Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಅಪ್ರಾಪ್ತೆ ಮೇಲೆ ರೇಪ್ ಮಾಡಿ, ಗರ್ಭಿಣಿ ಮಾಡಿದ ಆರೋಪ : ಕೋಲಾರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಅರೆಸ್ಟ್

27/01/2026 10:18 AM

BREAKING : ನಿನ್ನ ನೂರು ಜನರ ಮುಂದೆ ರೇಪ್ ಮಾಡಿ ಕೊಲ್ತಿನಿ : ನಟಿ ಕಾವ್ಯ ಗೌಡಗೆ ಪತಿಯ ಸಂಬಂಧಿಕರಿಂದಲೇ ಬೆದರಿಕೆ!

27/01/2026 10:13 AM

Free Sewing Machine Scheme 2026 : ಮಹಿಳೆಯರಿಗೆ ಗುಡ್ ನ್ಯೂಸ್ : ತರಬೇತಿಯೊಂದಿಗೆ ಉಚಿತ ‘ಹೊಲಿಗೆ ಯಂತ್ರ’ ಪಡೆಯಲು ಅರ್ಜಿ ಆಹ್ವಾನ

27/01/2026 10:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಜನತೆಗೆ ಗುಡ್ ನ್ಯೂಸ್: ಮುಂದಿನ 6 ತಿಂಗಳಲ್ಲಿ ‘AC ಕೋರ್ಟ್’ ಎಲ್ಲಾ ಪ್ರಕರಣ ಇತ್ಯರ್ಥಕ್ಕೆ ಡೆಡ್ ಲೈನ್ ಫಿಕ್ಸ್
KARNATAKA

ರಾಜ್ಯ ಜನತೆಗೆ ಗುಡ್ ನ್ಯೂಸ್: ಮುಂದಿನ 6 ತಿಂಗಳಲ್ಲಿ ‘AC ಕೋರ್ಟ್’ ಎಲ್ಲಾ ಪ್ರಕರಣ ಇತ್ಯರ್ಥಕ್ಕೆ ಡೆಡ್ ಲೈನ್ ಫಿಕ್ಸ್

By kannadanewsnow0915/01/2025 6:29 AM

ಬೆಂಗಳೂರು : ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನೂ ಮುಂದಿನ ಆರು ತಿಂಗಳೊಳಗಾಗಿ ನ್ಯಾಯಯುತ ಇತ್ಯರ್ಥಕ್ಕೆ ಒಳಪಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಅಧಿಕಾರಿಗಳಿಗೆ ಸಮಯದ ಗಡುವನ್ನು ನಿಗದಿಗೊಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆಗೆ ಏಕ ಕಾಲದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಎಸಿ ನ್ಯಾಯಾಲಯಗಳಲ್ಲಿ ಯಾವ ಪ್ರಕರಣಗಳನ್ನೂ ಆರು ತಿಂಗಳ ಅವಧಿಗಿಂತ ಹೆಚ್ಚಿನ ಕಾಲ ಇಟ್ಟುಕೊಳ್ಳುವಂತಿಲ್ಲ ಎಂಬ ಕಾನೂನಿದೆ. ಆದರೆ, ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ವೇಳೆ ಎಸಿ ನ್ಯಾಯಾಲಯಗಳಲ್ಲಿ ಅವಧಿ ಮೀರಿದ 60 ಸಾವಿರಕ್ಕೂ ಅಧಿಕ ಪ್ರಕರಣಗಳಿದ್ದವು. ಈ ಎಲ್ಲಾ ಪ್ರಕರಣಗಳನ್ನೂ ಮುಂದಿನ ಒಂದು ವರ್ಷದಲ್ಲಿ ಇತ್ಯರ್ಥಗೊಳಿಸಿ, ಸರ್ಕಾರಿ ಕಚೇರಿಗಳಿಗೆ ಜನರ ಅನಗತ್ಯ ಅಲೆದಾಟಕ್ಕೆ ಬ್ರೇಕ್ ಹಾಕಬೇಕು ಎಂಬುದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ದೇಶವಾಗಿತ್ತು” ಎಂದು ನೆನೆದರು.

ಆದರೆ, “ಒಂದೂವರೆ ವರ್ಷ ಕಳೆದರೂ ನಮ್ಮ ಈ ಉದ್ದೇಶ ಈಡೇರಿಲ್ಲ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ಉಪ-ವಿಭಾಗಾಧಿಕಾರಿಗಳನ್ನು ನೇಮಕ ಮಾಡಿದರೂ ಸಹ ಶೇ.55ರಷ್ಟು ಪ್ರಕರಣಗಳನ್ನು ಮಾತ್ರ ವಿಲೇ ಮಾಡಲಾಗಿದೆ. ಎಸಿ ನ್ಯಾಯಾಲಯಗಳಲ್ಲಿ ಇನ್ನೂ 29,000ಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. ಇದರಿಂದ ಜನ ಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಮುಂದಿನ ಮುಂದಿನ ಆರು ತಿಂಗಳೊಳಗಾಗಿ ಈ ಎಲ್ಲಾ ಪ್ರಕರಣಗಳನ್ನು ಅಧಿಕಾರಿಗಳು ನ್ಯಾಯಯುತ ವಿಲೇಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ ಕೆಲಸಕ್ಕೆ ಮುಂದಾಗಬೇಕು” ಎಂದು ಕರೆ ನೀಡಿದರು.

ಮುಂದುವರೆದು, “ಆರು ತಿಂಗಳಲ್ಲಿ ಎಲ್ಲಾ ಪ್ರಕರಣಗಳನ್ನೂ ತಹಬದಿಗೆ ತರಬೇಕು ಎಂಬುದು ಸರ್ಕಾರದ ಸಂಕಲ್ಪ. ಒಂದು ವರ್ಷದಲ್ಲಿ ಆಗಬೇಕಾದ ಕೆಲಸ ಎರಡು ವರ್ಷ ಆದ್ರೂ ಆಗಿಲ್ಲ ಅಂದ್ರೆ ಸರ್ಕಾರಕ್ಕೆ ನಿಮಗೆ ಶೋಭೆ ತರಲ್ಲ. ಹೀಗಾಗಿ ಈ ವಾರದಿಂದಲೇ ರೆಗ್ಯುಲರ್ ಎಸಿಗಳು ತಿಂಗಳೊಂದಕ್ಕೆ 200 ರಿಂದ 250 ಪ್ರಕರಣಗಳನ್ನು ವಿಲೇ ಮಾಡಿದರೆ, ವಿಶೇಷ ಉಪ-ವಿಭಾಗಾಧಿಕಾರಿಗಳು ಕನಿಷ್ಟ 70 ರಿಂದ 100 ಪ್ರಕರಣಗಳನ್ನು ವಿಲೇಗೊಳಿಸಬೇಕು. ಆರು ತಿಂಗಳ ನಂತರವೂ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು. ಅಲ್ಲದೆ, ಈ ಸಂಬಂಧ ಪ್ರತೀ ತಿಂಗಳೂ ಪ್ರಗತಿ ಪರಿಶೀಲನಾ ಸಭೆಯನ್ನೂ ನಡೆಸಲಾಗುವುದು” ಎಂದು ಎಚ್ಚರಿಸಿದರು.

“ನ್ಯಾಯಾಲಯಗಳ ತಕರಾರು ಪ್ರಕರಣಗಳ ವಿಲೇವಾರಿಯ ಜೊತೆಗೆ ಪೋಡಿ ದುರಸ್ಥಿ, ನಮೂನೆ 3-9 ಮಿಸ್ಮ್ಯಾಚ್ ಹಾಗೂ ಫೌತಿ ಖಾತೆ ಆಂದೋಲನ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲೇ ನಡೆಯಬೇಕು. ಹೀಗಾಗಿ ಅಧಿಕಾರಿಗಳು ಜನರ ಸಮಸ್ಯೆ ಹಾಗೂ ತಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಕೆಲಸಗಳನ್ನೂ ಅಭಿಯಾನ ಮಾದರಿಯಲ್ಲಿ ನಡೆಸಬೇಕು” ಎಂದು ಅವರು ಕಿವಿಮಾತು ಹೇಳಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಸರ್ವೇ ಇಲಾಖೆ ಆಯುಕ್ತರಾದ ಮಂಜುನಾಥ್ ಉಪಸ್ಥಿತರಿದ್ದರು.

ಸಾರ್ವಜನಿಕರೇ ನಿಮಗಿದು ಗೊತ್ತಾ? ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡಿದ್ದಕ್ಕೆ ಸಿಗುತ್ತೆ ರೂ.25,000 | Helping Accident Victims

Share. Facebook Twitter LinkedIn WhatsApp Email

Related Posts

BREAKING : ಅಪ್ರಾಪ್ತೆ ಮೇಲೆ ರೇಪ್ ಮಾಡಿ, ಗರ್ಭಿಣಿ ಮಾಡಿದ ಆರೋಪ : ಕೋಲಾರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಅರೆಸ್ಟ್

27/01/2026 10:18 AM1 Min Read

BREAKING : ನಿನ್ನ ನೂರು ಜನರ ಮುಂದೆ ರೇಪ್ ಮಾಡಿ ಕೊಲ್ತಿನಿ : ನಟಿ ಕಾವ್ಯ ಗೌಡಗೆ ಪತಿಯ ಸಂಬಂಧಿಕರಿಂದಲೇ ಬೆದರಿಕೆ!

27/01/2026 10:13 AM1 Min Read

Free Sewing Machine Scheme 2026 : ಮಹಿಳೆಯರಿಗೆ ಗುಡ್ ನ್ಯೂಸ್ : ತರಬೇತಿಯೊಂದಿಗೆ ಉಚಿತ ‘ಹೊಲಿಗೆ ಯಂತ್ರ’ ಪಡೆಯಲು ಅರ್ಜಿ ಆಹ್ವಾನ

27/01/2026 10:12 AM2 Mins Read
Recent News

BREAKING : ಅಪ್ರಾಪ್ತೆ ಮೇಲೆ ರೇಪ್ ಮಾಡಿ, ಗರ್ಭಿಣಿ ಮಾಡಿದ ಆರೋಪ : ಕೋಲಾರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಅರೆಸ್ಟ್

27/01/2026 10:18 AM

BREAKING : ನಿನ್ನ ನೂರು ಜನರ ಮುಂದೆ ರೇಪ್ ಮಾಡಿ ಕೊಲ್ತಿನಿ : ನಟಿ ಕಾವ್ಯ ಗೌಡಗೆ ಪತಿಯ ಸಂಬಂಧಿಕರಿಂದಲೇ ಬೆದರಿಕೆ!

27/01/2026 10:13 AM

Free Sewing Machine Scheme 2026 : ಮಹಿಳೆಯರಿಗೆ ಗುಡ್ ನ್ಯೂಸ್ : ತರಬೇತಿಯೊಂದಿಗೆ ಉಚಿತ ‘ಹೊಲಿಗೆ ಯಂತ್ರ’ ಪಡೆಯಲು ಅರ್ಜಿ ಆಹ್ವಾನ

27/01/2026 10:12 AM

BIG NEWS : ಸಾರ್ವಜನಿಕರೇ ಗಮನಿಸಿ : ಫೆ.1 ಬದಲಾಗಲಿದೆ ಈ ಎಲ್ಲಾ ಪ್ರಮುಖ ನಿಯಮಗಳು |New Rules from ‍Feb 2026

27/01/2026 9:57 AM
State News
KARNATAKA

BREAKING : ಅಪ್ರಾಪ್ತೆ ಮೇಲೆ ರೇಪ್ ಮಾಡಿ, ಗರ್ಭಿಣಿ ಮಾಡಿದ ಆರೋಪ : ಕೋಲಾರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಅರೆಸ್ಟ್

By kannadanewsnow0527/01/2026 10:18 AM KARNATAKA 1 Min Read

ಕೋಲಾರ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿಬಿಳಿಸುವಂತಹ ಘಟನೆ ನಡೆದಿದ್ದು, ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಆರೋಪದ ಮೇಲೆ…

BREAKING : ನಿನ್ನ ನೂರು ಜನರ ಮುಂದೆ ರೇಪ್ ಮಾಡಿ ಕೊಲ್ತಿನಿ : ನಟಿ ಕಾವ್ಯ ಗೌಡಗೆ ಪತಿಯ ಸಂಬಂಧಿಕರಿಂದಲೇ ಬೆದರಿಕೆ!

27/01/2026 10:13 AM

Free Sewing Machine Scheme 2026 : ಮಹಿಳೆಯರಿಗೆ ಗುಡ್ ನ್ಯೂಸ್ : ತರಬೇತಿಯೊಂದಿಗೆ ಉಚಿತ ‘ಹೊಲಿಗೆ ಯಂತ್ರ’ ಪಡೆಯಲು ಅರ್ಜಿ ಆಹ್ವಾನ

27/01/2026 10:12 AM

BREAKING : ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಆಶ್ರಯ ನೀಡಿದ ಉದ್ಯಮಿ ಕೂಡ ಅರೆಸ್ಟ್

27/01/2026 9:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.