ಬೆಂಗಳೂರು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಿಳೆಯರು ಮತ್ತು ಮಕ್ಕಳಿಗೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದು, ಈ ಯೋಜನೆಗಳಡಿ ಮಹಿಳೆಯರು ಮತ್ತು ಮಕ್ಕಳಿಗೆ ಈ ಎಲ್ಲಾ ಸೌಲಭ್ಯಗಳು ಸಿಗಲಿವೆ.
ಕರ್ನಾಟಕ ಸರ್ಕಾರವು ಮಹಿಳೆಯರು, ಮಕ್ಕಳು ಮತ್ತು ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹತ್ತಾರು ಜನಪದ ಯೋಜನೆಗಳನ್ನು ಜಾರಿಗೆ ತಂದಿದೆ. ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವ ಈ ಯೋಜನೆಗಳ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅವಶ್ಯಕ. ಅವುಗಳ ಪ್ರಮುಖ ವಿವರಗಳು ಈ ಕೆಳಗಿನಂತಿವೆ:
1. ಮಕ್ಕಳ ಮತ್ತು ಬಾಣಂತಿಯರ ಪೋಷಣೆ
ಸಮಗ್ರ ಶಿಶು ಅಭಿವೃದ್ಧಿ ಯೋಜನೆ: 6 ತಿಂಗಳಿಂದ 6 ವರ್ಷದ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರ ಮತ್ತು ಆರೋಗ್ಯ ಸೇವೆಗಳನ್ನು ನೀಡಲಾಗುತ್ತದೆ.
ಭಾಗ್ಯಲಕ್ಷ್ಮಿ ಯೋಜನೆ: ಬಿಪಿಎಲ್ ಕುಟುಂಬದಲ್ಲಿ ಜನಿಸುವ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಆರೋಗ್ಯ ವಿಮೆ ಮತ್ತು 18 ವರ್ಷ ತುಂಬಿದ ನಂತರ ₹1 ಲಕ್ಷದ ಆರ್ಥಿಕ ಸವಲತ್ತು ಸಿಗಲಿದೆ.
ಮಾತೃವಂದನಾ ಮತ್ತು ಮಾತೃಶ್ರೀ ಯೋಜನೆ: ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ₹5,000 ದಿಂದ ₹6,000 ವರೆಗೆ ಆರ್ಥಿಕ ಸಹಾಯಧನ ದೊರೆಯುತ್ತದೆ.
2. ಮಹಿಳಾ ಸ್ವಾವಲಂಬನೆ ಮತ್ತು ಉದ್ಯೋಗ
ಉದ್ಯೋಗಿನಿ ಯೋಜನೆ: ಸ್ವಂತ ಉದ್ದಿಮೆ ಪ್ರಾರಂಭಿಸಲು ಮಹಿಳೆಯರಿಗೆ ಬ್ಯಾಂಕ್ಗಳಿಂದ ₹3 ಲಕ್ಷದವರೆಗೆ ಸಾಲ ಸೌಲಭ್ಯವಿದ್ದು, ಎಸ್ಸಿ/ಎಸ್ಟಿ ವರ್ಗದವರಿಗೆ 50% ರಷ್ಟು ಸಬ್ಸಿಡಿ ಇರುತ್ತದೆ.
ಸ್ತ್ರೀ ಶಕ್ತಿ ಯೋಜನೆ: ಸ್ವ-ಸಹಾಯ ಸಂಘಗಳಿಗೆ ಸುತ್ತು ನಿಧಿ, ತರಬೇತಿ ಮತ್ತು ಬಡ್ಡಿ ರಹಿತ ಸಾಲದ ಸೌಲಭ್ಯ ನೀಡಲಾಗುತ್ತದೆ.
ಕೌಶಲ್ಯಾಭಿವೃದ್ಧಿ ಯೋಜನೆ: ವಿಕಲಚೇತನ ಮತ್ತು ಅಸಹಾಯ ಮಹಿಳೆಯರಿಗೆ ಉದ್ಯಮಶೀಲತೆ ಬೆಳೆಸಲು ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ.
ಚೇತನ ಮತ್ತು ಸಮೃದ್ಧಿ ಯೋಜನೆ: ಲೈಂಗಿಕ ವೃತ್ತಿಯಿಂದ ಹೊರಬಂದ ಮಹಿಳೆಯರಿಗೆ ಮತ್ತು ಬೀದಿ ಬದಿ ವ್ಯಾಪಾರಿ ಮಹಿಳೆಯರಿಗೆ ₹10,000 ದಿಂದ ₹20,000 ವರೆಗೆ ಧನಸಹಾಯ ನೀಡಲಾಗುತ್ತದೆ.
3. ಸಾಮಾಜಿಕ ಭದ್ರತೆ ಮತ್ತು ಮಾಶಾಸನಗಳು
ಸಂಧ್ಯಾ ಸುರಕ್ಷಾ ಯೋಜನೆ: 65 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾಸಿಕ ₹1,000 ಪಿಂಚಣಿ.
ಇಂದಿರಾ ಗಾಂಧಿ ವೃದ್ಧಾಪ್ಯ ವೇತನ: 60 ವರ್ಷ ಮೇಲ್ಪಟ್ಟವರಿಗೆ ₹600 ಮತ್ತು 65 ವರ್ಷ ಮೇಲ್ಪಟ್ಟವರಿಗೆ ₹1,000 ಮಾಸಿಕ ಪಿಂಚಣಿ.
ವಿಧವಾ ವೇತನ: 18 ರಿಂದ 64 ವರ್ಷದೊಳಗಿನ ವಿಧವೆಯರಿಗೆ ಮಾಸಿಕ ₹600 ಪಿಂಚಣಿ.
ಮನಸ್ವಿನಿ ಯೋಜನೆ: 40 ರಿಂದ 64 ವರ್ಷದ ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರಿಗೆ ಮಾಸಿಕ ₹600 ಪಿಂಚಣಿ.
ಮೈತ್ರಿ ಯೋಜನೆ: ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಿಕ ₹600 ಪಿಂಚಣಿ ಹಾಗೂ ಉದ್ಯೋಗಕ್ಕಾಗಿ ಧನಸಹಾಯ.
4. ವಿಶೇಷ ನೆರವು ಮತ್ತು ರಕ್ಷಣೆ
ಸಾಂತ್ವನ ಮತ್ತು ಸ್ವಾಧಾರ ಕೇಂದ್ರ: ಸಂಕಷ್ಟದಲ್ಲಿರುವ ಮಹಿಳೆಯರಿಗೆ ವಸತಿ, ಕಾನೂನು ನೆರವು ಮತ್ತು ಆಪ್ತಸಮಾಲೋಚನೆ ನೀಡಲಾಗುತ್ತದೆ.
ಅಂಗವಿಕಲ ವೇತನ: ಶೇ. 40 ರಿಂದ 74 ರಷ್ಟು ಅಂಗವೈಕಲ್ಯ ಉಳ್ಳವರಿಗೆ ₹600 ಹಾಗೂ ಶೇ. 75 ಕ್ಕಿಂತ ಹೆಚ್ಚು ಅಂಗವೈಕಲ್ಯ ಉಳ್ಳವರಿಗೆ ₹1,400 ಮಾಸಿಕ ಪಿಂಚಣಿ.
ಎಂಡೋಸಲ್ಫಾನ್ ಪೀಡಿತರಿಗೆ: ವೈಕಲ್ಯದ ತೀವ್ರತೆಗೆ ಅನುಗುಣವಾಗಿ ₹1,500 ರಿಂದ ₹3,000 ವರೆಗೆ ಮಾಶಾಸನ.
ರಾಷ್ಟ್ರೀಯ ಕುಟುಂಬ ಸಹಾಯಧನ: ಕುಟುಂಬದ ದುಡಿಯುವ ವ್ಯಕ್ತಿ ಮೃತಪಟ್ಟಲ್ಲಿ ಬಿಪಿಎಲ್ ಕುಟುಂಬಕ್ಕೆ ₹20,000 ಏಕಕಾಲದ ನೆರವು.
ಸಂಪರ್ಕಿಸಬೇಕಾದ ಸ್ಥಳಗಳು:
ಈ ಸೌಲಭ್ಯಗಳನ್ನು ಪಡೆಯಲು ಅರ್ಹರು ಹತ್ತಿರದ ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯತ್, ನಾಡಕಚೇರಿ, ಅಥವಾ ತಾಲ್ಲೂಕು ಕಚೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ (CDPO) ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ
6 ತಿಂಗಳಿನಿಂದ 6 ವರ್ಷದವರೆಗಿನ ಮಕ್ಕಳಿಗೆ, ಬಾಣಂತಿಯರಿಗೆ, ಪ್ರಾಯ ಪೂರ್ವ ಬಾಲಕಿಯರಿಗೆ ಪೂರಕ ಪೌಷ್ಠಿಕ ಆಹಾರ, ಆರೋಗ್ಯ ಸೇವೆಗಳು. (ಹಾಲು, ಕಾಳು, ಧಾನ್ಯಗಳು)
ಭಾಗ್ಯಲಕ್ಷ್ಮೀ ಯೋಜನೆ
ಬಿಪಿಎಲ್ ಕುಟುಂಬದಲ್ಲಿ ಜನಿಸುವ ಮೊದಲ ಇಬ್ಬರು ಹೆಣ್ಣು ಮಕ್ಕಳಿಗೆ ಆರೋಗ್ಯ ವಿಮೆ ಮತ್ತು 18 ವರ್ಷ ತುಂಬಿದ ನಂತರ ರೂ. 1 ಲಕ್ಷ ಮೊತ್ತ ಪಾವತಿ ಸೌಲಭ್ಯ.
ಸ್ತ್ರೀ ಶಕ್ತಿ ಯೋಜನೆ
ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸರಕಾರದಿಂದ ಸುತ್ತು ನಿಧಿ, ತರಬೇತಿ, ಬಡ್ಡಿ ಸಹಾಯ ಧನ ಮತ್ತು ಪ್ರೋತ್ಸಾಹ ಧನ ವಿತರಣೆ.
ಉದ್ಯೋಗಿನಿ ಯೋಜನೆ
ಮಹಿಳೆಯರು ಸ್ವಂತ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ 3 ಲಕ್ಷದವರೆಗೆ ಬ್ಯಾಂಕಿನಿಂದ ಸಾಲವನ್ನು ಪಡೆಯಬಹುದಾಗಿದೆ. ಪಡೆಯುವ ಸಾಲಕ್ಕೆ ಸಾಮಾನ್ಯ ವರ್ಗಕ್ಕೆ 30% ಮತ್ತು ಪ.ಜಾ/ಪ.ಪಂ ವರ್ಗಕ್ಕೆ 50% ರಷ್ಟು ಸಾಲದ ಮೇಲೆ ಸಬ್ಸಿಡಿ ನೀಡಲಾಗುತ್ತದೆ.
ಏಡ್ಸ್/ಹೆಚ್.ಐ.ವಿ. ಸೋಂಕಿತ/ಬಾಧಿತ ಮಕ್ಕಳ ವಿಶೇಷ ಪಾಲನಾ ಯೋಜನೆ
ಏಡ್ಸ್/ಹೆಚ್.ಐ.ವಿ. ಸೋಂಕಿತ/ಬಾಧಿತ ಮಕ್ಕಳ ಜೀವನ ಮಟ್ಟ ಉತ್ತಮಪಡಿಸಲು ಶಿಕ್ಷಣ ಒದಗಿಸುವ ಮೂಲಕ ಅವರನ್ನು ಸಬಲರನ್ನಾಗಿಸಲು ಆರೋಗ್ಯ ಸೇವೆ ಹಾಗೂ ಮೂಲಕ ಉತ್ತಮ ಪೌಷ್ಠಿಕ ಆಹಾರ ಒದಗಿಸುವುದರ ಸೋಂಕು ಉಲ್ಬಣವಾಗದಂತೆ ಮಾಡಲು ಅವರಿಗೆ ಆರ್ಥಿಕ ಸಹಾಯವನ್ನು ಕಲ್ಪಿಸುವ ಯೋಜನೆಯಾಗಿರುತ್ತದೆ.
ಸ್ವಾಧಾರ ಕೇಂದ್ರ ಮತ್ತು ಮಹಿಳೆಯರ ಅಲ್ಪಾವಧಿ ವಸತಿ ಗೃಹ
ಸಂಷ್ಟದಲ್ಲಿರುವ ಮಹಿಳೆಯರಿಗೆ ಮೂಲಭೂತ ಅವಶ್ಯಕತೆಗಳಾದ ಆಶ್ರಯ, ಪೋಷಣೆ ಮತ್ತು ರಕ್ಷಣೆಯ ಜೊತೆಗೆ ಮಾನಸಿಕ ಬೆಂಬಲ ಮತ್ತು ಕೌನ್ಸಿಲಿಂಗ್, ವೃತ್ತಿಪರ ಕೌಶಲ್ಯ ತರಬೇತಿ, ಮನೋವೈದ್ಯಕೀಯ, ಕಾನೂನು, ಪೊಲೀಸ್ ಮತ್ತು ಇತರ ನೆರವು ಹಾಗೂ ಕೌಟುಂಬಿಕ/ಸಾಮಾಜಿಕ ಪುನರ್ ವಸತಿ ಮತ್ತು ಅನುಸರಣಾ ಸೇವೆಯನ್ನು ಸ್ವಾಧಾರ ಕೇಂದ್ರದ ಮೂಲಕ ಒದಗಿಸಲಾಗುತ್ತದೆ.









