಸಿ empanel ಮಾಡಿರುವ ಸಂಸ್ಥೆಗಳಿಂದ ಸರಬರಾಜು ಪಡೆದಿದ್ದಲ್ಲಿ ಸಹಾಯಧನದ ಮೊತ್ತವನ್ನು ಖಜಾನೆ 2/໖໖໖ ಮುಖಾಂತರ ರೇಷ್ಮೆ ಬೆಳೆಗಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾಮಾಡುವುದು. ಬ್ಯಾಂಕ್/ಸಂಘ ಸಂಸ್ಥೆಗಳಿಂದ ಸಾಲ ಪಡೆದಿದ್ದಲ್ಲಿ ಸಹಾಯಧನವನ್ನು ಬ್ಯಾಂಕಿಗೆ ಜಮಾ ಮಾಡುವುದು.

ಸಂಬಂಧಿಸಿದ ಜಿಲ್ಲೆಯ ಇಲಾಖಾ ಅಧಿಕಾರಿಗಳು ರೇಷ್ಮೆ ಬೆಳೆಗಾರರ ವತಿಯಿಂದ ಫಲಾನುಭವಿ ವಂತಿಕೆಯಾಗಿ ಶೇಕಡ 25ರಷ್ಟನ್ನು empanel ಸಂಸ್ಥೆಗೆ ಡಿಮಾಂಡ್ ಡ್ರಾಪ್ಟ್ ಮುಖಾಂತರ ಪಾವತಿಸಿ ಸಲಕರಣೆಗಳನ್ನು ರೇಷ್ಮೆ ಬೆಳೆಗಾರರಿಗೆ ಸರಬರಾಜು ಮಾಡಿರುವುದನ್ನು ಖಾತ್ರಿ ಪಡಿಸಿಕೊಂಡು, ರೇಷ್ಮೆ ಬೆಳೆಗಾರರಿಂದ ಸರಬರಾಜು ಸಂಸ್ಥೆಗೆ ಸಹಾಯಧನ ಮೊತ್ತ ಪಾವತಿಸಲು ಯಾವುದೇ ನಿರಾಕ್ಷೇಪಣೆ ಇರುವುದಿಲ್ಲವೆಂಬ ಬಗ್ಗೆ No objection certificate (NOC) ರೇಷ್ಮೆ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ನಿರಾಕ್ಷೇಪಣಾ ಪತ್ರಕ್ಕೆ ರೇಷ್ಮೆ ಬೆಳೆಗಾರರು ಸಹಿ ಮಾಡಿ ನೀಡಿದ್ದಲ್ಲಿ ಸಹಾಯಧನದ ಮೊತ್ತವನ್ನು ಸಲಕರಣೆ ಸರಬರಾಜು ಮಾಡಿದ ಸಂಸ್ಥೆಗೆ ಖಜಾನೆ-2/ಡಿಬಿಟಿ ಮುಖಾಂತರ ಸಂಸ್ಥೆಯ ಬ್ಯಾಂಕ್ ಖಾತೆಗೆ ಪಾವತಿಸಬಹುದಾಗಿದೆ.

8. ಸಹಾಯಧನ ಪಡೆಯುವ ಫಲಾನುಭವಿಯೊಂದಿಗೆ ಇಲಾಖಾ ಸಿಬ್ಬಂದಿ/ಅಧಿಕಾರಿಗಳು ಖರೀದಿಸಿರುವ ಸಲಕರಣೆಗಳ ಜೊತೆಯಲ್ಲಿ ಛಾಯಾಚಿತ್ರ ತೆಗೆಯಿಸಿ ಸಲ್ಲಿಸಬೇಕು.

9. ಇಲಾಖೆಯು ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿ, ಮಹಜರ್, ಶಿಫಾರಸ್ಸು/ದೃಢೀಕರಣಗಳಿರಬೇಕು.

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ನಾಳೆ ಮತದಾನ ಮುಗಿದ ಬಳಿಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

08/04/2026 6:25 AM1 Min Read
BREAKING NEWS

BREAKING : ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಕೇರಳದ ಯುವತಿ ನಾಪತ್ತೆ : ಚಂದ್ರದ್ರೋಣ ಪರ್ವತ ಶ್ರೇಣಿಲಿ ಯುವತಿ ಕಣ್ಮರೆ.!

08/04/2026 6:13 AM1 Min Read

BIG NEWS: ಚಿತ್ರದುರ್ಗದ ಚಿಕ್ಕಜಾಜೂರು ‘PSI ನೇತ್ರಾವತಿ’ ಸಿಬ್ಬಂದಿಗೆ ‘ಬಿಸಿಲ ಶಿಕ್ಷೆ’ ನೀಡಿದ್ದೇಕೆ? ಅಸಲಿ ಸತ್ಯ, ಕಾರಣ ಇಲ್ಲಿದೆ ಓದಿ!

08/04/2026 6:10 AM3 Mins Read
Recent News

ಯುದ್ಧದ ಅಂಚಿನಿಂದ ಹಿಂದೆ ಸರಿದ ಇರಾನ್: ಟ್ರಂಪ್ ‘ಶಾಂತಿ ಮಂತ್ರ’ಕ್ಕೆ ಓಗೊಟ್ಟ ಟೆಹ್ರಾನ್; 14 ದಿನಗಳ ಕಾಲ ಕದನ ವಿರಾಮ ಘೋಷಣೆ!

08/04/2026 6:31 AM

ರಾಜ್ಯದಲ್ಲಿ ನಾಳೆ ಮತದಾನ ಮುಗಿದ ಬಳಿಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

08/04/2026 6:25 AM

ನಮ್ಮ ಆಲೋಚನಾ ಶಕ್ತಿಯನ್ನೇ ನುಂಗಿ ಹಾಕುತ್ತಿದೆಯೇ ಚಾಟ್ ಜಿಪಿಟಿ?: ಎಂಐಟಿ ಮತ್ತು ಸ್ಟ್ಯಾನ್‌ಫೋರ್ಡ್ ಅಧ್ಯಯನದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ!

08/04/2026 6:21 AM

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಉದ್ಯಮಗಳ ನೆರವಿಗೆ ₹2.5 ಲಕ್ಷ ಕೋಟಿ ಕ್ರೆಡಿಟ್ ಗ್ಯಾರಂಟಿ ಯೋಜನೆ ಘೋಷಿಸಲು ಕೇಂದ್ರ ಸಿದ್ಧತೆ

08/04/2026 6:19 AM
State News
KARNATAKA

ರಾಜ್ಯದಲ್ಲಿ ನಾಳೆ ಮತದಾನ ಮುಗಿದ ಬಳಿಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

By kannadanewsnow5708/04/2026 6:25 AM KARNATAKA 1 Min Read

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಉಪಚುನಾವಣೆಯ ಮತದಾನ ಪ್ರಕ್ರಿಯೆ…

BREAKING NEWS

BREAKING : ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದ ಕೇರಳದ ಯುವತಿ ನಾಪತ್ತೆ : ಚಂದ್ರದ್ರೋಣ ಪರ್ವತ ಶ್ರೇಣಿಲಿ ಯುವತಿ ಕಣ್ಮರೆ.!

08/04/2026 6:13 AM

BIG NEWS: ಚಿತ್ರದುರ್ಗದ ಚಿಕ್ಕಜಾಜೂರು ‘PSI ನೇತ್ರಾವತಿ’ ಸಿಬ್ಬಂದಿಗೆ ‘ಬಿಸಿಲ ಶಿಕ್ಷೆ’ ನೀಡಿದ್ದೇಕೆ? ಅಸಲಿ ಸತ್ಯ, ಕಾರಣ ಇಲ್ಲಿದೆ ಓದಿ!

08/04/2026 6:10 AM

ಉಪ ಚುನಾವಣೆ ವೇಳೆ ಗ್ಯಾರಂಟಿಗೆ ಹಣ ಬಿಡುಗಡೆ: ರಾಜ್ಯ ಸರ್ಕಾರಕ್ಕೆ ಕೇಂದ್ರ ಚುನಾವಣಾ ಆಯೋಗ ನೋಟಿಸ್

08/04/2026 6:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.